ETV Bharat / city

ನೀವೇನು ಆದರ್ಶ ವ್ಯಕ್ತಿಯಲ್ಲ, ನಿಮ್ಮ ಕಣ್ಣೀರಿನ ನಾಟಕ ಎಲ್ಲರಿಗೂ ಗೊತ್ತು: ಹೆಚ್​ಡಿಕೆಗೆ ರವಿಕುಮಾರ್ ತಿರುಗೇಟು - ಹೆಚ್​ಡಿಕೆಗೆ ರವಿಕುಮಾರ್ ಟಾಂಗ್

ಸಿಎಂ ಬಿಎಸ್​ವೈ ವಿರುದ್ಧ ಸರಣಿ ಟ್ವೀಟ್ ಮಾಡಿದ ಹೆಚ್​ಡಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಣೆ ಬಳಿಕ ಜೆಡಿಎಸ್​ ನಾಯಕರಿಗೆ ಟಾಂಗ್.

ravikumar
ಹೆಚ್​ಡಿಕೆಗೆ ರವಿಕುಮಾರ್ ತಿರುಗೇಟು
author img

By

Published : Dec 25, 2019, 1:31 PM IST

ಬೆಂಗಳೂರು: ನೀವೇನು ಆದರ್ಶ ವ್ಯಕ್ತಿಯಲ್ಲ, ಆದರ್ಶ ಆಡಳಿತವನ್ನೂ ಕೊಟ್ಟಿಲ್ಲ. ರಾಜ್ಯವನ್ನು ಲೂಟಿ ಮಾಡಿದ್ದೀರಿ, ಆಗಾಗ ಕಣ್ಣೀರು ಸುರಿಸುವ ನಾಟಕವನ್ನು ಮಾಡುತ್ತೀರಿ, ಅದನ್ನು ಜನ ನೋಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಅಟಲ್ ಅವರಿಗೆ ನುಡಿನಮನಗಳನ್ನು ಸಲ್ಲಿಸಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯ್ತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕುಮಾರಸ್ವಾಮಿಯವರು ಆಗಾಗ ಈ ರೀತಿಯ ಸಿಡಿಬಾಂಬ್‌ಗಳನ್ನು ಹಾಕುತ್ತಿರುತ್ತಾರೆ. ಅನೇಕ ಬಾರಿ ಅಳುತ್ತಾರೆ. ಯಾವಾಗಲೋ ನಗುತ್ತಿರುತ್ತಾರೆ. ಕುಮಾರಸ್ವಾಮಿಯವರು ತಮಗೆ ಯಾವಾಗ ಯಾವಾಗ ಏನೇನು ಹೇಳಬೇಕು ಎಂದು ಅನ್ನಿಸುತ್ತೋ ಆಗೆಲ್ಲಾ ಈ ರೀತಿಯ ಸಂದರ್ಭವನ್ನು ಉಪಯೋಗಿಸಿಕೊಂಡು ಹೇಳಿಕೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.

ಸಮ್ಮಿಶ್ರ ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಅವರು ಕುಮಾರಸ್ವಾಮಿ ಮನೆಗೆ ಹೋಗಿರಬಹುದು, ಅದೇನು ದೊಡ್ಡ ವಿಷಯವಲ್ಲ. ಯಡಿಯೂರಪ್ಪನವರಿಗೆ ಕುಮಾರಸ್ವಾಮಿಯವರ ಮನೆಯ ಅಡ್ರೆಸ್ ಗೊತ್ತು. ಕುಮಾರಸ್ವಾಮಿಯವರಿಗೆ ಯಡಿಯೂರಪ್ಪನವರ ಮನೆ ಅಡ್ರೆಸ್ ಗೊತ್ತು ಇದೇನು ದೊಡ್ಡ ವಿಷಯವಲ್ಲ. ಆದರೆ ನೀವು ಯಡಿಯೂರಪ್ಪನವರಿಗೆ ಕ್ಷಮಿಸಲಾರದಷ್ಟು ಅನ್ಯಾಯ ಮಾಡಿದ್ದೀರಿ. ಮೈತ್ರಿ ಸರ್ಕಾರದ ವೇಳೆ 20 ತಿಂಗಳ ಅಧಿಕಾರ ಅನುಭವಿಸಿ ನಂತರ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಆದರ್ಶ ರಾಜಕಾರಣಿಯಂತೆ ಮಾತನಾಡುವ ನೀವು ಅಂದು ಏಕೆ ಅಧಿಕಾರ ಕೊಡಲಿಲ್ಲ? ಹಾಗಾಗಿ ನಿಮ್ಮ ಅಡ್ರೆಸ್ ನಮಗೆ ಚೆನ್ನಾಗಿ ಗೊತ್ತಿದೆ. ಜೊತೆಗೆ ನಿಮ್ಮ ವ್ಯಕ್ತಿತ್ವವೂ ಬಹಳ ಚೆನ್ನಾಗಿ ಗೊತ್ತಿದೆ. ವಿಧಾನಸೌಧ ಮರೆತು ತಾಜ್ ಹೋಟೆಲ್​​ನಲ್ಲಿ ರೂಮ್ ಮಾಡಿಕೊಂಡು ಆಡಳಿತ ನಡೆಸಿದ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಟೀಕಿಸಿದರು.
ಕುಮಾರಸ್ವಾಮಿ ಮತ್ತು ಅವರ ತಂದೆಗೆ ಈ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಮಂಡ್ಯ ಉಪಚುನಾವಣೆಯಲ್ಲೂ ಕೂಡ ಜನ ಪಾಠ ಕಲಿಸಿದ್ದಾರೆ. ಹಾಗಾಗಿ ಕುಮಾರಸ್ವಾಮಿ ರಾಜಕಾರಣಿಯಂತೆ ನುಡಿಮುತ್ತುಗಳನ್ನು ನುಡಿಯುವ ಅವಶ್ಯಕತೆ ಇಲ್ಲ ಎಂದರು. ದೇವೇಗೌಡರು ಯಾವ ಪಾರ್ಟಿ ಜೊತೆ ಬೇಕಾದರೂ ಹೋಗಲು ಬಯಸುತ್ತಾರೆ. ಕಾರಣ ಅವರಿಗೆ ಅಧಿಕಾರ ಬೇಕು. ಕಾಂಗ್ರೆಸ್ ಜೊತೆಯಲ್ಲಿ ಹೋಗುತ್ತಾರೆ, ಕಮ್ಯುನಿಸ್ಟರ ಜೊತೆ ಹೋಗಲು ಸಿದ್ಧರಿದ್ದಾರೆ, ಬಿಜೆಪಿ ಜೊತೆಯೂ ಹೋಗಲೂ ಅವರು ಸಿದ್ಧ. ಅವರಿಗೆ ಅಧಿಕಾರದಲ್ಲಿ ಇರಬೇಕು ಎನ್ನುವ ಗುರಿ ಮಾತ್ರ ಇದೆ. ಮಾರ್ಗ ಯಾವುದಾದರೂ ಸರಿ ಒಟ್ಟಿನಲ್ಲಿ ಅಧಿಕಾರದಲ್ಲಿ ಇರಬೇಕು ಎನ್ನುವ ಚಾಣಾಕ್ಷ ರಾಜಕಾರಣಿ ದೇವೇಗೌಡರು ಎಂದು ವ್ಯಂಗ್ಯವಾಡಿದರು.

ಬೆಂಗಳೂರು: ನೀವೇನು ಆದರ್ಶ ವ್ಯಕ್ತಿಯಲ್ಲ, ಆದರ್ಶ ಆಡಳಿತವನ್ನೂ ಕೊಟ್ಟಿಲ್ಲ. ರಾಜ್ಯವನ್ನು ಲೂಟಿ ಮಾಡಿದ್ದೀರಿ, ಆಗಾಗ ಕಣ್ಣೀರು ಸುರಿಸುವ ನಾಟಕವನ್ನು ಮಾಡುತ್ತೀರಿ, ಅದನ್ನು ಜನ ನೋಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಅಟಲ್ ಅವರಿಗೆ ನುಡಿನಮನಗಳನ್ನು ಸಲ್ಲಿಸಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯ್ತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕುಮಾರಸ್ವಾಮಿಯವರು ಆಗಾಗ ಈ ರೀತಿಯ ಸಿಡಿಬಾಂಬ್‌ಗಳನ್ನು ಹಾಕುತ್ತಿರುತ್ತಾರೆ. ಅನೇಕ ಬಾರಿ ಅಳುತ್ತಾರೆ. ಯಾವಾಗಲೋ ನಗುತ್ತಿರುತ್ತಾರೆ. ಕುಮಾರಸ್ವಾಮಿಯವರು ತಮಗೆ ಯಾವಾಗ ಯಾವಾಗ ಏನೇನು ಹೇಳಬೇಕು ಎಂದು ಅನ್ನಿಸುತ್ತೋ ಆಗೆಲ್ಲಾ ಈ ರೀತಿಯ ಸಂದರ್ಭವನ್ನು ಉಪಯೋಗಿಸಿಕೊಂಡು ಹೇಳಿಕೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.

ಸಮ್ಮಿಶ್ರ ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಅವರು ಕುಮಾರಸ್ವಾಮಿ ಮನೆಗೆ ಹೋಗಿರಬಹುದು, ಅದೇನು ದೊಡ್ಡ ವಿಷಯವಲ್ಲ. ಯಡಿಯೂರಪ್ಪನವರಿಗೆ ಕುಮಾರಸ್ವಾಮಿಯವರ ಮನೆಯ ಅಡ್ರೆಸ್ ಗೊತ್ತು. ಕುಮಾರಸ್ವಾಮಿಯವರಿಗೆ ಯಡಿಯೂರಪ್ಪನವರ ಮನೆ ಅಡ್ರೆಸ್ ಗೊತ್ತು ಇದೇನು ದೊಡ್ಡ ವಿಷಯವಲ್ಲ. ಆದರೆ ನೀವು ಯಡಿಯೂರಪ್ಪನವರಿಗೆ ಕ್ಷಮಿಸಲಾರದಷ್ಟು ಅನ್ಯಾಯ ಮಾಡಿದ್ದೀರಿ. ಮೈತ್ರಿ ಸರ್ಕಾರದ ವೇಳೆ 20 ತಿಂಗಳ ಅಧಿಕಾರ ಅನುಭವಿಸಿ ನಂತರ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಆದರ್ಶ ರಾಜಕಾರಣಿಯಂತೆ ಮಾತನಾಡುವ ನೀವು ಅಂದು ಏಕೆ ಅಧಿಕಾರ ಕೊಡಲಿಲ್ಲ? ಹಾಗಾಗಿ ನಿಮ್ಮ ಅಡ್ರೆಸ್ ನಮಗೆ ಚೆನ್ನಾಗಿ ಗೊತ್ತಿದೆ. ಜೊತೆಗೆ ನಿಮ್ಮ ವ್ಯಕ್ತಿತ್ವವೂ ಬಹಳ ಚೆನ್ನಾಗಿ ಗೊತ್ತಿದೆ. ವಿಧಾನಸೌಧ ಮರೆತು ತಾಜ್ ಹೋಟೆಲ್​​ನಲ್ಲಿ ರೂಮ್ ಮಾಡಿಕೊಂಡು ಆಡಳಿತ ನಡೆಸಿದ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಟೀಕಿಸಿದರು.
ಕುಮಾರಸ್ವಾಮಿ ಮತ್ತು ಅವರ ತಂದೆಗೆ ಈ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಮಂಡ್ಯ ಉಪಚುನಾವಣೆಯಲ್ಲೂ ಕೂಡ ಜನ ಪಾಠ ಕಲಿಸಿದ್ದಾರೆ. ಹಾಗಾಗಿ ಕುಮಾರಸ್ವಾಮಿ ರಾಜಕಾರಣಿಯಂತೆ ನುಡಿಮುತ್ತುಗಳನ್ನು ನುಡಿಯುವ ಅವಶ್ಯಕತೆ ಇಲ್ಲ ಎಂದರು. ದೇವೇಗೌಡರು ಯಾವ ಪಾರ್ಟಿ ಜೊತೆ ಬೇಕಾದರೂ ಹೋಗಲು ಬಯಸುತ್ತಾರೆ. ಕಾರಣ ಅವರಿಗೆ ಅಧಿಕಾರ ಬೇಕು. ಕಾಂಗ್ರೆಸ್ ಜೊತೆಯಲ್ಲಿ ಹೋಗುತ್ತಾರೆ, ಕಮ್ಯುನಿಸ್ಟರ ಜೊತೆ ಹೋಗಲು ಸಿದ್ಧರಿದ್ದಾರೆ, ಬಿಜೆಪಿ ಜೊತೆಯೂ ಹೋಗಲೂ ಅವರು ಸಿದ್ಧ. ಅವರಿಗೆ ಅಧಿಕಾರದಲ್ಲಿ ಇರಬೇಕು ಎನ್ನುವ ಗುರಿ ಮಾತ್ರ ಇದೆ. ಮಾರ್ಗ ಯಾವುದಾದರೂ ಸರಿ ಒಟ್ಟಿನಲ್ಲಿ ಅಧಿಕಾರದಲ್ಲಿ ಇರಬೇಕು ಎನ್ನುವ ಚಾಣಾಕ್ಷ ರಾಜಕಾರಣಿ ದೇವೇಗೌಡರು ಎಂದು ವ್ಯಂಗ್ಯವಾಡಿದರು.
Intro:



ಬೆಂಗಳೂರು: ನೀವೇನು ಆದರ್ಶ ವ್ಯಕ್ತಿಯಲ್ಲ ಆದರ್ಶವಾದ ಆಡಳಿತವನ್ನು ಕೊಟ್ಟಿಲ್ಲ ರಾಜ್ಯವನ್ನು ಲೂಟಿ ಮಾಡಿದ್ದೀರಿ ಆಗಾಗ ಕಣ್ಣೀರು ಸುರಿಸುವ ನಾಟಕವನ್ನು ಮಾಡುತ್ತೀರಿ ಅದನ್ನು ಜನ ನೋಡಿದ್ದಾರೆ ಎಂದು ಸಿಎಂ ಬಿಎಸ್ವೈ ವಿರುದ್ಧ ಸರಣಿ ಟ್ವೀಟ್ ಮಾಡಿರಿವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.

ಅಜಾತ ಶತ್ರು,ಮಾಜಿ ಪ್ರಧಾಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಅಟಲ್ ಅವರಿಗೆ ನುಡಿನಮನಗಳನ್ನು ಸಲ್ಲಿಸಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಪುಷ್ಪಾರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕುಮಾರಸ್ವಾಮಿಯವರು ಆದಾಗ ಈ ರೀತೊಯ ಸಿಡಿ ಬಾಂಬ್ ಗಳನ್ನು ಹಾಕುತ್ತಿರುತ್ತಾರೆ ಅನೇಕ ಬಾರಿ ಅಳುತ್ತಿರುತ್ತಾರೆ ಯಾವಾಗಲೋ ನಗುತ್ತಿರುತ್ತಾರೆ ಈತರ ಕುಮಾರಸ್ವಾಮಿಯವರು ತಮಗೆ ಯಾವಾಗ ಯಾವಾಗ ಏನೇನು ಹೇಳಬೇಕು ಎಂದು ಅನ್ನಿಸುತ್ತೋ ಆಗೆಲ್ಲಾ ಈ ರೀತಿಯ ಸಂದರ್ಭವನ್ನು ಉಪಯೋಗಿಸಿಕೊಂಡು ಹೇಳಿಕೆ ನೀಡುತ್ತಾರೆ ಎಂದು ಎಂದು ಟಾಂಗ್ ನೀಡಿದರು.

ಸಮ್ಮಿಶ್ರ ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಕುಮಾರಸ್ವಾಮಿ ಮನೆಗೆ ಹೋಗಿರಬಹುದು ಅದೇನು ದೊಡ್ಡ ವಿಷಯವಲ್ಲ, ಯಡಿಯೂರಪ್ಪನವರಿಗೆ ಕುಮಾರಸ್ವಾಮಿಯವರ ಮನೆಯ ಅಡ್ರೆಸ್ ಗೊತ್ತು ಕುಮಾರಸ್ವಾಮಿಯವರಿಗೆ ಯಡಿಯೂರಪ್ಪನವರ ಮನೆ ಅಡ್ರೆಸ್ ಗೊತ್ತು ಇದರ ಇದೇನು ದೊಡ್ಡ ವಿಷಯವಲ್ಲ ಆದರೆ ಕುಮಾರಸ್ವಾಮಿಯವರಿಗೆ ಒಂದು ಕೇಳಲು ಇಷ್ಟಪಡುತ್ತೇನೆ ನಿಮ್ಮ ಅಡ್ರೆಸ್ ನಮಗೆ ಚೆನ್ನಾಗಿ ಗೊತ್ತಿದೆ ದೇವೇಗೌಡರ ಮನೆ ಅಡ್ರೆಸ್ ಕೂಡ ಗೊತ್ತಿದೆ ಆದರೆ ನೀವು ಯಡಿಯೂರಪ್ಪನವರಿಗೆ ಕ್ಷಮಿಸಲಾರದಷ್ಟು ಅನ್ಯಾಯ ಮಾಡಿದ್ದೀರಿ ಮೈತ್ರಿ ಸರ್ಕಾರದ ವೇಳೆ ಇಪ್ಪತ್ತು ತಿಂಗಳ ಅಧಿಕಾರ ಅನುಭವಿಸಿ ನಂತರ ನೀವು ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ ಆದರ್ಶ ರಾಜಕಾರಣಿಯಂತೆ ಮಾತನಾಡುವ ಕುಮಾರಸ್ವಾಮಿಯವರು ಅಂದು ಏಕೆ ಅಧಿಕಾರ ಕೊಡಲಿಲ್ಲ ಹಾಗಾಗಿ ನಿಮ್ಮ ಅಡ್ರೆಸ್ ನಮಗೆ ಚೆನ್ನಾಗಿ ಗೊತ್ತಿದೆ ಜೊತೆಗೆ ನಿಮ್ಮ ವ್ಯಕ್ತಿತ್ವವೂ ಬಹಳ ಚೆನ್ನಾಗಿ ಗೊತ್ತಿದೆ. ವಿಧಾನಸೌಧವನ್ನು ಮರೆತು ತಾಜ್ ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡು ಆಡಳಿತ ನಡೆಸಿದ ಯಾವುದಾದರೂ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಇತಿಹಾಸದ ಪುಟವನ್ನು ತಿರುಗಿಸಿ ನೋಡಿ ಎಂದು ಟೀಕಿಸಿದರು.

ನೀವೇನು ಆದರ್ಶ ವ್ಯಕ್ತಿಯಲ್ಲ, ಆದರ್ಶವಾದ ಆಡಳಿತವನ್ನು ಕೊಟ್ಟಿಲ್ಲ ರಾಜ್ಯವನ್ನು ಲೂಟಿ ಮಾಡಿದ್ದೀರಿ ಆಗಾಗ ಕಣ್ಣೀರು ಸುರಿಸುವ ನಾಟಕವನ್ನು ಮಾಡುತ್ತೀರಿ ಅದನ್ನು ಜನ ನೋಡಿದ್ದಾರೆ ಅವರ ತಂದೆಯವರಿಗೆ, ಕುಮಾರಸ್ವಾಮಿಯವರಿಗೆ, ಮಂಡ್ಯದಲ್ಲಿ, ಉಪಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ ಹಾಗಾಗಿ ಕುಮಾರಸ್ವಾಮಿ ರಾಜಕಾರಣಿಯಂತೆ ನುಡಿಮುತ್ತುಗಳನ್ನು ನುಡಿಯುವ ಅವಶ್ಯಕತೆ ಇಲ್ಲ ಎಂದರು.

ದೇವೇಗೌಡರು ಯಾವ ಪಾರ್ಟಿ ಜೊತೆ ಬೇಕಾದರೂ ಹೋಗಲು ಬಯಸುತ್ತಾರೆ ಕಾರಣ ಅವರಿಗೆ ಅಧಿಕಾರ ಬೇಕು ಕಾಂಗ್ರೆಸ್ ಜೊತೆಯಲ್ಲಿ ಹೋಗುತ್ತಾರೆ, ಕಮ್ಯುನಿಸ್ಟರ ಜೊತೆ ಹೋಗಲು ಸಿದ್ಧರಿದ್ದಾರೆ, ಬಿಜೆಪಿ ಜೊತೆಯೂ ಹೋಗಲು ಸಿದ್ದ, ಅವರಿಗೆ ಅಧಿಕಾರದಲ್ಲಿ ಇರಬೇಕು ಎನ್ನುವ ಗುರಿ ಮಾತ್ರ ಇದೆ ಅದಕ್ಕಾಗಿ ಯಾರ ಜೊತ ಬರೆದ ಕಾದರೂ ಹೋಗಲು ಅವರು ಸಿದ್ದ,ಮಾರ್ಗ ಯಾವುದಾದರೂ ಸರಿ ಒಟ್ಟಿನಲ್ಲಿ ಅಧಿಕಾರದಲ್ಲಿ ಇರಬೇಕು ಎನ್ನುವ ಚಾಣಾಕ್ಷ ರಾಜಕಾರಣಿ ದೇವೇಗೌಡರು ಎಂದು ವ್ಯಂಗ್ಯವಾಡಿದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.