ETV Bharat / city

ಕೊರೊನಾಗೆ ದಾವಣಗೆರೆಯಲ್ಲಿ ನಾಲ್ವರು ಬಲಿ: 134 ಮಂದಿಯಲ್ಲಿ ಸೋಂಕು ದೃಢ

author img

By

Published : Jul 28, 2020, 9:33 PM IST

ಕೊರೊನಾಗೆ ಜಿಲ್ಲೆಯಲ್ಲಿ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ 41ಕ್ಕೇರಿದೆ. ಹಾಗೂ 134 ಮಂದಿಗೆ ಸೋಂಕು ದೃಢಪಟ್ಟಿದೆ.

Davanagere corona case
Davanagere corona case

ದಾವಣಗೆರೆ: ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ 41ಕ್ಕೇರಿದೆ. 134 ಮಂದಿಯಲ್ಲಿಂದು ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,667ಕ್ಕೆ ತಲುಪಿದೆ.

ಹರಿಹರ ತಾಲೂಕಿನ ನಾಗೇನಹಳ್ಳಿಯ 70 ವರ್ಷದ ವೃದ್ಧ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ದಾವಣಗೆರೆಯ ಎಂಸಿಸಿ 'ಎ' ಬ್ಲಾಕ್‌ನ 76 ವರ್ಷದ ವೃದ್ಧೆ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ, ಅಹ್ಮದ್ ನಗರದ 59 ವರ್ಷದ ಮಹಿಳೆ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ, ಹಾಗೂ ಮುದ್ದಬೋವಿ ಕಾಲೋನಿಯ 45 ವರ್ಷದ ಪುರುಷ ಸಿಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ತೀವ್ರ ಉಸಿರಾಟ ತೊಂದರೆ, ಕಫ ಹಾಗೂ ಜ್ವರದಿಂದ ಬಳಲುತ್ತಿದ್ದರು.

ಇಂದು 36 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 963 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 663 ಸಕ್ರಿಯ ಪ್ರಕರಣಗಳಿದ್ದು, ಸಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು 338 ಸ್ಯಾಂಪಲ್ ಗಳ ವರದಿ ನೆಗೆಟಿವ್ ಬಂದಿದ್ದು, 1081 ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.

ದಾವಣಗೆರೆ: ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ 41ಕ್ಕೇರಿದೆ. 134 ಮಂದಿಯಲ್ಲಿಂದು ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,667ಕ್ಕೆ ತಲುಪಿದೆ.

ಹರಿಹರ ತಾಲೂಕಿನ ನಾಗೇನಹಳ್ಳಿಯ 70 ವರ್ಷದ ವೃದ್ಧ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ದಾವಣಗೆರೆಯ ಎಂಸಿಸಿ 'ಎ' ಬ್ಲಾಕ್‌ನ 76 ವರ್ಷದ ವೃದ್ಧೆ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ, ಅಹ್ಮದ್ ನಗರದ 59 ವರ್ಷದ ಮಹಿಳೆ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ, ಹಾಗೂ ಮುದ್ದಬೋವಿ ಕಾಲೋನಿಯ 45 ವರ್ಷದ ಪುರುಷ ಸಿಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ತೀವ್ರ ಉಸಿರಾಟ ತೊಂದರೆ, ಕಫ ಹಾಗೂ ಜ್ವರದಿಂದ ಬಳಲುತ್ತಿದ್ದರು.

ಇಂದು 36 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 963 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 663 ಸಕ್ರಿಯ ಪ್ರಕರಣಗಳಿದ್ದು, ಸಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು 338 ಸ್ಯಾಂಪಲ್ ಗಳ ವರದಿ ನೆಗೆಟಿವ್ ಬಂದಿದ್ದು, 1081 ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.