ETV Bharat / city

ನೆರೆ ಸಂತ್ರಸ್ತರ ಮರೆತು, ನೆರೆ ರಾಜ್ಯದ ಚುನಾವಣಾ ಪ್ರಚಾರಕ್ಕೆ ಕಾಲ್ಕಿತ್ತ ಬಿಜೆಪಿ ನಾಯಕರು!

ಅಧಿವೇಶನ ವಿಸ್ತರಿಸಲು ಸದನದಲ್ಲಿ ಪ್ರತಿಪಕ್ಷಗಳು ಆಗ್ರಹಿಸಿದ್ದನ್ನು ತಳ್ಳಿ ಹಾಕಿದ್ದ ಸರ್ಕಾರ, ನೆರೆ ಪರಿಹಾರ ಕಾರ್ಯದ ಸಬೂಬು ನೀಡಿತ್ತು. ಆದರೆ, ಸದನ ಮುಗಿಯುತ್ತಿದ್ದಂತೆ ನೆರೆ ಮರೆತ ರಾಜ್ಯದ ಡಿಸಿಎಂಗಳು ಮತ್ತು ಸಚಿವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗುತ್ತಿದ್ದಾರೆ.

author img

By

Published : Oct 14, 2019, 11:20 PM IST

state-bjp-leaders-campaign-at-maharastra

ಬೆಂಗಳೂರು:ನೆರೆ ಪರಿಹಾರ ಕಾರ್ಯಕ್ಕೆ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಧಿವೇಶನವನ್ನು ಮೂರೇ ದಿನಕ್ಕೆ ಮುಗಿಸಿದ್ದ ಬಿಜೆಪಿ ಇದೀಗ ನೆರೆ ಸಂತ್ರಸ್ತರನ್ನು ಮರೆತು ನೆರೆ ರಾಜ್ಯದಲ್ಲಿ ಪಕ್ಷ ಗೆಲ್ಲಿಸಲು ಹೊರಟಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಅಶ್ವತ್ಥ್‌ ನಾರಾಯಣ ತೆರಳುತ್ತಿದ್ದಾರೆ. ಒಂದ್ಕಡೆ ರಾಜ್ಯದಲ್ಲಿ ನೆರೆ ಬಂದು ಜನ ಇನ್ನೂ ಆ ಸಂಕಷ್ಟದಿಂದ ಪಾರಾಗಿಲ್ಲ. ಅಧಿವೇಶನ ನಡೆಸೋದಕ್ಕೆ ಬಿಜೆಪಿ ಸರ್ಕಾರ ಸಮಯವಿಲ್ಲ. ತರಾತುರಿಯಲ್ಲಿ 3 ದಿನ ಅಧಿವೇಶನ ಶಾಸ್ತ್ರ ಮುಗಿಸಿದ್ದ ಬಿಜೆಪಿ ನಾಯಕರು, ಈಗ ನೋಡಿದ್ರೇ ಉಪಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಚುನಾವಣಾ ಪ್ರಚಾರ ಮತ್ತು ದೇಗುಲ ದರ್ಶನದ್ದೇ ಚಿಂತೆಯಾಗಿದೆ.

ಅಕ್ಟೋಬರ್ 14ರಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ಅಶ್ವತ್ಥ್ ನಾರಾಯಣ್ ಪ್ರಚಾರ ನಡೆಸಲಿದ್ದಾರೆ. ಲಕ್ಷ್ಮಣ ಸವದಿ ಇಂದು ಸಾಂಗ್ಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಇದರ ನಡುವೆ ನಾಳೆಯಿಂದ ಎರಡು ದಿನ ಯಡಿಯೂರಪ್ಪ ತೆರಳಲಿದ್ದಾರೆ.

ಭಾನುವಾರ ಕುಟುಂಬ ಸಮೇತ ಭದ್ರಾಚಲಂಗೆ ತೆರಳಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ರಾಜ್ಯದ ನೆರೆ ಸಂತ್ರಸ್ತರ ಕಣ್ಣೀರು ಒರೆಸುವುದಕ್ಕಿಂತ ಪಕ್ಕದ ರಾಜ್ಯದ ಚುನಾವಣಾ ಪ್ರಚಾರ ಮತ್ತು ಟೆಂಪಲ್ ರನ್​​ಗೆ ಮೊದಲ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು:ನೆರೆ ಪರಿಹಾರ ಕಾರ್ಯಕ್ಕೆ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಧಿವೇಶನವನ್ನು ಮೂರೇ ದಿನಕ್ಕೆ ಮುಗಿಸಿದ್ದ ಬಿಜೆಪಿ ಇದೀಗ ನೆರೆ ಸಂತ್ರಸ್ತರನ್ನು ಮರೆತು ನೆರೆ ರಾಜ್ಯದಲ್ಲಿ ಪಕ್ಷ ಗೆಲ್ಲಿಸಲು ಹೊರಟಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಅಶ್ವತ್ಥ್‌ ನಾರಾಯಣ ತೆರಳುತ್ತಿದ್ದಾರೆ. ಒಂದ್ಕಡೆ ರಾಜ್ಯದಲ್ಲಿ ನೆರೆ ಬಂದು ಜನ ಇನ್ನೂ ಆ ಸಂಕಷ್ಟದಿಂದ ಪಾರಾಗಿಲ್ಲ. ಅಧಿವೇಶನ ನಡೆಸೋದಕ್ಕೆ ಬಿಜೆಪಿ ಸರ್ಕಾರ ಸಮಯವಿಲ್ಲ. ತರಾತುರಿಯಲ್ಲಿ 3 ದಿನ ಅಧಿವೇಶನ ಶಾಸ್ತ್ರ ಮುಗಿಸಿದ್ದ ಬಿಜೆಪಿ ನಾಯಕರು, ಈಗ ನೋಡಿದ್ರೇ ಉಪಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಚುನಾವಣಾ ಪ್ರಚಾರ ಮತ್ತು ದೇಗುಲ ದರ್ಶನದ್ದೇ ಚಿಂತೆಯಾಗಿದೆ.

ಅಕ್ಟೋಬರ್ 14ರಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ಅಶ್ವತ್ಥ್ ನಾರಾಯಣ್ ಪ್ರಚಾರ ನಡೆಸಲಿದ್ದಾರೆ. ಲಕ್ಷ್ಮಣ ಸವದಿ ಇಂದು ಸಾಂಗ್ಲಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ. ಇದರ ನಡುವೆ ನಾಳೆಯಿಂದ ಎರಡು ದಿನ ಯಡಿಯೂರಪ್ಪ ತೆರಳಲಿದ್ದಾರೆ.

ಭಾನುವಾರ ಕುಟುಂಬ ಸಮೇತ ಭದ್ರಾಚಲಂಗೆ ತೆರಳಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ರಾಜ್ಯದ ನೆರೆ ಸಂತ್ರಸ್ತರ ಕಣ್ಣೀರು ಒರೆಸುವುದಕ್ಕಿಂತ ಪಕ್ಕದ ರಾಜ್ಯದ ಚುನಾವಣಾ ಪ್ರಚಾರ ಮತ್ತು ಟೆಂಪಲ್ ರನ್​​ಗೆ ಮೊದಲ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.

Intro:



ಬೆಂಗಳೂರು: ನೆರೆ ಪರಿಹಾರ ಕಾರ್ಯಕ್ಕೆ ವಿಳಂಬವಾಗುತ್ತದೆ ಎನ್ನುವ ಕಾರಣ ನೀಡಿ ಅಧಿವೇಶನವನ್ನು ಮೂರೇ ದಿನಕ್ಕೆ ಮುಗಿಸಿದ್ದ ಬಿಜೆಪಿ ಇದೀಗ ನೆರೆ ಸಂತ್ರಸ್ತರನ್ನು ಮರೆತು ನೆರೆ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಲು ಹೊರಟಿದೆ.

ನೆರೆ ಪರಿಹಾರ ಕಾರ್ಯ ಬಿಟ್ಟು ಪಕ್ಕದ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಲು ರಾಜ್ಯದ ಸಿಎಂ, ಡಿಸಿಎಂಗಳು ತೊಡಗಿಕೊಳ್ಳುತ್ತಿದ್ದಾರೆ‌,ಅದರಲ್ಲಿಯೂ ಡಿಸಿಎಂ ಗಳು ಮತ್ತು ಸಚಿವರಿಗೆ ಚುನಾವಣಾ ಪ್ರಚಾರ ಮತ್ತು ದೇಗುಲ ದರ್ಶನದ್ದೇ ಚಿಂತೆಯಾಗಿದೆ.

ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಮತ್ತು ಡಾ. ಅಶ್ವಥ್ ನಾರಾಯಣ ತೆರಳುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ಡಾ. ಅಶ್ವಥ್ ನಾರಾಯಣ್ ಪ್ರಚಾರ ನಡೆಸಲಿದ್ದರೆ ಇಂದು ಸಾಂಗ್ಲಿಯಲ್ಲಿ ಪ್ರಚಾರ ಕಾರ್ಯವನ್ನು ಲಕ್ಷ್ಮಣ ಸವದಿ ಆರಂಭಿಸಿದ್ದಾರೆ.

ಇದರ ನಡುವೆ ನಾಳೆಯಿಂದ ಎರಡು ದಿನ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಸಿಎಂ ಯಡಿಯೂರಪ್ಪ ತೆರಳಲಿದ್ದಾರೆ.
ನಿನ್ನೆಯಿಂದ ಕುಟುಂಬ ಸಮೇತ ಭದ್ರಾಚಲಂಗೆ ತೆರಳಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ರಾಜ್ಯದ ನೆರೆ ಸಂತ್ರಸ್ತರ ಕಣ್ಣೀರು ಒರೆಸುವುದಕ್ಕಿಂತ ಪಕ್ಕದ ರಾಜ್ಯದ ಚುನಾವಣಾ ಪ್ರಚಾರ ಮತ್ತು ಟೆಂಪಲ್ ರನ್ ಗೆ ಮೊದಲ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.

ಅಧಿವೇಶನ ವಿಸ್ತರಣೆ ಮಾಡುವಂತೆ ಸದನದಲ್ಲಿ ಪ್ರತಿಪಕ್ಷಗಳು ಆಗ್ರಹಿಸಿದ್ದಾಗ ಅದನ್ನು ತಳ್ಳಿಹಾಕಿದ್ದ ಸರ್ಕಾರ ನೆರೆ ಪರಿಹಾರ ಕಾರ್ಯದ ಸಬೂಬು ನೀಡಿತ್ತು ಆದರೆ ಸದನ ಮುಗಿಯುತ್ತಿದ್ದಂತೆ ನೆರೆ ಮರೆತ ರಾಜ್ಯದ ಡಿಸಿಎಂಗಳು ಮತ್ತು ಸಚಿವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗುತ್ತಿದ್ದಾರೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.