ETV Bharat / city

ನನಗೆ ಪ್ರತಿಪಕ್ಷ ನಾಯಕನ ಸ್ಥಾನ ಬೇಡ, ಅರ್ಜೆಂಟ್ ಇದ್ದವರು ತೆಗೆದುಕೊಳ್ಳಲಿ: ಡಿಕೆಶಿ - ಪ್ರತಿಪಕ್ಷ ನಾಯಕನ ಸ್ಥಾನ

ನನಗೆ ಯಾವುದೇ ಪ್ರತಿಪಕ್ಷದ ನಾಯಕನ ಸ್ಥಾನ ಬೇಡ. ಯಾರ್ಯಾರು ಅರ್ಜೆಂಟ್ ಅಲ್ಲಿ ಇದ್ದಾರೋ ಅವರಿಗೆ ಅವಕಾಶ ಸಿಗಲಿ. ಕಾರು ಬೇಕಾದವರು, ಮನೆ ಬೇಕಾದವರು ಪ್ರಯತ್ನ ಮಾಡಲಿ. ನನಗೆ ಈಗಿರುವ ಮನೆಯೇ ಸಾಕು. ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದಕ್ಕೆ ಬದ್ಧವಾಗಿರುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಡಿಕೆಶಿ
author img

By

Published : Aug 25, 2019, 3:21 PM IST

ಬೆಂಗಳೂರು: ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾವ ರಾಜಕಾರಣಿಗಳು ಏನೆಂದರು ಎನ್ನುವುಕ್ಕೆ ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ, ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ಸಾಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಪ್ರತಿಪಕ್ಷ ನಾಯಕನ ಸ್ಥಾನ ಕುರಿತು ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ 14 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಕೈ ಕೆಳಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ನಡೆದ ಎಲ್ಲ ಕೆಲಸಗಳಿಗೂ ನಾನು ಬದ್ಧವಾಗಿದ್ದೇನೆ ಎಂದರು.

ತಾವು ಪ್ರತಿಪಕ್ಷದ ನಾಯಕರಾಗಿ ಎಂಬ ಪ್ರಶ್ನೆಗೆ, ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾರ್ಯಾರು ಅರ್ಜೆಂಟ್ ಅಲ್ಲಿ ಇದ್ದಾರೆ ಅವರಿಗೆ ಅವಕಾಶ ಸಿಗಲಿ. ಕಾರು ಬೇಕಾದವರು, ಮನೆ ಬೇಕಾದವರು ಪ್ರಯತ್ನ ಮಾಡಲಿ. ನನಗೆ ಇರುವ ಮನೆ ಸಾಕು. ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದಕ್ಕೆ ಬದ್ಧವಾಗಿ ಇರುತ್ತೇನೆ. ಇನ್ನು ದಿಲ್ಲಿಯಿಂದ ಹೈಕಮಾಂಡ್ ನಾಯಕರು ನಾಳೆ ಬರುತ್ತಿದ್ದಾರೆ. ಅವರು ಚರ್ಚಿಸಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಯಾರು ಅರ್ಹರು ಅಂತಿಮಗೊಳಿಸಲಿದ್ದಾರೆ ಎಂದರು.

ಬೆಂಗಳೂರು: ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾವ ರಾಜಕಾರಣಿಗಳು ಏನೆಂದರು ಎನ್ನುವುಕ್ಕೆ ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ, ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ಸಾಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಪ್ರತಿಪಕ್ಷ ನಾಯಕನ ಸ್ಥಾನ ಕುರಿತು ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ 14 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಕೈ ಕೆಳಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ನಡೆದ ಎಲ್ಲ ಕೆಲಸಗಳಿಗೂ ನಾನು ಬದ್ಧವಾಗಿದ್ದೇನೆ ಎಂದರು.

ತಾವು ಪ್ರತಿಪಕ್ಷದ ನಾಯಕರಾಗಿ ಎಂಬ ಪ್ರಶ್ನೆಗೆ, ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾರ್ಯಾರು ಅರ್ಜೆಂಟ್ ಅಲ್ಲಿ ಇದ್ದಾರೆ ಅವರಿಗೆ ಅವಕಾಶ ಸಿಗಲಿ. ಕಾರು ಬೇಕಾದವರು, ಮನೆ ಬೇಕಾದವರು ಪ್ರಯತ್ನ ಮಾಡಲಿ. ನನಗೆ ಇರುವ ಮನೆ ಸಾಕು. ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದಕ್ಕೆ ಬದ್ಧವಾಗಿ ಇರುತ್ತೇನೆ. ಇನ್ನು ದಿಲ್ಲಿಯಿಂದ ಹೈಕಮಾಂಡ್ ನಾಯಕರು ನಾಳೆ ಬರುತ್ತಿದ್ದಾರೆ. ಅವರು ಚರ್ಚಿಸಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಯಾರು ಅರ್ಹರು ಅಂತಿಮಗೊಳಿಸಲಿದ್ದಾರೆ ಎಂದರು.

Intro:newsBody:ನನಗೆ ಪ್ರತಿಪಕ್ಷ ನಾಯಕ ಸ್ಥಾನ ಬೇಡ ಅರ್ಜೆಂಟ್ ಇದ್ದವರು ಆಗಲಿ: ಡಿಕೆಶಿ

ಬೆಂಗಳೂರು: ಯಾವ್ಯಾವ ರಾಜಕಾರಣಿಗಳು ಏನೆಂದರು ಎನ್ನುವುದನ್ನು ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ಸಾಕು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಳೆದ 14 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಕೈಕೆಳಗೆ ನಾನು ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ನಡೆದ ಎಲ್ಲ ಕೆಲಸಗಳಿಗೂ ನಾನು ಬದ್ಧವಾಗಿದ್ದೇನೆ ಎಂದರು.
ತಾವು ಪ್ರತಿಪಕ್ಷದ ನಾಯಕರಾಗಿ ಎಂಬ ಪ್ರಶ್ನೆಗೆ, ನನಗೆ ಯಾವುದೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಡ. ಯಾರ್ಯಾರು ಅರ್ಜೆಂಟ್ ಅಲ್ಲಿ ಇದ್ದಾರೆ ಅವರಿಗೆ ಅವಕಾಶ ಸಿಗಲಿ ಕಾರು ಬೇಕಾದವರು ಮನೆ ಬೇಕಾದವರು ಪ್ರಯತ್ನ ಮಾಡಲಿ ನನಗೆ ಇರುವ ಮನೆ ಸಾಕು. ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡರು ಅದಕ್ಕೆ ಬದ್ಧವಾಗಿ ಇರುತ್ತೇನೆ ಎಂದರು.
ದಿಲ್ಲಿಯಿಂದ ಹೈಕಮಾಂಡ್ ನಾಯಕರು ನಾಳೆ ಬರುತ್ತಿದ್ದಾರೆ ಅವರು ಚರ್ಚಿಸಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಯಾರು ಅರ್ಹರು ಅಂತಿಮಗೊಳಿಸಲಿದ್ದಾರೆ.
ಅರುಣ್ ಜೇಟ್ಲಿಗೆ ಸಂತಾಪ
ವಿದ್ಯಾರ್ಥಿ ನಾಯಕರಾಗಿ ಉತ್ತಮ ಹೋರಾಟಗಾರರಾಗಿ ರೂಪುಗೊಂಡು ನಂತರ ರಾಜಕೀಯದಲ್ಲಿ ಉತ್ತಮ ನೆಲೆ ಕಂಡುಕೊಂಡಿದ್ದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿಧನ ಆಘಾತ ತಂದಿದೆ. ಪ್ರತಿಪಕ್ಷದ ನಾಯಕರಾಗಿ ಕೂಡ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ತುಂಬಾ ಚಿಕ್ಕ ವಯಸ್ಸಿನಲ್ಲಿ ಅಪ್ರಬುದ್ಧ ರಾಜಕಾರಣಿಗೆ ಈ ರೀತಿ ಸಾವು ಬರಬಾರದಾಗಿತ್ತು. ನಾನು ಕೂಡ ಅನೇಕ ಸಾರಿ ಅವರನ್ನು ಭೇಟಿ ಮಾಡಿ ಅಮೂಲ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದೆ. ಕರ್ನಾಟಕದ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.