ETV Bharat / city

ಮಿಂಟೋ ಶಸ್ತ್ರಚಿಕಿತ್ಸೆ ವೈಫಲ್ಯ; ಪರಿಹಾರ ಧನ ಬಿಡುಗಡೆಗೆ ಗ್ರೀನ್​ಸಿಗ್ನಲ್ - ಮಿಂಟೋ ಕಣ್ಣಿನ ಆಸ್ಪತ್ರೆ ನ್ಯೂಸ್

ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ 24 ಸಂತ್ರಸ್ತರ ಪೈಕಿ 10 ಮಂದಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ. ‌ಇದೀಗ ಉಳಿದ ಸಂತ್ರಸ್ತರಿಗೂ ಎರಡನೇ ಹಂತದ ಪರಿಹಾರ ಧನ ಬಿಡುಗಡೆಗೆ ಸರ್ಕಾರ ಗ್ರೀನ್​ಸಿಗ್ನಲ್ ನೀಡಿದೆ.

Minto hospital
ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಬಿ.ಎಲ್ ಸುಜತಾ ರಾಥೋಡ್
author img

By

Published : Jan 10, 2020, 8:46 PM IST

ಬೆಂಗಳೂರು: ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ 24 ಸಂತ್ರಸ್ತರ ಪೈಕಿ 10 ಮಂದಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ. ‌ಇದೀಗ ಉಳಿದ ಸಂತ್ರಸ್ತರಿಗೂ ಎರಡನೇ ಹಂತದ ಪರಿಹಾರ ಧನ ಬಿಡುಗಡೆಗೆ ಸರ್ಕಾರ ಗ್ರೀನ್​ಸಿಗ್ನಲ್ ನೀಡಿದೆ.

ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಬಿ.ಎಲ್ ಸುಜತಾ ರಾಥೋಡ್

ಕಳೆದ ವರ್ಷ ಕೇವಲ 10 ಜನರಿಗೆ ಮಾತ್ರ ಪರಿಹಾರ ಧನ ನೀಡಲಾಗಿತ್ತು. ಇನ್ನುಳಿದ 14 ಜನರಿಗೂ ಪರಿಹಾರ ಧನ ನೀಡಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆ, ಸಮಿತಿಯು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದೀಗ ಉಳಿದ ಸಂತ್ರಸ್ತರಿಗೂ ಸರ್ಕಾರದಿಂದ ಎರಡನೇ ಹಂತದಲ್ಲಿ ಪರಿಹಾರಧನ ಬಿಡುಗಡೆಗೆ ಅನುಮತಿ ನೀಡಿದೆ.

ಡಿಸಿಎಂ ಅಶ್ವತ್ಥ್​ ನಾರಾಯಣ್‌ ಸಂತ್ರಸ್ತರ ಹಣ‌ ಬಿಡುಗಡೆಗೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ‌‌. ಇನ್ನು ಒಂದು ವಾರದಲ್ಲಿ ಸಂತ್ರಸ್ತರಿಗೆ ಹಣ ಸೇರಿಸುವಂತೆ ಸೂಚನೆ ನೀಡಿದ್ದಾರೆ.‌ ಈಗಾಗಲೇ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ, ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ಹಾಗೂ ಮೈನರ್ ಇಂಜ್ಯುರಿಯಾಗಿರುವವರಿಗೆ ತಲಾ 1 ಲಕ್ಷ ರೂ. ಹಣ ನೀಡಲು ಮುಂದಾಗಿದ್ದಾರೆ. ಜೊತೆಗೆ ಒಂದು ವಾರದಲ್ಲಿ ಪರಿಹಾರ ಹಣ ಕೈಸೇರಲಿದೆ ಅಂತ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಬಿ.ಎಲ್ ಸುಜತಾ ರಾಥೋಡ್ ತಿಳಿಸಿದ್ದಾರೆ.‌

ಬೆಂಗಳೂರು: ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ 24 ಸಂತ್ರಸ್ತರ ಪೈಕಿ 10 ಮಂದಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ. ‌ಇದೀಗ ಉಳಿದ ಸಂತ್ರಸ್ತರಿಗೂ ಎರಡನೇ ಹಂತದ ಪರಿಹಾರ ಧನ ಬಿಡುಗಡೆಗೆ ಸರ್ಕಾರ ಗ್ರೀನ್​ಸಿಗ್ನಲ್ ನೀಡಿದೆ.

ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಬಿ.ಎಲ್ ಸುಜತಾ ರಾಥೋಡ್

ಕಳೆದ ವರ್ಷ ಕೇವಲ 10 ಜನರಿಗೆ ಮಾತ್ರ ಪರಿಹಾರ ಧನ ನೀಡಲಾಗಿತ್ತು. ಇನ್ನುಳಿದ 14 ಜನರಿಗೂ ಪರಿಹಾರ ಧನ ನೀಡಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆ, ಸಮಿತಿಯು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದೀಗ ಉಳಿದ ಸಂತ್ರಸ್ತರಿಗೂ ಸರ್ಕಾರದಿಂದ ಎರಡನೇ ಹಂತದಲ್ಲಿ ಪರಿಹಾರಧನ ಬಿಡುಗಡೆಗೆ ಅನುಮತಿ ನೀಡಿದೆ.

ಡಿಸಿಎಂ ಅಶ್ವತ್ಥ್​ ನಾರಾಯಣ್‌ ಸಂತ್ರಸ್ತರ ಹಣ‌ ಬಿಡುಗಡೆಗೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ‌‌. ಇನ್ನು ಒಂದು ವಾರದಲ್ಲಿ ಸಂತ್ರಸ್ತರಿಗೆ ಹಣ ಸೇರಿಸುವಂತೆ ಸೂಚನೆ ನೀಡಿದ್ದಾರೆ.‌ ಈಗಾಗಲೇ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ, ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ಹಾಗೂ ಮೈನರ್ ಇಂಜ್ಯುರಿಯಾಗಿರುವವರಿಗೆ ತಲಾ 1 ಲಕ್ಷ ರೂ. ಹಣ ನೀಡಲು ಮುಂದಾಗಿದ್ದಾರೆ. ಜೊತೆಗೆ ಒಂದು ವಾರದಲ್ಲಿ ಪರಿಹಾರ ಹಣ ಕೈಸೇರಲಿದೆ ಅಂತ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಬಿ.ಎಲ್ ಸುಜತಾ ರಾಥೋಡ್ ತಿಳಿಸಿದ್ದಾರೆ.‌

Intro:ಮಿಂಟೋ ಶಸ್ತ್ರಚಿಕಿತ್ಸೆ ವೈಫಲ್ಯ; ಉಳಿದ 14 ಮಂದಿಗೂ ಪರಿಹಾರ ಧನಕ್ಕೆ ಅಸ್ತು..

ಬೆಂಗಳೂರು: ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೈಫಲಕ್ಕೆ ಸಂಬಂಧ ಪಟ್ಟಂತೆ, ಈಗಾಗಲೇ 24 ಸಂತ್ರಸ್ತರ ಪೈಕಿ 10 ಮಂದಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ..‌

ಕಳೆದ ವರ್ಷ ಕೇವಲ 10 ಜನರಿಗೆ ಮಾತ್ರ ಪರಿಹಾರ ಧನ ನೀಡಲಾಗಿತ್ತು.. ಇನ್ನುಳಿದ 14 ಜನರಿಗೂ ಪರಿಹಾರ ಧನ ನೀಡಬೇಕೆಂಬ ಒತ್ತಾಯ ಬಂದ ಹಿನ್ನೆಲೆ, ಸಮಿತಿಯು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು..‌
ಇದೀಗ ಉಳಿದ ಸಂತ್ರಸ್ತರಿಗೂ ಸರ್ಕಾರದಿಂದ
ಎರಡನೇ ಹಂತದಲ್ಲಿ ಪರಿಹಾರ ಧನ ಬಿಡುಗಡೆಗೆ
ಗ್ರೀನ್ ಸಿಗ್ನಲ್ ಸಿಕ್ಕಿದೆ..

ಡಿಸಿಎಂ ಅಶ್ವಥ್ ನಾರಾಯಣ್‌ರಿಂದ ಸಂತ್ರಸ್ತರಿಗೆ ಹಣ‌ ಬಿಡುಗಡೆಗೆ ಅಸ್ತು ಅಂದಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ‌‌.. ಇನ್ನು ಒಂದು ವಾರದಲ್ಲಿ ಸಂತ್ರಸ್ತರಿಗೆ ಹಣ ಸೇರಿಸುವಂತೆ ಸೂಚನೆ ನೀಡಿದ್ದಾರೆ.‌

ಈಗಾಗಲೇ, ಸಂಪೂರ್ಣ ಕಣ್ಣು ಕಳೆದು -ಕೊಂಡವರಿಗೆ 3 ಲಕ್ಷ ರೂಪಾಯಿ, ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ಹಾಗೂ ಮೈನರ್ ಇಂಜ್ಯುರಿಯಾಗಿರುವವರಿಗೆ ತಲಾ 1 ಲಕ್ಷ ಹಣ ನೀಡಲು ಮುಂದಾಗಿದ್ದಾರೆ.. ಇನ್ನು ಒಂದು ವಾರದಲ್ಲಿ ಅವರಿಗೆ ಪರಿಹಾರ ಹಣ ಕೈಸೇರಲಿದೆ ಅಂತ ಮಿಂಟೋ ಆಸ್ಪತ್ರೆಯ ನಿರ್ದೇಶಕರು ಬಿ ಎಲ್ ಸುಜತಾ ರಾಥೋಡ್ ತಿಳಿಸಿದ್ದಾರೆ..‌

Byte; ಬಿ ಎಲ್ ಸುಜತಾ ರಾಥೋಡ್ - ಮಿಂಟೋ ಆಸ್ಪತ್ರೆ ನಿರ್ದೇಶಕರು

KN_BNG_2_MINTO_FOUND_RELEASE_SCRIPT_7201801

Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.