ETV Bharat / city

ಹಿಟ್ಲರ್ ಬಗ್ಗೆ ಕೇಳಿದ್ವಿ, ಆದ್ರೆ ಇವಾಗ ನೋಡ್ತಿದೀವಿ: ಆಲ್ಕೋಡು ಹನುಮಂತಪ್ಪ

author img

By

Published : Dec 19, 2019, 4:47 PM IST

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದ್ದಾರೆ.

citizen amendment act
ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಬೆಳವಣಿಗೆಯಲ್ಲ. ಇಂದು ಅವರು ಅಧಿಕಾರದಲ್ಲಿದ್ದಾರೆ ಹಾಗಾಗಿ ಇದು ಅವರಿಗೆ ಸರಿ ಕಾಣಬಹುದು. ಅಧಿಕಾರದಲ್ಲಿ ಇಲ್ಲದಿದ್ದಾಗ ಅವರೂ ಹೋರಾಟಗಳನ್ನು ನಡೆಸಿದ್ದಾರೆ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಅವರು ಹೋರಾಟದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಿಗೆ ಏನೆಲ್ಲಾ ಬೈದು ಅಧಿಕಾರಕ್ಕೆ ಬಂದಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.

ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ

ಸಂವಿಧಾನಬದ್ಧವಾದ ಹಕ್ಕು ಮೊಟಕುಗೊಳಿಸುವ ಕೆಲಸವನ್ನು ದೇಶದಲ್ಲಿ ಯಾರೂ ಮಾಡಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಮೋದಿ ಅವರು ಪ್ರಥಮ ಬಾರಿಗೆ ಇದನ್ನು ಮಾಡಿದ್ದು ಸರಿಯಾದ ಕ್ರಮವಲ್ಲ. ಕಾಯಿದೆಯಲ್ಲಿ ಕೇವಲ ಮುಸ್ಲಿಮರ ಪ್ರಶ್ನೆ ಇಲ್ಲ. ಇದು ದೇಶದ ಪ್ರಶ್ನೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶಾದ್ಯಂತ ಹೋರಾಟ ಮಾಡುತ್ತಿರುವುದು ಸರಿಯಿದೆ. ಹಿಟ್ಲರ್ ಹಾಗಿದ್ದ, ಹೀಗಿದ್ದ ಅಂತಾ ಕೇಳಿದ್ವಿ. ಆದರೆ ಇದನ್ನು ನೋಡಿದ್ರೆ ಹಿಟ್ಲರ್ ಹಿಂಗೆ ಇದ್ದನೇನೋ ಎಂದೆನಿಸುತ್ತದೆ. ಮೂಲಭೂತ ಹಕ್ಕುಗಳಲ್ಲಿ ಪ್ರತಿಭಟಿಸುವುದೂ ಒಂದು ಎಂದು ಹರಿಹಾಯ್ದಿದಿದ್ದಾರೆ.

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಬೆಳವಣಿಗೆಯಲ್ಲ. ಇಂದು ಅವರು ಅಧಿಕಾರದಲ್ಲಿದ್ದಾರೆ ಹಾಗಾಗಿ ಇದು ಅವರಿಗೆ ಸರಿ ಕಾಣಬಹುದು. ಅಧಿಕಾರದಲ್ಲಿ ಇಲ್ಲದಿದ್ದಾಗ ಅವರೂ ಹೋರಾಟಗಳನ್ನು ನಡೆಸಿದ್ದಾರೆ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಅವರು ಹೋರಾಟದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಿಗೆ ಏನೆಲ್ಲಾ ಬೈದು ಅಧಿಕಾರಕ್ಕೆ ಬಂದಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.

ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ

ಸಂವಿಧಾನಬದ್ಧವಾದ ಹಕ್ಕು ಮೊಟಕುಗೊಳಿಸುವ ಕೆಲಸವನ್ನು ದೇಶದಲ್ಲಿ ಯಾರೂ ಮಾಡಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಮೋದಿ ಅವರು ಪ್ರಥಮ ಬಾರಿಗೆ ಇದನ್ನು ಮಾಡಿದ್ದು ಸರಿಯಾದ ಕ್ರಮವಲ್ಲ. ಕಾಯಿದೆಯಲ್ಲಿ ಕೇವಲ ಮುಸ್ಲಿಮರ ಪ್ರಶ್ನೆ ಇಲ್ಲ. ಇದು ದೇಶದ ಪ್ರಶ್ನೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶಾದ್ಯಂತ ಹೋರಾಟ ಮಾಡುತ್ತಿರುವುದು ಸರಿಯಿದೆ. ಹಿಟ್ಲರ್ ಹಾಗಿದ್ದ, ಹೀಗಿದ್ದ ಅಂತಾ ಕೇಳಿದ್ವಿ. ಆದರೆ ಇದನ್ನು ನೋಡಿದ್ರೆ ಹಿಟ್ಲರ್ ಹಿಂಗೆ ಇದ್ದನೇನೋ ಎಂದೆನಿಸುತ್ತದೆ. ಮೂಲಭೂತ ಹಕ್ಕುಗಳಲ್ಲಿ ಪ್ರತಿಭಟಿಸುವುದೂ ಒಂದು ಎಂದು ಹರಿಹಾಯ್ದಿದಿದ್ದಾರೆ.

Intro:ಧಾರವಾಡ: ಪೌರತ್ವ ತಿದ್ದುಪಡಿ ಜಾರಿ ವಿರೋಧಿಸಿ ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಬೆಳವಣಿಗೆಯಲ್ಲ, ಅವರು ಇವತ್ತು ಅಧಿಕಾರದಲ್ಲಿದ್ದಾರೆ ಇದು ಸರಿ ಕಾಣಬಹುದು. ಇವರು ಹಿಂದೆ ಅಧಿಕಾರದಲ್ಲಿ ಇಲ್ಲದಿದ್ದಾಗ ಹೋರಾಟಗಳನ್ನು ಮಾಡಿದ್ದಾರೆ.‌ ಹೋರಾಟ ಮಾಡಿ ಎಲ್ಲ ಪಕ್ಷಗಳಿಗೆ ಏನೆಲ್ಲ ಬೈದು ಅಧಿಕಾರಕ್ಕೆ ಬಂದಿದ್ದಾರೆ ಅನ್ನೊದನ್ನು ಮರೆಯಬಾರದು ಎಂದು ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ವಿಚಾರಕ್ಕೆ ಧಾರವಾಡದಲ್ಲಿ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದ್ಧವಾದ ಹಕ್ಕು ಮೊಟಕುಗೊಳಿಸುವ ಕೆಲಸ ದೇಶದಲ್ಲಿ ಯಾರೂ ಮಾಡಿಲ್ಲ, ಸ್ವಾತಂತ್ರ್ಯ ಭಾರತದಲ್ಲಿ ಮೋದಿಯವರು ಪ್ರಥಮಬಾರಿಗೆ ಇದನ್ನು ಮಾಡಿದ್ದು ಸರಿಯಾದ ಕ್ರಮವಲ್ಲ, ಕಾಯಿದೆಯಲ್ಲಿ ಕೇವಲ ಮುಸ್ಲಿಂರ ಪ್ರಶ್ನೆ ಇಲ್ಲ, ಇದು ದೇಶದ ಪ್ರಶ್ನೆಯಾಗಿದೆ ಎಂದಿದ್ದಾರೆ.Body:ದೇಶಾದ್ಯಂತ ಹೋರಾಟ ಮಾಡತಾ ಇರೋದು ಸರಿ ಇದೆ.‌ ಹಿಟ್ಲರ್ ಹಾಗಿದ್ದ, ಹೀಗಿದ್ದ ಅಂತಾ ಕೇಳಿದ್ವಿ ಆದರೆ ಇದನ್ನು ನೋಡಿದ್ರೆ ಹಿಟ್ಲರ್ ಹಿಂಗೆ ಇದ್ದನೇನೋ ಅನಿಸುತಿದೆ.‌ ಮೂಲಭೂತ ಹಕ್ಕುಗಳಲ್ಲಿ ಪ್ರತಿಭಟಿಸುವುದು ಒಂದು ನಾವೆಲ್ಲ ಮತ ಹಾಕಿರೋದು ಸುಪ್ರಿಂ ಪಾವರ್ ಅದನ್ನು ಮನಸ್ಸಿಗೆ ಬಂದ ರೀತಿ ಬಳಸಿದ್ರೆ ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ...

ಬೈಟ್: ಆಲ್ಕೋಡು ಹನುಮಂತಪ್ಪ, ಮಾಜಿ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.