ETV Bharat / city

ಬಿಬಿಎಂಪಿ ಚುನಾವಣೆ, ಬೆಂಗಳೂರಿಗೆ ಹೊಸ ಕಾಯ್ದೆ: ಡಿಸಿಎಂ ಅಶ್ವಥ್ ನಾರಾಯಣ್ - ಬೆಂಗಳೂರಿಗೆ ಹೊಸ ಕಾಯ್ದೆ

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾದ ಹಿನ್ನೆಲೆ ಅತೀ ಶಿಘ್ರದಲ್ಲಿಯೇ ಚುನಾವಣೆ ನಡೆಸುವುದಾಗಿ ಡಿಸಿಎಂ ಅಶ್ವಥ್​ ನಾರಾಯಣ್​ ತಿಳಿಸಿದರು. ಅಲ್ಲದೆ ಬೆಂಗಳೂರಿಗೆ ಹೊಸ ಕಾಯ್ದೆ ಕೊಡುವ ಬಗ್ಗೆಯೂ ಸಿದ್ಧತೆ ಆಗುತ್ತಿದ್ದು, ಸಧ್ಯದಲ್ಲೇ ಜಾರಿಗೆ ಬರಲಿದೆ ಎಂದು ಹೇಳಿದರು.

planing-going-on-bbmp-election-new-act-for-bangalore-said-dcm
ಬಿಬಿಎಂಪಿ ಚುನಾವಣೆ
author img

By

Published : Sep 10, 2020, 6:00 PM IST

ಬೆಂಗಳೂರು: ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ಆಡಳಿತಾಧಿಕಾರಿ ನೇಮಕ ಇಂದು ಅಥವಾ ನಾಳೆ ಆಗಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಕೆಂಪೇಗೌಡ ದಿನಾಚರಣೆ ಬಳಿಕ ಮಾತನಾಡಿದ ಅವರು, ಮುಂದಿನ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ ಬೆಂಗಳೂರಿಗೆ ಹೊಸ ಕಾಯ್ದೆ ಕೊಡುವ ಬಗ್ಗೆಯೂ ಸಿದ್ಧತೆ ಆಗುತ್ತಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ. ಈಗಾಗಲೇ ವಾರ್ಡ್ ಮರುವಿಂಗಡಣೆ ಆಗಿದೆ. ಚುನಾವಣಾ ಮತದಾರರ ಪಟ್ಟಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ, ಬೆಂಗಳೂರಿಗೆ ಹೊಸ ಕಾಯ್ದೆ ಡಿಸಿಎಂ ಮತ್ತು ಬಿಬಿಎಂಪಿ ಮೇಯರ್​ ಹೇಳಿಕೆ

ವಾರ್ಡ್ ಹೆಚ್ಚಳ ಹೊಸ ಕಾಯ್ದೆಯ ಪ್ರಕಾರ ನಡೆಯಲಿದೆ. ಹೊಸ ಕಾಯ್ದೆಗಳಲ್ಲಿ ಏನೇನು ಸುಧಾರಣೆ ಮಾಡ್ಬೇಕು ಎಂಬುದರಲ್ಲಿ ಇದೂ ಸೇರಿದೆ. ಈಗಿನ ಕೆಎಂಸಿ ಕಾಯ್ದೆ ಪ್ರಕಾರ 198 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. ಹೊಸ ಕಾಯ್ದೆ ಬಂದ ಮೇಲೆ ಆ ಪ್ರಕಾರ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿಗಳೇ ಆಡಳಿತಾಧಿಕಾರಿ ನೇಮಕ ಮಾಡಲಿದ್ದಾರೆ ಎಂದರು.

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಸರ್ಕಾರ, ಎಲೆಕ್ಷನ್ ಕಮಿಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಲ್ಲ ಸೇರಿ ವ್ಯವಸ್ಥೆ ಮಾಡಿಕೊಂಡು ಅತಿ ಶೀಘ್ರದಲ್ಲಿ ಚುನಾವಣೆ ಮಾಡಲಿದೆ. ಚುನಾವಣೆ ಯಾವತ್ತು ಮಾಡಿದ್ರೂ ಬಿಜೆಪಿಗೆ ಗೆಲ್ಲುತ್ತೆ. ಸ್ಥಳೀಯ ಸಂಸ್ಥೆ ತುಂಬಾ ಅಗತ್ಯ. ಮಳೆ ಹೆಚ್ಚಾಗುತ್ತಿದೆ. ಪಾಲಿಕೆ ಸದಸ್ಯರು ಅಧಿಕಾರದಲ್ಲಿ ಇಲ್ಲದಿದ್ದರೂ, ಜನರ ಸೇವೆ ಮಾಡುತ್ತೇವೆ ಎಂದು ಭರವಸೆಯ ಮಾತನಾಡಿದರು.

ಬೆಂಗಳೂರು: ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ಆಡಳಿತಾಧಿಕಾರಿ ನೇಮಕ ಇಂದು ಅಥವಾ ನಾಳೆ ಆಗಲಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

ಕೆಂಪೇಗೌಡ ದಿನಾಚರಣೆ ಬಳಿಕ ಮಾತನಾಡಿದ ಅವರು, ಮುಂದಿನ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ ಬೆಂಗಳೂರಿಗೆ ಹೊಸ ಕಾಯ್ದೆ ಕೊಡುವ ಬಗ್ಗೆಯೂ ಸಿದ್ಧತೆ ಆಗುತ್ತಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ. ಈಗಾಗಲೇ ವಾರ್ಡ್ ಮರುವಿಂಗಡಣೆ ಆಗಿದೆ. ಚುನಾವಣಾ ಮತದಾರರ ಪಟ್ಟಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ, ಬೆಂಗಳೂರಿಗೆ ಹೊಸ ಕಾಯ್ದೆ ಡಿಸಿಎಂ ಮತ್ತು ಬಿಬಿಎಂಪಿ ಮೇಯರ್​ ಹೇಳಿಕೆ

ವಾರ್ಡ್ ಹೆಚ್ಚಳ ಹೊಸ ಕಾಯ್ದೆಯ ಪ್ರಕಾರ ನಡೆಯಲಿದೆ. ಹೊಸ ಕಾಯ್ದೆಗಳಲ್ಲಿ ಏನೇನು ಸುಧಾರಣೆ ಮಾಡ್ಬೇಕು ಎಂಬುದರಲ್ಲಿ ಇದೂ ಸೇರಿದೆ. ಈಗಿನ ಕೆಎಂಸಿ ಕಾಯ್ದೆ ಪ್ರಕಾರ 198 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದೆ. ಹೊಸ ಕಾಯ್ದೆ ಬಂದ ಮೇಲೆ ಆ ಪ್ರಕಾರ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿಗಳೇ ಆಡಳಿತಾಧಿಕಾರಿ ನೇಮಕ ಮಾಡಲಿದ್ದಾರೆ ಎಂದರು.

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಸರ್ಕಾರ, ಎಲೆಕ್ಷನ್ ಕಮಿಷನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಲ್ಲ ಸೇರಿ ವ್ಯವಸ್ಥೆ ಮಾಡಿಕೊಂಡು ಅತಿ ಶೀಘ್ರದಲ್ಲಿ ಚುನಾವಣೆ ಮಾಡಲಿದೆ. ಚುನಾವಣೆ ಯಾವತ್ತು ಮಾಡಿದ್ರೂ ಬಿಜೆಪಿಗೆ ಗೆಲ್ಲುತ್ತೆ. ಸ್ಥಳೀಯ ಸಂಸ್ಥೆ ತುಂಬಾ ಅಗತ್ಯ. ಮಳೆ ಹೆಚ್ಚಾಗುತ್ತಿದೆ. ಪಾಲಿಕೆ ಸದಸ್ಯರು ಅಧಿಕಾರದಲ್ಲಿ ಇಲ್ಲದಿದ್ದರೂ, ಜನರ ಸೇವೆ ಮಾಡುತ್ತೇವೆ ಎಂದು ಭರವಸೆಯ ಮಾತನಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.