ETV Bharat / city

ಸಾವಿರಾರು ಮಕ್ಕಳಿಗೆ ಆಸರೆ ಗಾಂಧಿ ಅಡಿಪಾಯ ಹಾಕಿದ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯ

author img

By

Published : Aug 14, 2022, 9:27 AM IST

Updated : Aug 14, 2022, 9:48 AM IST

1934ರಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ಗಾಂಧೀಜಿ, ಹರಿಜನ ಕಾಲೋನಿ (ಇಂದಿನ ಗಾಂಧಿ ನಗರ)ಗೆ ತೆರಳಿ ಹರಿಜನ ಗಿರಿಜನರೊಂದಿಗೆ ಶಿಕ್ಷಣದ ಕುರಿತು ಚರ್ಚಿಸಿ, ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

Davanagere Adi Karnataka Student Hostel
ಗಾಂಧಿ

ದಾವಣಗೆರೆ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಮಹಾತ್ಮ ಗಾಂಧಿ ಪ್ರಮುಖರು. ಸ್ವಾತಂತ್ರ್ಯ ಪೂರ್ವದಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ಅವರು ಹರಿಜನ ಗಿರಿಜನರಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹದಾಸೆಯಿಂದ 1934 ರಲ್ಲಿ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿ, ಹರಿಜನರೊಂದಿಗೆ ಸಂವಾದ ನಡೆಸಿದ್ದರು. ಗಾಂಧೀಜಿ ಆಸೆಯಿಂದ ನಿರ್ಮಾಣವಾದ ಶಾಲೆ ಹಾಗು ವಿದ್ಯಾರ್ಥಿ ನಿಲಯದಲ್ಲಿ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ನಡೆಸಿ, ಇಂದು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಬೆಣ್ಣೆ ನಗರಿಗೆ ಮೊಟ್ಟ ಮೊದಲಿಗೆ 1934ರಲ್ಲಿ ಭೇಟಿ ನೀಡಿದ್ದ ಗಾಂಧಿ, ಹರಿ ಜನ ಕಾಲೋನಿ (ಇಂದಿನ ಗಾಂಧಿ ನಗರ) ಗೆ ತೆರಳಿ ಅವರೊಂದಿಗೆ ಸಂವಾದ ನಡೆಸಿ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಿದ್ದರು. ಸಂವಾದದ ಬಳಿಕ ಹರಿ ಜನರು, ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹಾತ್ಮ ಗಾಂಧಿ ಅವರ ಮಹದಾಸೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿದರು. ದಾವಣಗೆರೆಯ ಜಿಲ್ಲಾ ಕೇಂದ್ರವಾಗಿದ್ದ ಚಿತ್ರದುರ್ಗಕ್ಕೆ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಪಾಲ್ಗೊಳ್ಳಲು ಹಾಗು ಜನರನ್ನ ಜಾಗೃತಗೊಳಸಲು ದೇಶಾದ್ಯಂತ ಪ್ರವಾಸ ಕೈಗೊಂಡ ವೇಳೆ ಇಲ್ಲಿಗೆ ಆಗಮಿಸಿದ್ದರು.

ವಿದ್ಯಾರ್ಥಿ ನಿಲಯ ಕುರಿತು ಮಾಹಿತಿ ನೀಡಿದ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ವೀರಭಧ್ರಪ್ಪ

ಮಕ್ಕಳ ಶಿಕ್ಷಣದ ಕುರಿತು ಚರ್ಚಿಸಿದ್ದ ಗಾಂಧೀಜಿ: ಶಿಕ್ಷಣದ ಬಗ್ಗೆ ಚರ್ಚಿಸಲು ಹರಿಜನ ಮುಖಂಡರೊಂದಿಗೆ ಸಭೆ ನಡೆಸಿದ್ದರಿಂದ ಅಂದಿನ ಎ ಕೆ ಕಾಲೋನಿಯನ್ನು ಗಾಂಧಿ ನಗರ ಎಂದು ನಾಮಕರಣ ಮಾಡಲಾಯಿತು. ಅಂದೇ ದಾವಣಗೆರೆಯಾದಂತ್ಯ ಸಂಚರಿಸಿದ ಬಾಪು, ಪಿ.ಜೆ.ಬಡಾವಣೆಯಲ್ಲಿ ಜಾಗ ಗುರುತಿಸಿ ತರಾತುರಿಯಲ್ಲಿ ಮಹಾರಾಷ್ಟ್ರಕ್ಕೆ ತೆರಳಬೇಕಾಗಿದ್ದರೂ ಕೂಡ 1934 ರ ಮಾರ್ಚ್ 02 ರ ರಾತ್ರಿ 8 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿಯೇ ವಾಪಸ್ ತೆರಳಿದ್ದರು. ಅದಷ್ಟು ಬೇಗ ಈ ಶಾಲೆ ಹಾಗು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಿ ಕೊಡುವಂತೆ ಮೈಸೂರು ಸಂಸ್ಥಾನಕ್ಕೆ ಒತ್ತಾಯಿಸಿದ್ದರು. ಅವರ ಒತ್ತಾಯದ ಮೇರೆಗೆ ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಇಡೀ ಕಟ್ಟಡವನ್ನು 1937 ರಲ್ಲಿ ನಿರ್ಮಾಣ ಮಾಡಿದ್ರು. ಅಂದಿನಿಂದ ಇಂದಿನವರೆಗೂ ಸಾವಿರಾರು ಬಡ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ ಜಾರಿ: ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಎಂಬ ಸಂಘವನ್ನು ಮಾಡಿಕೊಂಡು ಗಾಂಧೀಜಿಯವರ ಮಹದಾಸೆಯಂತೆ ಶಾಲೆ, ವಿದ್ಯಾರ್ಥಿ ನಿಲಯ, ಪಿಯು ಕಾಲೇಜು ಸ್ಥಾಪಿಸಿ, ಪ್ಯಾರ ಮೆಡಿಕಲ್ ನಂತಹ ಶಿಕ್ಷಣವನ್ನು ಮಕ್ಕಳಿಗೆ ಕೊಡಲಾಗುತ್ತಿದೆ. ಮಲ ಹೋರುತ್ತಿದ್ದ ಮಕ್ಕಳನ್ನು ದೇವರ ಮಕ್ಕಳೆಂದು ಪರಿಗಣಿಸಿ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸುವಂತೆ ದಾವಣಗೆರೆಯ ಮೂರು ಜನ ಸ್ವಾತಂತ್ರ್ಯ ಹೋರಾಟಗಾರರಿಗೆ ಗಾಂಧಿಜೀಯವರು ಪತ್ರ ಬರೆಯುವ ಮೂಲಕ ಕರೆ ನೀಡಿದ್ದರು. ವಕೀಲರಾಗಿದ್ದ ಆರ್.ಜಿ. ಸಿದ್ದಪ್ಪ, ಚನ್ನಗಿರಿ ರಂಗಪ್ಪ, ಸಿರಿಗೆರೆ ಮಠದ ಮಾಗನೂರು ಬಸಪ್ಪನವರಿಗೆ ಈ ಪತ್ರ ಬಂದು ತಲುಪಿತ್ತು.

ಅಂದು 240 ಅಗಲ, 260 ಉದ್ದದ ಕಟ್ಟಡವನ್ನು ನಿರ್ಮಿಸಿದ್ದು, ಅ ಕಟ್ಟಡ ನಿರ್ಮಾಣವಾಗಿ 75 ಕ್ಕೂ ಅಧಿಕ ವರ್ಷಗಳೇ ಉರುಳಿವೆ. ಅಲ್ಲಿಂದ ಇಲ್ಲಿಯ ತನಕ ದಲಿತ, ಭೋವಿ, ಲಂಬಾಣಿ, ವಡ್ಡರು, ಲಿಂಗಾಯತ, ನಾಯಕರು, ಮುಸ್ಲಿಂ ಹೀಗೆ ಎಲ್ಲಾ ಜಾತಿಯವರು ಕಲಿಯುತ್ತಿದ್ದಾರೆ. ಸಾಕಷ್ಟು ಮಕ್ಕಳಿಗೆ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿಗೂ ಈ ನಿಲಯ ಆಸರೆಯಾಗಿದೆ. ಅಂದು ಪಿಡ್ಲ್ಯೂಡಿ ಸಚಿವರಾದ ಕೆ ಹೆಚ್ ರಂಗನಾಥ್ ಅವರ ಮನವಿ ಮೇರೆಗೆ ನೂರು ಕೋಟಿ ಅನುದಾನದಲ್ಲಿ ಶಾಲೆಯನ್ನು ಪ್ರೌಢ ಶಾಲೆ ಹಾಗು ಪಿಯು ಕಾಲೇಜು ಮಾಡಲು ಹೆಚ್ಚುವರಿ ಕಟ್ಟಡ ನಿರ್ಮಿಸಿದ ಕೀರ್ತಿ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ತಿಳಿಸಿದ್ರು.

ಇದನ್ನೂ ಓದಿ: ಮರಣ, ಕಷ್ಟನಷ್ಟದ ನೋವು ನುಂಗಿ ರಾಷ್ಟ್ರಧ್ವಜ ಹಾರಿಸಿ ದೇಶ ಭಕ್ತಿ ಮೆರೆದ ಜನರು

ದಾವಣಗೆರೆ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಮಹಾತ್ಮ ಗಾಂಧಿ ಪ್ರಮುಖರು. ಸ್ವಾತಂತ್ರ್ಯ ಪೂರ್ವದಲ್ಲಿ ದಾವಣಗೆರೆಗೆ ಭೇಟಿ ನೀಡಿದ್ದ ಅವರು ಹರಿಜನ ಗಿರಿಜನರಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹದಾಸೆಯಿಂದ 1934 ರಲ್ಲಿ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿ, ಹರಿಜನರೊಂದಿಗೆ ಸಂವಾದ ನಡೆಸಿದ್ದರು. ಗಾಂಧೀಜಿ ಆಸೆಯಿಂದ ನಿರ್ಮಾಣವಾದ ಶಾಲೆ ಹಾಗು ವಿದ್ಯಾರ್ಥಿ ನಿಲಯದಲ್ಲಿ ಸಾಕಷ್ಟು ಮಕ್ಕಳು ವಿದ್ಯಾಭ್ಯಾಸ ನಡೆಸಿ, ಇಂದು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಬೆಣ್ಣೆ ನಗರಿಗೆ ಮೊಟ್ಟ ಮೊದಲಿಗೆ 1934ರಲ್ಲಿ ಭೇಟಿ ನೀಡಿದ್ದ ಗಾಂಧಿ, ಹರಿ ಜನ ಕಾಲೋನಿ (ಇಂದಿನ ಗಾಂಧಿ ನಗರ) ಗೆ ತೆರಳಿ ಅವರೊಂದಿಗೆ ಸಂವಾದ ನಡೆಸಿ ಸ್ವಾತಂತ್ರ್ಯದ ಕಿಚ್ಚು ಹಬ್ಬಿಸಿದ್ದರು. ಸಂವಾದದ ಬಳಿಕ ಹರಿ ಜನರು, ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹಾತ್ಮ ಗಾಂಧಿ ಅವರ ಮಹದಾಸೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಕ್ಕೆ ಅಡಿಪಾಯ ಹಾಕಿದರು. ದಾವಣಗೆರೆಯ ಜಿಲ್ಲಾ ಕೇಂದ್ರವಾಗಿದ್ದ ಚಿತ್ರದುರ್ಗಕ್ಕೆ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಪಾಲ್ಗೊಳ್ಳಲು ಹಾಗು ಜನರನ್ನ ಜಾಗೃತಗೊಳಸಲು ದೇಶಾದ್ಯಂತ ಪ್ರವಾಸ ಕೈಗೊಂಡ ವೇಳೆ ಇಲ್ಲಿಗೆ ಆಗಮಿಸಿದ್ದರು.

ವಿದ್ಯಾರ್ಥಿ ನಿಲಯ ಕುರಿತು ಮಾಹಿತಿ ನೀಡಿದ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ವೀರಭಧ್ರಪ್ಪ

ಮಕ್ಕಳ ಶಿಕ್ಷಣದ ಕುರಿತು ಚರ್ಚಿಸಿದ್ದ ಗಾಂಧೀಜಿ: ಶಿಕ್ಷಣದ ಬಗ್ಗೆ ಚರ್ಚಿಸಲು ಹರಿಜನ ಮುಖಂಡರೊಂದಿಗೆ ಸಭೆ ನಡೆಸಿದ್ದರಿಂದ ಅಂದಿನ ಎ ಕೆ ಕಾಲೋನಿಯನ್ನು ಗಾಂಧಿ ನಗರ ಎಂದು ನಾಮಕರಣ ಮಾಡಲಾಯಿತು. ಅಂದೇ ದಾವಣಗೆರೆಯಾದಂತ್ಯ ಸಂಚರಿಸಿದ ಬಾಪು, ಪಿ.ಜೆ.ಬಡಾವಣೆಯಲ್ಲಿ ಜಾಗ ಗುರುತಿಸಿ ತರಾತುರಿಯಲ್ಲಿ ಮಹಾರಾಷ್ಟ್ರಕ್ಕೆ ತೆರಳಬೇಕಾಗಿದ್ದರೂ ಕೂಡ 1934 ರ ಮಾರ್ಚ್ 02 ರ ರಾತ್ರಿ 8 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿಯೇ ವಾಪಸ್ ತೆರಳಿದ್ದರು. ಅದಷ್ಟು ಬೇಗ ಈ ಶಾಲೆ ಹಾಗು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಿ ಕೊಡುವಂತೆ ಮೈಸೂರು ಸಂಸ್ಥಾನಕ್ಕೆ ಒತ್ತಾಯಿಸಿದ್ದರು. ಅವರ ಒತ್ತಾಯದ ಮೇರೆಗೆ ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಇಡೀ ಕಟ್ಟಡವನ್ನು 1937 ರಲ್ಲಿ ನಿರ್ಮಾಣ ಮಾಡಿದ್ರು. ಅಂದಿನಿಂದ ಇಂದಿನವರೆಗೂ ಸಾವಿರಾರು ಬಡ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ ಜಾರಿ: ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಎಂಬ ಸಂಘವನ್ನು ಮಾಡಿಕೊಂಡು ಗಾಂಧೀಜಿಯವರ ಮಹದಾಸೆಯಂತೆ ಶಾಲೆ, ವಿದ್ಯಾರ್ಥಿ ನಿಲಯ, ಪಿಯು ಕಾಲೇಜು ಸ್ಥಾಪಿಸಿ, ಪ್ಯಾರ ಮೆಡಿಕಲ್ ನಂತಹ ಶಿಕ್ಷಣವನ್ನು ಮಕ್ಕಳಿಗೆ ಕೊಡಲಾಗುತ್ತಿದೆ. ಮಲ ಹೋರುತ್ತಿದ್ದ ಮಕ್ಕಳನ್ನು ದೇವರ ಮಕ್ಕಳೆಂದು ಪರಿಗಣಿಸಿ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸುವಂತೆ ದಾವಣಗೆರೆಯ ಮೂರು ಜನ ಸ್ವಾತಂತ್ರ್ಯ ಹೋರಾಟಗಾರರಿಗೆ ಗಾಂಧಿಜೀಯವರು ಪತ್ರ ಬರೆಯುವ ಮೂಲಕ ಕರೆ ನೀಡಿದ್ದರು. ವಕೀಲರಾಗಿದ್ದ ಆರ್.ಜಿ. ಸಿದ್ದಪ್ಪ, ಚನ್ನಗಿರಿ ರಂಗಪ್ಪ, ಸಿರಿಗೆರೆ ಮಠದ ಮಾಗನೂರು ಬಸಪ್ಪನವರಿಗೆ ಈ ಪತ್ರ ಬಂದು ತಲುಪಿತ್ತು.

ಅಂದು 240 ಅಗಲ, 260 ಉದ್ದದ ಕಟ್ಟಡವನ್ನು ನಿರ್ಮಿಸಿದ್ದು, ಅ ಕಟ್ಟಡ ನಿರ್ಮಾಣವಾಗಿ 75 ಕ್ಕೂ ಅಧಿಕ ವರ್ಷಗಳೇ ಉರುಳಿವೆ. ಅಲ್ಲಿಂದ ಇಲ್ಲಿಯ ತನಕ ದಲಿತ, ಭೋವಿ, ಲಂಬಾಣಿ, ವಡ್ಡರು, ಲಿಂಗಾಯತ, ನಾಯಕರು, ಮುಸ್ಲಿಂ ಹೀಗೆ ಎಲ್ಲಾ ಜಾತಿಯವರು ಕಲಿಯುತ್ತಿದ್ದಾರೆ. ಸಾಕಷ್ಟು ಮಕ್ಕಳಿಗೆ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿಗೂ ಈ ನಿಲಯ ಆಸರೆಯಾಗಿದೆ. ಅಂದು ಪಿಡ್ಲ್ಯೂಡಿ ಸಚಿವರಾದ ಕೆ ಹೆಚ್ ರಂಗನಾಥ್ ಅವರ ಮನವಿ ಮೇರೆಗೆ ನೂರು ಕೋಟಿ ಅನುದಾನದಲ್ಲಿ ಶಾಲೆಯನ್ನು ಪ್ರೌಢ ಶಾಲೆ ಹಾಗು ಪಿಯು ಕಾಲೇಜು ಮಾಡಲು ಹೆಚ್ಚುವರಿ ಕಟ್ಟಡ ನಿರ್ಮಿಸಿದ ಕೀರ್ತಿ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ತಿಳಿಸಿದ್ರು.

ಇದನ್ನೂ ಓದಿ: ಮರಣ, ಕಷ್ಟನಷ್ಟದ ನೋವು ನುಂಗಿ ರಾಷ್ಟ್ರಧ್ವಜ ಹಾರಿಸಿ ದೇಶ ಭಕ್ತಿ ಮೆರೆದ ಜನರು

Last Updated : Aug 14, 2022, 9:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.