ETV Bharat / city

ಇನ್ಶೂರೆನ್ಸ್‌ ವರ್ಗಾವಣೆಗೂ ಮುನ್ನವೇ ಸಾವನ್ನಪ್ಪಿದ ಬೈಕ್ ಸವಾರ: ವಿಮೆ ಕ್ಲೇಮ್​​ ನಿರಾಕರಿಸಿದ ಕೋರ್ಟ್

author img

By

Published : Nov 22, 2021, 9:23 PM IST

ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ ವ್ಯಕ್ತಿ ಅದರ ವಿಮೆ ವರ್ಗಾವಣೆಗೂ ಮುನ್ನವೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದ ಕಾರಣ ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಕ್ಲೇಮ್‌ ಮಾಡುವ ಹಕ್ಕುಗಳನ್ನು ಹೊಂದಿರಬಹುದು. ಆದರೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇದು ಸಾಧ್ಯವಿಲ್ಲ ಎಂದು ಮೃತರ ಕುಟುಂಬಕ್ಕೆ ಕೋರ್ಟ್ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ ವ್ಯಕ್ತಿ ಅದರ ವಿಮೆ ವರ್ಗಾವಣೆಗೂ ಮುನ್ನವೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಮೃತನ ಕುಟುಂಬದ ಸದಸ್ಯರಿಗೆ ಮೋಟಾರು ವಾಹನ ಅಪಘಾತ ವಿಮೆ ಕ್ಲೇಮ್​ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರಿನ ಗ್ರಾಹಕ ಕೋರ್ಟ್ (Consumer Court of Bengaluru) ಆದೇಶಿಸಿದೆ.

ಮೃತ ಬೈಕ್ ಮಾಲೀಕನ ಪತ್ನಿ ಮತ್ತು ಮಗ ಪರಿಹಾರ ನಿರಾಕರಿಸಿದ ವಿಮಾ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕ ನ್ಯಾಯಾಲಯದ ಈ ಆದೇಶ ಮಾಡಿದೆ. ಅಪಘಾತ ನಡೆದ ಸಮಯದಲ್ಲಿ ವಾಹನದ ವಿಮೆ ಅದರ ಮೂಲ ಮಾಲೀಕರ ಹೆಸರಿನಲ್ಲಿದೆ. ಹಾಗಾಗಿ, ಮೃತನ ಕುಟುಂಬಸ್ಥರು ಗ್ರಾಹಕ ಸಂರಕ್ಷಣಾ ಕಾಯ್ದೆಯ (The Consumer Protection Act) ಅಡಿಯಲ್ಲಿ ಯಾವುದೇ ಕ್ಲೇಮ್​ ಮಾಡಲು ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು ವಾದಿಸಿ, ಮೋಟಾರು ವಾಹನ ಕಾಯ್ದೆಯ (The Motor Vehicles Act) ಪ್ರಕಾರ, ಅರುಣ್ ಅವರ ಕುಟುಂಬವು ವಿಮಾ ಕ್ಲೇಮ್‌ಗೆ ಅರ್ಹವಾಗಿದೆ. ಮೋಟಾರು ಸೈಕಲ್ ಅರುಣ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಖರೀದಿಸಿದ ಎರಡು ವಾರಗಳಲ್ಲಿ ವಿಮಾ ಪಾಲಿಸಿಯಲ್ಲಿಯೂ ಹೆಸರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಬೈಕ್ ಖರೀಸಿದಿಸಿದ 7 ದಿನಗಳಲ್ಲೇ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಾದಿಸಿದ್ದರು.

ವಿಮಾ ಸಂಸ್ಥೆ ಪರ ವಕೀಲರು ವಾದಿಸಿ, ಆಪಘಾತವಾದ ಸಮಯದಲ್ಲಿ ಮೊದಲ ಮಾಲೀಕ ಮೊಹಮ್ಮದ್ ಹೆಸರಿನಲ್ಲಿ ಪಾಲಿಸಿ ಇತ್ತು. ಬೈಕ್ ಖರೀದಿಸಿದ ಅರುಣ್ ಮತ್ತು ವಿಮಾ ಸಂಸ್ಥೆ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಆದ್ದರಿಂದ, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಗ್ರಾಹಕ ವೇದಿಕೆ ನ್ಯಾಯಾಧೀಶರು, ಅರುಣ್ ಮತ್ತು ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಡುವೆ ಯಾವುದೇ ಒಪ್ಪಂದವಿರಲಿಲ್ಲ. ಹಾಗೆಯೇ, ಸಂತ್ರಸ್ತರು ಸಂಸ್ಥೆಗೆ ಯಾವುದೇ ಪ್ರೀಮಿಯಂ ಪಾವತಿಸಿಲ್ಲ. ಆದ್ದರಿಂದ, ಅರ್ಜಿದಾರರನ್ನು ಇಲ್ಲಿ ಗ್ರಾಹಕರು ಎಂದು ಪರಿಗಣಿಸಲು ಬರುವುವುದಿಲ್ಲ ಎಂದಿದ್ದಾರೆ.

ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಕ್ಲೇಮ್‌ ಮಾಡುವ ಹಕ್ಕುಗಳನ್ನು ಹೊಂದಿರಬಹುದು. ಆದರೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇದು ಸಾಧ್ಯವಿಲ್ಲ. ಸಂತ್ರಸ್ತ ಕುಟುಂಬ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ (Motor Accidents Claims Tribunal) ಎದುರು ತಮ್ಮ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಬನಶಂಕರಿ 2ನೇ ಹಂತದ ನಿವಾಸಿಯಾಗಿರುವ ಅರುಣ್ ಎಂ ಶೆಣೈ 2018ರ ನವೆಂಬರ್ 23ರಂದು ಮೊಹಮ್ಮದ್ ಹರ್ಷದ್ ಎಂಬುವರಿಂದ ಯಮಹಾ ಆರ್ ಎಕ್ಸ್ 100 (Yamaha RX100) ಬೈಕ್ ಖರೀದಿಸಿದ್ದರು. ವಾಹನದ ಮಾಲೀಕತ್ವವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದ ಅವರಿಗೆ ವಿಮಾ ಪಾಲಿಸಿಯನ್ನು ವರ್ಗಾಯಿಸಿಕೊಳ್ಳಲು 14 ದಿನಗಳ ಕಾಲಾವಕಾಶವಿತ್ತು. ವಿಮೆ ಪಾಲಿಸಿ ಅವಧಿ 2019 ರ ಅಕ್ಟೋಬರ್ 31 ವರೆಗೆ ಇದ್ದುದರಿಂದ ಅದೇ ವಿಮಾ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಯೋಜಿಸಿದ್ದರು.

ದುರದೃಷ್ಟವಶಾತ್, 2018 ನವೆಂಬರ್ 30 ರಂದು ಅರುಣ್ ಅಪಘಾತದಲ್ಲಿ ಸಾವನ್ನಪ್ಪಿದರು. ಬೈಕ್​ನ ವಿಮೆ ಸಕ್ರಿಯವಾಗಿದ್ದರಿಂದ ಅವರ ಪತ್ನಿ ರೇಖಾ ಶೆಣೈ ವಿಮೆ ಕ್ಲೇಮ್​ ಪರಿಹಾರ ಕೋರಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಮಾ ಸಂಸ್ಥೆ 2019 ರ ನವೆಂಬರ್ 11 ರಂದು ಕ್ಲೈಮ್​ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮೃತ ಅರುಣ್ ಪತ್ನಿ ಹಾಗೂ ಮಗ ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ವಿಮಾ ಸಂಸ್ಥೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:ಭ್ರಷ್ಟ ಅಧಿಕಾರಿಗೆ 13 ವರ್ಷದ ಬಳಿಕ ಶಿಕ್ಷೆ ನೀಡಿದ ಹೈಕೋರ್ಟ್‌; ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಆಕ್ಷೇಪ

ಬೆಂಗಳೂರು: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿದ ವ್ಯಕ್ತಿ ಅದರ ವಿಮೆ ವರ್ಗಾವಣೆಗೂ ಮುನ್ನವೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಮೃತನ ಕುಟುಂಬದ ಸದಸ್ಯರಿಗೆ ಮೋಟಾರು ವಾಹನ ಅಪಘಾತ ವಿಮೆ ಕ್ಲೇಮ್​ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರಿನ ಗ್ರಾಹಕ ಕೋರ್ಟ್ (Consumer Court of Bengaluru) ಆದೇಶಿಸಿದೆ.

ಮೃತ ಬೈಕ್ ಮಾಲೀಕನ ಪತ್ನಿ ಮತ್ತು ಮಗ ಪರಿಹಾರ ನಿರಾಕರಿಸಿದ ವಿಮಾ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಗ್ರಾಹಕ ನ್ಯಾಯಾಲಯದ ಈ ಆದೇಶ ಮಾಡಿದೆ. ಅಪಘಾತ ನಡೆದ ಸಮಯದಲ್ಲಿ ವಾಹನದ ವಿಮೆ ಅದರ ಮೂಲ ಮಾಲೀಕರ ಹೆಸರಿನಲ್ಲಿದೆ. ಹಾಗಾಗಿ, ಮೃತನ ಕುಟುಂಬಸ್ಥರು ಗ್ರಾಹಕ ಸಂರಕ್ಷಣಾ ಕಾಯ್ದೆಯ (The Consumer Protection Act) ಅಡಿಯಲ್ಲಿ ಯಾವುದೇ ಕ್ಲೇಮ್​ ಮಾಡಲು ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು ವಾದಿಸಿ, ಮೋಟಾರು ವಾಹನ ಕಾಯ್ದೆಯ (The Motor Vehicles Act) ಪ್ರಕಾರ, ಅರುಣ್ ಅವರ ಕುಟುಂಬವು ವಿಮಾ ಕ್ಲೇಮ್‌ಗೆ ಅರ್ಹವಾಗಿದೆ. ಮೋಟಾರು ಸೈಕಲ್ ಅರುಣ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಖರೀದಿಸಿದ ಎರಡು ವಾರಗಳಲ್ಲಿ ವಿಮಾ ಪಾಲಿಸಿಯಲ್ಲಿಯೂ ಹೆಸರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಬೈಕ್ ಖರೀಸಿದಿಸಿದ 7 ದಿನಗಳಲ್ಲೇ ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಾದಿಸಿದ್ದರು.

ವಿಮಾ ಸಂಸ್ಥೆ ಪರ ವಕೀಲರು ವಾದಿಸಿ, ಆಪಘಾತವಾದ ಸಮಯದಲ್ಲಿ ಮೊದಲ ಮಾಲೀಕ ಮೊಹಮ್ಮದ್ ಹೆಸರಿನಲ್ಲಿ ಪಾಲಿಸಿ ಇತ್ತು. ಬೈಕ್ ಖರೀದಿಸಿದ ಅರುಣ್ ಮತ್ತು ವಿಮಾ ಸಂಸ್ಥೆ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಆದ್ದರಿಂದ, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಗ್ರಾಹಕ ವೇದಿಕೆ ನ್ಯಾಯಾಧೀಶರು, ಅರುಣ್ ಮತ್ತು ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಡುವೆ ಯಾವುದೇ ಒಪ್ಪಂದವಿರಲಿಲ್ಲ. ಹಾಗೆಯೇ, ಸಂತ್ರಸ್ತರು ಸಂಸ್ಥೆಗೆ ಯಾವುದೇ ಪ್ರೀಮಿಯಂ ಪಾವತಿಸಿಲ್ಲ. ಆದ್ದರಿಂದ, ಅರ್ಜಿದಾರರನ್ನು ಇಲ್ಲಿ ಗ್ರಾಹಕರು ಎಂದು ಪರಿಗಣಿಸಲು ಬರುವುವುದಿಲ್ಲ ಎಂದಿದ್ದಾರೆ.

ಮೋಟಾರು ವಾಹನಗಳ ಕಾಯ್ದೆ ಅಡಿಯಲ್ಲಿ ಕ್ಲೇಮ್‌ ಮಾಡುವ ಹಕ್ಕುಗಳನ್ನು ಹೊಂದಿರಬಹುದು. ಆದರೆ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಇದು ಸಾಧ್ಯವಿಲ್ಲ. ಸಂತ್ರಸ್ತ ಕುಟುಂಬ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ (Motor Accidents Claims Tribunal) ಎದುರು ತಮ್ಮ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಬನಶಂಕರಿ 2ನೇ ಹಂತದ ನಿವಾಸಿಯಾಗಿರುವ ಅರುಣ್ ಎಂ ಶೆಣೈ 2018ರ ನವೆಂಬರ್ 23ರಂದು ಮೊಹಮ್ಮದ್ ಹರ್ಷದ್ ಎಂಬುವರಿಂದ ಯಮಹಾ ಆರ್ ಎಕ್ಸ್ 100 (Yamaha RX100) ಬೈಕ್ ಖರೀದಿಸಿದ್ದರು. ವಾಹನದ ಮಾಲೀಕತ್ವವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದ ಅವರಿಗೆ ವಿಮಾ ಪಾಲಿಸಿಯನ್ನು ವರ್ಗಾಯಿಸಿಕೊಳ್ಳಲು 14 ದಿನಗಳ ಕಾಲಾವಕಾಶವಿತ್ತು. ವಿಮೆ ಪಾಲಿಸಿ ಅವಧಿ 2019 ರ ಅಕ್ಟೋಬರ್ 31 ವರೆಗೆ ಇದ್ದುದರಿಂದ ಅದೇ ವಿಮಾ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಯೋಜಿಸಿದ್ದರು.

ದುರದೃಷ್ಟವಶಾತ್, 2018 ನವೆಂಬರ್ 30 ರಂದು ಅರುಣ್ ಅಪಘಾತದಲ್ಲಿ ಸಾವನ್ನಪ್ಪಿದರು. ಬೈಕ್​ನ ವಿಮೆ ಸಕ್ರಿಯವಾಗಿದ್ದರಿಂದ ಅವರ ಪತ್ನಿ ರೇಖಾ ಶೆಣೈ ವಿಮೆ ಕ್ಲೇಮ್​ ಪರಿಹಾರ ಕೋರಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಮಾ ಸಂಸ್ಥೆ 2019 ರ ನವೆಂಬರ್ 11 ರಂದು ಕ್ಲೈಮ್​ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮೃತ ಅರುಣ್ ಪತ್ನಿ ಹಾಗೂ ಮಗ ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ವಿಮಾ ಸಂಸ್ಥೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:ಭ್ರಷ್ಟ ಅಧಿಕಾರಿಗೆ 13 ವರ್ಷದ ಬಳಿಕ ಶಿಕ್ಷೆ ನೀಡಿದ ಹೈಕೋರ್ಟ್‌; ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಆಕ್ಷೇಪ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.