ETV Bharat / city

ಉಕ್ರೇನ್​ನಲ್ಲಿ ಸಿಲುಕಿದ ಕಲಬುರಗಿಯ ಯುವಕ.. ಕಾಲೇಜಿನ ವಿರುದ್ಧ ಪೋಷಕರ ಆಕ್ರೋಶ

Russia-Ukraine War crisis: ಕಲಬುರಗಿಯ ಪ್ರಜ್ವಲ್​ ಉಕ್ರೇನ್​ನಲ್ಲಿ ಸಿಲುಕಿದ್ದು, ಪೋಷಕರು ಮಗನ ಪಾಡು ಕಂಡು ಕಣ್ಣೀರಿಟ್ಟಿದ್ದಾರೆ. ಯುದ್ಧ ಭೀತಿ ಇದ್ದರೂ ಅಲ್ಲಿಯ ಕಾಲೇಜು ತರಗತಿ, ಪರೀಕ್ಷೆ ನಡೆಸಿದ ಕಾರಣ ಮಗ ಅಲ್ಲಿಯೇ ಉಳಿದುಕೊಳ್ಳುವಂತಾಯಿತು ಎಂದು ಕಾಲೇಜಿನ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Mar 2, 2022, 1:45 PM IST

Updated : Mar 2, 2022, 3:05 PM IST

kalaburagi-student
ಕಲಬುರಗಿಯ ಯುವಕ

ಕಲಬುರಗಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಸುಳಿವು 8 ದಿನ ಮುಂಚೆಯೇ ಸಿಕ್ಕಿತ್ತು. ಆದ್ರೆ ಹಾಗೇನು ಆಗುವುದಿಲ್ಲ ಎಂದು ಅಲ್ಲಿನ ಕಾಲೇಜು ಹೇಳಿದ ಕಾರಣ ನಮ್ಮ ಮಗ ಉದ್ಧಪೀಡಿತ ದೇಶದಲ್ಲೇ ಸಿಲುಕುವಂತಾಗಿದೆ ಎಂದು ಉಕ್ರೇನ್​ನಲ್ಲಿರುವ ಕಲಬುರಗಿ ವಿದ್ಯಾರ್ಥಿ ಪ್ರಜ್ವಲ್​ಕುಮಾರ ಅವರ ತಂದೆ ಮಲ್ಲಿನಾಥ ಗುಬ್ಯಾಡ್ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ವಿರುದ್ಧ ಪೋಷಕರ ಆಕ್ರೋಶ

'ಈಟಿವಿ ಭಾರತ​' ಜೊತೆ ಮಾತನಾಡಿದ ಮಲ್ಲಿನಾಥ್​ ಅವರು, ತಮ್ಮ ಪುತ್ರ ಉಕ್ರೇನ್​ನಲ್ಲಿ ಸಿಲುಕಲು ಅಲ್ಲಿನ ಮೆಡಿಕಲ್​ ಕಾಲೇಜ್​ ಕಾರಣ. ಕಾಲೇಜಿನ ನಿರ್ದೇಶನದಿಂದ ನರಕ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಮುತುವರ್ಜಿ ವಹಿಸಿ ಮಕ್ಕಳನ್ನು ಕರೆ ತರಬೇಕೆಂದು ಒತ್ತಾಯಿಸಿದರು.

ಕಳೆದ 3 ವರ್ಷಗಳಿಂದ ಉಕ್ರೇನ್‌ನ ಮೈಕೋಲಿವ್ ಸಿಟಿಯಲ್ಲಿ ಪ್ರಜ್ವಲ್ ಎಂಬಿಬಿಎಸ್ ಓದುತ್ತಿದ್ದಾರೆ. ರಜೆಗೆ ಆಗಮಿಸಿ ಕಳೆದ ಜುಲೈ ವರ್ಷ ತಿಂಗಳಿನಲ್ಲಿ ಉಕ್ರೇನ್​ಗೆ ತೆರಳಿದ್ದರು. ಪೆಟ್ರೋ ಮೋಯಾಲಾ ಬ್ಲ್ಯಾಕ್ ಸೀ ನ್ಯಾಷನಲ್ ವಿಶ್ವವಿದ್ಯಾಲಯದಲ್ಲಿ ಪ್ರಜ್ವಲ್​ ವ್ಯಾಸಂಗ ಮಾಡುತ್ತಿದ್ದಾರೆ. ಯುದ್ಧ ಭೀತಿ ಮಧ್ಯೆಯೂ ವಿವಿ ತರಗತಿಗಳನ್ನು ನಡೆಸಿದ್ದಲ್ಲದೇ, ಪರೀಕ್ಷೆಗೂ ಸಿದ್ಧವಾಗಿತ್ತು. ಇದರಿಂದ ಪ್ರಜ್ವಲ್​ ಅಲ್ಲಿಯೇ ಉಳಿದುಕೊಂಡು ಈಗ ಪರದಾಡುವಂತಾಗಿದೆ ಎಂದು ಕಣ್ಣೀರಿಟ್ಟರು.

ಎರಡು ದಿನದ ಹಿಂದೆ ಪ್ರಜ್ವಲ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಆದರೀಗ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಕೇವಲ ಮೆಸೇಜ್​ ಮಾಡಿ ತಾನು ಸೇಫ್ ಇರುವುದಾಗಿ ತಿಳಿಸಿದ್ದಾನೆ. ಆದರೂ ಸಹ ಪೋಷಕರ ಆತಂಕ ದೂರವಾಗಿಲ್ಲ.

ಓದಿ: ಉಕ್ರೇನ್‌ನಲ್ಲಿ ಬಲಿಯಾದ ಹಾವೇರಿಯ ನವೀನ್‌ SSLCಯಲ್ಲಿ ಟಾಪರ್‌, ಪಿಯುನಲ್ಲಿ ಶೇ.97ರಷ್ಟು ಅಂಕ..!

ಕಲಬುರಗಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಸುಳಿವು 8 ದಿನ ಮುಂಚೆಯೇ ಸಿಕ್ಕಿತ್ತು. ಆದ್ರೆ ಹಾಗೇನು ಆಗುವುದಿಲ್ಲ ಎಂದು ಅಲ್ಲಿನ ಕಾಲೇಜು ಹೇಳಿದ ಕಾರಣ ನಮ್ಮ ಮಗ ಉದ್ಧಪೀಡಿತ ದೇಶದಲ್ಲೇ ಸಿಲುಕುವಂತಾಗಿದೆ ಎಂದು ಉಕ್ರೇನ್​ನಲ್ಲಿರುವ ಕಲಬುರಗಿ ವಿದ್ಯಾರ್ಥಿ ಪ್ರಜ್ವಲ್​ಕುಮಾರ ಅವರ ತಂದೆ ಮಲ್ಲಿನಾಥ ಗುಬ್ಯಾಡ್ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ವಿರುದ್ಧ ಪೋಷಕರ ಆಕ್ರೋಶ

'ಈಟಿವಿ ಭಾರತ​' ಜೊತೆ ಮಾತನಾಡಿದ ಮಲ್ಲಿನಾಥ್​ ಅವರು, ತಮ್ಮ ಪುತ್ರ ಉಕ್ರೇನ್​ನಲ್ಲಿ ಸಿಲುಕಲು ಅಲ್ಲಿನ ಮೆಡಿಕಲ್​ ಕಾಲೇಜ್​ ಕಾರಣ. ಕಾಲೇಜಿನ ನಿರ್ದೇಶನದಿಂದ ನರಕ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಮುತುವರ್ಜಿ ವಹಿಸಿ ಮಕ್ಕಳನ್ನು ಕರೆ ತರಬೇಕೆಂದು ಒತ್ತಾಯಿಸಿದರು.

ಕಳೆದ 3 ವರ್ಷಗಳಿಂದ ಉಕ್ರೇನ್‌ನ ಮೈಕೋಲಿವ್ ಸಿಟಿಯಲ್ಲಿ ಪ್ರಜ್ವಲ್ ಎಂಬಿಬಿಎಸ್ ಓದುತ್ತಿದ್ದಾರೆ. ರಜೆಗೆ ಆಗಮಿಸಿ ಕಳೆದ ಜುಲೈ ವರ್ಷ ತಿಂಗಳಿನಲ್ಲಿ ಉಕ್ರೇನ್​ಗೆ ತೆರಳಿದ್ದರು. ಪೆಟ್ರೋ ಮೋಯಾಲಾ ಬ್ಲ್ಯಾಕ್ ಸೀ ನ್ಯಾಷನಲ್ ವಿಶ್ವವಿದ್ಯಾಲಯದಲ್ಲಿ ಪ್ರಜ್ವಲ್​ ವ್ಯಾಸಂಗ ಮಾಡುತ್ತಿದ್ದಾರೆ. ಯುದ್ಧ ಭೀತಿ ಮಧ್ಯೆಯೂ ವಿವಿ ತರಗತಿಗಳನ್ನು ನಡೆಸಿದ್ದಲ್ಲದೇ, ಪರೀಕ್ಷೆಗೂ ಸಿದ್ಧವಾಗಿತ್ತು. ಇದರಿಂದ ಪ್ರಜ್ವಲ್​ ಅಲ್ಲಿಯೇ ಉಳಿದುಕೊಂಡು ಈಗ ಪರದಾಡುವಂತಾಗಿದೆ ಎಂದು ಕಣ್ಣೀರಿಟ್ಟರು.

ಎರಡು ದಿನದ ಹಿಂದೆ ಪ್ರಜ್ವಲ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಆದರೀಗ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಕೇವಲ ಮೆಸೇಜ್​ ಮಾಡಿ ತಾನು ಸೇಫ್ ಇರುವುದಾಗಿ ತಿಳಿಸಿದ್ದಾನೆ. ಆದರೂ ಸಹ ಪೋಷಕರ ಆತಂಕ ದೂರವಾಗಿಲ್ಲ.

ಓದಿ: ಉಕ್ರೇನ್‌ನಲ್ಲಿ ಬಲಿಯಾದ ಹಾವೇರಿಯ ನವೀನ್‌ SSLCಯಲ್ಲಿ ಟಾಪರ್‌, ಪಿಯುನಲ್ಲಿ ಶೇ.97ರಷ್ಟು ಅಂಕ..!

Last Updated : Mar 2, 2022, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.