ETV Bharat / city

ರಾಜ್ಯದ ಹಲವೆಡೆ ಶ್ರದ್ಧಾ ಭಕ್ತಿಯ ಹನುಮ ಜಯಂತಿ - ಹನುಮ ಜಯಂತಿ: ಎಲ್ಲೆಡೆ ಸಂಭ್ರಮದಿಂದ ಆಚರಣೆ

ಧಾರವಾಡ, ತುಮಕೂರು, ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಇವತ್ತು ಹನುಮ ಜಯಂತಿ ಸಂಭ್ರಮವಿತ್ತು. ‌ಹನುಮಂತನ ಮೂರ್ತಿಯನ್ನು ‌ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಜನರು ಭಕ್ತಿಭಾವದಲ್ಲಿ ಮಿಂದರು.

ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ
author img

By

Published : Apr 19, 2019, 5:55 PM IST

ಧಾರವಾಡ/ತುಮಕೂರು/ಹಾವೇರಿ: ರಾಜ್ಯದ ವಿವಿಧ ಭಾಗಗಳಲ್ಲಿ ಆಂಜನೇಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಲಾಯಿತು.

ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ

ಧಾರವಾಡ ತಾಲೂಕಿನ‌ ಮನಸೂರ ಗ್ರಾಮದಲ್ಲಿ ಬೆಳಿಗ್ಗೆ 9 ಗ‌ಂಟೆಗೆ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರ‌ ಮೂರ್ತಿಯನ್ನು ‌ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಜಗ್ಗಲಗಿ ಮೇಳದವರು ಹಾಗೂ ಕುಂಭ ಹೊತ್ತ ಹೆಣ್ಣು ಮಕ್ಕಳು ಸಂಭ್ರಮದ ಕಳೆ ಹೆಚ್ಚಿಸಿದರು. ಇತಿಹಾಸ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವಸ್ಥಾನ, ಸೇರಿದಂತೆ ವಿವಿಧ ಹನುಮಂತನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು.

ತುಮಕೂರಿನಲ್ಲೂ ಯುವಕರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಈ ವೇಳೆ ಮಜ್ಜಿಗೆ, ಪಾನಕ, ಹೆಸರುಬೇಳೆ, ಚಿತ್ರಾನ್ನ, ಮೊಸರನ್ನ, ಕೇಸರಿಬಾತು ಹಾಗೂ ಹಣ್ಣಿನ ರಸಾಯನ ತಯಾರಿಸಿ ಸಾರ್ವಜನಿಕರಿಗೆ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.

ಹಾವೇರಿಯಲ್ಲಿ ರಾಮಮಂದಿರದ ಪ್ರತಿಕೃತಿ ಆಂಜನೇಯನ ಕೈಯಲ್ಲಿರುವಂತೆ ದೇವಸ್ಥಾನದ ಆರ್ಚಕರು ನಿರ್ಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಆಂಜನೇಯನಿಗೆ ಬಾದಾಮಿ ಗೋಡಂಬಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಅಲಂಕಾರಕ್ಕೆ 4 ಕೆಜಿ ಗೋಡಂಬಿ ಹಾಗು 2 ಕೆ.ಜಿ ಬಾದಾಮಿಯಲ್ಲಿ ಬಳಸಲಾಗಿದ್ದು ಭಕ್ತರ ಗಮನ ಸೆಳೆಯಿತು.

ಧಾರವಾಡ/ತುಮಕೂರು/ಹಾವೇರಿ: ರಾಜ್ಯದ ವಿವಿಧ ಭಾಗಗಳಲ್ಲಿ ಆಂಜನೇಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಲಾಯಿತು.

ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ

ಧಾರವಾಡ ತಾಲೂಕಿನ‌ ಮನಸೂರ ಗ್ರಾಮದಲ್ಲಿ ಬೆಳಿಗ್ಗೆ 9 ಗ‌ಂಟೆಗೆ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರ‌ ಮೂರ್ತಿಯನ್ನು ‌ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಜಗ್ಗಲಗಿ ಮೇಳದವರು ಹಾಗೂ ಕುಂಭ ಹೊತ್ತ ಹೆಣ್ಣು ಮಕ್ಕಳು ಸಂಭ್ರಮದ ಕಳೆ ಹೆಚ್ಚಿಸಿದರು. ಇತಿಹಾಸ ಪ್ರಸಿದ್ಧ ನುಗ್ಗಿಕೇರಿ ಹನುಮಂತ ದೇವಸ್ಥಾನ, ಸೇರಿದಂತೆ ವಿವಿಧ ಹನುಮಂತನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು.

ತುಮಕೂರಿನಲ್ಲೂ ಯುವಕರು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಈ ವೇಳೆ ಮಜ್ಜಿಗೆ, ಪಾನಕ, ಹೆಸರುಬೇಳೆ, ಚಿತ್ರಾನ್ನ, ಮೊಸರನ್ನ, ಕೇಸರಿಬಾತು ಹಾಗೂ ಹಣ್ಣಿನ ರಸಾಯನ ತಯಾರಿಸಿ ಸಾರ್ವಜನಿಕರಿಗೆ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.

ಹಾವೇರಿಯಲ್ಲಿ ರಾಮಮಂದಿರದ ಪ್ರತಿಕೃತಿ ಆಂಜನೇಯನ ಕೈಯಲ್ಲಿರುವಂತೆ ದೇವಸ್ಥಾನದ ಆರ್ಚಕರು ನಿರ್ಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಆಂಜನೇಯನಿಗೆ ಬಾದಾಮಿ ಗೋಡಂಬಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಅಲಂಕಾರಕ್ಕೆ 4 ಕೆಜಿ ಗೋಡಂಬಿ ಹಾಗು 2 ಕೆ.ಜಿ ಬಾದಾಮಿಯಲ್ಲಿ ಬಳಸಲಾಗಿದ್ದು ಭಕ್ತರ ಗಮನ ಸೆಳೆಯಿತು.

Intro:ಧಾರವಾಡ: ಧಾರವಾಡ ತಾಲೂಕಿನ‌ ಮನಸೂರ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಅದ್ದೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಲಾಯಿತು. ಬೆಳಿಗ್ಗೆ ೬ ಗ‌ಂಟೆಗೆ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ‌ಹನುಮಂತ ದೇವರ‌ ಮೂರ್ತಿಯನ್ನು ‌ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಾಪಸ್ಸ್ ಹನುಮಂತ ದೇವರ ಗುಡಿಗೆ ಬಂದು ಸಮಾಪ್ತಿಯಾಯಿತು.Body:ಮೆರವಣಿಗೆಯುದ್ದಕ್ಕೂ ಜಗ್ಗಲಗಿ ಮೇಳದವರು ಹಾಗೂ ಕುಂಬ ಹೊತ್ತ‌ ಹೆಣ್ಣುಮಕ್ಕಳು ಆಕರ್ಷಣೆಗೊಂಡರು. ಮೆರವಣಿಗೆ ನಂತರ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಇದಷ್ಟೇ ಅಲ್ಲದೇ ಇತಿಹಾಸ ಪ್ರಸಿದ್ದ ನುಗ್ಗಿಕೇರಿ ಹನುಮಂತ ದೇವಸ್ಥಾನ, ಸೇರಿದಂತೆ ವಿವಿಧ ಹನುಮಂತ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿತು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.