ETV Bharat / city

ಖಾಸಗಿ ಕಂಪನಿ ಅಧಿಕಾರಿ ಸೋಗಲ್ಲಿ ವೃದ್ಧೆಗೆ ಕೋಟಿ ರೂ ವಂಚನೆ! - Fraud to old woman in Bangalore

ತಂತ್ರಜ್ಞಾನ ಬೆಳೆದಂತೆ‌ ಆನ್​ಲೈನ್ ವಂಚನೆ‌ ಪ್ರಕರಣಗಳು ದಿನೇ ದಿನೆ ಅಧಿಕವಾಗುತ್ತಿದೆ. ಹೊಸ ಹೊಸ ಐಡಿಯಾ ಬಳಸಿಕೊಂಡು ವಂಚಕರು ಜನರಿಗೆ ಲಾಟರಿ ಹೆಸರಿನಲ್ಲಿ‌ ಸಹಸ್ರಾರು ಕೋಟಿ ರೂಪಾಯಿ ಟೋಪಿ ಹಾಕುತ್ತಿದ್ದಾರೆ.‌

Fraud of 1.67 crore rs. to old woman in Bangalore
ವಂಚನೆ
author img

By

Published : Feb 15, 2020, 7:45 PM IST

ಬೆಂಗಳೂರು: ನಗರದ ವೃದ್ಧೆಯೊಬ್ಬರಿಗೆ ಲಾಟರಿ ಬಂದಿದೆ‌ ಎಂದು‌ ಆಸೆ ತೋರಿಸಿ 1.67 ಕೋಟಿ‌ ರೂ. ವಂಚನೆಯಾಗಿದೆ.

ಅಂಬುಜಾಕ್ಷಿ ಶ್ರೀನಿವಾಸ್ ಹಣ ಕಳೆದುಕೊಂಡ ವೃದ್ದೆ. ಕೆಲ ದಿನಗಳ ಹಿಂದೆ ಅಂಬುಜಾಕ್ಷಿ ಎಂಬುವವರಿಗೆ ಸ್ಯಾಮ್​ಸಂಗ್​ ಕಂಪನಿ ಹೆಸರಿನಲ್ಲಿ ವಂಚಕ‌‌ ಕರೆ ಮಾಡಿದ್ದಾನೆ.‌ ಕಂಪನಿಯಿಂದ ಪ್ರತಿವರ್ಷ ಲಾಟರಿ ನಡೆಸುತ್ತೇವೆ. ಲಾಟರಿಯಲ್ಲಿ ಆಯ್ಕೆಯಾದವರಿಗೆ ಬಹುಮಾನ ನೀಡುತ್ತೇವೆ.‌ ಅದೇ ರೀತಿ ಈ ಬಾರಿ ಲಾಟರಿಯಲ್ಲಿ ನೀವೂ ಆಯ್ಕೆಯಾಗಿದ್ದು,10 ಲಕ್ಷ ಪೌಂಡ್ (93.80 ಕೋಟಿ ರೂ.) ನಿಮ್ಮದಾಗಲಿದೆ ಎಂದು ನಂಬಿಸಿದ್ದಾನೆ.

ಹಣ ಪಡೆಯಲು ಲೀಗಲ್ ಚಾರ್ಜ್​ಗಾಗಿ‌ 1.97 ಕೋಟಿ ರೂ. ಪಾವತಿಸಬೇಕೆಂದು ಕರೆಯಲ್ಲಿ ಹೇಳಿದ್ದಾನೆ. ಬಹುಮಾನ ಬಂದಿರುವುದಾಗಿ ನಂಬಿದ ವೃದ್ಧೆ ವಂಚಕನ‌ ಮಾತಿಗೆ‌ ಕಿವಿಗೊಟ್ಟಿದ್ದಾರೆ. ಹಂತ-ಹಂತವಾಗಿ ಆರೋಪಿಯ ಬ್ಯಾಂಕ್ ಖಾತೆಗೆ 1.97 ಕೋಟಿ ರೂ. ಪಾವತಿಸಿದ್ದಾಳೆ‌. ಹಣ ಪಡೆಯುತ್ತಿದ್ದಂತೆ ವಂಚಕ ವೃದ್ಧೆಯೊಂದಿಗೆ ಸಂಪರ್ಕ‌ ಕಡಿತಗೊಳಿಸಿದ್ದಾನೆ. ಬಹುಮಾನದ ಆಸೆ ಹೊಂದಿದ್ದ ವೃದ್ಧೆಗೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ‌ ಸಂಬಂಧ ಬೆಂಗಳೂರಿನ‌‌ ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ.

ಬೆಂಗಳೂರು: ನಗರದ ವೃದ್ಧೆಯೊಬ್ಬರಿಗೆ ಲಾಟರಿ ಬಂದಿದೆ‌ ಎಂದು‌ ಆಸೆ ತೋರಿಸಿ 1.67 ಕೋಟಿ‌ ರೂ. ವಂಚನೆಯಾಗಿದೆ.

ಅಂಬುಜಾಕ್ಷಿ ಶ್ರೀನಿವಾಸ್ ಹಣ ಕಳೆದುಕೊಂಡ ವೃದ್ದೆ. ಕೆಲ ದಿನಗಳ ಹಿಂದೆ ಅಂಬುಜಾಕ್ಷಿ ಎಂಬುವವರಿಗೆ ಸ್ಯಾಮ್​ಸಂಗ್​ ಕಂಪನಿ ಹೆಸರಿನಲ್ಲಿ ವಂಚಕ‌‌ ಕರೆ ಮಾಡಿದ್ದಾನೆ.‌ ಕಂಪನಿಯಿಂದ ಪ್ರತಿವರ್ಷ ಲಾಟರಿ ನಡೆಸುತ್ತೇವೆ. ಲಾಟರಿಯಲ್ಲಿ ಆಯ್ಕೆಯಾದವರಿಗೆ ಬಹುಮಾನ ನೀಡುತ್ತೇವೆ.‌ ಅದೇ ರೀತಿ ಈ ಬಾರಿ ಲಾಟರಿಯಲ್ಲಿ ನೀವೂ ಆಯ್ಕೆಯಾಗಿದ್ದು,10 ಲಕ್ಷ ಪೌಂಡ್ (93.80 ಕೋಟಿ ರೂ.) ನಿಮ್ಮದಾಗಲಿದೆ ಎಂದು ನಂಬಿಸಿದ್ದಾನೆ.

ಹಣ ಪಡೆಯಲು ಲೀಗಲ್ ಚಾರ್ಜ್​ಗಾಗಿ‌ 1.97 ಕೋಟಿ ರೂ. ಪಾವತಿಸಬೇಕೆಂದು ಕರೆಯಲ್ಲಿ ಹೇಳಿದ್ದಾನೆ. ಬಹುಮಾನ ಬಂದಿರುವುದಾಗಿ ನಂಬಿದ ವೃದ್ಧೆ ವಂಚಕನ‌ ಮಾತಿಗೆ‌ ಕಿವಿಗೊಟ್ಟಿದ್ದಾರೆ. ಹಂತ-ಹಂತವಾಗಿ ಆರೋಪಿಯ ಬ್ಯಾಂಕ್ ಖಾತೆಗೆ 1.97 ಕೋಟಿ ರೂ. ಪಾವತಿಸಿದ್ದಾಳೆ‌. ಹಣ ಪಡೆಯುತ್ತಿದ್ದಂತೆ ವಂಚಕ ವೃದ್ಧೆಯೊಂದಿಗೆ ಸಂಪರ್ಕ‌ ಕಡಿತಗೊಳಿಸಿದ್ದಾನೆ. ಬಹುಮಾನದ ಆಸೆ ಹೊಂದಿದ್ದ ವೃದ್ಧೆಗೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ‌ ಸಂಬಂಧ ಬೆಂಗಳೂರಿನ‌‌ ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.