ETV Bharat / city

ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿದ್ರೆ, ಎಲ್ಲರಿಗೂ ಜ್ಞಾನ ದೊರಕುತ್ತದೆ: ವಿಜಯ್ ರಾಘವನ್ - Vijay Raghavan spoke on knowledge in bnglore

ಜ್ಞಾನ ಅನ್ನೋದು ಶಕ್ತಿ. ಹಾಗಾಗಿ ಜ್ಞಾನ ಎಲ್ಲರಿಗೂ ಸಮಾನವಾಗಿ ದೊರಕಬೇಕು ಎಂದು ಕೇಂದ್ರ ಸರ್ಕಾರದ ವಿಜ್ಞಾನ ಸಲಹೆಗಾರ ಕೆ.ವಿಜಯ್ ರಾಘವನ್ ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ವಿಜ್ಞಾನ ಸಲಹೆಗಾರ ಕೆ.ವಿಜಯ್ ರಾಘವನ್
author img

By

Published : Oct 26, 2019, 10:11 AM IST

ಬೆಂಗಳೂರು: ಜ್ಞಾನ ಅನ್ನೋದು ಶಕ್ತಿಯಾಗಿದೆ. ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಜ್ಞಾನ ಎಲ್ಲರಿಗೂ ಸಮಾನವಾಗಿ ದೊರಕುವಂತೆ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಸಲಹೆಗಾರ ಕೆ.ವಿಜಯ್ ರಾಘವನ್ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಭಿಪ್ರಾಯಪಟ್ಟರು.

ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿದ್ರೆ,ಎಲ್ಲರಿಗೂ ಜ್ಞಾನ ದೊರಕುತ್ತದೆ: ವಿಜಯ್ ರಾಘವನ್

ಜ್ಞಾನ ಸಂಪತ್ತು ಇವತ್ತು ಕೇವಲ ಆಯ್ದ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿದೆ. ಮೊದಲಿಗೆ ವಿಶ್ವವಿದ್ಯಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಬೇಕು ಹಾಗೂ ಎಲ್ಲಾ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಬೇಕು. ಡಿಜಿಟಲೀಕರಣ ಮಾಡಿದರೆ, ಎಲ್ಲರಿಗೆ ಜ್ಞಾನ ದೊರಕುತ್ತದೆ. ಭಾರತದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ವಿದ್ಯಾಸಂಸ್ಥೆಗಳೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದ್ರು.

ಸಮೋಸದಿಂದ ಜಿಲೇಬಿ ಆಗೋಣ:

ಈಗ ಸಮಾಜದಲ್ಲಿ ಎಲ್ಲರೂ ಸಮೋಸ ಮೇಲೆ ಸಮೋಸ ಜೋಡಿಸಿದ ಹಾಗೆ ಇದ್ದೀವಿ. ಕೆಳಗೆ ಇರುವ ಸಮೋಸ ಮೇಲೆ ಬರಲು ಅಸಾಧ್ಯ. ಕೇವಲ ಕೆಲವು ಸಮೋಸ ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತವೆ. ಅದೇ ಜಿಲೇಬಿ ಆದರೆ ಸುತ್ತು ಸುತ್ತು ಹೊಡೆದು ಒಂದರ ಮೇಲೋಂದು ಅಂಟಿಕೊಂಡಿರುತ್ತದೆ. ಇದರಿಂದ ಜ್ಞಾನ ಹಂಚಿಕೊಳ್ಳಬಹುದು. ಬಡವರು ಜ್ಞಾನದಿಂದ ಹಿಂದೆ ಉಳಿದಿದ್ದು ಅವರಿಗೆ ಜ್ಞಾನ ದೊರಕುವಂತಾಗಬೇಕು ಎಂದು ಹೇಳಿದ್ರು.

ಬಹುಭಾಷಾ ಜರ್ನಲ್​ಗಳು ಕೇವಲ ವಿಶ್ವವಿದ್ಯಾಲಯಕ್ಕೆ ಸೀಮಿತವಾಗದೆ, ಎಲ್ಲರಿಗೂ ಮುಕ್ತವಾಗಿ ಲಭ್ಯವಾಗಬೇಕೆಂದು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ವಿಕಿಪಿಡಿಯಾದಲ್ಲಿ ಸ್ಥಳೀಯ ಭಾಷೆಗಳ ಮಾಹಿತಿ ಅತೀ ಕಳಪೆ ಮಟ್ಟದಲ್ಲಿದೆ. ಅದೇ ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಯಲ್ಲಿ ಉತ್ತಮವಾಗಿದೆ ಎಂದರು.

ಸಂಶೋಧನೆ ಹಾಗೂ ಟೀಚಿಂಗ್ ಒಟ್ಟಿಗೆ ನಡೆಯಬೇಕು:

ಸಂಶೋಧನೆ ಹಾಗೂ ಬೋಧನೆ ಒಟ್ಟಿಗೆ ಇರಬೇಕು. ಪಿಹೆಚ್​ಡಿ ವಿದ್ಯಾರ್ಥಿಗಳ ವಿಪರ್ಯಾಸ ಅಂದರೆ, ಪ್ರಸ್ತುತವಾಗಿ ಕೇವಲ ಸಂಶೋಧನೆ ಮಾಡುತ್ತಾರೆ. ಇಲ್ಲವಾದಲ್ಲಿ ಕೇವಲ ಬೋಧನೆ ಮಾಡುತ್ತಾರೆ. ಯಾವಾಗ ಈ ಎರಡು ಅಂಶಗಳನ್ನು ಒಟ್ಟಿಗೆ ಮಾಡುತ್ತಾರೋ ಆಗ ಮಾತ್ರ ಉತ್ತಮ ಆವಿಷ್ಕಾರ ಆಗುತ್ತೆ ಎಂದರು.

ಬೆಂಗಳೂರು: ಜ್ಞಾನ ಅನ್ನೋದು ಶಕ್ತಿಯಾಗಿದೆ. ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಜ್ಞಾನ ಎಲ್ಲರಿಗೂ ಸಮಾನವಾಗಿ ದೊರಕುವಂತೆ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಸಲಹೆಗಾರ ಕೆ.ವಿಜಯ್ ರಾಘವನ್ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಭಿಪ್ರಾಯಪಟ್ಟರು.

ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿದ್ರೆ,ಎಲ್ಲರಿಗೂ ಜ್ಞಾನ ದೊರಕುತ್ತದೆ: ವಿಜಯ್ ರಾಘವನ್

ಜ್ಞಾನ ಸಂಪತ್ತು ಇವತ್ತು ಕೇವಲ ಆಯ್ದ ಕಾಲೇಜು ಅಥವಾ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿದೆ. ಮೊದಲಿಗೆ ವಿಶ್ವವಿದ್ಯಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಬೇಕು ಹಾಗೂ ಎಲ್ಲಾ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಬೇಕು. ಡಿಜಿಟಲೀಕರಣ ಮಾಡಿದರೆ, ಎಲ್ಲರಿಗೆ ಜ್ಞಾನ ದೊರಕುತ್ತದೆ. ಭಾರತದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ವಿದ್ಯಾಸಂಸ್ಥೆಗಳೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದ್ರು.

ಸಮೋಸದಿಂದ ಜಿಲೇಬಿ ಆಗೋಣ:

ಈಗ ಸಮಾಜದಲ್ಲಿ ಎಲ್ಲರೂ ಸಮೋಸ ಮೇಲೆ ಸಮೋಸ ಜೋಡಿಸಿದ ಹಾಗೆ ಇದ್ದೀವಿ. ಕೆಳಗೆ ಇರುವ ಸಮೋಸ ಮೇಲೆ ಬರಲು ಅಸಾಧ್ಯ. ಕೇವಲ ಕೆಲವು ಸಮೋಸ ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತವೆ. ಅದೇ ಜಿಲೇಬಿ ಆದರೆ ಸುತ್ತು ಸುತ್ತು ಹೊಡೆದು ಒಂದರ ಮೇಲೋಂದು ಅಂಟಿಕೊಂಡಿರುತ್ತದೆ. ಇದರಿಂದ ಜ್ಞಾನ ಹಂಚಿಕೊಳ್ಳಬಹುದು. ಬಡವರು ಜ್ಞಾನದಿಂದ ಹಿಂದೆ ಉಳಿದಿದ್ದು ಅವರಿಗೆ ಜ್ಞಾನ ದೊರಕುವಂತಾಗಬೇಕು ಎಂದು ಹೇಳಿದ್ರು.

ಬಹುಭಾಷಾ ಜರ್ನಲ್​ಗಳು ಕೇವಲ ವಿಶ್ವವಿದ್ಯಾಲಯಕ್ಕೆ ಸೀಮಿತವಾಗದೆ, ಎಲ್ಲರಿಗೂ ಮುಕ್ತವಾಗಿ ಲಭ್ಯವಾಗಬೇಕೆಂದು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ವಿಕಿಪಿಡಿಯಾದಲ್ಲಿ ಸ್ಥಳೀಯ ಭಾಷೆಗಳ ಮಾಹಿತಿ ಅತೀ ಕಳಪೆ ಮಟ್ಟದಲ್ಲಿದೆ. ಅದೇ ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಯಲ್ಲಿ ಉತ್ತಮವಾಗಿದೆ ಎಂದರು.

ಸಂಶೋಧನೆ ಹಾಗೂ ಟೀಚಿಂಗ್ ಒಟ್ಟಿಗೆ ನಡೆಯಬೇಕು:

ಸಂಶೋಧನೆ ಹಾಗೂ ಬೋಧನೆ ಒಟ್ಟಿಗೆ ಇರಬೇಕು. ಪಿಹೆಚ್​ಡಿ ವಿದ್ಯಾರ್ಥಿಗಳ ವಿಪರ್ಯಾಸ ಅಂದರೆ, ಪ್ರಸ್ತುತವಾಗಿ ಕೇವಲ ಸಂಶೋಧನೆ ಮಾಡುತ್ತಾರೆ. ಇಲ್ಲವಾದಲ್ಲಿ ಕೇವಲ ಬೋಧನೆ ಮಾಡುತ್ತಾರೆ. ಯಾವಾಗ ಈ ಎರಡು ಅಂಶಗಳನ್ನು ಒಟ್ಟಿಗೆ ಮಾಡುತ್ತಾರೋ ಆಗ ಮಾತ್ರ ಉತ್ತಮ ಆವಿಷ್ಕಾರ ಆಗುತ್ತೆ ಎಂದರು.

Intro:Body:ಜ್ಞಾನ ಶಕ್ತಿ ನಿಜ ಆದ್ರೆ ಜ್ಞಾನ ಎಲ್ಲರಿಗೂ ದೊರಕುತ್ತಿಲ್ಲ: ವಿಜಯ್ ರಾಘವನ್.


ಬೆಂಗಳೂರು: ಜ್ಞಾನ ಶಕ್ತಿ ನಿಜ ಆದರೆ ಜ್ಞಾನ ಎಲ್ಲರಿಗೂ ದೊರಕುತ್ತಿಲ್ಲ , ಜ್ಞಾನ ಎಲ್ಲರಿಗೂ ಸಮಾನವಾಗಿ ದೊರಕಬೇಕು ಎಂದು ಕೇಂದ್ರ ಸರ್ಕಾರದ ವಿಜ್ಞಾನ ಸಲಹೆಗಾರ ಕೆ ವಿಜಯ್ ರಾಘವನ್ ನಗರದ ಐ ಐ ಎಸ್ ಸಿ ನಲ್ಲಿ ಹೇಳಿದರು.


ಜ್ಞಾನ ಕೇವಲ ಆಯ್ದ ಕಾಲೇಜ್ ಅಥವಾ ವಿಶ್ವ ವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿದೆ, ಈ ಎಲ್ಲಾ ಜ್ಞಾನವನ್ನು ಮುಕ್ತವಾಗಿ ಪ್ರವೇಶ ಇರಬೇಕು ಎಂದು ವಿಜಯ್ ರಾಘವನ್ ಅಭಿಪ್ರಾಯ ಪಟ್ಟರು.
ಮೊದಲಿಗೆ ವಿಶ್ವವಿದ್ಯಾಲದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಬೇಕು, ಹಾಗೂ ಎಲ್ಲಾ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಬೇಕು ಎಂದು ಇವರು ಹೇಳಿದರು. ಡಿಜಿಟಲ್ ಮಾಡಿದರೆ ಎಲ್ಲರಿಗೆ ಜ್ಞಾನ ದೊರಕುತ್ತದೆ, ಭಾರತದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ವಿದ್ಯಾ ಸಂಸ್ಥೆಗಳು ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈ ಜೋಡಿಸಬೇಕು ಎಂದು ತಿಳಿಸಿದರು.


ಸಮೋಸಯಿಂದ ಜಿಲೇಬಿ ಆಗೋಣ!:


ಈಗ ಸಮಾಜದಲ್ಲಿ ಎಲ್ಲರೂ ಸಮೋಸ ಮೇಲೆ ಸಮೋಸ ಜೋಡಿಸಿದಹಾಗೆ ಇದ್ದೀವಿ. ಕೆಳಗೆ ಇರುವ ಸಮೋಸ ಮೇಲೆ ಬರಲು ಅಸಾಧ್ಯ ಕೇವಲ ಕೆಲವು ಸಮೋಸ ಮಾತ್ರ ಪ್ರತ್ಯೇಕವಾಗಿ ನಿಲ್ಲುತ್ತವೆ. ಅದೇ ಜಿಲೇಬಿ ಆದರೆ ಸುತ್ತು ಸುತ್ತು ಹೊಡೆದು ಒಂದರಿಂದ ಒಂದು ಜಿಲೇಬಿ ಅಂಟಿಕೊಂಡಿರುತ್ತದೆ ಇದರಿಂದ ಜ್ಞಾನ ಹಂಚಿಕೊಳ್ಳಬಹುದು ಎಂದು ಹೇಳಿ ಬಸವಣ್ಣನವರ ಉಳ್ಳವರು ಶಿವಾಲಯ ಕಟ್ಟಿಸಿದರು ವಚನ ವಾಚಿಸಿ ಬಡವರು ಜ್ಞಾನದಿಂದ ಹಿಂದೆ ಉಳಿದ್ದಿದ್ದಾರೆ ಅವರಿಗೆ ಜ್ಞಾನ ದೊರಕಬೇಕು ಎಂದು ಹೇಳಿದರು.


ಬಹುಭಾಷಾ ಜರ್ನರ್ಲ್ ಗಳು ಕೇವಲ ವಿಶ್ವವಿದ್ಯಾಲಯಕ್ಕೆ ಸೀಮಿತವಾಗದೆ ಎಲ್ಲರಿಗೆ ಮುಕ್ತವಾಗಿ ಲಭ್ಯವಾಗಬೇಕೆಂದು ಕೇಂದ್ರ ಸರ್ಕಾರ ನಿರಂತರ ಪ್ರಯತ್ನದಲ್ಲಿದೆ. ವಿಕಿಪೀಡಿಯ ಸ್ಥಳೀಯಭಾಷೆಯಲ್ಲಿ ವಿಷಯದ ಮಾಹಿತಿ ಅತಿ ಕಳಪೆ ಮಟ್ಟದಲ್ಲಿ ಇದೆ, ಅದೇ ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಯಲ್ಲಿ ಉತ್ತಮವಾಗಿ ಇದೆ ಎಂದು ಇವರು ಹೇಳಿದರು.


ಸಂಶೋಧನೆ ಹಾಗೂ ಟೀಚಿಂಗ್ ಒಟ್ಟಿಗೆ ನಡೆಯಬೇಕು:


ಸಂಶೋಧನೆ ಹಾಗೂ ಬೋಧನೆ ಒಟ್ಟಿಗೆ ಇರಬೇಕು, ಪಿ ಎಚ್ ಡಿ ವಿದ್ಯಾರ್ಥಿಗಳ ವಿಪರ್ಯಾಸ ಅಂದರೆ ಪ್ರಸ್ತುತವಾಗಿ ಕೇವಲ ಸಂಶೋಧನೆ ಮಾಡುತ್ತಾರೆ ಇಲ್ಲವಾದಲ್ಲಿ ಕೇವಲ ಬೋಧನೆ ಮಾಡುತ್ತಾರೆ . ಯಾವಾಗ ಈ ಎರಡು ಅಂಶಗಳನ್ನ ಒಟ್ಟಿಗೆ ಮಾಡುತ್ತಾರೋ ಆಗ ಮಾತ್ರ ಉತ್ತಮ ಆವಿಷ್ಕಾರ ಆಗುತ್ತೆ ಎಂದು ನೆರೆದಿದ್ದ ವಿದ್ಯಾಥಿಗಳಿಗೆ ತಿಳಿಹೇಳಿದರು.






Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.