ETV Bharat / city

ವೃದ್ಧೆಯನ್ನು ನೆಲಕ್ಕೆ ಕೆಡವಿ ಚಿನ್ನದ ಸರ ದೋಚಿದ ಖದೀಮರು! ವಿಡಿಯೋ

author img

By

Published : Jan 21, 2020, 7:19 PM IST

Updated : Jan 21, 2020, 7:47 PM IST

ಹೆಲ್ಮೆಟ್ ಹಾಕಿ ಪಲ್ಸರ್ ಬೈಕ್‌ನಲ್ಲಿ ಬಂದು ಸರಗಳ್ಳತನ ನಡೆಸುತ್ತಿದ್ದ ಬವೇರಿಯಾ ಹಾಗೂ ಇರಾನಿ ಗ್ಯಾಂಗ್ ಇಷ್ಟು ದಿನ ಇಡೀ ಬೆಂಗಳೂರನ್ನ ನಲುಗಿಸಿತ್ತು. ಆದರೆ, ಇದೀಗ ಮತ್ತೊಂದು ಗ್ಯಾಂಗಿನ ಖದೀಮನೊಬ್ಬ ಹೆಲ್ಮೆಟ್ ಧರಿಸದೇ ರಾಜಾರೋಷಾವಾಗಿ ಬಂದು‌ ವೃದ್ಧೆಯ ಚಿನ್ನದ ಸರ ದೋಚಿರುವ ಪ್ರಕರಣ ಕಾಟನ್‌ಪೇಟೆಯಲ್ಲಿ ನಡೆದಿದೆ.

chin-snatching-in-west-division-police-station-bangalore
ಸರಗಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮಿತಿಮೀರಿದೆ. ಕಳ್ಳರು ರಾಜಾರೋಷವಾಗಿ ಬಂದು ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗಿರೋ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‌ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟನ್‌ಪೇಟೆ ನಿವಾಸಿ ಶಾಂತಮ್ಮ ಎಂಬುವರು ಮನೆಯ ಗೇಟ್ ಮುಂದೆ ನಿಂತಿದ್ದರು. ಈ ವೇಳೆ ಅಲ್ಲಿಗೆ ಇಬ್ಬರು ವ್ಯಕ್ತಿಗಳು ಬಂದರು. ಒಬ್ಬ ಹೆಲ್ಮೆಟ್ ಧರಿಸಿದ್ರೆ, ಮತ್ತೊಬ್ಬ ರಾಜಾರೋಷವಾಗಿ ಬಂದಿದ್ದ. ಶಾಂತಮ್ಮ ಗೇಟ್​ ತೆರೆದು ಒಳಗೆ ಹೋಗುತ್ತಿದ್ದಂತೆ ಬೈಕ್‌ ನಿಲ್ಲಿಸಿ ಮೊದಲು ಪರಿಚಿತನಂತೆ ಮಾತನಾಡಿ ತನ್ನತ್ತ ಸೆಳೆದಿದ್ದಾನೆ. ಮೊದಲು ಬೈಕ್‌ನಿಂದ ಈತನನ್ನ ಕೆಳಗಿಳಿಸಿದ್ದ ವ್ಯಕ್ತಿ ಮತ್ತೆ ಅದೇ ಬೈಕ್‌ನಲ್ಲಿ ವಾಪಸ್‌ ಬಂದಿದ್ದ. ಆಗ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಅದೇ ಬೈಕ್‌ನಲ್ಲಿ ಕಳ್ಳರಿಬ್ಬರೂ ಪರಾರಿಯಾಗಿದ್ದಾರೆ.

ಸರಗಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ..

ಸರವನ್ನ ಎಳೆಯೋ ಭರದಲ್ಲಿ ವೃದ್ಧೆ ನೆಲಕ್ಕೆ ಬಿದ್ದರೂ ಲೆಕ್ಕಿಸದೆ ಖದೀಮ ಬೈಕ್‌ ಏರಿ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಶ್ಚಿಮ ವಿಭಾಗದ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮಿತಿಮೀರಿದೆ. ಕಳ್ಳರು ರಾಜಾರೋಷವಾಗಿ ಬಂದು ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗಿರೋ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‌ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟನ್‌ಪೇಟೆ ನಿವಾಸಿ ಶಾಂತಮ್ಮ ಎಂಬುವರು ಮನೆಯ ಗೇಟ್ ಮುಂದೆ ನಿಂತಿದ್ದರು. ಈ ವೇಳೆ ಅಲ್ಲಿಗೆ ಇಬ್ಬರು ವ್ಯಕ್ತಿಗಳು ಬಂದರು. ಒಬ್ಬ ಹೆಲ್ಮೆಟ್ ಧರಿಸಿದ್ರೆ, ಮತ್ತೊಬ್ಬ ರಾಜಾರೋಷವಾಗಿ ಬಂದಿದ್ದ. ಶಾಂತಮ್ಮ ಗೇಟ್​ ತೆರೆದು ಒಳಗೆ ಹೋಗುತ್ತಿದ್ದಂತೆ ಬೈಕ್‌ ನಿಲ್ಲಿಸಿ ಮೊದಲು ಪರಿಚಿತನಂತೆ ಮಾತನಾಡಿ ತನ್ನತ್ತ ಸೆಳೆದಿದ್ದಾನೆ. ಮೊದಲು ಬೈಕ್‌ನಿಂದ ಈತನನ್ನ ಕೆಳಗಿಳಿಸಿದ್ದ ವ್ಯಕ್ತಿ ಮತ್ತೆ ಅದೇ ಬೈಕ್‌ನಲ್ಲಿ ವಾಪಸ್‌ ಬಂದಿದ್ದ. ಆಗ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಅದೇ ಬೈಕ್‌ನಲ್ಲಿ ಕಳ್ಳರಿಬ್ಬರೂ ಪರಾರಿಯಾಗಿದ್ದಾರೆ.

ಸರಗಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ..

ಸರವನ್ನ ಎಳೆಯೋ ಭರದಲ್ಲಿ ವೃದ್ಧೆ ನೆಲಕ್ಕೆ ಬಿದ್ದರೂ ಲೆಕ್ಕಿಸದೆ ಖದೀಮ ಬೈಕ್‌ ಏರಿ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಶ್ಚಿಮ ವಿಭಾಗದ ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

Intro:ವೃದ್ಧೆ ನೆಲಕ್ಕೆ ಬಿದ್ರು ಕ್ಯಾರೆ ಎನ್ನದೆ ಅರ ಎಗರಿಸಿದ
ಭಯನಕ ದೃಶ್ಯ ಸೆರೆಯಾಯ್ತು ಸಿಸಿಟಿವಿಯಲ್ಲಿ

ಬೆಂಗಳೂರಿನಲ್ಲಿ‌ ಮತ್ತೆ ಸರಗಳ್ಳರ ಹಾವಳಿ ಬೆಳಕಿಗೆ ಬಂದಿದೆ. ‌ಇಷ್ಟು ದಿನ ಬವೇರಿಯಾ ಹಾಗೂ ಇರಾನಿ ಗ್ಯಾಂಗ್ ಪಲ್ಸರ್ ಬೈಕಲ್ಲಿ ಹೆಲ್ಮೇಟ್ ಹಾಕಿ ಕೃತ್ಯವೆಸಗುವ ಗ್ಯಾಂಗ್ ಇಡೀ ಬೆಂಗಳೂರನ್ನ ನಲುಗಿಸಿತ್ತು. ಆದರೆ ಇದೀಗ ಹೊಸತಾಗಿರುವ ಗ್ಯಾಂಗಿನ ಓರ್ವ ಸದಸ್ಯ ಹೆಲ್ಮೆಟ್ ಧರಿಸದೇ ರಾಜಾರೋಷಾವಾಗಿ ಬಂದು‌ ಕೃತ್ಯವೆಸಗಿ‌ ಪರಾರಿಯಾಗಿರುವ ಘಟನೆ ಬೆಂಗಳೂರು ‌ಪಶ್ಚಿಮ‌ ವಿಭಾಗದಲ್ಲಿ ನಡೆದಿದೆ.

ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಮ್ಮ ಎಂಬುವವರು ಮನೆಯ ಗೇಟ್ ಮುಂದೆ ನಿಂತಿದ್ರು. ಈ ವೇಳೆ ಎಂಟ್ರಿ ಕೊಟ್ಟ ಇಬ್ಬರು , ಓರ್ವ ಹೆಲ್ಮೇಟ್ ಧರಿಸಿದ್ರೆ ಮತ್ತೋರ್ವ ಹೆಲ್ಮೇಟ್ ಧರಿಸದೆ ರಾಜಾರೋಷವಾಗಿ ಶಾಂತಮ್ಮ ಗೇಟಿನೊಳಕ್ಕೆ ಹೋಗ್ತಿದ್ದ ಹಾಗೆ ನಿಲ್ಲಿಸಿ ಮೊದಲು ಕ್ಲೋಸಾಗಿ ಮಾತಾಡಿಸಿ ತನ್ನತ್ರ ಸೆಳೆದಿದ್ದಾನೆ. ನಂತ್ರ ಮಾತಾಡ್ತಾ ಮಾತಾಡ್ತಾ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನೇ ಕಿತ್ತು ಪರಾರಿಯಾಗಿದ್ದಾನೆ. ಇನ್ನು ಸರವನ್ನ ಎಳೆಯೋ ಭರದಲ್ಲಿ ವೃದ್ಧೆ ನೆಲಕ್ಕೆ ಬಿದ್ದಿದ್ದು ಆದ್ರು ಆದನ್ನ ಲೆಕ್ಕಿಸದೆ ಎಸ್ಕೇಪ್ ಅಗಿದ್ದಾನೆ.

ಸದ್ಯ ಸರಗಳ್ಳನ ನಡೆದ ಸ್ಥಳದ ಪೂರ್ತಿ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪಶ್ಚಿಮ ವಿಭಾಗ ಪೊಲೀಸರು ಆರೋಪಿಗಳಿಗೆ ಶೊಧ ಮುಂದುವರೆಸಿದ್ದಾರೆBody:KN_BNG_05_CHINSNATCH_7204498Conclusion:KN_BNG_05_CHINSNATCH_7204498
Last Updated : Jan 21, 2020, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.