ETV Bharat / city

ಮಳೆಯಿಂದ 8 ಎಕರೆಯಲ್ಲಿನ ಬೆಳೆ ಸಂಪೂರ್ಣ ನಾಶ: ಕೇಳೋರಿಲ್ಲ ರೈತನ ಗೋಳು - Cotton plant destroyed by rain

ಧಾರವಾಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದೆ. ಹೀಗಾಗಿ ಹೆಸರು, ಹತ್ತಿ, ಹುರುಳಿ, ಈರುಳ್ಳಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ.

ಮಳೆಯಿಂದ ಹತ್ತಿ ಹೊಲ ಹಾಳು
author img

By

Published : Aug 7, 2019, 5:36 PM IST

ಧಾರವಾಡ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ನೀರು ಪಾಲಾಗಿವೆ.

ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದ್ದು, ಹೆಸರು, ಹತ್ತಿ, ಹುರುಳಿ, ಈರುಳ್ಳಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಹೊಲವನ್ನು ನಂಬಿ ಬದುಕುತ್ತಿದ್ದ ರೈತನ ಪಾಡು ಈಗ ಹೇಳತಿರದಾಗಿದೆ. ಸುಮಾರು ಎಂಟು ಎಕರೆ ಹೊಲ ನೀರು ಪಾಲಾಗಿರುವುದು ರೈತರನ್ನು ಕಂಗಾಲಾಗಿಸಿದೆ.

ಮಳೆಯಿಂದ ಹತ್ತಿ ಹೊಲ ಹಾಳು

ಮಳೆಗಾಗಿ ಪೂಜೆ ಮಾಡುವ ರೈತ ಈಗ ಅದೇ ಮಳೆಗೆ ಶಾಪ ಹಾಕುತ್ತಿದ್ದಾನೆ. ಈ ಪರಿ ಸತತ ಮಳೆ ಸುರಿದು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡರು, ಯಾವೊಬ್ಬ ಅಧಿಕಾರಿಯೂ ಸಹ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬರೀ ವೋಟ್ ಕೇಳೋಕೆ ಬಂದರೆ ಸಾಲದು, ಸ್ವಾಮಿ ಇವಾಗ ಬನ್ನಿ, ನಮ್ಮ ಕಷ್ಟ ಪರಿಹರಿಸಿ ಎಂದು ರೈತರು ಒತ್ತಾಯಿಸಿದ್ದಾರೆ.

ಧಾರವಾಡ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ನೀರು ಪಾಲಾಗಿವೆ.

ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದ್ದು, ಹೆಸರು, ಹತ್ತಿ, ಹುರುಳಿ, ಈರುಳ್ಳಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಹೊಲವನ್ನು ನಂಬಿ ಬದುಕುತ್ತಿದ್ದ ರೈತನ ಪಾಡು ಈಗ ಹೇಳತಿರದಾಗಿದೆ. ಸುಮಾರು ಎಂಟು ಎಕರೆ ಹೊಲ ನೀರು ಪಾಲಾಗಿರುವುದು ರೈತರನ್ನು ಕಂಗಾಲಾಗಿಸಿದೆ.

ಮಳೆಯಿಂದ ಹತ್ತಿ ಹೊಲ ಹಾಳು

ಮಳೆಗಾಗಿ ಪೂಜೆ ಮಾಡುವ ರೈತ ಈಗ ಅದೇ ಮಳೆಗೆ ಶಾಪ ಹಾಕುತ್ತಿದ್ದಾನೆ. ಈ ಪರಿ ಸತತ ಮಳೆ ಸುರಿದು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡರು, ಯಾವೊಬ್ಬ ಅಧಿಕಾರಿಯೂ ಸಹ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬರೀ ವೋಟ್ ಕೇಳೋಕೆ ಬಂದರೆ ಸಾಲದು, ಸ್ವಾಮಿ ಇವಾಗ ಬನ್ನಿ, ನಮ್ಮ ಕಷ್ಟ ಪರಿಹರಿಸಿ ಎಂದು ರೈತರು ಒತ್ತಾಯಿಸಿದ್ದಾರೆ.

Intro:ಧಾರವಾಡ: ಸುಮಾರು ಮೂರು- ನಾಲ್ಕು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ ಹೊಲ ನೀರು ಪಾಲಾಗಿದೆ. ನವಲಗುಂದ ತಾಲೂಕಿನ ಬ್ಯಾಲ್ಯಾಳ ತುಪ್ಪರಿಹಳ್ಳ ಸಂಪೂರ್ಣ ತುಂಬಿದ್ದು ಸದ್ಯ ಹಳ್ಳವನ್ನು ಬಂದ ಮಾಡಲಾಗಿದೆ.

ಸತತ ಸುರಿಯೊತ್ತಿರುವ ಮಳೆಯಿಂದ ಹೆಸರು, ಹತ್ತಿ, ಹುರಳಿ, ಈರುಳ್ಳಿ ಹೊಲ ಸಂಪೂರ್ಣ ನೀರು ಪಾಲಾಗಿವೆ. ಹೊಲವನ್ನು ನಂಬಿ ಬದುಕುತ್ತಿದ್ದ ರೈತನ ಪಾಡು ಈಗ ಹೇಳತಿರದಾಗಿದೆ. ಸುಮಾರು ಎಂಟು ಎಕರೆ ಹೊಲ ನೀರು ಪಾಲಾಗಿದ್ದು ಒಂದು ಎಕರೆ ಮಾತ್ರ ಸುರಕ್ಷಿತವಾಗಿದೆ. Body:ಮಳೆಗಾಗಿ ಪೂಜೆ ಮಾಡೋ ರೈತ ಈಗ ಅದೇ ಮಳೆಗೆ ಶಾಪ ಹಾಕುತ್ತಿದ್ದಾನೆ. ಈ ಪರಿ ಸತತ ಮಳೆ ಸುರಿದು ರೈತರು ತಮ್ಮ ತಮ್ಮ ಹೊಲಗಳನ್ನು ಕಳೆದುಕೊಂಡರು. ಯಾವ ಒಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಬರಿ ವೋಟ್ ಕೇಳೋಕೆ ಬಂದರೆ ಸಾಲದು ಸ್ವಾಮಿ ಇವಾಗ ಬನ್ನಿ, ನಮ್ಮ ಕಷ್ಟ ಪರಿಹರಿಸಿ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಳೆ ಬಂದರು ಹಾನಿ ಮಳೆ ಬರದಿದ್ದರೂ ಹಾನಿ ಎನ್ನುವ ರೈತನ ಮಾತು ಇವಾಗ ಮತ್ತೆ ಸತ್ಯವಾಗಿದೆ.

ಸತತ ಮಳೆಯಿಂದ ರೈತ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಆದಷ್ಟು ಬೇಗ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

ಬೈಟ್: ಮಹಾರಾಜಗೌಡ ಪಾಟೀಲ್, ರೈತ

ಬೈಟ್: ವಾಸು ರೈತConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.