ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಸಾಹೇಬ ಸಿನಿಮಾದ ಮೂಲಕ ಸ್ಯಾಂಡವುಡ್ಗೆ ಎಂಟ್ರಿ ಕೊಟ್ಟಿದ್ರು. ಮನೋರಂಜನ್ ರವಿಚಂದ್ರನ್ ಅನ್ನೋ ಹೆಸರಿನ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಇವರು ಸದ್ಯ ಮನು ರಂಜನ್ ಅಂತಾ ಹೆಸರನ್ನ ಚೇಂಜ್ ಮಾಡ್ಕೊಂಡಿದ್ದಾರೆ.
ಈಗಾಗಲೇ ಸಾಹೇಬ ಹಾಗೂ ಬೃಹಸ್ಪತಿ ಸಿನಿಮಾ ಮಾಡಿರೋ ಮನು ಸದ್ಯ ಪ್ರಾರಂಭ ಮತ್ತು ಮುಗಿಲುಪೇಟೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ತಮ್ಮ ಮೂರನೇ ಚಿತ್ರ ಪ್ರಾರಂಭ ಸಿನಿಮಾದಲ್ಲಿ ಮನು ರಂಜನ್ ಅಂತಾ ಹೆಸರು ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಎಲ್ಲಾ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ಪುತ್ರನ ಹೆಸರು ಮನು ರಂಜನ್ ಅಂತಾ ಇರಲಿದೆ.
ಸದ್ಯ ಭರತ್ ನಾವುಂದ ಆ್ಯಕ್ಷನ್ ಕಟ್ ಹೇಳಲಿರುವ ಪಕ್ಕಾ ಲವ್ಸ್ಟೋರಿಯಾಗಿರುವ ಮುಗಿಲುಪೇಟೆ ಚಿತ್ರದಲ್ಲಿ ಮನೋರಂಜನ್ ಎರಡು ಶೇಡ್ನಲ್ಲಿ ಕಾಣಿಸಲಿದ್ದಾರೆ. ಅಲ್ಲದೇ ಲಾಂಗ್ ಹೇರ್ ಬಿಟ್ಟು ಲವರ್ಬಾಯ್ ಆಗಿ ಅಸ್ಸೋಂನ ಬೆಡಗಿ ಖಯಾದು ಮೋಹನ್ ಲೋರಾ ಜೊತೆ ಡ್ಯುಯೆಟ್ ಹಾಡಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿದ್ದು, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಇರಲಿದೆ.
ಮುಂದಿನ ವಾರದಿಂದ ಚಿತ್ರತಂಡ ಶೂಟಿಂಗ್ಗಾಗಿ ಸಕಲೇಶಪುರಕ್ಕೆ ಪ್ರಯಾಣ ಬೆಳಸಲಿದ್ದು, ಡಿಸೆಂಬರ್ 11ರ ಮನುರಂಜನ್ ಹುಟ್ಟುಹಬ್ಬಕ್ಕೆ ಮಾಸ್ ಟೀಸರ್ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ರಕ್ಷಾ ವಿಜಯ್ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಡ್ತಿದ್ದಾರೆ.