ETV Bharat / city

ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ನನ್ನಿಂದ ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ. ಕೃಷ್ಣ

author img

By

Published : Jan 4, 2020, 6:54 PM IST

ನಾನು ಯಾರನ್ನು ಎಂದೂ ದ್ವೇಷಿಸುವ ಪ್ರಯತ್ನ ಮಾಡಲಿಲ್ಲ. ಆದರೂ ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ ಎಂದು ಎಸ್.ಎಂ. ಕೃಷ್ಣ ಮನವಿ ಮಾಡಿದ್ದಾರೆ.

KN_BNG_02_SMK_SPEECH_SCRIPT 9021933
ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ಯಾರಿಗೂ ತೊಂದರೆ ಕೊಟ್ಟಿಲ್ಲ,ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ ಕೃಷ್ಣ ಮನವಿ

ಬೆಂಗಳೂರು: ನಾನು ಯಾರನ್ನು ಎಂದೂ ದ್ವೇಷ ಮಾಡುವ ಪ್ರಯತ್ನ ಮಾಡಲಿಲ್ಲ. ಆದರೂ ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ ಎಂದು ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.

ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ಯಾರಿಗೂ ತೊಂದರೆ ಕೊಟ್ಟಿಲ್ಲ,ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ ಕೃಷ್ಣ ಮನವಿ
ತಮ್ಮ ಸಾರ್ಥಕ ಸಂಸದೀಯ ನೆನಪುಗಳನ್ನು ಒಳಗೊಂಡ ಕೃಷ್ಣಪಥ‌ ಸೇರಿ ಸಾಧನೆ-ಸಿದ್ದಿಗಳ ಪರಿಚಯ ಮತ್ತು ಆಕರ ಗ್ರಂಥಗಳು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಪ್ರಜಾಪ್ರಭುತ್ವ ಹಣಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತ ಕಾರ್ಯಕರ್ತರಿಗೆ ಇದು ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಸಮೂಹ ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು.
ಮೊದಲೆಲ್ಲಾ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆ ಕೊಟ್ಟೆ ಎಲ್ಲರಿಗೂ ಸ್ವಲ್ಪಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌. ರಾಜ್ ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದಾಗ ನನ್ನಲ್ಲಿ ತಳಮಳ ಇದ್ದಿದ್ದು ನಿಜ. ಆದರೆ ಎದೆಗುಂದಲಿಲ್ಲ ಧೈರ್ಯವಾಗಿ ಎದುರಿಸಿ, ಸವಾಲುಗಳೇ ಮನುಷ್ಯನನ್ನ ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತಮಿಳರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುತ್ತದೆ ಎಂಬ ಭಯ ತಳಮಳ ಇತ್ತು. ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದೆವು ಎಂದು ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಬೆಂಗಳೂರು: ನಾನು ಯಾರನ್ನು ಎಂದೂ ದ್ವೇಷ ಮಾಡುವ ಪ್ರಯತ್ನ ಮಾಡಲಿಲ್ಲ. ಆದರೂ ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ ಎಂದು ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.

ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ಯಾರಿಗೂ ತೊಂದರೆ ಕೊಟ್ಟಿಲ್ಲ,ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ ಕೃಷ್ಣ ಮನವಿ
ತಮ್ಮ ಸಾರ್ಥಕ ಸಂಸದೀಯ ನೆನಪುಗಳನ್ನು ಒಳಗೊಂಡ ಕೃಷ್ಣಪಥ‌ ಸೇರಿ ಸಾಧನೆ-ಸಿದ್ದಿಗಳ ಪರಿಚಯ ಮತ್ತು ಆಕರ ಗ್ರಂಥಗಳು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಪ್ರಜಾಪ್ರಭುತ್ವ ಹಣಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತ ಕಾರ್ಯಕರ್ತರಿಗೆ ಇದು ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಸಮೂಹ ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು.
ಮೊದಲೆಲ್ಲಾ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆ ಕೊಟ್ಟೆ ಎಲ್ಲರಿಗೂ ಸ್ವಲ್ಪಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌. ರಾಜ್ ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದಾಗ ನನ್ನಲ್ಲಿ ತಳಮಳ ಇದ್ದಿದ್ದು ನಿಜ. ಆದರೆ ಎದೆಗುಂದಲಿಲ್ಲ ಧೈರ್ಯವಾಗಿ ಎದುರಿಸಿ, ಸವಾಲುಗಳೇ ಮನುಷ್ಯನನ್ನ ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತಮಿಳರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುತ್ತದೆ ಎಂಬ ಭಯ ತಳಮಳ ಇತ್ತು. ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದೆವು ಎಂದು ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
Intro:Byte1-ಎಸ್.ಎಂ ಕೃಷ್ಣ
Byte2-ಮುಕ್ತಿದಾನಂದ ಮಹಾರಾಜ್
Byte3-ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ

ಬೆಂಗಳೂರು: ನಾನು ಯಾರನ್ನು ಎಂದೂ ದ್ವೇಷ ಮಾಡುವ ಪ್ರಯತ್ನ ಮಾಡಲಿಲ್ಲ.ಕಾರಣ,ನನ್ನ ತಂದೆಯವರು ನನಗೆ ತುಂಬಿಸಿದ್ದ ಮೌಲ್ಯಗಳು.ಆದರೂ ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ಮಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ.ಅದನ್ನು ಮರೆತುಬಿಡಿ.ಪರಸ್ಪರ ನಿಂದನೆಯನ್ನು ಸದ್ಯಕ್ಕೆ ಹಿಂದಕ್ಕೆ ಹಾಕೋಣ ಎಂದು ಎಸ್.ಎಂ ಕೃಷ್ಣ ಮನವಿ ಮಾಡಿದರು.

ತಮ್ಮ ಸಾರ್ಥಕ ಸಂಸದೀಯ ನೆನಪುಗಳನ್ನು ಒಳಗೊಂಡ ಕೃಷ್ಣಪಥ‌ ಸೇರಿ ಸಾಧನೆ-ಸಿದ್ದಿಗಳ ಪರಿಚಯ ಮತ್ತು ಆಕರ ಗ್ರಂಥಗಳು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು,ಈಗ ಪ್ರಜಾಪ್ರಭುತ್ವ ಹಣಬಲದ ಮೇಲೆ ನಿಂತಿದೆ.ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತ ಕಾರ್ಯಕರ್ತರಿಗೆ ಇದು ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ.ಇದಕ್ಕೆ ಪರಿಹಾರವೆಂದರೆ ಇದರ ಬಗ್ಗೆ ಬಾಳ ಮುಸ್ಸಂಜೆಯಲ್ಲಿರುವವರಿಗಿಂತ ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಸಮೂಹ ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು.

ಮೊದಲೆಲ್ಲಾ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆಕೊಟ್ಟೆ ಎಲ್ಲರಿಗೂ ಸ್ವಲ್ಪಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌.ಆದರೆ ಕಷ್ಟಗಳು ಬಂದಿದ್ದು ,ಅದನ್ನು ನಾನು ಎದುರಿಸಿದ್ದು ಒಳ್ಳೆಯದೇ ಆಯ್ತು ಎಂದು ಈಗ ಅನ್ನಿಸುತ್ತಿದೆ ಸವಾಲುಗಳಿಂದಲೇ ನಾನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವಾಯ್ತು.ರಾಜ್ ಕುಮಾರ್ ರನ್ನು ಮೀಸೆ ವೀರಪ್ಪನ್ ಹೊತ್ತೊಯ್ದಾಗ ನನ್ನಲ್ಲಿ ತಳಮಳ ಇದ್ದಿದ್ದು ನಿಜ.ಆದರೆ ಎದೆಗುಂದಲಿಲ್ಲ.ಧೈರ್ಯವಾಗಿ ಎದುರಿಸಿದೆ.ಸವಾಲುಗಳೇ ಮನುಷ್ಯನನ್ನ ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ.ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತಮಿಳರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುತ್ತದೋ ಎಂಬ ಭಯ ತಳಮಳ ನನ್ನಲ್ಲಿತ್ತು.ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣ ಧೈರ್ಯವಾಗಿ ಪರಿಸ್ಥಿತಿ ನಿಬಾಯಿಸಿದೆವು ಎಂದು ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಕೃಷ್ಟಪಥ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ,ಮೈಸೂರು ರಾಮಕೃಷ್ಣ ಮಠದ ಮುಕ್ತಿದಾನಂದ ಮಹಾರಾಜ್,ರಾಜಕೀಯ ನಾಯಕನ ವಿಶೇಷ ವ್ಯಕ್ತಿತ್ವ,ಸೇವಾ ಕಂಕೈರ್ಯ,ಆಡಳಿತಾತ್ಮ ಸಾಮರ್ಥ್ಯಗಳನ್ನು ಜನಮನದ ಹೃನ್ಮನಗಳಿಗೆ ಇಳಿಸಲು ಪರಿಚಯಿಸಲು ಈ ಆರು ಗ್ರಂಥಗಳನ್ನು ಹೊರತಂದಿರುವುದು ಶ್ಲಾಘನೀಯ, ರಾಮಕೃಷ್ಣಾಶ್ರಮದ 90 ವರ್ಷಗಳ ಇತಿಹಾಸದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಭ್ಯಸಿಸಿದ್ದಾರೆ‌.ಅವರ ಪೈಕಿ ಅತ್ಯಂತ ಪ್ರಮುಖರು ಕುವೆಂಪು,ದೇಜಗೌ,ಸಿದ್ದೇಶ್ವರಾನಂದ ಶ್ರೀಗಳು ಹಾಗೂ ಎಸ್‌.ಎಂ.ಕೃಷ್ಣ ಎಂದರು.

ಸ್ಮೃತಿ ವಾಹಿನಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ, ಮುಂದಿನ ಐದು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳು ನಮ್ಮ ಶಾಸನಸಭೆಗಳಲ್ಲಿ ಸ್ಥಾನ‌ ಪಡೆದು ತಮ್ಮ ನಿಯಮಾವಳಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುತ್ತವೆ. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಕೃಷ್ಣರ ಜೀವನಗಾಥೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಚರ್ಚೆಗಳಾಗಬೇಕು.ಎಸ್.ಎಂ.ಕೃಷ್ಣ ಇನ್ನೂ 125 ವರ್ಷ ಬಾಳಬೇಕು.ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು.ಹೆಣ್ಣುಮಕ್ಕಳ ಓಟು ಪಡೆಯಬೇಕು.ಈಗಲೂ ಎಸ್.ಎಂ.ಕೃಷ್ಣ ಯಂಗ್ ಅಂಡ್ ಚಾರ್ಮಿಂಗ್ ಹಾಗೂ ಹ್ಯಾಂಡ್ ಸಮ್ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ನಿರ್ಮಲಾನಂದ ಶ್ರೀಗಳು, ಎಸ್.ಎಂ.ಕೃಷ್ಣ ರಾಜಕೀಯಕ್ಕೆ ಬಂದ ಹೊಸದರಲ್ಲಿ ಅಮೇರಿಕಾದ ಮಾತೆಯರು ತಮ್ಮ ಮಕ್ಕಳಿಗೆ..ಮಕ್ಕಳೇ ಬೇಗ ನಿಮ್ಮ ಆಹಾರವನ್ನು ತಿಂದು ಮುಗಿಸಿ ಇಲ್ಲವಾದರೆ ಭಾರತದ ಬಡ ಮಕ್ಕಳು ಬಂದು ನಿಮ್ಮ ಆಹಾರವನ್ನು ಕಸಿದುಕೊಂಡಾರು ಎಂದು ಹೇಳುತ್ತಿದ್ದರು. ಎಸ್.ಎಂ.ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾದಾಗ ಅದೇ ಅಮೇರಿಕಾದ ಮಾತೆಯರು ತಮ್ಮ ಮಕ್ಕಳಿಗೆ ಮಕ್ಕಳೇ ನೀವು ಚೆನ್ನಾಗಿ ಓದಿ ಮುಂದೆ ಬನ್ನಿ ಇಲ್ಲವಾದರೆ ಭಾರತದ ಮಕ್ಕಳು ಬಂದು ನಿಮ್ಮ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂದು ಎಚ್ಚರಿಸುವಂತಾಯ್ತು.ಬರಾಕ್ ಒಬಾಮ ಅಧ್ಯಕ್ಷರಾದ ನಂತರ ಹೋದೆಡೆಯಲ್ಲೆಲ್ಲಾ ಏನು ಹೇಳುತ್ತಿದ್ದರು ಎಂದು ಎಲ್ಲರಿಗೂ ಗೊತ್ತೇ ಇದೆ ಇದು ಕೃಷ್ಣ ಅವರ ಸಾಧನೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷದ ಪ್ರತಿನಿಧಿಗಳಂತೆ ಸಂಸದ ಜಿ.ಎಸ್.ಬಸವರಾಜ್,ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ದಾಸರಳ್ಳಿ ಶಾಸಕ ಮಂಜುನಾಥ್ ರಿಂದ ಎಸ್.ಎಂ.ಕೃಷ್ಣರಿಗೆ ಸನ್ಮಾನ ನೆರವೇರಿಸಲಾಯಿತು.

ಮಾಜಿ ರಾಜಕೀಯ ಸ್ನೇಹಿತರ ಪುನರ್ ಮಿಲನಕ್ಕೆ ಎಸ್.ಎಂ.ಕೃಷ್ಣರ ಜೀವನಗಾಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸಾಕ್ಷಿಯಾಯಿತು.ಮಾಜಿ ಸಚಿವ ಡಿ.ಕೆ.ಶಿವಕುಮಾರ್,ಹೆಚ್.ವಿಶ್ವನಾಥ್,ಶಾಸಕ ಮಧುಗಿರಿ ಕೆ.ಎನ್.ರಾಜಣ್ಣ,ಶಾಸಕ ಗೋಪಾಲಯ್ಯ ಮತ್ತಿತರು ಭಾಗಿಯಾಗಿದ್ದರು.ಹೆಚ್.ವಿಶ್ವನಾಥರನ್ನು ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದ ಡಿ.ಕೆ.ಶಿವಕುಮಾರ್ ನಡೆ ಅಚ್ಚರಿ ಮೂಡಿಸಿತ್ತು.

ಇನ್ನು ಕೃತಿಗಳ ಮುದ್ರಣಕ್ಕಾಗಿ ಕಾಗದ ಬಳಸಿ ಮರಗಳಿಗೆ ಪರೋಕ್ಷವಾಗಿ ಕೊಡಲಿ ಪೆಟ್ಟು ನೀಡಿದ್ದಕ್ಕೆ ಪ್ರತಿಯಾಗಿ ತಿಪ್ಪಗೊಂಡನಹಳ್ಳಿಯಲ್ಲಿ‌ ಸಸಿಗಳ ನೆಡಲು 25 ಸಾವಿರ ರೂ.ಗಳನ್ನು ಕೃಷ್ಣಪಥಕ್ಕೆ ಎಸ್.ಎಂ ಕೃಷ್ಣ ದೇಣಿಗೆ ನೀಡಿದರು ಆ ಮೂಲಕ ಪರಿಸರ ಕಾಳಜಿ ಮೆರೆದು ಇತರರಿಗೆ ಮಾದರಿಯಾದರು.
Body:.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.