ETV Bharat / city

ಮಾಂಸದೂಟ ಪ್ರಕರಣ: ಮುಜರಾಯಿ, ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿವೆಯಾ..?- ಮುತಾಲಿಕ ಪ್ರಶ್ನೆ

author img

By

Published : May 16, 2022, 5:18 PM IST

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ದತ್ತ ಪೀಠದಲ್ಲಿ ಮಾಂಸದೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಆಗಬೇಕು.‌ ಅಲ್ಲಿರೋ ಮುಲ್ಲಾ, ಮೌಲ್ವಿಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Case of meat meal eating at Datta peeta Pramod Muthalik reaction
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್

ಧಾರವಾಡ: ದತ್ತ ಪೀಠದಲ್ಲಿ ಮಾಂಸದೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಪ್ರತಿಕ್ರಿಯಿಸಿದ್ದಾರೆ. ದತ್ತಪೀಠ ಅಪವಿತ್ರ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ ಮುಜರಾಯಿ ಮತ್ತು ಪೊಲೀಸ್ ಇಲಾಖೆ ಈ ವಿಚಾರವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ನಾವು ಹೋಮ, ಹವನ ಮಾಡುವ ಪವಿತ್ರ ಕ್ಷೇತ್ರ ಅದು, ಆ ಕ್ಷೇತ್ರ ಗಲೀಜು ಮಾಡಿದ್ದಾರೆ. ಅಲ್ಲಿ ಮಾಂಸದೂಟ ನಿಷೇಧ ಇದೆ. ಆದರೂ ಅಲ್ಲಿ ಮುಸ್ಲಿಮರು ಮಾಂಸದೂಟ ಮಾಡಿದ್ದಾರೆ ಇದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿರುವ ಅವರು, ನಾನು ಅವರಿಗೆ ಬೈಯೋದಿಲ್ಲ, ಮುಜರಾಯಿ ಮತ್ತು ಪೊಲೀಸ್ ಇಲಾಖೆ ಮೇಲೆ ಜಿಲ್ಲಾಧಿಕಾರಿ ತನಿಖೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಶ್ರೀರಾಮ ಸೇನೆಯವರು ಅಲ್ಲಿ ಗೋಮೂತ್ರದಿಂದ ಶುದ್ಧೀಕರಣ ಮಾಡುತ್ತದೆ. ಹೀಗೆ ಮಾಡಿದಲ್ಲಿ ಇನ್ನು ಮುಸ್ಲಿಮರನ್ನು ದತ್ತ ಪೀಠಕ್ಕೆ ಪ್ರವೇಶ ಮಾಡದಂತೆ ಮಾಡಬೇಕಾಗುತ್ತದೆ. ಈ ಎಚ್ಚರಿಕೆಯನ್ನು ಅಲ್ಲಿನ ಜಿಲ್ಲಾಧಿಕಾರಿಗೆ ಕೊಡುತ್ತೇನೆ.

ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ..?

ಅಲ್ಲಿ ತಪ್ಪು ಮಾಡಿದ ಮುಸ್ಲಿಮರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿರೋ ಮುಲ್ಲಾ, ಮೌಲ್ವಿಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು.‌ ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಆಗಬೇಕು.‌ ಕ್ರಮ ತೆಗೆದುಕೊಂಡರೆ ಸರಿ,‌ ಇಲ್ಲದೇ ಹೋದಲ್ಲಿ ನಾವು ಅವರ ಮೇಲೆ ಕೇಸ್ ಹಾಕುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಮಾನಸಿಕ, ದೈಹಿಕ ಕಿರುಕುಳ ಆರೋಪ.. ಬೆಂಗಳೂರಲ್ಲಿ ಹೆಡ್ ಕಾನ್ಸ್​ಟೇಬಲ್​ ವಿರುದ್ಧ ದೂರು ನೀಡಿದ ಪತ್ನಿ

ಧಾರವಾಡ: ದತ್ತ ಪೀಠದಲ್ಲಿ ಮಾಂಸದೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಪ್ರತಿಕ್ರಿಯಿಸಿದ್ದಾರೆ. ದತ್ತಪೀಠ ಅಪವಿತ್ರ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ ಮುಜರಾಯಿ ಮತ್ತು ಪೊಲೀಸ್ ಇಲಾಖೆ ಈ ವಿಚಾರವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ನಾವು ಹೋಮ, ಹವನ ಮಾಡುವ ಪವಿತ್ರ ಕ್ಷೇತ್ರ ಅದು, ಆ ಕ್ಷೇತ್ರ ಗಲೀಜು ಮಾಡಿದ್ದಾರೆ. ಅಲ್ಲಿ ಮಾಂಸದೂಟ ನಿಷೇಧ ಇದೆ. ಆದರೂ ಅಲ್ಲಿ ಮುಸ್ಲಿಮರು ಮಾಂಸದೂಟ ಮಾಡಿದ್ದಾರೆ ಇದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿರುವ ಅವರು, ನಾನು ಅವರಿಗೆ ಬೈಯೋದಿಲ್ಲ, ಮುಜರಾಯಿ ಮತ್ತು ಪೊಲೀಸ್ ಇಲಾಖೆ ಮೇಲೆ ಜಿಲ್ಲಾಧಿಕಾರಿ ತನಿಖೆ ಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಶ್ರೀರಾಮ ಸೇನೆಯವರು ಅಲ್ಲಿ ಗೋಮೂತ್ರದಿಂದ ಶುದ್ಧೀಕರಣ ಮಾಡುತ್ತದೆ. ಹೀಗೆ ಮಾಡಿದಲ್ಲಿ ಇನ್ನು ಮುಸ್ಲಿಮರನ್ನು ದತ್ತ ಪೀಠಕ್ಕೆ ಪ್ರವೇಶ ಮಾಡದಂತೆ ಮಾಡಬೇಕಾಗುತ್ತದೆ. ಈ ಎಚ್ಚರಿಕೆಯನ್ನು ಅಲ್ಲಿನ ಜಿಲ್ಲಾಧಿಕಾರಿಗೆ ಕೊಡುತ್ತೇನೆ.

ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ..?

ಅಲ್ಲಿ ತಪ್ಪು ಮಾಡಿದ ಮುಸ್ಲಿಮರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿರೋ ಮುಲ್ಲಾ, ಮೌಲ್ವಿಗಳ ಮೇಲೂ ಕ್ರಮ ತೆಗೆದುಕೊಳ್ಳಬೇಕು.‌ ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೂ ಕ್ರಮ ಆಗಬೇಕು.‌ ಕ್ರಮ ತೆಗೆದುಕೊಂಡರೆ ಸರಿ,‌ ಇಲ್ಲದೇ ಹೋದಲ್ಲಿ ನಾವು ಅವರ ಮೇಲೆ ಕೇಸ್ ಹಾಕುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಮಾನಸಿಕ, ದೈಹಿಕ ಕಿರುಕುಳ ಆರೋಪ.. ಬೆಂಗಳೂರಲ್ಲಿ ಹೆಡ್ ಕಾನ್ಸ್​ಟೇಬಲ್​ ವಿರುದ್ಧ ದೂರು ನೀಡಿದ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.