ETV Bharat / city

ರಾಕ್ಷಸ ರಾಜಕಾರಣ ಕೊನೆಗಾಣಿಸಲು ಬಿಜೆಪಿ ಸೇರ್ಪಡೆ: ಹೆಚ್.ವಿಶ್ವನಾಥ್ - H Vishwanath reaction after joining BJP

ಇದು ಪಕ್ಷಾಂತರ ಅಲ್ಲ. ರಾಜಕೀಯ ದೃವೀಕರಣ. ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗಾಣಿಸಲು ನಾವು ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇಂದು ರಾಜಕೀಯ ಪಕ್ಷಗಳು ವಿಫಲವಾಗಿವೆ. ಪಕ್ಷ ರಾಜಕಾರಣ ವಿಫಲವಾಗಿದೆ. ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಹೆಚ್​ ವಿಶ್ವನಾಥ್
author img

By

Published : Nov 14, 2019, 12:46 PM IST

ಬೆಂಗಳೂರು: ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗಾಣಿಸಲು ನಾವು ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಇಂದು ಬಿಜೆಪಿ ಸೇರಿದ‌ ಬಳಿಕ ಮಾತನಾಡಿದ ಅವರು, ಇದು ಪಕ್ಷಾಂತರ ಅಲ್ಲ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ 26 ಬಿಜೆಪಿಯ ಸಂಸದರು ಗೆದ್ದರಲ್ಲ. ಹಾಗಾದರೆ ಜನರೆಲ್ಲಾ ಪಕ್ಷಾಂತರವಾದರಾ? ಅಲ್ಲ, ಇದು ರಾಜಕೀಯ ದೃವೀಕರಣ ಎಂದು ಬಿಜೆಪಿ ಸೇರ್ಪಡೆ ನಿರ್ಧಾರವನ್ನು ವಿಶ್ವನಾಥ್​ ವಿಶ್ಲೇಷಣೆ ಮಾಡಿದರು.

ಹೆಚ್.ವಿಶ್ವನಾಥ್, ಅನರ್ಹ ಶಾಸಕ

ಇಂದು ರಾಜಕೀಯ ಪಕ್ಷಗಳು ವಿಫಲವಾಗಿವೆ. ಪಕ್ಷ ರಾಜಕಾರಣ ವಿಫಲವಾಗಿದೆ. ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು. ಇಡೀ‌ ದೇಶದಲ್ಲೇ‌ ರಾಜಕೀಯ ದೃವೀಕರಣ ಆಗಿದೆ. ಅದರಂತೆ ಇಲ್ಲಿಯೂ ಆಗಿದೆ ಎಂದರು.

17 ಜನರಿಗೆ ಶಿಕ್ಷೆ ಕೊಡಲೇಬೇಕು ಎಂದು ಅಂದಿನ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್, ಜೆಡಿಎಸ್ ಸೇರಿಕೊಂಡು ರಾಜ್ಯ ರಾಜಕಾರಣದಿಂದ‌ ನಮ್ಮನ್ನು ಹೊರಗಿಡಬೇಕು. ಯಾವ ಅಧಿಕಾರ ಸಿಗಬಾರದು. ಚುನಾವಣೆಗೆ ನಿಲ್ಲಬಾರದು ಎಂದು ಹುನ್ನಾರ ನಡೆಸಿದರು. ಆದರೆ ಅದನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಮೋದಿ ಹೊಸ ಕನಸುಗಳ ಅನ್ವೇಷಣೆಯಲ್ಲಿ‌ ಇದ್ದಾರೆ. ಹಾಗಾಗಿ ಅವರಿಗಾಗಿ ಕೈ ಜೋಡಿಸಲು, ಅವರೊಟ್ಟಿಗೆ ಹೆಜ್ಜೆ ಹಾಕುವ ಸಲುವಾಗಿ ನಾವು ಬಿಜೆಪಿ ಸೇರಿದ್ದೇವೆ. ಬಿಎಸ್​ವೈ, ಕಟೀಲ್ ಕಂಡ‌ ಕನಸಿನ ಕರ್ನಾಟಕ‌ ನಿರ್ಮಾಣಕ್ಕೆ ಅನರ್ಹ ಶಾಸಕರು ಬಿಜೆಪಿಗೆ ಬಂದಿದ್ದೇವೆ ಎಂದರು.

ಬೆಂಗಳೂರು: ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗಾಣಿಸಲು ನಾವು ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಇಂದು ಬಿಜೆಪಿ ಸೇರಿದ‌ ಬಳಿಕ ಮಾತನಾಡಿದ ಅವರು, ಇದು ಪಕ್ಷಾಂತರ ಅಲ್ಲ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ 26 ಬಿಜೆಪಿಯ ಸಂಸದರು ಗೆದ್ದರಲ್ಲ. ಹಾಗಾದರೆ ಜನರೆಲ್ಲಾ ಪಕ್ಷಾಂತರವಾದರಾ? ಅಲ್ಲ, ಇದು ರಾಜಕೀಯ ದೃವೀಕರಣ ಎಂದು ಬಿಜೆಪಿ ಸೇರ್ಪಡೆ ನಿರ್ಧಾರವನ್ನು ವಿಶ್ವನಾಥ್​ ವಿಶ್ಲೇಷಣೆ ಮಾಡಿದರು.

ಹೆಚ್.ವಿಶ್ವನಾಥ್, ಅನರ್ಹ ಶಾಸಕ

ಇಂದು ರಾಜಕೀಯ ಪಕ್ಷಗಳು ವಿಫಲವಾಗಿವೆ. ಪಕ್ಷ ರಾಜಕಾರಣ ವಿಫಲವಾಗಿದೆ. ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು. ಇಡೀ‌ ದೇಶದಲ್ಲೇ‌ ರಾಜಕೀಯ ದೃವೀಕರಣ ಆಗಿದೆ. ಅದರಂತೆ ಇಲ್ಲಿಯೂ ಆಗಿದೆ ಎಂದರು.

17 ಜನರಿಗೆ ಶಿಕ್ಷೆ ಕೊಡಲೇಬೇಕು ಎಂದು ಅಂದಿನ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್, ಜೆಡಿಎಸ್ ಸೇರಿಕೊಂಡು ರಾಜ್ಯ ರಾಜಕಾರಣದಿಂದ‌ ನಮ್ಮನ್ನು ಹೊರಗಿಡಬೇಕು. ಯಾವ ಅಧಿಕಾರ ಸಿಗಬಾರದು. ಚುನಾವಣೆಗೆ ನಿಲ್ಲಬಾರದು ಎಂದು ಹುನ್ನಾರ ನಡೆಸಿದರು. ಆದರೆ ಅದನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಮೋದಿ ಹೊಸ ಕನಸುಗಳ ಅನ್ವೇಷಣೆಯಲ್ಲಿ‌ ಇದ್ದಾರೆ. ಹಾಗಾಗಿ ಅವರಿಗಾಗಿ ಕೈ ಜೋಡಿಸಲು, ಅವರೊಟ್ಟಿಗೆ ಹೆಜ್ಜೆ ಹಾಕುವ ಸಲುವಾಗಿ ನಾವು ಬಿಜೆಪಿ ಸೇರಿದ್ದೇವೆ. ಬಿಎಸ್​ವೈ, ಕಟೀಲ್ ಕಂಡ‌ ಕನಸಿನ ಕರ್ನಾಟಕ‌ ನಿರ್ಮಾಣಕ್ಕೆ ಅನರ್ಹ ಶಾಸಕರು ಬಿಜೆಪಿಗೆ ಬಂದಿದ್ದೇವೆ ಎಂದರು.

Intro:


ಬೆಂಗಳೂರು:ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗಾಣಿಸಲು ನಾವು ಶಾಸಕ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸೇರಿದ‌ ನಂತರ ಮಾತನಾಡಿದ ಅವರು, ಇದು ಪಕ್ಷಾಂತರ ಅಲ್ಲ, ರಾಜ್ಯದಲ್ಲಿ 28 ಕ್ಷೇತ್ರಗಳಲ್ಲ 26 ಸಂಸದರು ಬಿಜೆಪಿಯವರು ಗೆದ್ದರಲ್ಲ ಹಾಗಾದರೆ ಜನರೆಲ್ಲಾ ಪಕ್ಷಾಂತರವಾದರಾ ಅಲ್ಲ ಇದು ರಾಜಕೀಯ ದೃವೀಕರಣ ಎಂದು ಬಿಜೆಪಿ ಸೇರ್ಪಡೆ ನಿರ್ಧಾರವನ್ನು ವಿಶ್ಲೇಷಣೆ ಮಾಡಿದರು.

ಇಂದು ರಾಜಕೀಯ ಪಕ್ಷಗಳು ವಿಫಲವಾಗಿವೆ, ಪಕ್ಷ ರಾಜಕಾರಣ ವಿಫಲವಾಗಿದೆ ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು, ಇಡೀ‌ ದೇಶದಲ್ಲೇ‌ ರಾಜಕೀಯ ದೃವೀಕರಣ ಆಗಿದೆ ಅದರಂತೆ ಇಲ್ಲಿಯೂ ಆಗಿದೆ ಎಂದರು.

17 ಜನರಿಗೆ ಶಿಕ್ಷೆ ಕೊಡಲೇ ಬೇಕು ಎಂದು ಅಂದಿನ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್, ಜೆಡಿಎಸ್ ರಾಜ್ಯ ರಾಜಕಾರಣದಿಂದ‌ ನಮ್ಮನ್ನು ಹೊರಗಿಡಬೇಕು, ಯಾವ ಅಧಿಕಾರ ಸಿಗಬಾರದು, ಚುನಾವಣೆಗೆ ನಿಲ್ಲಬಾರದು ಎಂದು ಹುನ್ನಾರ ನಡೆಸಿದರರು ಆದರೆ ಅದನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.ಮೋದಿ ಹೊಸ ಕನಸುಗಳ ಅನ್ವೇಷಣೆಯಲ್ಲಿ‌ ಇದ್ದಾರೆ ಹಾಗಾಗಿ ಅವರಿಗಾಗಿ ಕೈ ಜೋಡಿಸಲು, ಅವರೊಟ್ಟಿಗೆ ಹೆಜ್ಜೆಗಳನ್ನು ಹಾಕುವ ಸಲುವಾಗಿ ನಾವು ಬಿಜೆಪಿ ಸೇರಿದ್ದೇವೆ, ಬಿಎಸ್ವೈ, ಕಟೀಲ್ ಕಂಡ‌ ಕನಸಿನ ಕರ್ನಾಟಕ‌ ನಿರ್ಮಾಣಕ್ಕೆ ಅನರ್ಹ ಶಾಸಕರು ಬಿಜೆಪಿಗೆ ಬಂದಿದ್ದೇವೆ ಎಂದರು.

ನಂತರ ಮಾತನಾಡಿದ ಡಾ.ಸುಧಾಕರ್,ಕೇವಲ ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡಿತು, ಕೇವಲ ಬಿಜೆಪಿ ಅಧಿಕಾರದಿಂದ ದೂರವಿಡಲು ಹೊಂದಾಣಿಕೆ ಮಾಡಿಕೊಂಡಿತ್ತು., ನಮ್ಮ‌ ಕ್ಷೇತ್ರದ ಅಭಿವೃದ್ಧಿ, ನಮ್ಮ ಭರವಸೆ ನನ್ಮ ನಿರೀಕ್ಷೆಗೆ ಅನುಗುಣವಾಗಿ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು‌ ಸಾಧ್ಯವಾಗಲಿಲ್ಲ ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು. ಕೆಲವರು ಹೇಳಿದಂತೆ ಮಾತ್ರ ಸರ್ಕಾರ‌ ನಡೆಯುತ್ತಿತ್ತು. ನಾವು ಬೇರೆ ನಾಯಕರ ಅವಲಂಬಿತರಾಗಿ, ಬೇರ ನಾಯಕರ ಕೃಪಾಕಟಾಕ್ಷದಿಂದ ಗೆದ್ದವರಲ್ಲ, ಸ್ವಯಂ ಕೃಷಿಯಿಂದ ಗೆದ್ದವರು ನಾವು, ಸ್ವಾಭಿಮಾನಕ್ಕೆ‌ ದಕ್ಕೆಯಾದ ನಂತರ ಕುರ್ಚಿ ಇದ್ದರೆಷ್ಟು‌ ಇಲ್ಲದೇ ಇದ್ದರೆಷ್ಟು ಎಂದು, ರಾಜ್ಯದ ಭವಿಷ್ಯ ಮುಖ್ಯ ಎಂದು ರಾಜೀನಾಮೆ ಕೊಡಬೇಕಾಯಿತು ಎಂದರು.

ಯಾವುದೇ ಆಸೆ ,ಆಮಿಷಕ್ಕೆ ನಾವು ರಾಜೀನಾಮೆ‌ ಕೊಡಲಿಲ್ಲ, ಆಶಯಕ್ಕಾಗಿ‌ ರಾಜೀನಾಮೆ ನೀಡಿದ್ದೇವೆ, ಮೈತ್ರಿ ಮುರಿದ ನಂತರ ಎರಡೂ ಪಕ್ಷ ಹೇಗೆ ಕಚ್ಚಾಡುತ್ತಿವೆ ಗೊತ್ತಿದೆ,
ಅಂತಃಕರಣದಿಂದ ಬಿಜೆಪಿ ತತ್ವ ಸಿದ್ದಾಂತ ಒಪ್ಪಿ, ಮೋದಿ ನಾಯಕತ್ವದಲ್ಲಿ ನಂಬಿಕೆ ಇಟ್ಟು, ಸಿಎಂ ಬಿಎಸ್ವೈ ಆದರ್ಶ ನಾಯಕತ್ವದಲ್ಲಿ ನಂಬಿಕೆ ಇಟ್ಟು‌ ಶಿಸ್ತುಬದ್ದ ಪಕ್ಷಕ್ಕೆ ಬಂದಿದ್ದೇವೆ ಎಂದರು.

ಇಂತಹಾ ಕ್ರೂರ,ವಿಕೃತ ಮನಸ್ಸಿನಿಂದ ಆದೇಶ ಕೊಟ್ಟ ರಮೇಶ್ ಕುಮಾರ್ ರಂತಹಾ ಸ್ಪೀಕರ್ ಈ ರಾಜ್ಯದ ರಾಜಕಾರಣದಲ್ಲಿ ಮತ್ತೊಮ್ಮೆ ಬರಬಾರದು.ನಮ್ಮ ರಾಜಕೀಯ ಬದುಕನ್ಬೇ ಮುಗಿಸಲು ಹೊರಟಿದ್ದ ಅವರಿಗೆ ಸುಪ್ರಿಂಕೋರ್ಟ್ ತಕ್ಕ ಉತ್ತರ ಕೊಟ್ಟಿದೆ‌.ಸಮ ಸಮಾಜ ನಿರ್ಮಾಣ ಮಾಡಬೇಕಾದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಉಳಿಯಬೇಕು. ಹಾಗಾಗಬೇಕಾದರೆ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕು.ಎಲ್ಲರ ಪ್ರಾರ್ಥನೆ ಫಲಿಸಿದೆ.ನಮಗೆ ನ್ಯಾಯ ಸಿಕ್ಕಿದೆ.ನಾವು ರಾಜ್ಯದ ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇವೆ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.