ETV Bharat / city

ಗೌರವಾನ್ವಿತ ನಾಗರಿಕರೇ ಲಾಕ್​​ಡೌನ್ ವಿನಾಯಿತಿ ಕೇಳಬೇಡಿ: ಭಾಸ್ಕರ್ ರಾವ್ ಮನವಿ

author img

By

Published : Jul 4, 2020, 7:24 PM IST

ಭಾನುವಾರದ ಲಾಕ್​ಡೌನ್​ಗೆ ಮಹಾನಗರದ ಪೊಲೀಸರು ಸಕಲ ಸಿದ್ಧತೆಗಳನ್ನು ನಡೆಸಿದ್ದು, ಈ ಕುರಿತು ಟ್ವೀಟ್​​ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗೌರವಾನ್ವಿತ ನಾಗರಿಕರೇ ಮನೆಯಲ್ಲೇ ಇರಿ. ಎಲ್ಲರ ಹಿತದೃಷ್ಟಿಯಿಂದ ಲಾಕ್​​ಡೌನ್ ಮಾಡುತ್ತಿರುವುದರಿಂದ ಅನಗತ್ಯ ವಿನಾಯಿತಿ ಕೇಳಬೇಡಿ ಎಂದು ಮನವಿ ಮಾಡಿದ್ದಾರೆ.

police-commissioner-bhaskar-rao-tweet-about-lock-down
ಪೊಲೀಸ್ ಕಮೀಷನರ್ ಭಾಸ್ಕರ್ ರಾವ್

ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್​​ಡೌನ್ ಜಾರಿ ಮಾಡಿ ಆದೇಶ ನೀಡಿದ ಬೆನ್ನಲ್ಲೇ ಇಂದು ರಾತ್ರಿ 8 ಗಂಟೆಯಿಂದಲೇ ಸಿಲಿಕಾನ್ ಸಿಟಿ ಸ್ತಬ್ಥ ಮಾಡಲು ನಗರ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಲಾಕ್​​ಡೌನ್ ಜಾರಿ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ನಾಗರಿಕರೇ ಇಂದು ರಾತ್ರಿ 8 ಗಂಟೆಯಿಂದಲೇ ಲಾಕ್​ಡೌನ್ ಆರಂಭವಾಗಿ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಲಿದೆ. ಗೌರವಾನ್ವಿತ ನಾಗರಿಕರೇ ಮನೆಯಲ್ಲೇ ಇರಿ. ಎಲ್ಲರ ಹಿತದೃಷ್ಟಿಯಿಂದ ಲಾಕ್​​ಡೌನ್ ಮಾಡುತ್ತಿರುವುದರಿಂದ ಅನಗತ್ಯ ವಿನಾಯಿತಿ ಕೇಳಬೇಡಿ. ಒಂದು ದಿನ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ಮನೆಯಲ್ಲಿ ಇರಿ, ವ್ಯಾಯಾಮ ಮಾಡಿ. ಶಿಸ್ತಿನಿಂದ ವರ್ತಿಸಿ ಸಹಕಾರ ನೀಡಿ ಎಂದು ಕೋರಿದ್ದಾರೆ.

  • Lockdown starts at 8pm and concludes at 5am,Monday in BangaloreCity.Respected Citizens, just stay home and don’t ask for exceptions as this is being done in everybody’s interest,heavens won’t fall if you postpone by a day. Please ExcercisSelf Discipline n Cooperate. Happy Sunday.

    — Bhaskar Rao IPS (@deepolice12) July 4, 2020 " class="align-text-top noRightClick twitterSection" data=" ">

ವಿಮಾನ ಸಂಚಾರ ಪ್ರಯಾಣಿಕರಿಗೆ ಲಾಕ್​ಡೌನ್ ನಿಯಮ ಅಡ್ಡಿಯಾಗದು.‌ ಏರ್​ಪೋರ್ಟ್ ಹೋಗುವ ಪ್ರಯಾಣಿಕರು ಸ್ವಂತ ವಾಹನಗಳಲ್ಲಿ ತೆರಳಬಹುದಾಗಿದೆ. ಫ್ಲೈಟ್ ಟಿಕೆಟ್ ಹಾಗೂ ಐಡಿ ಕಾರ್ಡ್ ತೋರಿಸಿದರೆ ಪೊಲೀಸರು ಸಂಚಾರಕ್ಕೆ‌ ಅನುಮತಿ‌‌ ನೀಡಲಿದ್ದಾರೆ.

ಸಮರ್ಪಕವಾಗಿ ಲಾಕ್​ಡೌನ್ ಜಾರಿ ಮಾಡಲು ಈಗಾಗಲೇ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲು ಸಂಚಾರಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಅನಗತ್ಯ ವಾಹನ ಸಂಚಾರ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರ ಲಾಕ್​​ಡೌನ್ ಜಾರಿ ಮಾಡಿ ಆದೇಶ ನೀಡಿದ ಬೆನ್ನಲ್ಲೇ ಇಂದು ರಾತ್ರಿ 8 ಗಂಟೆಯಿಂದಲೇ ಸಿಲಿಕಾನ್ ಸಿಟಿ ಸ್ತಬ್ಥ ಮಾಡಲು ನಗರ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಲಾಕ್​​ಡೌನ್ ಜಾರಿ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ನಾಗರಿಕರೇ ಇಂದು ರಾತ್ರಿ 8 ಗಂಟೆಯಿಂದಲೇ ಲಾಕ್​ಡೌನ್ ಆರಂಭವಾಗಿ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಲಿದೆ. ಗೌರವಾನ್ವಿತ ನಾಗರಿಕರೇ ಮನೆಯಲ್ಲೇ ಇರಿ. ಎಲ್ಲರ ಹಿತದೃಷ್ಟಿಯಿಂದ ಲಾಕ್​​ಡೌನ್ ಮಾಡುತ್ತಿರುವುದರಿಂದ ಅನಗತ್ಯ ವಿನಾಯಿತಿ ಕೇಳಬೇಡಿ. ಒಂದು ದಿನ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ಮನೆಯಲ್ಲಿ ಇರಿ, ವ್ಯಾಯಾಮ ಮಾಡಿ. ಶಿಸ್ತಿನಿಂದ ವರ್ತಿಸಿ ಸಹಕಾರ ನೀಡಿ ಎಂದು ಕೋರಿದ್ದಾರೆ.

  • Lockdown starts at 8pm and concludes at 5am,Monday in BangaloreCity.Respected Citizens, just stay home and don’t ask for exceptions as this is being done in everybody’s interest,heavens won’t fall if you postpone by a day. Please ExcercisSelf Discipline n Cooperate. Happy Sunday.

    — Bhaskar Rao IPS (@deepolice12) July 4, 2020 " class="align-text-top noRightClick twitterSection" data=" ">

ವಿಮಾನ ಸಂಚಾರ ಪ್ರಯಾಣಿಕರಿಗೆ ಲಾಕ್​ಡೌನ್ ನಿಯಮ ಅಡ್ಡಿಯಾಗದು.‌ ಏರ್​ಪೋರ್ಟ್ ಹೋಗುವ ಪ್ರಯಾಣಿಕರು ಸ್ವಂತ ವಾಹನಗಳಲ್ಲಿ ತೆರಳಬಹುದಾಗಿದೆ. ಫ್ಲೈಟ್ ಟಿಕೆಟ್ ಹಾಗೂ ಐಡಿ ಕಾರ್ಡ್ ತೋರಿಸಿದರೆ ಪೊಲೀಸರು ಸಂಚಾರಕ್ಕೆ‌ ಅನುಮತಿ‌‌ ನೀಡಲಿದ್ದಾರೆ.

ಸಮರ್ಪಕವಾಗಿ ಲಾಕ್​ಡೌನ್ ಜಾರಿ ಮಾಡಲು ಈಗಾಗಲೇ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲು ಸಂಚಾರಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಅನಗತ್ಯ ವಾಹನ ಸಂಚಾರ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.