ETV Bharat / city

ಸಂಕಷ್ಟಕ್ಕೆ ಸಿಲುಕಿದ ಕೈಗಾರಿಕೋದ್ಯಮಿಗಳು: ಕಾರ್ಮಿಕರಿಗೆ ಸಿಗದ ದಸರಾ ಬೋನಸ್

author img

By

Published : Oct 24, 2020, 5:42 PM IST

ಪ್ರತಿ ವರ್ಷ ಕಾರ್ಮಿಕರಿಗೆ ಮಾಲೀಕರು ಆಯುಧ ಪೂಜೆ ನಂತರ ಬೋನಸ್ ನೀಡಿ ಸಿಹಿ ಹಂಚುವುದು ವಾಡಿಕೆ. ಈ ಬಾರಿ ಆರ್ಥಿಕವಾಗಿ ಮುಗ್ಗರಿಸಿರುವ ಕಾರ್ಖಾನೆಗಳು ಬೋನಸ್ ಇರಲಿ, ಸಂಬಳ ನೀಡುವುದೇ ಹೆಚ್ಚು ಎಂಬ ಸ್ಥಿತಿಗೆ ತಲುಪಿದೆ. ಲಾಕ್​​​ಡೌನ್, ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ ರಾಜ್ಯದ ಕೈಗಾರಿಕೆಗಳಿಗೆ ಹೊಡೆತ ನೀಡಿವೆ.

no-dasara-bonus-for-industry-workers-news
ಸಂಕಷ್ಟಕ್ಕೆ ಸಿಲುಕಿದ ಕೈಗಾರಿಕೋದ್ಯಮಿಗಳು, ಕಾರ್ಮಿಕರಿಗೆ ಸಿಗದ ದಸರಾ ಬೋನಸ್...

ಬೆಂಗಳೂರು: ಕೊರೊನಾ ಮಹಾಮಾರಿಯ ಆರ್ಥಿಕ ಬಿಕ್ಕಟ್ಟಿನಿಂದ ಕಾರ್ಮಿಕರಿಗೆ ದಸರಾ ಹಬ್ಬದ ಬೋನಸ್ ಕೊಡಲಾಗದ ಸಂಕಷ್ಟಕ್ಕೆ ರಾಜ್ಯದ ಕೈಗಾರಿಕೋದ್ಯಮಿಗಳು ಸಿಲುಕಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘದ ಖಜಾಂಚಿ ವಿಜಯ್ ಕುಮಾರ್

ಪ್ರತಿ ವರ್ಷ ಕಾರ್ಮಿಕರಿಗೆ ಮಾಲೀಕರು ಆಯುಧ ಪೂಜೆ ನಂತರ ಬೋನಸ್ ನೀಡಿ ಸಿಹಿ ಹಂಚುವುದು ವಾಡಿಕೆ. ಈ ಬಾರಿ ಆರ್ಥಿಕವಾಗಿ ಮುಗ್ಗರಿಸಿರುವ ಕಾರ್ಖಾನೆಗಳು ಬೋನಸ್ ಇರಲಿ, ಸಂಬಳ ನೀಡುವುದೇ ಹೆಚ್ಚು ಎಂಬ ಸ್ಥಿತಿಗೆ ತಲುಪಿದೆ. ಲಾಕ್​​ಡೌನ್, ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ ರಾಜ್ಯದ ಕೈಗಾರಿಕೆಗಳಿಗೆ ಹೊಡೆತ ನೀಡಿವೆ.

ಈ ಕುರಿತು ಪೀಣ್ಯ ಕೈಗಾರಿಕಾ ಸಂಘದ ಖಜಾಂಚಿ ವಿಜಯ್ ಕುಮಾರ್ ಮಾತನಾಡಿ, ಈ ಬಾರಿಯ ದಸರಾ ಆಚರಣೆ ಪ್ರತಿ ವರ್ಷದಂತಿಲ್ಲ. ಪ್ರತಿ ಬಾರಿ ಕೈಗಾರಿಕೆಯ ಸಿಬ್ಬಂದಿ ಸಂಭ್ರಮದಿಂದ ಆಚರಣೆ ಮಾಡುವ ಈ ಹಬ್ಬ. ಕೊರೊನಾ ಮಹಾಮಾರಿಯಿಂದ ಆಚರಣೆ ಹಿಂದಿನಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೂಜೆ ದೀಪಾವಳಿಗೆ ಮುಂದೂಡಿಕೆ:

ಸಾಮಾನ್ಯವಾಗಿ ನವರಾತ್ರಿಯ ಆಯುಧ ಪೂಜೆಗೆ ಮಾಡಲಾಗುವ ವಾರ್ಷಿಕ ಪೂಜೆ, ಈ ವರ್ಷ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ದೀಪಾವಳಿಯ ಅಮಾವಾಸ್ಯೆಗೆ ಮುಂದೂಡಿದ್ದಾರೆ. ಬೋನಸ್ ಸಿಗುವುದು ಕಷ್ಟವಾಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ, ಜನವರಿಯಲ್ಲಿ ಸಿಗೋ ಸಾಧ್ಯತೆಯಿದೆ.

ಬೆಂಗಳೂರು: ಕೊರೊನಾ ಮಹಾಮಾರಿಯ ಆರ್ಥಿಕ ಬಿಕ್ಕಟ್ಟಿನಿಂದ ಕಾರ್ಮಿಕರಿಗೆ ದಸರಾ ಹಬ್ಬದ ಬೋನಸ್ ಕೊಡಲಾಗದ ಸಂಕಷ್ಟಕ್ಕೆ ರಾಜ್ಯದ ಕೈಗಾರಿಕೋದ್ಯಮಿಗಳು ಸಿಲುಕಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘದ ಖಜಾಂಚಿ ವಿಜಯ್ ಕುಮಾರ್

ಪ್ರತಿ ವರ್ಷ ಕಾರ್ಮಿಕರಿಗೆ ಮಾಲೀಕರು ಆಯುಧ ಪೂಜೆ ನಂತರ ಬೋನಸ್ ನೀಡಿ ಸಿಹಿ ಹಂಚುವುದು ವಾಡಿಕೆ. ಈ ಬಾರಿ ಆರ್ಥಿಕವಾಗಿ ಮುಗ್ಗರಿಸಿರುವ ಕಾರ್ಖಾನೆಗಳು ಬೋನಸ್ ಇರಲಿ, ಸಂಬಳ ನೀಡುವುದೇ ಹೆಚ್ಚು ಎಂಬ ಸ್ಥಿತಿಗೆ ತಲುಪಿದೆ. ಲಾಕ್​​ಡೌನ್, ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ ರಾಜ್ಯದ ಕೈಗಾರಿಕೆಗಳಿಗೆ ಹೊಡೆತ ನೀಡಿವೆ.

ಈ ಕುರಿತು ಪೀಣ್ಯ ಕೈಗಾರಿಕಾ ಸಂಘದ ಖಜಾಂಚಿ ವಿಜಯ್ ಕುಮಾರ್ ಮಾತನಾಡಿ, ಈ ಬಾರಿಯ ದಸರಾ ಆಚರಣೆ ಪ್ರತಿ ವರ್ಷದಂತಿಲ್ಲ. ಪ್ರತಿ ಬಾರಿ ಕೈಗಾರಿಕೆಯ ಸಿಬ್ಬಂದಿ ಸಂಭ್ರಮದಿಂದ ಆಚರಣೆ ಮಾಡುವ ಈ ಹಬ್ಬ. ಕೊರೊನಾ ಮಹಾಮಾರಿಯಿಂದ ಆಚರಣೆ ಹಿಂದಿನಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೂಜೆ ದೀಪಾವಳಿಗೆ ಮುಂದೂಡಿಕೆ:

ಸಾಮಾನ್ಯವಾಗಿ ನವರಾತ್ರಿಯ ಆಯುಧ ಪೂಜೆಗೆ ಮಾಡಲಾಗುವ ವಾರ್ಷಿಕ ಪೂಜೆ, ಈ ವರ್ಷ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ದೀಪಾವಳಿಯ ಅಮಾವಾಸ್ಯೆಗೆ ಮುಂದೂಡಿದ್ದಾರೆ. ಬೋನಸ್ ಸಿಗುವುದು ಕಷ್ಟವಾಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ, ಜನವರಿಯಲ್ಲಿ ಸಿಗೋ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.