ETV Bharat / city

ಚಡ್ಡಿ ದೇಶವನ್ನು ಕಾಯುತ್ತಿದೆ‌, ಚಡ್ಡಿ ಸುಟ್ಟರೆ ನೀವು ಭಸ್ಮ ಆಗ್ತೀರಿ: ಶಾಸಕ ರೇಣುಕಾಚಾರ್ಯ

author img

By

Published : Jun 5, 2022, 11:06 PM IST

ಸಿದ್ದರಾಮಯ್ಯ, ಡಿಕೆಶಿ ನೀವು ಆರ್​ಎಸ್​ಎಸ್ ಕಚೇರಿಗೆ ಬನ್ನಿ,‌ ಚಡ್ಡಿ ಹಾಕಿಕೊಳ್ಳಿ ಆಗ ಆರ್​ಎಸ್​ಎಸ್​ ಸಂಸ್ಕೃತಿ ಗೊತ್ತಾಗುತ್ತದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.

M. P. Renukacharya
ಎಂಪಿ ರೇಣುಕಚಾರ್ಯ

ದಾವಣಗೆರೆ: ಈ ಚಡ್ಡಿ ದೇಶವನ್ನು ಕಾಯುತ್ತಿದೆ, ತಮ್ಮನ್ನು ತಾವು ಆರ್​ಎಸ್‌ಎಸ್​ನವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಎಂ ಪಿ ರೇಣುಕಚಾರ್ಯ ಕಾಂಗ್ರೆಸ್ ನಾಯಕರ ವಿರುದ್ಧ‌ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ನವರು ಪ್ರಕೃತಿ ವಿಕೋಪ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನೀವು ಆರ್​ಎಸ್​ಎಸ್ ಕಚೇರಿಗೆ ಬನ್ನಿ,‌ ಚಡ್ಡಿ ಹಾಕಿಕೊಳ್ಳಿ. ಆಗ ಆರ್​ಎಸ್​ಎಸ್​ ಸಂಸ್ಕೃತಿ ನಿಮಗೆ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ಈ ಚಡ್ಡಿ ದೇಶವನ್ನು ಕಾಯುತ್ತಿದೆ‌, ಚಡ್ಡಿ ಸುಟ್ಟರೇ ನೀವು ಭಸ್ಮ ಆಗ್ತೀರಿ ಎಂದ ರೇಣುಕಾಚಾರ್ಯ

ಆರ್​ಎಸ್​ಎಸ್​ ದೇಶಾಭಿಮಾನ ಹೇಳಿಕೊಡುತ್ತೆ ಕಾಂಗ್ರೆಸ್ ಭಯೋತ್ಪಾದನೆ ಹೇಳಿಕೊಡುತ್ತೆ. ಭಯೋತ್ಪಾದಕರನ್ನು ಹಾಗೂ ಉಗ್ರಗಾಮಿಗಳನ್ನು ಕಾಂಗ್ರೆಸ್​ನವರು ಅರಾಧಿಸುತ್ತಾರೆ. ಆರ್​ಎಸ್​ಎಸ್​ ಚಡ್ಡಿ ಸುಟ್ಟರೆ ಸಿದ್ದರಾಮಯ್ಯನವರೇ ಭಸ್ಮ ಆಗುತ್ತಾರೆ. ಭಸ್ಮಾಸುರ ಕಥೆಯ ರೀತಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಭಸ್ಮ ಆಗುತ್ತಾರೆ ಎಂದರು.

ಇದನ್ನೂ ಓದಿ: ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡಬೇಡಿ: ಕುಮಾರಸ್ವಾಮಿ

ದಾವಣಗೆರೆ: ಈ ಚಡ್ಡಿ ದೇಶವನ್ನು ಕಾಯುತ್ತಿದೆ, ತಮ್ಮನ್ನು ತಾವು ಆರ್​ಎಸ್‌ಎಸ್​ನವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದಾರೆ ಎಂದು ಶಾಸಕ ಎಂ ಪಿ ರೇಣುಕಚಾರ್ಯ ಕಾಂಗ್ರೆಸ್ ನಾಯಕರ ವಿರುದ್ಧ‌ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ನವರು ಪ್ರಕೃತಿ ವಿಕೋಪ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನೀವು ಆರ್​ಎಸ್​ಎಸ್ ಕಚೇರಿಗೆ ಬನ್ನಿ,‌ ಚಡ್ಡಿ ಹಾಕಿಕೊಳ್ಳಿ. ಆಗ ಆರ್​ಎಸ್​ಎಸ್​ ಸಂಸ್ಕೃತಿ ನಿಮಗೆ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ಈ ಚಡ್ಡಿ ದೇಶವನ್ನು ಕಾಯುತ್ತಿದೆ‌, ಚಡ್ಡಿ ಸುಟ್ಟರೇ ನೀವು ಭಸ್ಮ ಆಗ್ತೀರಿ ಎಂದ ರೇಣುಕಾಚಾರ್ಯ

ಆರ್​ಎಸ್​ಎಸ್​ ದೇಶಾಭಿಮಾನ ಹೇಳಿಕೊಡುತ್ತೆ ಕಾಂಗ್ರೆಸ್ ಭಯೋತ್ಪಾದನೆ ಹೇಳಿಕೊಡುತ್ತೆ. ಭಯೋತ್ಪಾದಕರನ್ನು ಹಾಗೂ ಉಗ್ರಗಾಮಿಗಳನ್ನು ಕಾಂಗ್ರೆಸ್​ನವರು ಅರಾಧಿಸುತ್ತಾರೆ. ಆರ್​ಎಸ್​ಎಸ್​ ಚಡ್ಡಿ ಸುಟ್ಟರೆ ಸಿದ್ದರಾಮಯ್ಯನವರೇ ಭಸ್ಮ ಆಗುತ್ತಾರೆ. ಭಸ್ಮಾಸುರ ಕಥೆಯ ರೀತಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಭಸ್ಮ ಆಗುತ್ತಾರೆ ಎಂದರು.

ಇದನ್ನೂ ಓದಿ: ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡಬೇಡಿ: ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.