ಹುಬ್ಬಳ್ಳಿ : ಇಲ್ಲಿನ ನಿವಾಸಿಗೆ ದುಷ್ಕರ್ಮಿಗಳು ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ಗೆ 5,250 ರೂ. ರಿವಾರ್ಡ್ ಬಂದಿದೆ. ಅದನ್ನು ಪಡೆಯದಿದ್ದರೆ ಅವಧಿ ಮುಗಿಯುತ್ತದೆ ಎಂದು ನಂಬಿಸಿ ವ್ಯಕ್ತಿಗೆ ಪಂಗನಾಮ ಹಾಕಿರುವ ಪ್ರಕರಣ ನಗರದಲ್ಲಿ ನಡೆದಿದೆ.
ವಿನಾಯಕ ಎಂಬುವರಿಂದ ವಿವಿಧ ಮಾಹಿತಿಗಳನ್ನು ಪಡೆದು ಆನ್ಲೈನ್ ಮೂಲಕ 1,92,800 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.