ETV Bharat / city

ಕರ್ತವ್ಯದಲ್ಲೇ ದೀಪಾವಳಿ ಹಬ್ಬದ ಸಂಭ್ರಮ ಕಂಡ ಪೌರ ಕಾರ್ಮಿಕರು

author img

By

Published : Oct 29, 2019, 10:38 PM IST

Updated : Oct 30, 2019, 12:20 AM IST

ದೇಶದಾದ್ಯಂತ ಜನ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರೆ, ಬಿಬಿಎಂಪಿ ಪೌರ ಕಾರ್ಮಿಕರು ಮಾತ್ರ ತಮ್ಮ ಕರ್ತವ್ಯದಲ್ಲೇ ಹಬ್ಬದ ಸಂಬ್ರಮ ಕಂಡರು.

ಕರ್ತವ್ಯದಲ್ಲಿ ಹಬ್ಬದ ಸಂಭ್ರಮ ಕಂಡ ಪೌರಕಾರ್ಮಿಕರು

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದೀಪಾವಳಿ ಸಂಭ್ರಮದ ಮನೆ ಮಾಡಿದ್ದು, ಪೌರ ಕಾರ್ಮಿಕರು ಹಬ್ಬದ ದಿನದಲ್ಲೂ ತಮ್ಮ ಕರ್ತವ್ಯದೊಂದಿಗೆ ದೀಪಾವಳಿ ಆಚರಿಸಿದ್ದಾರೆ.

ಕರ್ತವ್ಯದಲ್ಲಿ ಹಬ್ಬದ ಸಂಭ್ರಮ ಕಂಡ ಪೌರಕಾರ್ಮಿಕರು

ಹೆಚ್ಚು ಕಸ ರಾಶಿ ಬಿದ್ದಿರುವ ಸ್ಥಳಗಳಲ್ಲಿ ಕಸ ತೆರವುಗೊಳಿಸಿ, ಅಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಹಬ್ಬ ಆಚರಿಸಿದ್ದಾರೆ. ಪಟಾಕಿ ಕಸ, ಬಾಳೆಗೊನೆ, ಹೂ-ಹಣ್ಣುಗಳ ತ್ಯಾಜ್ಯ ಅಲ್ಲಲ್ಲಿ ರಾಶಿ ಬಿದ್ದು ಬ್ಲಾಕ್ ಸ್ಪಾಟ್​ಗಳ ಸಂಖ್ಯೆ ಹೆಚ್ಚಾಗಿದ್ದು, ಪೌರ ಕಾರ್ಮಿಕರು ತೆರವು ಕಾರ್ಯದಲ್ಲಿ ನಿರತರಾದರು.

ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಹಾಗೂ ಆಯುಕ್ತರಾದ ಬಿ. ಹೆಚ್. ಅನಿಲ್ ಕುಮಾರ್ ಇಂದು ಬೆಳಗ್ಗೆ ಸ್ವಚ್ಛತೆಗಾಗಿ ಹಾಗೂ ದೀಪಾವಳಿ ರಂಗೋಲಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರದಿದ್ದರೂ ಪೌರ ಕಾರ್ಮಿಕರು ಸ್ವತಃ ತಾವೇ ಸೇರಿ ನಗರದ ಹಲವು ವಾರ್ಡ್​ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ರಂಗೋಲಿ ಹಾಕಿದ್ದಾರೆ.

ಗೋವಿಂದರಾಜ ನಗರ ವಾರ್ಡ್, ಮೂಡಲಪಾಳ್ಯ, ಮಾರೇನಹಳ್ಳಿ, ದೇವಸಂದ್ರ, ಶೇಷಾದ್ರಿಪುರಂ, ಚಂದ್ರಾ ಲೇಔಟ್​ಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

.

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದೀಪಾವಳಿ ಸಂಭ್ರಮದ ಮನೆ ಮಾಡಿದ್ದು, ಪೌರ ಕಾರ್ಮಿಕರು ಹಬ್ಬದ ದಿನದಲ್ಲೂ ತಮ್ಮ ಕರ್ತವ್ಯದೊಂದಿಗೆ ದೀಪಾವಳಿ ಆಚರಿಸಿದ್ದಾರೆ.

ಕರ್ತವ್ಯದಲ್ಲಿ ಹಬ್ಬದ ಸಂಭ್ರಮ ಕಂಡ ಪೌರಕಾರ್ಮಿಕರು

ಹೆಚ್ಚು ಕಸ ರಾಶಿ ಬಿದ್ದಿರುವ ಸ್ಥಳಗಳಲ್ಲಿ ಕಸ ತೆರವುಗೊಳಿಸಿ, ಅಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಹಬ್ಬ ಆಚರಿಸಿದ್ದಾರೆ. ಪಟಾಕಿ ಕಸ, ಬಾಳೆಗೊನೆ, ಹೂ-ಹಣ್ಣುಗಳ ತ್ಯಾಜ್ಯ ಅಲ್ಲಲ್ಲಿ ರಾಶಿ ಬಿದ್ದು ಬ್ಲಾಕ್ ಸ್ಪಾಟ್​ಗಳ ಸಂಖ್ಯೆ ಹೆಚ್ಚಾಗಿದ್ದು, ಪೌರ ಕಾರ್ಮಿಕರು ತೆರವು ಕಾರ್ಯದಲ್ಲಿ ನಿರತರಾದರು.

ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಹಾಗೂ ಆಯುಕ್ತರಾದ ಬಿ. ಹೆಚ್. ಅನಿಲ್ ಕುಮಾರ್ ಇಂದು ಬೆಳಗ್ಗೆ ಸ್ವಚ್ಛತೆಗಾಗಿ ಹಾಗೂ ದೀಪಾವಳಿ ರಂಗೋಲಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರದಿದ್ದರೂ ಪೌರ ಕಾರ್ಮಿಕರು ಸ್ವತಃ ತಾವೇ ಸೇರಿ ನಗರದ ಹಲವು ವಾರ್ಡ್​ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ರಂಗೋಲಿ ಹಾಕಿದ್ದಾರೆ.

ಗೋವಿಂದರಾಜ ನಗರ ವಾರ್ಡ್, ಮೂಡಲಪಾಳ್ಯ, ಮಾರೇನಹಳ್ಳಿ, ದೇವಸಂದ್ರ, ಶೇಷಾದ್ರಿಪುರಂ, ಚಂದ್ರಾ ಲೇಔಟ್​ಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

.

Intro:ದೀಪಾವಳಿ ಹಬ್ಬಕ್ಕೆ ಬ್ಲಾಕ್ ಸ್ಪಾಟ್ ಸ್ವಚ್ಛಗೊಳಿಸಿ ರಂಗೋಲಿ ಹಾಕಿದ ಪೌರಕಾರ್ಮಿಕರು
ಬೆಂಗಳೂರು- ನಗರದೆಲ್ಲೆಡೆ ದೀಪಾವಳಿ ಸಂಭ್ರಮದ ಜೊತೆಗೆ, ಪೌರಕಾರ್ಮಿಕರು ಹಬ್ಬದ ದಿನದಲ್ಲೂ ತಮ್ಮ ಕರ್ತವ್ಯದಲ್ಲೇ ದೀಪಾವಳಿ ಆಚರಿಸಿದ್ದಾರೆ. ಹೆಚ್ಚು ಕಸ ರಾಶಿ ಬಿದ್ದಿರುವ ಬ್ಲಾಕ್ ಸ್ಪಾಟ್ ನ ಕಸ ತೆರವುಗೊಳಿಸಿ, ಅಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಹಬ್ಬ ಆಚರಿಸಿದ್ದಾರೆ.
ಹಬ್ಬದ ಪಟಾಕಿ ಕಸ, ಬಾಳೆಗೊನೆ, ಹಣ್ಣು,ಹೂವುಗಳ ಕಸ ಅಲ್ಲಲ್ಲಿ ರಾಶಿ ಬಿದ್ದಿದ್ದು, ಇನ್ನು ಜನರೂ ರಸ್ತೆ ಬದಿ ಎಸೆದು ಬ್ಲಾಕ್ ಸ್ಪಾಟ್ ಗಳ ಸಂಖ್ಯೆ ಹೆಚ್ಚಾಗಿವೆ. ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್, ಹಾಗೂ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಇಂದು ಬೆಳಗ್ಗೆ ಸ್ವಚ್ಛತೆಗಾಗಿ, ದೀಪಾವಳಿ ರಂಗೋಲಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಿದಿದ್ದರೂ, ಪೌರಕಾರ್ಮಿಕರು ಸ್ವತಃ ತಾವೇ ಸೇರಿ ನಗರದ ಹಲವು ವಾರ್ಡ್ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ,, ರಂಗೋಲಿ ಹಾಕಿದ್ದಾರೆ.
ಗೋವಿಂದರಾಜ ನಗರ ವಾರ್ಡ್, ಮೂಡಲಪಾಳ್ಯ, ಮಾರೇನಹಳ್ಳಿ , ದೇವಸಂದ್ರ, ಶೇಷಾದ್ರಿಪುರಂ, ಚಂದ್ರಾ ಲೇಔಟ್ ಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.


ಸೌಮ್ಯಶ್ರೀ
Kn_bng_01_bbmp_cleaning_7202707Body:..Conclusion:..
Last Updated : Oct 30, 2019, 12:20 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.