ETV Bharat / city

ಡಿಕೆಶಿಗಾಗಿ ಪ್ರಮಾಣ ವಚನ ಸ್ವೀಕಾರ ತಪ್ಪಿಸಿಕೊಂಡ ಹಾನಗಲ್​ ಶಾಸಕ ಶ್ರೀನಿವಾಸ್​ ಮಾನೆ

author img

By

Published : Nov 11, 2021, 12:19 PM IST

ರಮೇಶ್​ ಭೂಸನೂರು(ramesh bhusanur)ಅವರಿಗೆ ಪ್ರಮಾಣ ವಚನ(oath)ಬೋಧಿಸುವ ವೇಳೆ ಕಾಂಗ್ರೆಸ್​ನ ಶ್ರೀನಿವಾಸ್​ (Shrinivas mane)ಮಾನೆ, ಸ್ಪೀಕರ್​ ಬಳಿ ಬಂದು 2 ನಿಮಿಷದಲ್ಲಿ ಬರುವುದಾಗಿ ಹೇಳಿ ಸಭಾಂಗಣದಿಂದ ಹೊರ ನಡೆದಿದ್ದಾರೆ.

hanagala mla shrinivas mane
ಹಾನಗಲ್​ ನೂತನ ಶಾಸಕ ಶ್ರೀನಿವಾಸ್​ ಮಾನೆ

ಬೆಂಗಳೂರು: ವಿಧಾನಸೌಧದ ಸಭಾಂಗಣದಲ್ಲಿ ನೂತನ ಶಾಸಕರಿಗೆ ಪ್ರಮಾಣವಚನ ಸ್ವೀಕಾರ (oath)ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು. ಈ ವೇಳೆ, ಹಾನಗಲ್​ ಶಾಸಕ ಶ್ರೀನಿವಾಸ್​ ಮಾನೆ(Shirivas mane)ಸಮಾರಂಭದ ಮಧ್ಯದಲ್ಲಿಯೇ ಸಭಾಂಗಣದಿಂದ ಹೊರನಡೆದ ಘಟನೆ ನಡೆದಿದೆ.

ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (speaker vishweshwar hegade kageri)ಅವರು ಮೊದಲಿಗೆ ಸಿಂದಗಿಯ ಬಿಜೆಪಿ ಶಾಸಕ ರಮೇಶ್​ ಭೂಸನೂರು(ramesh bhusanur) ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಕಾಂಗ್ರೆಸ್​ನ ಶ್ರೀನಿವಾಸ್​ ಮಾನೆ ಅವರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನೀಡಲಾಗಿತ್ತು.

ರಮೇಶ್​ ಭೂಸನೂರು ಅವರಿಗೆ ಪ್ರಮಾಣ ವಚನ ಬೋಧಿಸುವ ವೇಳೆ ಕಾಂಗ್ರೆಸ್​ನ ಶ್ರೀನಿವಾಸ್​ ಮಾನೆ ಅವರು ಸ್ಪೀಕರ್​ ಬಳಿ ಬಂದು 2 ನಿಮಿಷದಲ್ಲಿ ಬರುವುದಾಗಿ ಹೇಳಿ ಸಭಾಂಗಣದಿಂದ ಹೊರನಡೆದಿದ್ದಾರೆ.

ಶಾಸಕ ರಮೇಶ್​ ಭೂಸನೂರು ಅವರಿಗೆ ಪ್ರಮಾಣ ಬೋಧನೆ ಬಳಿಕವೂ ಶ್ರೀನಿವಾಸ್​ ಮಾನೆ ಬಂದಿರಲಿಲ್ಲ. ಬಳಿಕ 10 ನಿಮಿಷ ಕಾದರೂ ಶ್ರೀನಿವಾಸ್​ ಮಾನೆ ಸುಳಿವು ಸಿಗದ ಕಾರಣ ಸಿಡಿಮಿಡಿಗೊಂಡ ಸ್ಪೀಕರ್​ ಕಾಗೇರಿ ಕಾರ್ಯಕ್ರಮ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಶ್ರೀನಿವಾಸ್​ ಮಾನೆ ಅವರು ಸ್ಪೀಕರ್​ ಸಭಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲು ಸೂಚಿಸಿದ್ಧಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಡಿ.ಕೆ.ಶಿವಕುಮಾರ್ ಬಂದ ಬಳಿಕವೇ ಶ್ರೀನಿವಾಸ್​ ಮಾನೆ ಪ್ರಮಾಣ ವಚನ ಸ್ವೀಕರಿಸಲು ಇಚ್ಚಿಸಿದ್ದರು. ಇದರಿಂದ ಕಾರ್ಯಕ್ರಮದ ಮಧ್ಯೆಯೇ ಹೊರನಡೆದಿದ್ದರು ಎಂದು ಹೇಳಲಾಗಿದೆ. ಇದರಿಂದ ಹಾನಗಲ್​ನ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸದೆಯೇ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.

ಬೆಂಗಳೂರು: ವಿಧಾನಸೌಧದ ಸಭಾಂಗಣದಲ್ಲಿ ನೂತನ ಶಾಸಕರಿಗೆ ಪ್ರಮಾಣವಚನ ಸ್ವೀಕಾರ (oath)ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು. ಈ ವೇಳೆ, ಹಾನಗಲ್​ ಶಾಸಕ ಶ್ರೀನಿವಾಸ್​ ಮಾನೆ(Shirivas mane)ಸಮಾರಂಭದ ಮಧ್ಯದಲ್ಲಿಯೇ ಸಭಾಂಗಣದಿಂದ ಹೊರನಡೆದ ಘಟನೆ ನಡೆದಿದೆ.

ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (speaker vishweshwar hegade kageri)ಅವರು ಮೊದಲಿಗೆ ಸಿಂದಗಿಯ ಬಿಜೆಪಿ ಶಾಸಕ ರಮೇಶ್​ ಭೂಸನೂರು(ramesh bhusanur) ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಕಾಂಗ್ರೆಸ್​ನ ಶ್ರೀನಿವಾಸ್​ ಮಾನೆ ಅವರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನೀಡಲಾಗಿತ್ತು.

ರಮೇಶ್​ ಭೂಸನೂರು ಅವರಿಗೆ ಪ್ರಮಾಣ ವಚನ ಬೋಧಿಸುವ ವೇಳೆ ಕಾಂಗ್ರೆಸ್​ನ ಶ್ರೀನಿವಾಸ್​ ಮಾನೆ ಅವರು ಸ್ಪೀಕರ್​ ಬಳಿ ಬಂದು 2 ನಿಮಿಷದಲ್ಲಿ ಬರುವುದಾಗಿ ಹೇಳಿ ಸಭಾಂಗಣದಿಂದ ಹೊರನಡೆದಿದ್ದಾರೆ.

ಶಾಸಕ ರಮೇಶ್​ ಭೂಸನೂರು ಅವರಿಗೆ ಪ್ರಮಾಣ ಬೋಧನೆ ಬಳಿಕವೂ ಶ್ರೀನಿವಾಸ್​ ಮಾನೆ ಬಂದಿರಲಿಲ್ಲ. ಬಳಿಕ 10 ನಿಮಿಷ ಕಾದರೂ ಶ್ರೀನಿವಾಸ್​ ಮಾನೆ ಸುಳಿವು ಸಿಗದ ಕಾರಣ ಸಿಡಿಮಿಡಿಗೊಂಡ ಸ್ಪೀಕರ್​ ಕಾಗೇರಿ ಕಾರ್ಯಕ್ರಮ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ಶ್ರೀನಿವಾಸ್​ ಮಾನೆ ಅವರು ಸ್ಪೀಕರ್​ ಸಭಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲು ಸೂಚಿಸಿದ್ಧಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಡಿ.ಕೆ.ಶಿವಕುಮಾರ್ ಬಂದ ಬಳಿಕವೇ ಶ್ರೀನಿವಾಸ್​ ಮಾನೆ ಪ್ರಮಾಣ ವಚನ ಸ್ವೀಕರಿಸಲು ಇಚ್ಚಿಸಿದ್ದರು. ಇದರಿಂದ ಕಾರ್ಯಕ್ರಮದ ಮಧ್ಯೆಯೇ ಹೊರನಡೆದಿದ್ದರು ಎಂದು ಹೇಳಲಾಗಿದೆ. ಇದರಿಂದ ಹಾನಗಲ್​ನ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸದೆಯೇ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.