ETV Bharat / city

ರಮೇಶ್ ಜಾರಕಿಹೊಳಿ‌ ನಿವಾಸದಲ್ಲಿ ಅನರ್ಹ ಶಾಸಕರ ಸಭೆ, ಕುತೂಹಲ ಮೂಡಿಸಿದ ಲಕ್ಷ್ಮಣ ಸವದಿ ಭೇಟಿ

author img

By

Published : Aug 20, 2019, 10:11 PM IST

ಇತ್ತ ರಮೇಶ್ ಜಾರಕಿಹೊಳಿ‌ ಅವರು ಸೆವೆನ್ ಮಿನಿಸ್ಟರ್ ಕ್ವಾಟ್ರಸ್​​ನ ತಮ್ಮ ನಿವಾಸದಲ್ಲಿ ಅನರ್ಹ ಶಾಸಕರ ಸಭೆ ನಡೆಸಿದರೆ, ಇತ್ತ ಬಿಜೆಪಿಯ ಅತೃಪ್ತ ಶಾಸಕರು ಖಾಸಗಿ ಹೋಟಲ್​ನಲ್ಲಿ ಸಭೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.

ineligible-legislators-meeting-at-ramesh-zarakiholi-residence

ಬೆಂಗಳೂರು: ರಮೇಶ್ ಜಾರಕಿಹೊಳಿ‌ ಅವರು ಸೆವೆನ್ ಮಿನಿಸ್ಟರ್ ಕ್ವಾಟ್ರಸ್​​ನ ತಮ್ಮ ನಿವಾಸದಲ್ಲಿ ಅನರ್ಹ ಶಾಸಕರ ಸಭೆ ನಡೆಸಿದರೆ, ಬಿಜೆಪಿಯ ಅತೃಪ್ತ ಶಾಸಕರು ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದ್ದಾರೆ.

ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಈಗಾಗಲೇ ಸಚಿವ ಸಂಪುಟ ವಿಸ್ತರಿಸಿರುವ, ಅತೃಪ್ತಿ ಹಾಗೂ ತಮ್ಮ ಮುಂದಿನ ಭವಿಷ್ಯದ ಕುರಿತು ಚರ್ಚಿಸಿದ್ದಾರೆ. ಅತ್ತ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಶಾಸಕರ ಸಭೆ ನಡೆಸಿರುವುದು ವಿಶೇಷ.

ಸಚಿವ ಲಕ್ಷ್ಮಣ ಸವದಿ ಭೇಟಿ: ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂತನ ಸಚಿವ ಲಕ್ಷ್ಮಣ ಸವದಿ ಆಗಮಿಸಿದರು. ಜೊತೆಗೆ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕೂಡ ಬಂದರು. ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಲಕ್ಷ್ಮಣ್ ಸವದಿ ಆಗಮಿಸಿ ಮಾತುಕತೆ ನಡೆಸಿದರು. ಕೆಲ ಹೊತ್ತಿನ ನಂತರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಕೂಡ ಮಾತುಕತೆ ನಡೆಸಿದ್ದಾರೆ.

ಆಗಮಿಸಿದ ಅನರ್ಹ ಶಾಸಕರು

ಸ್ವಲ್ಪ ಹೊತ್ತು ಚರ್ಚೆ ನಡೆಸಿದ ಬಳಿಕ ಎಂಟಿಬಿ ನಾಗರಾಜ್, ಆರ್.ಶಂಕರ್ ಹೊರ ನಡೆದರು. ಆರ್.ಶಂಕರ್ ಮಾತನಾಡಿ, ನಾವು ಆಗಾಗ ಟೀ-ಕಾಫಿಗೆ ಭೇಟಿ ಮಾಡ್ತೇವೆ. ಇವತ್ತು ಸಚಿವರ ಪ್ರಮಾಣ ವಚನ ಇತ್ತು. ಅದಕ್ಕೆ ಎಲ್ಲರೂ ಬೆಂಗಳೂರಿಗೆ ಬಂದಿದ್ರು. ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಅನರ್ಹ ಶಾಸಕರ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿರುವ ಕಾರಣ ನಮಗೆ ಕೊಟ್ಟಿಲ್ಲ ಅಷ್ಟೇ ಎಂದರು.

ಬೆಂಗಳೂರು: ರಮೇಶ್ ಜಾರಕಿಹೊಳಿ‌ ಅವರು ಸೆವೆನ್ ಮಿನಿಸ್ಟರ್ ಕ್ವಾಟ್ರಸ್​​ನ ತಮ್ಮ ನಿವಾಸದಲ್ಲಿ ಅನರ್ಹ ಶಾಸಕರ ಸಭೆ ನಡೆಸಿದರೆ, ಬಿಜೆಪಿಯ ಅತೃಪ್ತ ಶಾಸಕರು ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದ್ದಾರೆ.

ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಈಗಾಗಲೇ ಸಚಿವ ಸಂಪುಟ ವಿಸ್ತರಿಸಿರುವ, ಅತೃಪ್ತಿ ಹಾಗೂ ತಮ್ಮ ಮುಂದಿನ ಭವಿಷ್ಯದ ಕುರಿತು ಚರ್ಚಿಸಿದ್ದಾರೆ. ಅತ್ತ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಶಾಸಕರ ಸಭೆ ನಡೆಸಿರುವುದು ವಿಶೇಷ.

ಸಚಿವ ಲಕ್ಷ್ಮಣ ಸವದಿ ಭೇಟಿ: ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂತನ ಸಚಿವ ಲಕ್ಷ್ಮಣ ಸವದಿ ಆಗಮಿಸಿದರು. ಜೊತೆಗೆ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕೂಡ ಬಂದರು. ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಲಕ್ಷ್ಮಣ್ ಸವದಿ ಆಗಮಿಸಿ ಮಾತುಕತೆ ನಡೆಸಿದರು. ಕೆಲ ಹೊತ್ತಿನ ನಂತರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಕೂಡ ಮಾತುಕತೆ ನಡೆಸಿದ್ದಾರೆ.

ಆಗಮಿಸಿದ ಅನರ್ಹ ಶಾಸಕರು

ಸ್ವಲ್ಪ ಹೊತ್ತು ಚರ್ಚೆ ನಡೆಸಿದ ಬಳಿಕ ಎಂಟಿಬಿ ನಾಗರಾಜ್, ಆರ್.ಶಂಕರ್ ಹೊರ ನಡೆದರು. ಆರ್.ಶಂಕರ್ ಮಾತನಾಡಿ, ನಾವು ಆಗಾಗ ಟೀ-ಕಾಫಿಗೆ ಭೇಟಿ ಮಾಡ್ತೇವೆ. ಇವತ್ತು ಸಚಿವರ ಪ್ರಮಾಣ ವಚನ ಇತ್ತು. ಅದಕ್ಕೆ ಎಲ್ಲರೂ ಬೆಂಗಳೂರಿಗೆ ಬಂದಿದ್ರು. ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಅನರ್ಹ ಶಾಸಕರ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿರುವ ಕಾರಣ ನಮಗೆ ಕೊಟ್ಟಿಲ್ಲ ಅಷ್ಟೇ ಎಂದರು.

Intro:newsBody:ರಮೇಶ್ ಜಾರಕಿಹೊಳಿ‌ ನಿವಾಸದಲ್ಲಿ ಅನರ್ಹ ಶಾಸಕರ ಸಭೆ, ಕುತೂಹಲ ಮೂಡಿಸಿದ ಲಕ್ಷ್ಮಣ ಸವದಿ ಭೇಟಿ

ಬೆಂಗಳೂರು: ರಮೇಶ್ ಜಾರಕಿಹೊಳಿ‌ ನಿವಾಸದಲ್ಲಿ ಅನರ್ಹ ಶಾಸಕರ ಸಭೆ ನಡೆದಿದೆ.
ಬಿಜೆಪಿಯ ಅತೃಪ್ತ ಶಾಸಕರು ಖಾಸಗಿ ಹೋಟಲ್ ನಲ್ಲಿ ಸಭೆ ನಡೆಸಿದ್ರೆ, ಅನರ್ಹ ಶಾಸಕರು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಮಹೇಶ್ ಕುಮಟಳ್ಳಿ ಆಗಮಿಸಿದ್ದು ಸಚಿವ ಸಂಪುಟ ವಿಸ್ತರಣೆ ಆಗಿದ್ದು ಈ ಸಂದರ್ಭ ಎದುರಾಗಿರುವ ಅತೃಪ್ತಿ ಹಾಗೂ ತಮ್ಮ ಮುಂದಿನ ಭವಿಷ್ಯದ ಕುರಿತು ಚರ್ಚಿಸಿದ್ದಾರೆ. ಅತ್ತ ತಮ್ಮ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಿರುವುದು ವಿಶೇಷ.
ಸಂಪುಟ ರಚನೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ ನಡೆದಿರುವುದು ಪ್ರಮುಖ ಸಂಗತಿಯಾಗಿದ್ದು, ರಮೇಶ್ ಜಾರಕಿಹೊಳಿ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಲ್ಲಿರುವ ನಿವಾಸದಲ್ಲಿ ಸಭೆ ನಡೆದಿದೆ.
ಸಚಿವ ಲಕ್ಷ್ಮಣ ಸವದಿ ಭೇಟಿ
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂತನ ಸಚಿವ ಲಕ್ಷ್ಮಣ ಸವದಿ ಆಗಮಿಸಿದರು. ಸವದಿ ಬೆನ್ನಿಗೇ ಶಾಸಕ ಬಿಸಿ ಪಾಟೀಲ್ ಕೂಡ ಬಂದರು. ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಸಚಿವ ಲಕ್ಷ್ಮಣ್ ಸವದಿ ಆಗಮಿಸಿ ಮಾತುಕತೆ ನಡೆಸಿದರು.
ಕೆಲ ಹೊತ್ತಿನ ನಂತರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಕೂಡ ಮಾತುಕತೆ ನಡೆಸಿದ್ದಾರೆ.
ಹೊರಟ ನಾಯಕರು
ಕೆಲ ಹೊತ್ತು ಮಾತುಕತೆ ನಡೆಸಿದ ನಂತರ ಅನರ್ಹ ಗೊಂಡಿರುವ ಶಾಸಕರಾದ ಎಂಟಿಬಿ ನಾಗರಾಜ್, ಆರ್ ಶಂಕರ್ ಹೊರನಡೆದರು.
ಅನರ್ಹ ಶಾಸಕ ಆರ್ ಶಂಕರ್ ಮಾತನಾಡಿ, ನಾವುಗಳು ಆಗಾಗ ಟೀ ಕಾಫಿಗೆ ಭೇಟಿ ಮಾಡುತ್ತೇನೆ. ಇವತ್ತು ಶಾಸಕರ ಪ್ರಮಾಣವಚನ ಇತ್ತು ಅದಕ್ಕೆ ಎಲ್ಲಾ ಬೆಂಗಳೂರಿಗೆ ಬಂದಿದ್ರು. ಇವತ್ತು ಅದಕ್ಕೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ನಮ್ಮ ವಿಚಾರಣೆ ಕೋರ್ಟ್ ನಲ್ಲಿ ಇರುವುದರಿಂದ ನಮಗೆ ಕೊಟ್ಟಿಲ್ಲ ಅಷ್ಟೇ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.