ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದ ಪಾರ್ಸಲ್ ಕಚೇರಿಯ ಪಕ್ಕದಲ್ಲಿರುವ ಪಾರ್ಕ್ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಬಂಧಿಸುವಲ್ಲಿ ರೈಲ್ವೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ವಿದ್ಯಾನಗರದ ನಿವಾಸಿ ಸಲ್ಮಾನ್ ಅಕ್ಮಲ್ ಹಾಗೂ ಹುಬ್ಬಳ್ಳಿ ಎಂ.ವಿ ಗಲ್ಲಿ ನಿವಾಸಿ ಸಾವಿತ್ರಿಬಾಯಿ ದಿಲೀಪ್ ಹಬೀಬ ಬಂಧಿತ ಆರೋಪಿಗಳು. ರೈಲ್ವೆ ಪ್ರಯಾಣಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆದಿದ್ದು, ಬಂಧಿತರಿಂದ 8 ಸಾವಿರ ರೂಪಾಯಿ ಮೌಲ್ಯದ 800 ಗ್ರಾಂ ಗಾಂಜಾ ಹಾಗೂ 800 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಆಸ್ಪತ್ರೆಗೆ ದಾಖಲಾದ ಮಗು ಆರೈಕೆ ಹಿನ್ನೆಲೆ: ಮಹಿಳಾ ಆರೋಪಿಗೆ ಜಾಮೀನು ನೀಡಿದ ಕೋರ್ಟ್