ETV Bharat / city

ಅನಗತ್ಯವಾಗಿ ರಸ್ತೆಗಿಳಿದರೆ ಕಾನೂನು ಕ್ರಮ : ಪೊಲೀಸ್ ಕಮಿಷನರ್ ಕಮಲ್‌ ಪಂತ್ ಎಚ್ಚರಿಕೆ

author img

By

Published : May 9, 2021, 7:21 PM IST

Updated : May 10, 2021, 7:57 AM IST

14 ದಿನಗಳ ಕಾಲ ಕಠಿಣ ಲಾಕ್ ಡೌನ್ ಅನುಷ್ಠಾನಕ್ಕೆ ಬರಲಿದೆ. ಬೆಳಗ್ಗೆ 6 ರಿಂದ 10 ಗಂಟೆವರೆಗೂ ಅಗತ್ಯ ಸೇವೆಗಳಿಗಾಗಿ ಮಾತ್ರ ಜನರು ಮನೆಯಿಂದ ಹೊರಬರಬಹುದುದು. ಕುಂಟು ನೆಪ ಹೇಳಿ ಮನೆಯಿಂದ ಹೊರಬಂದ್ರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಜನರಿಗೆ ಎಚ್ಚರಿಕೆ ರವಾನಿಸಿದ್ದಾರೆ.

police-commissioner-kamal-panth-gave-lockdown-instructs-to-dcp
ಪೊಲೀಸ್ ಕಮೀಷನರ್ ಕಮಲ್‌ ಪಂತ್

ಬೆಂಗಳೂರು: ನಗರದಲ್ಲಿ ಲಾಕ್​ಡೌನ್‌ ನಿಯಮ ಯಶಸ್ವಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ನಿಯಮ‌ ಉಲ್ಲಂಘಿಸುವುದು ಕಂಡುಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಯಾ ವಲಯದ ಡಿಸಿಪಿಗಳಿಗೆ ಮೌಖಿಕವಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಾಕೀತು ಮಾಡಿದ್ದಾರೆ.

ಲಾಕ್ ಡೌನ್‌ ಸಮಯದಲ್ಲಿ ಅನಗತ್ಯವಾಗಿ ಸಂಚರಿಸುವುದು ಮತ್ತು ನಿಯಮ‌ ಉಲ್ಲಂಘಿಸುವುದು ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಯಾ ವಲಯದ ಡಿಸಿಪಿಗಳಿಗೆ ಕಮಲ್​ ಪಂತ್​ ಸೂಚಿಸಿದ್ದಾರೆ.

  • ಬೆಂಗಳೂರಿನ ನಾಗರಿಕರಲ್ಲಿ ಮನವಿ!

    ನಾಳೆಯಿಂದ ಜಾರಿಯಾಗುವ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಕೋವಿಡ್ ವಿರುದ್ಧ ಹೋರಾಡಲು ಪ್ರತಿಯೊಬ್ಬರು ನಮ್ಮೊಂದಿಗೆ ಸಹಕರಿಸಿ.

    ಲಾಕ್ಡೌನ್ ಉಲ್ಲಂಘಿಸಿದ್ದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಗತ್ಯವಾಗಿ ಓಡಾಡದೆ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

    — Kamal Pant, IPS (@CPBlr) May 9, 2021 " class="align-text-top noRightClick twitterSection" data=" ">

ಅನಗತ್ಯವಾಗಿ ಹೊರಗೆ ಬರಬೇಡಿ

ಬೆಳಗ್ಗೆಯಿಂದ 14 ದಿನಗಳ ಕಾಲ ಕಠಿಣ ಲಾಕ್​ಡೌನ್ ಅನುಷ್ಠಾನಕ್ಕೆ ಬರಲಿದೆ. ಬೆಳಗ್ಗೆ 6ರಿಂದ 10 ಗಂಟೆವರೆಗೂ ಅಗತ್ಯ ಸೇವೆಗಳಿಗಾಗಿ ಮಾತ್ರ ಜನರು ಮನೆಯಿಂದ ಹೊರಬರಲು ಅವಕಾಶವಿದೆ. ಉಳಿದ ಸಂದರ್ಭಗಳಲ್ಲಿ ಸುಖಾಸುಮ್ಮನೆ ತಿರುಗಾಡುವುದು, ಕುಂಟು ನೆಪ ಹೇಳುವುದು ಕಂಡು ಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲಿಸಿ, ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಪಂತ್ ಟ್ವಿಟರ್​​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ನಗರದಲ್ಲಿ ಲಾಕ್​ಡೌನ್‌ ನಿಯಮ ಯಶಸ್ವಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ನಿಯಮ‌ ಉಲ್ಲಂಘಿಸುವುದು ಕಂಡುಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಯಾ ವಲಯದ ಡಿಸಿಪಿಗಳಿಗೆ ಮೌಖಿಕವಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಾಕೀತು ಮಾಡಿದ್ದಾರೆ.

ಲಾಕ್ ಡೌನ್‌ ಸಮಯದಲ್ಲಿ ಅನಗತ್ಯವಾಗಿ ಸಂಚರಿಸುವುದು ಮತ್ತು ನಿಯಮ‌ ಉಲ್ಲಂಘಿಸುವುದು ಕಂಡು ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಆಯಾ ವಲಯದ ಡಿಸಿಪಿಗಳಿಗೆ ಕಮಲ್​ ಪಂತ್​ ಸೂಚಿಸಿದ್ದಾರೆ.

  • ಬೆಂಗಳೂರಿನ ನಾಗರಿಕರಲ್ಲಿ ಮನವಿ!

    ನಾಳೆಯಿಂದ ಜಾರಿಯಾಗುವ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಕೋವಿಡ್ ವಿರುದ್ಧ ಹೋರಾಡಲು ಪ್ರತಿಯೊಬ್ಬರು ನಮ್ಮೊಂದಿಗೆ ಸಹಕರಿಸಿ.

    ಲಾಕ್ಡೌನ್ ಉಲ್ಲಂಘಿಸಿದ್ದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಗತ್ಯವಾಗಿ ಓಡಾಡದೆ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

    — Kamal Pant, IPS (@CPBlr) May 9, 2021 " class="align-text-top noRightClick twitterSection" data=" ">

ಅನಗತ್ಯವಾಗಿ ಹೊರಗೆ ಬರಬೇಡಿ

ಬೆಳಗ್ಗೆಯಿಂದ 14 ದಿನಗಳ ಕಾಲ ಕಠಿಣ ಲಾಕ್​ಡೌನ್ ಅನುಷ್ಠಾನಕ್ಕೆ ಬರಲಿದೆ. ಬೆಳಗ್ಗೆ 6ರಿಂದ 10 ಗಂಟೆವರೆಗೂ ಅಗತ್ಯ ಸೇವೆಗಳಿಗಾಗಿ ಮಾತ್ರ ಜನರು ಮನೆಯಿಂದ ಹೊರಬರಲು ಅವಕಾಶವಿದೆ. ಉಳಿದ ಸಂದರ್ಭಗಳಲ್ಲಿ ಸುಖಾಸುಮ್ಮನೆ ತಿರುಗಾಡುವುದು, ಕುಂಟು ನೆಪ ಹೇಳುವುದು ಕಂಡು ಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲಿಸಿ, ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಪಂತ್ ಟ್ವಿಟರ್​​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Last Updated : May 10, 2021, 7:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.