ETV Bharat / city

ಮಳೆಯಿಂದ ಜಲಾವೃತಗೊಂಡ ಹೊಸಕೆರೆಹಳ್ಳಿ ಪ್ರದೇಶಕ್ಕೆ ಮೇಯರ್ ಭೇಟಿ

author img

By

Published : Nov 11, 2019, 3:36 AM IST

ಭಾರಿ ಮಳೆಯಿಂದ ಹೊಸಕೆರೆಹಳ್ಳಿ ಕೆರೆಯ ಬಳಿ ಮಣ್ಣು ಕುಸಿದು ಜಲಾವೃತವಾಗಿದ್ದ ಕೆರೆ ಪಕ್ಕದಲ್ಲಿರುವ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಗೆ ಮೇಯರ್ ಗೌತಮ್ ಕುಮಾರ್ ಜೈನ್ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಡೆಸಿ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊಸಕೆರೆಹಳ್ಳಿ ಪ್ರದೇಶಕ್ಕೆ ಮೇಯರ್ ಭೇಟಿ

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಯ ಕಟ್ಟೆ ಒಡೆದು ಜಲಾವೃತವಾಗಿದ್ದ ಕೆರೆ ಪಕ್ಕದಲ್ಲಿರುವ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಗೆ ಮೇಯರ್ ಗೌತಮ್ ಕುಮಾರ್ ಜೈನ್ ಭೇಟಿ ನೀಡಿದರು.

ಬಿಬಿಎಂಪಿಯ ವಾರ್ಡ್​-160 ರಾಜರಾಜೇಶ್ವರಿ ನಗರ ವಾರ್ಡ್​ ವ್ಯಾಪ್ತಿಯ ಬಡಾವಣೆಗೆ ಭೇಟಿ ನೀಡಿದ ಅವರು, ಸ್ಥಳ ಪರಿಶೀಲಿಸಿ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Mayor visits Hosakerehalli area, Mayor visits Hosakerehalli area
ಹೊಸಕೆರೆಹಳ್ಳಿ ಪ್ರದೇಶಕ್ಕೆ ಮೇಯರ್ ಭೇಟಿ

ರಸ್ತೆಗಳಲ್ಲಿ ಕೆರೆಯ ನೀರು ಹರಿದು ನಿಂತಿರುವ ಕೆಸರನ್ನು ಕೂಡಲೇ ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಬಿಡಿಎ ಮತ್ತು ಬಿಡಬ್ಮ್ಯೂ ಸಂಸ್ಥೆಯವರು ಈ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಂಡು ತಡೆಗೋಡೆ ನಿರ್ಮಿಸಿ ಮತ್ತೆ ಕೆರೆಯಿಂದ ಬಡಾವಣೆಗೆ ನೀರು ಹರಿಯದಂತೆ ಕ್ರಮವಹಿಸಲು ಸೂಚಿಸಿದರು. ಈ ಕಾರ್ಯಕ್ಕೆ ಬಿಬಿಎಂಪಿ ವತಿಯಿಂದ ಸಹಕರಿಸಲು ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ಸೂಚಿಸಿದರು.

Mayor visits Hosakerehalli area
ಹೊಸಕೆರೆಹಳ್ಳಿ ಕೆರೆ

ಈ ವೇಳೆ ಬಡಾವಣೆಯ ನಿವಾಸಿಗಳು ಮೇಯರ್ ಬಳಿ ತಮ್ಮ ಅಳಲನ್ನು ತೊಡಿಕೊಂಡರು. ಅನೇಕ ವರ್ಷಗಳಿಂದ ಕೆರೆ ಅಭಿವೃದ್ಧಿಪಡಿಸಲಾಗುವುದೆಂದು ಆಶ್ವಾಸನೆ ನೀಡಲಾಗುತ್ತಿದೆ ಹೊರತು, ಅಭಿವೃದ್ಧಿ ಕಾಣುತ್ತಿಲ್ಲವೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಮೇಯರ್ ತಾತ್ಕಾಲಿಕವಾಗಿ ಪರಿಹಾರ ಹುಡುಕುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಂಬಂಧಿಸಿದ ಎಲ್ಲಾ ಇಲಾಖಾ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಿದ್ದೇನೆ ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಯ ಕಟ್ಟೆ ಒಡೆದು ಜಲಾವೃತವಾಗಿದ್ದ ಕೆರೆ ಪಕ್ಕದಲ್ಲಿರುವ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಗೆ ಮೇಯರ್ ಗೌತಮ್ ಕುಮಾರ್ ಜೈನ್ ಭೇಟಿ ನೀಡಿದರು.

ಬಿಬಿಎಂಪಿಯ ವಾರ್ಡ್​-160 ರಾಜರಾಜೇಶ್ವರಿ ನಗರ ವಾರ್ಡ್​ ವ್ಯಾಪ್ತಿಯ ಬಡಾವಣೆಗೆ ಭೇಟಿ ನೀಡಿದ ಅವರು, ಸ್ಥಳ ಪರಿಶೀಲಿಸಿ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Mayor visits Hosakerehalli area, Mayor visits Hosakerehalli area
ಹೊಸಕೆರೆಹಳ್ಳಿ ಪ್ರದೇಶಕ್ಕೆ ಮೇಯರ್ ಭೇಟಿ

ರಸ್ತೆಗಳಲ್ಲಿ ಕೆರೆಯ ನೀರು ಹರಿದು ನಿಂತಿರುವ ಕೆಸರನ್ನು ಕೂಡಲೇ ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಬಿಡಿಎ ಮತ್ತು ಬಿಡಬ್ಮ್ಯೂ ಸಂಸ್ಥೆಯವರು ಈ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಂಡು ತಡೆಗೋಡೆ ನಿರ್ಮಿಸಿ ಮತ್ತೆ ಕೆರೆಯಿಂದ ಬಡಾವಣೆಗೆ ನೀರು ಹರಿಯದಂತೆ ಕ್ರಮವಹಿಸಲು ಸೂಚಿಸಿದರು. ಈ ಕಾರ್ಯಕ್ಕೆ ಬಿಬಿಎಂಪಿ ವತಿಯಿಂದ ಸಹಕರಿಸಲು ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ಸೂಚಿಸಿದರು.

Mayor visits Hosakerehalli area
ಹೊಸಕೆರೆಹಳ್ಳಿ ಕೆರೆ

ಈ ವೇಳೆ ಬಡಾವಣೆಯ ನಿವಾಸಿಗಳು ಮೇಯರ್ ಬಳಿ ತಮ್ಮ ಅಳಲನ್ನು ತೊಡಿಕೊಂಡರು. ಅನೇಕ ವರ್ಷಗಳಿಂದ ಕೆರೆ ಅಭಿವೃದ್ಧಿಪಡಿಸಲಾಗುವುದೆಂದು ಆಶ್ವಾಸನೆ ನೀಡಲಾಗುತ್ತಿದೆ ಹೊರತು, ಅಭಿವೃದ್ಧಿ ಕಾಣುತ್ತಿಲ್ಲವೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಮೇಯರ್ ತಾತ್ಕಾಲಿಕವಾಗಿ ಪರಿಹಾರ ಹುಡುಕುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಂಬಂಧಿಸಿದ ಎಲ್ಲಾ ಇಲಾಖಾ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಿದ್ದೇನೆ ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.

Intro:ಮಳೆಯಿಂದ ಜಲಾವೃತ ಗೊಂಡ ಹೊಸಕೆರೆಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿದ ಮೇಯರ್ ..

ಬಿಬಿಎಂಪಿಯ ವಾಡ್೯ 160 - ರಾಜರಾಜೇಶ್ವರಿ ನಗರ ವಾಡ್೯ನ ವ್ಯಾಪ್ತಿಯ ಪ್ರದೇಶದಲ್ಲಿ ನಿನ್ನೆ ಮಧ್ಯ ರಾತ್ರಿ ಸುಮಾರು 2-30 ಕ್ಕೆ ಹೊಸಕೆರೆಹಳ್ಳಿ ಕೆರೆಯ ಏರಿಯ ಮಣ್ಣು ಕುಸಿದು ನೀರಿನಿಂದಜಲಾವೃತವಾಗಿದ್ದ ಕೆರೆ ಪಕ್ಕದಲ್ಲಿರುವ ಪುಷ್ಪ ಗಿರಿ ಮತ್ತು ಪ್ರಮೋದ್ ಬಡಾವಣೆ ಗೆ ಇಂದು ಮೇಯರ್ ಗೌತಮ್ ಕುಮಾರ್ ಜೈನ್ ಭೇಟಿ ನೀಡಿ, ಸ್ಥಳವನ್ನು ಪರಿಶೀಲಿಸಿ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಘಟನೆ ಸಂಭವಿಸಿದ ಬಡಾವಣೆಯ ಸ್ಥಳಗಳಿಗೆ ಅಧಿಕಾರಿಗಳೂಂದಿಗೆ ಖುದ್ದು ಭೇಟಿ ನೀಡಿ ರಸ್ತೆಗಳಲ್ಲಿ ಕೆರೆಯ ನೀರು ಹರಿದು ನಿಂತಿರುವ ಕೆಸರನ್ನು ಕೂಡಲೇ ಸ್ವಚ್ಛ ಗೊಳಿಸಲು ಕ್ರಮ ವಹಿಸುವಂತೆ ಆದೇಶಿಸಿದರು, ನಂತರ ತಾತ್ಕಾಲಿಕವಾಗಿ ಬಿಡಿಎ ಮತ್ತು ಬಿ. ಡಬ್ಮ್ಯೂ .ಎಸ್.ಎಸ್. ಬಿ ಸಂಸ್ಥೆ ಯವರು ಈ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಂಡು ತಡೆಗೋಡೆ ನಿರ್ಮಿಸಿ ಮತ್ತೆ ಕೆರೆಯಿಂದ ಬಡಾವಣೆಗೆ ನೀರು ಹರಿಯದಂತೆ ಕ್ರಮವಹಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿ, ಸದರಿ ಕಾರ್ಯಕ್ಕೆ ಬಿಬಿಎಂಪಿ ವತಿಯಿಂದ ಸಹಕರಿಸಲು ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ರವರುಗಳಿಗೆ ಸೂಚಿಸಿದರು. Body:ಹೊಸಕೆರೆಹಳ್ಳಿ ಕೆರೆಯ59 ಎಕರೆ ವಿಸ್ತೀರ್ಣ ಪ್ರದೇಶವನ್ನು ಬಿ.ಡಿ.ಎ ಅಭಿವೃದ್ದಿ ಕಾಮಗಾರಿ ನಿರ್ಮಿಸುತ್ತಿದ್ದು, ಅದನ್ನು ಗಮನಿಸಿದ ಮಹಾಪೌರರು ಸಂಭಂದಪಟ್ಡ ಗುತ್ತಿಗೆ ದಾರರಿಗೆ ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ಸೂಚನೆ ನೀಡಿದಲ್ಲದೆ, ಈ ಸಂಭಂದ ಇದುವರೆಗೂ ಆಗಿರುವ ಅಭಿವೃದ್ಧಿ ಹಾಗೂ ವಿಸ್ತೀರ್ಣ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲನೆ ನಡೆಸಿ ತದನಂತರ ಬಿಬಿಎಂಪಿ ಯ ವಶಕ್ಕೆ ಪಡೆಯಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಮುಖ್ಯಅಭಿಯಂತರರು (ಕೆರೆ) ರವರಿಗೆ ನಿರ್ದೇಶನ ನೀಡಿದರು.ನಂತರ ಕೆರೆ ಕುಸಿತದಿಂದ ಅನಾಹುತ ವಾದ ಸ್ಥಳಕ್ಕೆ ಪುಷ್ಪಗಿರಿ ಬಡಾವಣೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಸದರಿ ಬಡಾವಣೆಯ ನಿವಾಸಿಗಳು ಮೇಯರ್ ಬಳಿ ತಮ್ಮ ಅಳಲನ್ನು ತೊಡಿಕೊಂಡರು. ಅನೇಕ ವರ್ಷಗಳಿಂದ ಕೆರಅಭಿವೃದ್ಧಿಪಡಿಸಲಾಗು
ವುದೆಂದು ಆಶ್ವಾಸನೆ ನೀಡಲಾಗುತ್ತಿದೆ ಹೊರತು, ಅಭಿವೃದ್ಧಿ ಕಾಣುತ್ತಿಲ್ಲವೆಂದು ದೂರಿದರು, ಅನೇಕ ಮೇಯರ್ ಗಳು, ಸಚಿವರು, ಚುನಾಯಿತ ಪ್ರತಿನಿಧಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಆಗಿಲ್ಲವೆಂದು ಅಲ್ಲಿನ ನಿವಾಸಿಗಳುದೂರಿದರು.
ಇದಕ್ಕೆ ಸ್ಪಂದಿಸಿ ಮೇಯರ್ ತಾತ್ಕಾಲಿಕವಾಗಿ ಪರಿಹಾರ ಹುಡುಕುವ ಬದಲು ಶಾಶ್ವತವಾಗಿ ಪರಿಹಾರ ಕಂಡು ಕೊಳ್ಳುವ ಸಲುವಾಗಿ ಸಂಬಂಧ ಪಟ್ಟ ಎಲ್ಲಾ ಇಲಾಖಾ ಮುಖ್ಯಸ್ಥರುಗಳಸಭೆಯನ್ನುನಾಳೆಕರೆದುಚರ್ಚಿಸಲಿದ್ದೇನೆ
ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.

ಸತೀಶ ಎಂಬಿ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.