ETV Bharat / city

ಮೋದಿ ಬೆಂಬಲಿಸಿದ್ದಕ್ಕೆ ಬೇಸರವಾಗುತ್ತಿದೆ: ಶಂಕರ್ ಬಿದರಿ - ಮೋದಿ ವಿರುದ್ಧ ಸರಣಿ ಸಂದೇಶ

ನರೇಂದ್ರ ಮೋದಿ ವಿರುದ್ಧ ಸರಣಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಿದರಿ, ಮೋದಿ ಬೆಂಬಲಿಸಿ ತಪ್ಪು ಮಾಡಿದೆ. ನಮ್ಮ ನಂಬಿಕೆಗಳೆಲ್ಲಾ ಹುಸಿಯಾಗಿವೆ ಎಂದು ಬರೆದುಕೊಂಡಿದ್ದಾರೆ.

ಶಂಕರ್ ಬಿದರಿ
ಶಂಕರ್ ಬಿದರಿ
author img

By

Published : Feb 19, 2021, 9:05 PM IST

ಬೆಂಗಳೂರು: ಗರಿಷ್ಠ ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಮತ್ತು ಆರ್ಟಿಕಲ್ 370 ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಕ್ಕೆ ಬೇಸರವಾಗುತ್ತಿದೆ ಎಂದು ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನರೇಂದ್ರ ಮೋದಿ ವಿರುದ್ಧ ಸರಣಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಿದರಿ, ಮೋದಿ ಬೆಂಬಲಿಸಿ ತಪ್ಪು ಮಾಡಿದೆ. ನಮ್ಮ ನಂಬಿಕೆಗಳೆಲ್ಲಾ ಹುಸಿಯಾಗಿವೆ ಎಂದು ಬರೆದುಕೊಂಡಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ನಾನು ಉಲ್ಲಾಸಗೊಂಡಿದ್ದೆ. ಅವರು 130 ಕೋಟಿ ಜನರನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ ಮತ್ತು ರಾಷ್ಟ್ರದ ಹಣೆಬರಹವನ್ನು ಬದಲಾಯಿಸುತ್ತಾರೆ ಎಂದು ನಾನು ನಂಬಿದ್ದೆ. ಆ ಕಾರಣಕ್ಕಾಗಿ ನಗದು ಅಮಾನ್ಯೀಕರಣ ಮತ್ತು ಆರ್ಟಿಕಲ್ 370 ರದ್ದು ವಿಚಾರದಲ್ಲಿ ನಾನು ಅವರನ್ನು ಬೆಂಬಲಿಸಿದೆ. ಆದರೆ ಇಂದು ನನಗೆ ಬೇಸರವಾಗುತ್ತಿದೆ. ಅವರು ಸಹ ವಿಫಲವಾಗಿದ್ದಾರೆ.

ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿ ಮೂರ್ಖರು(?), ಅವರು ನಿರ್ಮಿಸಿದ ವಿದೇಶಿ ತೈಲ, ವಿಮಾ ಕಂಪನಿಗಳು ಮತ್ತು ಪಿಎಸ್​ಯುಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ರಾಷ್ಟ್ರವು ನಿಜವಾಗಿಯೂ ಬಡತನದಲ್ಲಿದ್ದಾಗ ತಾವು ಮಾಡಿದ ರಾಷ್ಟ್ರೀಯ ಸ್ವತ್ತುಗಳು, ಎಫ್‌ಡಿಐ ಕಂಪನಿಗಳಿಗೆ ಇಷ್ಟು ಬೇಗ ಮಾರಾಟಕ್ಕೆ ಬರಲಿದೆ ಎಂದು ಎಂದಿಗೂ ತಿಳಿದಿರಲಿಲ್ಲ ಎಂದು ಕೇಂದ್ರದ ನೀತಿಯನ್ನು ಟೀಕಿಸಿದ್ದಾರೆ.

ಸಾರ್ವಜನಿಕ ಜೀವನಕ್ಕೆ ಸೇರುವ ಗುರಿ ಜನರಿಗೆ ಸೇವೆ ಮಾಡುವುದು ಮತ್ತು ದೇಶಕ್ಕೆ ಏನಾದರೂ ಒಳ್ಳೆಯದನ್ನು ಮಾಡುವುದಾಗಿದೆ. ಅವರು ಅದನ್ನು ಮಾಡದಿದ್ದರೆ ಸಾರ್ವಜನಿಕ ಜೀವನದಿಂದ ಹೊರಬರಬೇಕು ಮತ್ತು ಸಾರ್ವಜನಿಕರು ಮತ್ತು ರಾಷ್ಟ್ರಕ್ಕೆ ಮೋಸ ಮಾಡುವುದನ್ನು ಮುಂದುವರೆಸಬಾರದು ಎಂದು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ.

ಕೃಷ್ಣಾ ನದಿ ಕಣಿವೆ 1999ರಿಂದ ಸತತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಮೋದಿ ಅವರು ಒಂದು ಹನಿ ನೀರನ್ನು ಸಹ ವ್ಯರ್ಥ ಮಾಡದಿರುವ ಬಗ್ಗೆ ಮಾತನಾಡಿದ್ದರು. ಆದರೆ ಅದಾಗಿ 7 ವರ್ಷಗಳು ಕಳೆದವು. ನಾವು ಅವರನ್ನು ನಂಬಿದ್ದೆವು. ಇಂದಿಗೂ ಕೃಷ್ಣಾದಲ್ಲಿ ನಿಗದಿಪಡಿಸಿದ 300 ಟಿಎಂಸಿ ನೀರು ಕರ್ನಾಟಕದಲ್ಲಿ ವ್ಯರ್ಥವಾಗುತ್ತಿದೆ ಎಂದು ಮೋದಿ ಮಾತು ಮರೆತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಭ್ರಷ್ಟಾಚಾರ ಮತ್ತು ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳನ್ನು ರಾಜಕೀಯ ವ್ಯವಸ್ಥೆಯಿಂದ ಹೊರಗಿಡುವ, ಕನಿಷ್ಠಪಕ್ಷ ತಮ್ಮ ಪಕ್ಷದಲ್ಲಾದರೂ ಅಂತಹ ನಡೆ ಅನುಸರಿಸಲಿದ್ದಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಏಳು ವರ್ಷಗಳು ಕಳೆದಿವೆ, ನಮ್ಮ ಭರವಸೆಗಳು ಹುಸಿಯಾದವು. ಅವರೂ ಕೂಡ ವಿಫಲರಾಗಿದ್ದಾರೆ. ಇಂದು ಕ್ರಿಮಿನಲ್ ಆರೋಪ ಮತ್ತು ವಿಚಾರಣೆಗಳನ್ನು ಎದುರಿಸುತ್ತಿರುವ ಅನೇಕ ಜನರು ನಿಷ್ಪರಿಣಾಮಕಾರಿ ಮತ್ತು ಅಪರಾಧ ನ್ಯಾಯ ವ್ಯವಸ್ಥೆಯಿಂದಾಗಿ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಂತಹ ಪ್ರಮುಖ ಸ್ಥಾನಗಳಲ್ಲಿದ್ದಾರೆ ಎಂದು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು: ಗರಿಷ್ಠ ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಮತ್ತು ಆರ್ಟಿಕಲ್ 370 ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಕ್ಕೆ ಬೇಸರವಾಗುತ್ತಿದೆ ಎಂದು ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನರೇಂದ್ರ ಮೋದಿ ವಿರುದ್ಧ ಸರಣಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಿದರಿ, ಮೋದಿ ಬೆಂಬಲಿಸಿ ತಪ್ಪು ಮಾಡಿದೆ. ನಮ್ಮ ನಂಬಿಕೆಗಳೆಲ್ಲಾ ಹುಸಿಯಾಗಿವೆ ಎಂದು ಬರೆದುಕೊಂಡಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ನಾನು ಉಲ್ಲಾಸಗೊಂಡಿದ್ದೆ. ಅವರು 130 ಕೋಟಿ ಜನರನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ ಮತ್ತು ರಾಷ್ಟ್ರದ ಹಣೆಬರಹವನ್ನು ಬದಲಾಯಿಸುತ್ತಾರೆ ಎಂದು ನಾನು ನಂಬಿದ್ದೆ. ಆ ಕಾರಣಕ್ಕಾಗಿ ನಗದು ಅಮಾನ್ಯೀಕರಣ ಮತ್ತು ಆರ್ಟಿಕಲ್ 370 ರದ್ದು ವಿಚಾರದಲ್ಲಿ ನಾನು ಅವರನ್ನು ಬೆಂಬಲಿಸಿದೆ. ಆದರೆ ಇಂದು ನನಗೆ ಬೇಸರವಾಗುತ್ತಿದೆ. ಅವರು ಸಹ ವಿಫಲವಾಗಿದ್ದಾರೆ.

ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿ ಮೂರ್ಖರು(?), ಅವರು ನಿರ್ಮಿಸಿದ ವಿದೇಶಿ ತೈಲ, ವಿಮಾ ಕಂಪನಿಗಳು ಮತ್ತು ಪಿಎಸ್​ಯುಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ರಾಷ್ಟ್ರವು ನಿಜವಾಗಿಯೂ ಬಡತನದಲ್ಲಿದ್ದಾಗ ತಾವು ಮಾಡಿದ ರಾಷ್ಟ್ರೀಯ ಸ್ವತ್ತುಗಳು, ಎಫ್‌ಡಿಐ ಕಂಪನಿಗಳಿಗೆ ಇಷ್ಟು ಬೇಗ ಮಾರಾಟಕ್ಕೆ ಬರಲಿದೆ ಎಂದು ಎಂದಿಗೂ ತಿಳಿದಿರಲಿಲ್ಲ ಎಂದು ಕೇಂದ್ರದ ನೀತಿಯನ್ನು ಟೀಕಿಸಿದ್ದಾರೆ.

ಸಾರ್ವಜನಿಕ ಜೀವನಕ್ಕೆ ಸೇರುವ ಗುರಿ ಜನರಿಗೆ ಸೇವೆ ಮಾಡುವುದು ಮತ್ತು ದೇಶಕ್ಕೆ ಏನಾದರೂ ಒಳ್ಳೆಯದನ್ನು ಮಾಡುವುದಾಗಿದೆ. ಅವರು ಅದನ್ನು ಮಾಡದಿದ್ದರೆ ಸಾರ್ವಜನಿಕ ಜೀವನದಿಂದ ಹೊರಬರಬೇಕು ಮತ್ತು ಸಾರ್ವಜನಿಕರು ಮತ್ತು ರಾಷ್ಟ್ರಕ್ಕೆ ಮೋಸ ಮಾಡುವುದನ್ನು ಮುಂದುವರೆಸಬಾರದು ಎಂದು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ.

ಕೃಷ್ಣಾ ನದಿ ಕಣಿವೆ 1999ರಿಂದ ಸತತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಮೋದಿ ಅವರು ಒಂದು ಹನಿ ನೀರನ್ನು ಸಹ ವ್ಯರ್ಥ ಮಾಡದಿರುವ ಬಗ್ಗೆ ಮಾತನಾಡಿದ್ದರು. ಆದರೆ ಅದಾಗಿ 7 ವರ್ಷಗಳು ಕಳೆದವು. ನಾವು ಅವರನ್ನು ನಂಬಿದ್ದೆವು. ಇಂದಿಗೂ ಕೃಷ್ಣಾದಲ್ಲಿ ನಿಗದಿಪಡಿಸಿದ 300 ಟಿಎಂಸಿ ನೀರು ಕರ್ನಾಟಕದಲ್ಲಿ ವ್ಯರ್ಥವಾಗುತ್ತಿದೆ ಎಂದು ಮೋದಿ ಮಾತು ಮರೆತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಭ್ರಷ್ಟಾಚಾರ ಮತ್ತು ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳನ್ನು ರಾಜಕೀಯ ವ್ಯವಸ್ಥೆಯಿಂದ ಹೊರಗಿಡುವ, ಕನಿಷ್ಠಪಕ್ಷ ತಮ್ಮ ಪಕ್ಷದಲ್ಲಾದರೂ ಅಂತಹ ನಡೆ ಅನುಸರಿಸಲಿದ್ದಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಏಳು ವರ್ಷಗಳು ಕಳೆದಿವೆ, ನಮ್ಮ ಭರವಸೆಗಳು ಹುಸಿಯಾದವು. ಅವರೂ ಕೂಡ ವಿಫಲರಾಗಿದ್ದಾರೆ. ಇಂದು ಕ್ರಿಮಿನಲ್ ಆರೋಪ ಮತ್ತು ವಿಚಾರಣೆಗಳನ್ನು ಎದುರಿಸುತ್ತಿರುವ ಅನೇಕ ಜನರು ನಿಷ್ಪರಿಣಾಮಕಾರಿ ಮತ್ತು ಅಪರಾಧ ನ್ಯಾಯ ವ್ಯವಸ್ಥೆಯಿಂದಾಗಿ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಂತಹ ಪ್ರಮುಖ ಸ್ಥಾನಗಳಲ್ಲಿದ್ದಾರೆ ಎಂದು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.