ETV Bharat / city

ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್​ಡೌನ್ ಹೇರುತ್ತಿದೆ: ಎಸ್​ ಆರ್​ ಪಾಟೀಲ್ ಕಿಡಿ

author img

By

Published : Apr 26, 2021, 5:55 PM IST

ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್​ಡೌನ್ ಹೇರುತ್ತಿದೆ. ಇಡೀ ರಾಜ್ಯ ಬಂದ್ ಮಾಡುವ ನಿರ್ಧಾರಕ್ಕೆ ಲಾಕ್​ಡೌನ್ ಎಂದು ಹೇಳಲು ಸಮಸ್ಯೆ ಏನು ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಎಸ್​ ಆರ್​ ಪಾಟೀಲ್​ ಪ್ರಶ್ನಿಸಿದ್ದಾರೆ.

SR Patil
SR Patil

ಬೆಂಗಳೂರು: ನಾಳೆಯಿಂದ ಕಠಿಣ ನಿಯಮ ಜಾರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾಕ್​ಡೌನ್ ಪದ ಬಳಕೆಗೆ ಮೀನಾಮೇಷ ಎಣಿಸಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್​ ಆರ್ ಪಾಟೀಲ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಳೆಯಿಂದ 14 ದಿನ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಆದರೆ ಬಿ.ಎಸ್. ಯಡಿಯೂರಪ್ಪ ಅವರು ನಾಳೆಯಿಂದ ಕಠಿಣ ನಿಯಮ ಜಾರಿ ಎಂದಷ್ಟೇ ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಇದೆ. ಇನ್ನು ನಾಳೆಯಿಂದ ಕಠಿಣ ನಿಯಮ ಎನ್ನುತ್ತಿದ್ದಾರೆ. ಲಾಕ್​ಡೌನ್ ಎಂದು ಹೇಳಲು ಮೀನಾಮೇಷ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಧಿಕೃತವಾಗಿ ಲಾಕ್​ಡೌನ್ ಎಂದರೆ ಜನಸಾಮಾನ್ಯರಿಗೆ ನೆರವು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್​ಡೌನ್ ಬದಲಿಗೆ ಕೊರೊನಾ ಕರ್ಫ್ಯೂ, ಕೋವಿಡ್ ಕರ್ಫ್ಯೂ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್​ಡೌನ್ ಹೇರುತ್ತಿದೆ. ಇಡೀ ರಾಜ್ಯ ಬಂದ್ ಮಾಡುವ ನಿರ್ಧಾರಕ್ಕೆ ಲಾಕ್​ಡೌನ್ ಎಂದು ಹೇಳಲು ಸಮಸ್ಯೆ ಏನು.? ಎಂದು ಸರ್ಕಾರಕ್ಕೆ ಕೇಳಿದ್ದಾರೆ.

ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅನ್ನುವುದಾದರೆ ಇದು ಲಾಕ್​ಡೌನ್ ಅಲ್ಲದೇ ಕಠಿಣ ನಿಯಮ ಹೇಗಾಗುತ್ತದೆ..? ಲಾಕ್​ಡೌನ್​ನಿಂದ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಎಲ್ಲ ಅರ್ಹರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವಂತೆ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ. ಲಾಕ್​ಡೌನ್ ಅಂದರೆ ಗೃಹ ಬಂಧನವಿದ್ದಂತೆ. ಜೈಲಿಗೆ ಹೋದವರಿಗೆ ಊಟ, ಸಂಬಳ ಕೊಡುವಂತೆ ಲಾಕ್​ಡೌನ್​ನಿಂದ ಗೃಹಬಂಧನದಲ್ಲಿರುವ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರು ಸೇರಿದಂತೆ ಎಲ್ಲ ಅರ್ಹರಿಗೆ ಈ ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಎಸ್​ ಆರ್​ ಪಾಟೀಲ್​ ಹೇಳಿದ್ದಾರೆ.

ಬೆಂಗಳೂರು: ನಾಳೆಯಿಂದ ಕಠಿಣ ನಿಯಮ ಜಾರಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾಕ್​ಡೌನ್ ಪದ ಬಳಕೆಗೆ ಮೀನಾಮೇಷ ಎಣಿಸಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್​ ಆರ್ ಪಾಟೀಲ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಳೆಯಿಂದ 14 ದಿನ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಆದರೆ ಬಿ.ಎಸ್. ಯಡಿಯೂರಪ್ಪ ಅವರು ನಾಳೆಯಿಂದ ಕಠಿಣ ನಿಯಮ ಜಾರಿ ಎಂದಷ್ಟೇ ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಇದೆ. ಇನ್ನು ನಾಳೆಯಿಂದ ಕಠಿಣ ನಿಯಮ ಎನ್ನುತ್ತಿದ್ದಾರೆ. ಲಾಕ್​ಡೌನ್ ಎಂದು ಹೇಳಲು ಮೀನಾಮೇಷ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಧಿಕೃತವಾಗಿ ಲಾಕ್​ಡೌನ್ ಎಂದರೆ ಜನಸಾಮಾನ್ಯರಿಗೆ ನೆರವು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್​ಡೌನ್ ಬದಲಿಗೆ ಕೊರೊನಾ ಕರ್ಫ್ಯೂ, ಕೋವಿಡ್ ಕರ್ಫ್ಯೂ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹಿಂಬಾಗಿಲ ಮೂಲಕ ಕರ್ಫ್ಯೂ ಹೆಸರಲ್ಲಿ ಲಾಕ್​ಡೌನ್ ಹೇರುತ್ತಿದೆ. ಇಡೀ ರಾಜ್ಯ ಬಂದ್ ಮಾಡುವ ನಿರ್ಧಾರಕ್ಕೆ ಲಾಕ್​ಡೌನ್ ಎಂದು ಹೇಳಲು ಸಮಸ್ಯೆ ಏನು.? ಎಂದು ಸರ್ಕಾರಕ್ಕೆ ಕೇಳಿದ್ದಾರೆ.

ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅನ್ನುವುದಾದರೆ ಇದು ಲಾಕ್​ಡೌನ್ ಅಲ್ಲದೇ ಕಠಿಣ ನಿಯಮ ಹೇಗಾಗುತ್ತದೆ..? ಲಾಕ್​ಡೌನ್​ನಿಂದ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಎಲ್ಲ ಅರ್ಹರಿಗೆ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸುವಂತೆ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ. ಲಾಕ್​ಡೌನ್ ಅಂದರೆ ಗೃಹ ಬಂಧನವಿದ್ದಂತೆ. ಜೈಲಿಗೆ ಹೋದವರಿಗೆ ಊಟ, ಸಂಬಳ ಕೊಡುವಂತೆ ಲಾಕ್​ಡೌನ್​ನಿಂದ ಗೃಹಬಂಧನದಲ್ಲಿರುವ ಬಡವರಿಗೆ, ರೈತರಿಗೆ, ಸ್ವಉದ್ಯೋಗಿಗಳಿಗೆ, ಕಾರ್ಮಿಕರು ಸೇರಿದಂತೆ ಎಲ್ಲ ಅರ್ಹರಿಗೆ ಈ ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಎಸ್​ ಆರ್​ ಪಾಟೀಲ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.