ETV Bharat / city

ಹಲವು ಬೇಡಿಕೆಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಎಫ್‍ಕೆಸಿಸಿಐ ನಿಯೋಗ: ಮನವಿ ಪತ್ರ ಸಲ್ಲಿಕೆ

author img

By

Published : Jul 3, 2021, 1:53 AM IST

ಬಂಡವಾಳವನ್ನು ಸಂಗ್ರಹಿಸುವಾಗ ಖಾಸಗಿ ಉದ್ಯೋಗ ನಿಬಂಧನೆಗಳಿಗೆ ಅನುಸಾರವಾಗಿ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ವಿಧಾನದಿಂದ ವಿನಾಯಿತಿ ನೀಡುವ ಮೂಲಕ ಸ್ಟಾರ್ಟ್-ಆಪ್‍ಗಳನ್ನು ಬೆಂಬಲಿಸಬೇಕು ಎಂದು ಎಫ್‍ಕೆಸಿಸಿಐ ಕೇಂದ್ರ ಹಣಕಾಸು ಸಚಿವೆಗೆ ಮನವಿ ಮಾಡಿದೆ.

fkcci-deligation-meet-central-finance-minister-nirmala-seetraman-on-her-visit-to-bangalore
ಹಲವು ಬೇಡಿಕೆಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಎಫ್‍ಕೆಸಿಸಿಐ ನಿಯೋಗ: ಮನವಿ ಪತ್ರ ಸಲ್ಲಿಕೆ

ಬೆಂಗಳೂರು: ಎಫ್‍ಕೆಸಿಸಿಐ( ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ) ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಮತ್ತು ಹಿರಿಯ ಉಪಾಧ್ಯಕ್ಷ ಡಾ. ಐ.ಎಸ್.ಪ್ರಸಾದ್, ಉಪಾಧ್ಯಕ್ಷ ಬಿ.ವಿ ಗೋಪಾಲ್ ರೆಡ್ಡಿ ಹಾಗೂ ಬ್ಯಾಂಕಿಂಗ್ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ಪ್ರಭುದೇವ್ ಆರಾಧ್ಯ, ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‍ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರವನ್ನು ಬೆಂಗಳೂರಿನಲ್ಲಿ ಸಲ್ಲಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಎಂಎಸ್‍ಎಂಇ ವಲಯವನ್ನು ಸುಧಾರಿಸಲು ಮತ್ತು ಕಾರ್ಪೋರೇಟ್ ವ್ಯವಹಾರಗಳಲ್ಲಿನ ಕಾರ್ಯವಿಧಾನಗಳಲ್ಲಿ ಸುಧಾರಣೆಗಳನ್ನು ತರಲು ಹಲವು ವಿಷಯಗಳ ಕುರಿತು ಚರ್ಚಿಸಿದರು.

ಕೆಲವು ವರ್ಷಗಳವರೆಗೆ ಎಂಎಸ್‍ಎಂಇಗಳಿಗಾಗಿ ಎನ್‍ಪಿಎ ಮಾನದಂಡಗಳ ಅನ್ವಯ ಮುಂದೂಡಿಕೆ, ಎಂಎಸ್‍ಎಂಇಗಳಿಗೆ ಎರಡು ವರ್ಷಗಳ ಅವಧಿಗೆ ಸಿಬಿಲ್ ರೇಟಿಂಗ್ ಅನ್ನು ಮುಂದೂಡುವುದು, ಹೊಸ ಸಾಲಗಳನ್ನು ಮಂಜೂರು ಮಾಡಲು ಮತ್ತು ಅಸ್ತಿತ್ವದಲ್ಲಿರುವ ಸಾಲಗಳ ವರ್ಧನೆ ಪ್ರಕ್ರಿಯಾ ಶುಲ್ಕವನ್ನು ಮನ್ನಾ ಮಾಡುವುದು, ಹೆಚ್ಚುವರಿ ಸಾಲಕ್ಕೆ ಹೆಚ್ಚುವರಿ ಭದ್ರತೆಗೆ ಒತ್ತಾಯಿಸದಿರುವುದು, ಈ ರೀತಿ ಹಲವು ಬೇಡಿಕೆಗಳನ್ನು ವಿತ್ತ ಸಚಿವೆಯ ಎದುರು ಇಟ್ಟರು.

ಆರ್ಥಿಕ ಕ್ಷೇತ್ರಗಳಾದ ಗಾರ್ಮೆಂಟ್ಸ್, ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಅತಿಥ್ಯ, ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಸೇವೆಗಳಿಗೆ ಆರ್ಥಿಕ ಉತ್ತೇಜನ ನೀಡುವುದು. ದೈನಂದಿನ ಅಗತ್ಯಗಳಿಗೆ ಅಗತ್ಯವಾದ ಸರಕುಗಳ ಮೇಲಿನ ಜಿಎಸ್‍ಟಿಯನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರ ದರವನ್ನು ತಗ್ಗಿಸುವುದು, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ಅಡಿಯಲ್ಲಿ ತರುವುದು, ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ರಚಿಸಿ ಪ್ರಮುಖ ಬ್ಯಾಂಕುಗಳಲ್ಲಿ ಮತ್ತು ಪಿಎಸ್‍ಯುಗಳ ಮಂಡಳಿಗಳಲ್ಲಿ ಎಫ್‍ಕೆಸಿಸಿಐಗೆ ಪ್ರಾತಿನಿಧ್ಯವನ್ನು ಒದಗಿಸುವುದು. ಕಾರ್ಪೋರೇಟ್ ವ್ಯವಹಾರಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಈ ಕೆಳಗಿನ ವಿಷಯಗಳ ವಿನಂತಿಯನ್ನು ಸಲ್ಲಿಸಿದರು.

ಇದನ್ನೂ ಓದಿ: ಮಾನಹಾನಿಕಾರಕ ವರದಿ ಪ್ರಕಟಿಸದಂತೆ ತಡೆಯಾಜ್ಞೆ ತರಲು ಕಾರಣ ಬಹಿರಂಗಪಡಿಸಿದ ಡಿವಿಎಸ್​

ಬಂಡವಾಳವನ್ನು ಸಂಗ್ರಹಿಸುವಾಗ ಖಾಸಗಿ ಉದ್ಯೋಗ ನಿಬಂಧನೆಗಳಿಗೆ ಅನುಸಾರವಾಗಿ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ವಿಧಾನದಿಂದ ವಿನಾಯಿತಿ ನೀಡುವ ಮೂಲಕ ಸ್ಟಾರ್ಟ್-ಆಪ್‍ಗಳನ್ನು ಬೆಂಬಲಿಸಬೇಕು. ಸರಣಿ ಫಂಡಿಂಗ್ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಏಂಜಲ್ ಹೂಡಿಕೆದಾರರಿಗೆ ಷೇರುಗಳನ್ನು ಹಂಚಿಕೆ ಮಾಡಲು ಅವಕಾಶ ಮಾಡಿಕೊಡುವುದು ಸೇರಿ ಕಂಪನಿಗಳ ಹೊಸ ಆರಂಭಿಕ ಯೋಜನೆ ಮತ್ತು ಎಲ್‍ಎಲ್‍ಸಿ ಸೆಟ್ಲ್ಮೆಂಟ್ ಸ್ಕೀಮ್ ಅನ್ನು ಮರಳಿ ತರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಲಿಮಿಟೆಡ್ ಕಂಪನಿಯಿಂದ ರೂ.20 ಲಕ್ಷದವರೆಗೆ ಸಾಲ ತೆಗೆದುಕೊಳ್ಳುವ ನಿರ್ಬಂಧಗಳನ್ನು ತೆಗೆದುಹಾಕುವುದು. ಇಕೆವೈಸಿ ಶುಲ್ಕವನ್ನು ರೂ. 5000ರಿಂದ 500ಕ್ಕೆ ಕಡಿಮೆ ಮಾಡುಬೇಕು. 2020-21ರ ಆರ್ಥಿಕ ವರ್ಷಕ್ಕೆ ಎಲ್ಲಾ ಲೇಟ್ ಫೈಲಿಂಗ್ ಶುಲ್ಕವನ್ನು ಮನ್ನಾ ಮಾಡುವುದು. ಎಫ್‍ಎಲ್‍ಎ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲ ವಿಸ್ತರಣೆ, ಶೆಡ್ಯೂಲ್ 3 ಅನ್ನು ಒಂದು ವರ್ಷದ ಅವಧಿಗೆ ಬದಲಾವಣೆ ಮಾಡುವುದರ ಬಗ್ಗೆ ಚರ್ಚೆ ಕೂಡ ನಡೆಸಿದರು.

ಈ ಎಲ್ಲಾ ವಿಷಯಗಳ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಕೂಲಂಕಷವಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧರಿಸುತ್ತೇನೆಂದು ಎಫ್‍ಕೆಸಿಸಿಐ ನಿಯೋಗಕ್ಕೆ ಭರವಸೆ ನೀಡಿದರು ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್.ಎಂ.ಸುಂದರ್ ತಿಳಿಸಿದರು.

ಬೆಂಗಳೂರು: ಎಫ್‍ಕೆಸಿಸಿಐ( ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ) ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಮತ್ತು ಹಿರಿಯ ಉಪಾಧ್ಯಕ್ಷ ಡಾ. ಐ.ಎಸ್.ಪ್ರಸಾದ್, ಉಪಾಧ್ಯಕ್ಷ ಬಿ.ವಿ ಗೋಪಾಲ್ ರೆಡ್ಡಿ ಹಾಗೂ ಬ್ಯಾಂಕಿಂಗ್ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ಪ್ರಭುದೇವ್ ಆರಾಧ್ಯ, ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‍ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರವನ್ನು ಬೆಂಗಳೂರಿನಲ್ಲಿ ಸಲ್ಲಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಎಂಎಸ್‍ಎಂಇ ವಲಯವನ್ನು ಸುಧಾರಿಸಲು ಮತ್ತು ಕಾರ್ಪೋರೇಟ್ ವ್ಯವಹಾರಗಳಲ್ಲಿನ ಕಾರ್ಯವಿಧಾನಗಳಲ್ಲಿ ಸುಧಾರಣೆಗಳನ್ನು ತರಲು ಹಲವು ವಿಷಯಗಳ ಕುರಿತು ಚರ್ಚಿಸಿದರು.

ಕೆಲವು ವರ್ಷಗಳವರೆಗೆ ಎಂಎಸ್‍ಎಂಇಗಳಿಗಾಗಿ ಎನ್‍ಪಿಎ ಮಾನದಂಡಗಳ ಅನ್ವಯ ಮುಂದೂಡಿಕೆ, ಎಂಎಸ್‍ಎಂಇಗಳಿಗೆ ಎರಡು ವರ್ಷಗಳ ಅವಧಿಗೆ ಸಿಬಿಲ್ ರೇಟಿಂಗ್ ಅನ್ನು ಮುಂದೂಡುವುದು, ಹೊಸ ಸಾಲಗಳನ್ನು ಮಂಜೂರು ಮಾಡಲು ಮತ್ತು ಅಸ್ತಿತ್ವದಲ್ಲಿರುವ ಸಾಲಗಳ ವರ್ಧನೆ ಪ್ರಕ್ರಿಯಾ ಶುಲ್ಕವನ್ನು ಮನ್ನಾ ಮಾಡುವುದು, ಹೆಚ್ಚುವರಿ ಸಾಲಕ್ಕೆ ಹೆಚ್ಚುವರಿ ಭದ್ರತೆಗೆ ಒತ್ತಾಯಿಸದಿರುವುದು, ಈ ರೀತಿ ಹಲವು ಬೇಡಿಕೆಗಳನ್ನು ವಿತ್ತ ಸಚಿವೆಯ ಎದುರು ಇಟ್ಟರು.

ಆರ್ಥಿಕ ಕ್ಷೇತ್ರಗಳಾದ ಗಾರ್ಮೆಂಟ್ಸ್, ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಅತಿಥ್ಯ, ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಸೇವೆಗಳಿಗೆ ಆರ್ಥಿಕ ಉತ್ತೇಜನ ನೀಡುವುದು. ದೈನಂದಿನ ಅಗತ್ಯಗಳಿಗೆ ಅಗತ್ಯವಾದ ಸರಕುಗಳ ಮೇಲಿನ ಜಿಎಸ್‍ಟಿಯನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರ ದರವನ್ನು ತಗ್ಗಿಸುವುದು, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ಅಡಿಯಲ್ಲಿ ತರುವುದು, ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ರಚಿಸಿ ಪ್ರಮುಖ ಬ್ಯಾಂಕುಗಳಲ್ಲಿ ಮತ್ತು ಪಿಎಸ್‍ಯುಗಳ ಮಂಡಳಿಗಳಲ್ಲಿ ಎಫ್‍ಕೆಸಿಸಿಐಗೆ ಪ್ರಾತಿನಿಧ್ಯವನ್ನು ಒದಗಿಸುವುದು. ಕಾರ್ಪೋರೇಟ್ ವ್ಯವಹಾರಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಈ ಕೆಳಗಿನ ವಿಷಯಗಳ ವಿನಂತಿಯನ್ನು ಸಲ್ಲಿಸಿದರು.

ಇದನ್ನೂ ಓದಿ: ಮಾನಹಾನಿಕಾರಕ ವರದಿ ಪ್ರಕಟಿಸದಂತೆ ತಡೆಯಾಜ್ಞೆ ತರಲು ಕಾರಣ ಬಹಿರಂಗಪಡಿಸಿದ ಡಿವಿಎಸ್​

ಬಂಡವಾಳವನ್ನು ಸಂಗ್ರಹಿಸುವಾಗ ಖಾಸಗಿ ಉದ್ಯೋಗ ನಿಬಂಧನೆಗಳಿಗೆ ಅನುಸಾರವಾಗಿ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ವಿಧಾನದಿಂದ ವಿನಾಯಿತಿ ನೀಡುವ ಮೂಲಕ ಸ್ಟಾರ್ಟ್-ಆಪ್‍ಗಳನ್ನು ಬೆಂಬಲಿಸಬೇಕು. ಸರಣಿ ಫಂಡಿಂಗ್ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಏಂಜಲ್ ಹೂಡಿಕೆದಾರರಿಗೆ ಷೇರುಗಳನ್ನು ಹಂಚಿಕೆ ಮಾಡಲು ಅವಕಾಶ ಮಾಡಿಕೊಡುವುದು ಸೇರಿ ಕಂಪನಿಗಳ ಹೊಸ ಆರಂಭಿಕ ಯೋಜನೆ ಮತ್ತು ಎಲ್‍ಎಲ್‍ಸಿ ಸೆಟ್ಲ್ಮೆಂಟ್ ಸ್ಕೀಮ್ ಅನ್ನು ಮರಳಿ ತರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಲಿಮಿಟೆಡ್ ಕಂಪನಿಯಿಂದ ರೂ.20 ಲಕ್ಷದವರೆಗೆ ಸಾಲ ತೆಗೆದುಕೊಳ್ಳುವ ನಿರ್ಬಂಧಗಳನ್ನು ತೆಗೆದುಹಾಕುವುದು. ಇಕೆವೈಸಿ ಶುಲ್ಕವನ್ನು ರೂ. 5000ರಿಂದ 500ಕ್ಕೆ ಕಡಿಮೆ ಮಾಡುಬೇಕು. 2020-21ರ ಆರ್ಥಿಕ ವರ್ಷಕ್ಕೆ ಎಲ್ಲಾ ಲೇಟ್ ಫೈಲಿಂಗ್ ಶುಲ್ಕವನ್ನು ಮನ್ನಾ ಮಾಡುವುದು. ಎಫ್‍ಎಲ್‍ಎ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲ ವಿಸ್ತರಣೆ, ಶೆಡ್ಯೂಲ್ 3 ಅನ್ನು ಒಂದು ವರ್ಷದ ಅವಧಿಗೆ ಬದಲಾವಣೆ ಮಾಡುವುದರ ಬಗ್ಗೆ ಚರ್ಚೆ ಕೂಡ ನಡೆಸಿದರು.

ಈ ಎಲ್ಲಾ ವಿಷಯಗಳ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಕೂಲಂಕಷವಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧರಿಸುತ್ತೇನೆಂದು ಎಫ್‍ಕೆಸಿಸಿಐ ನಿಯೋಗಕ್ಕೆ ಭರವಸೆ ನೀಡಿದರು ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್.ಎಂ.ಸುಂದರ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.