ETV Bharat / city

ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುವೆ... ಮೇಲ್ಮನವಿ ಸಲ್ಲಿಸಲ್ಲ: ಸಿದ್ದರಾಮಯ್ಯ

author img

By

Published : Nov 13, 2019, 1:19 PM IST

ಸುಪ್ರೀಂಕೋರ್ಟ್ ತೀರ್ಪನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದು, ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದ್ದು, ಸುಪ್ರೀಂಕೋರ್ಟ್ ನಿರ್ಧಾರವನ್ನು ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಈ ಬಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸುಪ್ರೀಂಕೋರ್ಟ್​ ಅನರ್ಹ ಶಾಸಕರ ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ. ‌ಸುಪ್ರೀಂಕೋರ್ಟ್ ರಾಜ್ಯದ ಆಗಿನ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದರು.

ಜೆಡಿಎಸ್​ನ 17 ಶಾಸಕರು ರಾಜೀನಾಮೆ ಕೊಟ್ಟಿದ್ದರು, ಜೊತೆಗೆ ವಿಪ್ ಉಲ್ಲಂಘನೆ ಮಾಡಿದ್ದರು. ವಿಪ್ ಉಲ್ಲಂಘನೆ ಮಾಡಿರುವುದಲ್ಲದೇ,‌ ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದರು. ಅವರು ಪಕ್ಷಾಂತರ ಮಾಡಿರುವುದರಿಂದ ಅನರ್ಹಗೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಸಕರು ರಾಜೀನಾಮೆ ಕೊಡಬಹುದು ಹಾಗಂತ ಮನಸ್ಸೋ ಇಚ್ಛೆ ವರ್ತಿಸುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗಿಸುತ್ತೇನೆ. ಆದರೆ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜನರು ಅನರ್ಹರನ್ನು ಚುನಾವಣೆಯಲ್ಲಿ ಸೋಲಿಸುತ್ತಾರೆ. ಜನರು ದ್ರೋಹ ಮಾಡಿದವರನ್ನು ಸಹಿಸಿಕೊಳ್ಳುವುದಿಲ್ಲ. ಗುಜರಾತ್, ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿರುವರು ಬಹುತೇಕ ಸೋತಿದ್ದಾರೆ. ಕರ್ನಾಟಕದಲ್ಲೂ ಅನರ್ಹರು ಸೋಲಲಿದ್ದಾರೆ. ಮತದಾರರು ಖಂಡಿತ ಅನರ್ಹರಿಗೆ ಪಾಠ ಕಲಿಸ್ತಾರೆ ಎಂದರು.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸೋದಿಲ್ಲ, ಅದ್ರೆ ಪಕ್ಷದಲ್ಲಿ ಕೂತು ಇದರ ಬಗ್ಗೆ ಚರ್ಚಿಸುತ್ತೇವೆ. ಸುಪ್ರೀಂಕೋರ್ಟ್ ಆದೇಶ ಏನೇ ಇರಲಿ ಕೊನೆಗೆ ಜನರು ತೀರ್ಮಾನ ಮಾಡ್ತಾರೆ. ಈ ತೀರ್ಪಿನಿಂದ ಕಾಂಗ್ರೆಸ್​ಗೆ ಸಂಪೂರ್ಣ ಗೆಲುವು ಸಿಕ್ಕಿದೆ ಎಂದರು.

ಇದೇ ವೇಳೆ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಆಗಿದೆ. ಇಂದು ಅಥವಾ ನಾಳೆ ಎಲ್ಲಾ ಅಭ್ಯರ್ಥಿಗಳನ್ನು ಫೈನಲ್ ಮಾಡ್ತೀವಿ ಎಂದು ಹೇಳಿದರು.

ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದ್ದು, ಸುಪ್ರೀಂಕೋರ್ಟ್ ನಿರ್ಧಾರವನ್ನು ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಸುದ್ದಿಗೋಷ್ಠಿ

ಈ ಬಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸುಪ್ರೀಂಕೋರ್ಟ್​ ಅನರ್ಹ ಶಾಸಕರ ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ. ‌ಸುಪ್ರೀಂಕೋರ್ಟ್ ರಾಜ್ಯದ ಆಗಿನ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ಆದೇಶವನ್ನು ಭಾಗಶಃ ಎತ್ತಿ ಹಿಡಿದಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದರು.

ಜೆಡಿಎಸ್​ನ 17 ಶಾಸಕರು ರಾಜೀನಾಮೆ ಕೊಟ್ಟಿದ್ದರು, ಜೊತೆಗೆ ವಿಪ್ ಉಲ್ಲಂಘನೆ ಮಾಡಿದ್ದರು. ವಿಪ್ ಉಲ್ಲಂಘನೆ ಮಾಡಿರುವುದಲ್ಲದೇ,‌ ರಾಜೀನಾಮೆ ವಾಸ್ತವಿಕತೆಯಿಂದ ಕೂಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದರು. ಅವರು ಪಕ್ಷಾಂತರ ಮಾಡಿರುವುದರಿಂದ ಅನರ್ಹಗೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಸಕರು ರಾಜೀನಾಮೆ ಕೊಡಬಹುದು ಹಾಗಂತ ಮನಸ್ಸೋ ಇಚ್ಛೆ ವರ್ತಿಸುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗಿಸುತ್ತೇನೆ. ಆದರೆ ಅವರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜನರು ಅನರ್ಹರನ್ನು ಚುನಾವಣೆಯಲ್ಲಿ ಸೋಲಿಸುತ್ತಾರೆ. ಜನರು ದ್ರೋಹ ಮಾಡಿದವರನ್ನು ಸಹಿಸಿಕೊಳ್ಳುವುದಿಲ್ಲ. ಗುಜರಾತ್, ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿರುವರು ಬಹುತೇಕ ಸೋತಿದ್ದಾರೆ. ಕರ್ನಾಟಕದಲ್ಲೂ ಅನರ್ಹರು ಸೋಲಲಿದ್ದಾರೆ. ಮತದಾರರು ಖಂಡಿತ ಅನರ್ಹರಿಗೆ ಪಾಠ ಕಲಿಸ್ತಾರೆ ಎಂದರು.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸೋದಿಲ್ಲ, ಅದ್ರೆ ಪಕ್ಷದಲ್ಲಿ ಕೂತು ಇದರ ಬಗ್ಗೆ ಚರ್ಚಿಸುತ್ತೇವೆ. ಸುಪ್ರೀಂಕೋರ್ಟ್ ಆದೇಶ ಏನೇ ಇರಲಿ ಕೊನೆಗೆ ಜನರು ತೀರ್ಮಾನ ಮಾಡ್ತಾರೆ. ಈ ತೀರ್ಪಿನಿಂದ ಕಾಂಗ್ರೆಸ್​ಗೆ ಸಂಪೂರ್ಣ ಗೆಲುವು ಸಿಕ್ಕಿದೆ ಎಂದರು.

ಇದೇ ವೇಳೆ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಆಗಿದೆ. ಇಂದು ಅಥವಾ ನಾಳೆ ಎಲ್ಲಾ ಅಭ್ಯರ್ಥಿಗಳನ್ನು ಫೈನಲ್ ಮಾಡ್ತೀವಿ ಎಂದು ಹೇಳಿದರು.

Intro:ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶ ಎತ್ತಿಹಿಡಿದಿದೆ.
ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸೊಲ್ಲ ಸಿದ್ದು ಹೇಳಿಕೆ

ಸುಪ್ರೀಂ ಕೋರ್ಟ್ ರಾಜ್ಯದ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ಆದೇಶವನ್ನು ಭಾಗಶಃ ಎತ್ತಿ ಹಿಡಿದ್ದಿದ್ದಾರೆ ಸುಪ್ರೀಂ ಕೋರ್ಟ್ ತೀರ್ಪು ನ್ನು ಸ್ವಾಗತ ಮಾಡುತ್ತೇನೆಎಂದುಮಾಜಿಮುಖ್ಯಮಂತ್ರಿಸಿದ್ದರಾಯ್ಯ
ಹೇಳಿದ್ದಾರೆ. ಇಂದು ಸುಪ್ರೀಂಕೋರ್ಟ್​ ಅನರ್ಹ ಶಾಸಕ ವಿಚಾರವಾಗಿಮಹತ್ವದ ತೀರ್ಪು ನೀಡಿದ್ದು‌, ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಜಿ ಸಿಎಮ್ ಸಿದ್ದರಾಮಯ್ಯ. ಸುಪ್ರೀಂ ಕೋರ್ಟ್ ರಾಜ್ಯದ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ಆದೇಶವನ್ನು ಭಾಗಶಃ ಎತ್ತಿ ಹಿಡಿದ್ದಿದ್ದಾರೆ .ಸುಪ್ರೀಂ ಕೋರ್ಟ್ ತೀರ್ಪು ನ್ನು ಸ್ವಾಗತ ಮಾಡುತ್ತೇನೆ ನಮ್ಮ ಜೆಡಿಎಸ್ ನ ೧೭ ಶಾಸಕರು ರಾಜೀನಾಮೆ ಕೊಟ್ಟಿದ್ರು , ಜೊತೆಗೆ ವಿಪ್ ಉಲ್ಲಂಘನೆ ಮಾಡಿದ್ರು. ವಿಪ್ ಉಲ್ಲಂಘನೆ ಮಾಡಿದ್ದಾರೆ‌ ರಾಜಿನಮೆ ಸ್ವಂ ಪ್ರೇರಣೆ ಇಂದವಇಲ್ಲ,
ವಾಸ್ತವಿಕತೆ ಇಂದ ಕೂಡಿದ್ದಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ೧೭ ಜನರನ್ನು ಅನರ್ಹಮಾಡಿದ್ರು.ಅವರು ಪಕ್ಷಾಂತರ ಮಾಡಿರೋದರಿಂದ ಅನರ್ಹರಾಗಿರೋದು ಒಂದು ಭಾಗ ಈ ಅವಧಿಯಲ್ಲಿ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಮತ್ತೋಂದು ಭಾಗವಾಗಿದೆ. Body:ಡೆಮಾಕ್ರಸಿಯಲ್ಲಿ ೧೦ ನೆ ಶೆಡ್ಯೂಲ್ ನಲ್ಲಿ ಒಂದು ಪಕ್ಷದಲ್ಲಿ ಗೆದ್ದವರು ರಾಜೀನಾವೆ ಕೊಡಬಹುದು ಅದರೆ ಸ್ವಂ ಪ್ರೇರಣೆತಜಿನಿಯನ್ಉದ್ದೇಶಇದ್ದರೆರಾಜಿನಾಮೆಕೊಡಬಹುದು.ಪ್ರಜಾಪ್ರಭುತ್ವದಲ್ಲಿಆಯ್ಕೆಆದಮೇಲೆಮನಸೋಇಚ್ಚೆವರ್ತಿಸುವಂತಿಲ್ಲ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧೆಇಸಬಹುದುಎಂಬ ಸುಪ್ರಿಂ ಕೋರ್ಟ್ ಆದೇಶವನ್ನು ಸ್ವಾಗಿಸುತ್ತೇನೆ ,ಅದರೆ ಅವರು ಅನರ್ಹರಾಗಿದ್ದು ಯಾಕೆ, ಎಂಬುದನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ.ಜನರು ಪಕ್ಷಾಂತರಿಗಳನ್ನು ಒಪ್ಪಿಕೊಳ್ಳುವುದಿಲ್ಲಅದೇ ರೀತಿ ಸುಪ್ರಿಂ ಕೋರ್ಟ್ ಸಹ ಪಕ್ಷಾಂತರವನ್ನು ಒಪ್ಪಿಲ್ಲ.ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರು.ಜನರು ಅವರನ್ನು ಸೋಲಿಸುತ್ತಾರೆ.ಜನರುಜನದ್ರೋಹ ಮಾಡಿದವರನ್ನು ಸಹಿಸಿಕೊಳ್ಳೋದಿಲ್ಲಗುಜರಾತ್,ಮಹಾರಾಷ್ಟ್ರದಲ್ಲಿಪಕ್ಷಾಂತರಮಾಡಿರುವರು ಬಹುತೇಕ ಸೋತಿದ್ದಾರೆ.ಕರ್ನಾಟಕದಲ್ಲೂ ಅನರ್ಹರು ಸೋಲಲಿದ್ದಾರೆ.ಮತದಾರರು ಖಂಡಿತ ಅನರ್ಹರಿಗೆ ಪಾಠ ಕಲಿಸ್ತಾರೆ.ಅಲ್ಲದೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಮೇಲ್ಮನವಿ ಸಲ್ಲಿಸೋದಿಲ್ಲ,ಅದ್ರೆ ಪಕ್ಷದಲ್ಲಿ ಕೂತುಇದರಬಗ್ಗೆಚರ್ಚಿಸುತ್ತೇವೆ.ಅವರುಅನರ್ಹರಾಗಿರೋದರಿಂದ ಮಿಸ್ಟರ್ ಆಗುವ ಆಗಿಲ್ಲ., ಸುಪ್ರೀಂಕೋರ್ಟ್ ಆದೇಶ ಏನೇ ಇರಲಿ ಅಲ್ಟಿಮೇಟ್ ಆಗಿ ಜನರು ತೀರ್ಮಾನ ಮಾಡ್ತಾರೆ.ಈ ತೀರ್ಪಿನಿಂದ ಕಾಂಗ್ರೆಸ್ ಗೆ ಸಂಪೂರ್ಣ ಗೆಲುವು ಸಿಕ್ಕಿದೆ.ಎಂದು ಮಾಜಿ ಸಿಎಮ್ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ತೀರ್ಪಿನ್ನು ಸ್ವಾಗತಿಸಿದರು.ಅಲ್ಲದೆಉಪಚುನಾವಣೆ ಅಭ್ಯರ್ಥಿಗಳ
ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದಸಿದ್ದರಾಮಯ್ಯ 7
ಕ್ಷೇತ್ರಗಳ ಅಭ್ಯರ್ಥಿ ಗಳ ಆಯ್ಕೆ ಬಗ್ಗೆ ಚರ್ಚೆಆಗಿದೆ.ಇಂದು
ಅಥವಾ ನಾಳೆ ಎಲ್ಲಾ ಅಭ್ಯರ್ಥಿಗಳನ್ನು ಫೈನಲ್ ಮಾಡ್ತೀವಿ ಎಂದು ಹೇಳಿದರು.

ಸತೀಶ ಎಂಬಿ

ವಿಸ್ಯವಲ್ಸ್ ಬ್ಯಾಕ್ ಪ್ಯಾಕ್ ಮೂಲಕ ಬಂದಿದೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.