ETV Bharat / city

ಕೆಪಿಎಲ್​​​​ ಮ್ಯಾಚ್​​​ ಫಿಕ್ಸಿಂಗ್​​​ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಮಯ ಕೋರಿದ ಅಭಿಮನ್ಯು

author img

By

Published : Nov 28, 2019, 5:48 PM IST

Updated : Nov 28, 2019, 6:32 PM IST

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​ಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಇಂದು‌ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​
ಕೆಪಿಎಲ್​ ಮ್ಯಾಚ್​​ ಫಿಕ್ಸಿಂಗ್​ ಪ್ರಕರಣ

ಬೆಂಗಳೂರು: ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಅಭಿಮನ್ಯು ಮಿಥುನ್​, ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​ಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಇಂದು‌ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಸೂರತ್​​ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್​ ಪಂದ್ಯ ನಡೆಯುತ್ತಿದೆ. ತಂಡದಲ್ಲಿ ನಾನು ಇದ್ದೇನೆ. ಈ ಹಿನ್ನೆಲೆಯಲ್ಲಿ ಸಿಸಿಬಿಯ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಯಾವಕಾಶ ನೀಡಬೇಕು ಎಂದು ಸಂದೀಪ್ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.

ಈ ಪಂದ್ಯ ಹೊರ ರಾಜ್ಯದಲ್ಲಿ ನಡೆಯುತ್ತಿರುವ ಕಾರಣ ಎರಡು ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಕೆಪಿಎಲ್ ಫಿಕ್ಸಿಂಗ್‌ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ, ಕೆಪಿಎಲ್​​ನಲ್ಲಿ ಆಡಿದ ಎಲ್ಲಾ ಆಟಗಾರರಿಗೆ ನೋಟಿಸ್ ನೀಡಿತ್ತು.‌ ಅದರಂತೆ ಮಿಥುನ್​​ನನ್ನು ವಿಚಾರಣೆಗೆ ಕರೆದಿದ್ದರು.

ಬೆಂಗಳೂರು: ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಅಭಿಮನ್ಯು ಮಿಥುನ್​, ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಕಾರಣ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್​​ಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಇಂದು‌ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಸೂರತ್​​ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಸೆಮಿಫೈನಲ್​ ಪಂದ್ಯ ನಡೆಯುತ್ತಿದೆ. ತಂಡದಲ್ಲಿ ನಾನು ಇದ್ದೇನೆ. ಈ ಹಿನ್ನೆಲೆಯಲ್ಲಿ ಸಿಸಿಬಿಯ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಯಾವಕಾಶ ನೀಡಬೇಕು ಎಂದು ಸಂದೀಪ್ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.

ಈ ಪಂದ್ಯ ಹೊರ ರಾಜ್ಯದಲ್ಲಿ ನಡೆಯುತ್ತಿರುವ ಕಾರಣ ಎರಡು ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಕೆಪಿಎಲ್ ಫಿಕ್ಸಿಂಗ್‌ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ, ಕೆಪಿಎಲ್​​ನಲ್ಲಿ ಆಡಿದ ಎಲ್ಲಾ ಆಟಗಾರರಿಗೆ ನೋಟಿಸ್ ನೀಡಿತ್ತು.‌ ಅದರಂತೆ ಮಿಥುನ್​​ನನ್ನು ವಿಚಾರಣೆಗೆ ಕರೆದಿದ್ದರು.

Intro:ಅಂತರಾಷ್ಟ್ರೀಯ ಆಟಗಾರನಿಗೆ ನೋಟಿಸ್
ಸಮಯಾವಕಾಶ ಕೇಳಿದ ಬೌಲರ್

ಅಂತರಾಷ್ಟ್ರೀಯ ಆಟಗಾರ ಅಭಿಮನ್ಯು ಮಿಥುನ್ಗೆ KPL ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಇಂದು‌ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಇಂದು ಸಿಸಿಬಿಯ ವಿಚಾರಣೆಗೆ ಬರೋದಿಲ್ಲ ಎಂದು ಸಂದೀಪ್ ಪಾಟೀಲ್ ಅವರಿಗೆ ಅಭಿಮನ್ಯು ಉತ್ತರ ನೀಡಿದ್ದಾನೆ. ಯಾಕಂದ್ರೆ ಸೂರತ್ ನಲ್ಲಿ ಸಯ್ಯದ್ ಮುಷ್ತಾಕ್ ಅಲಿ T20 ಟೂರ್ನಿ ನಡೆಯುತ್ತಿರುವ ಹಿನ್ನೆಲೆ ಅದರಲ್ಲಿ ಅಭಿಮನ್ಯು ಕೂಡ ಆಟಗಾರನಾಗಿದ್ದಾನೆ. ಈ ಆಟ ಹೊರ ರಾಜ್ಯದಲ್ಲಿ ನಡೆಯುವ ಕಾರಣ ಎರಡು ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗ್ತೀನಿ ಎಂದು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಕೆಪಿಎಲ್ ಫಿಕ್ಸಿಂಗ್‌ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಕೆಪಿಎಲ್ ಆಡಿದ ಎಲ್ಲಾ ಪ್ರಮುಖ ಆಟಗಾರರಿಗೆ ಸಿಸಿಬಿ ನೋಟಿಸ್ ನೀಡಿತ್ತು.‌ಕೆಪಿ ಎಲ್ ಮ್ಯಾಚ್ ನಲ್ಲಿ ಅಭಿಮನ್ಯು ಮಿಥುನ್ ಬೌಲರ್ ಆಗಿ ಕೆಪಿಎಲ್ ಮ್ಯಾಚ್ ನಲ್ಲಿ ಆಟವಾಡಿದ್ದು ಹೀಗಾಗಿ ಬೆಟ್ಟಿಂಗ್ ವಿಚಾರದ ಮಾಹಿತಿ ನೀಡುವಂತೆ ತಿಳಿಸಿದ್ದರು.
Body:KN_bNG_05_KPL_7204498Conclusion:KN_bNG_05_KPL_7204498
Last Updated : Nov 28, 2019, 6:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.