ETV Bharat / city

ಮಹಿಳೆಯರ ಭದ್ರತೆಗೆ ಒತ್ತು: ಓಲಾ, ಉಬರ್ ಚಾಲಕರಿಗೆ ಭಾಸ್ಕರ್​ ರಾವ್ ಎಚ್ಚರಿಕೆ​ - ಪಶುವೈದ್ಯೆ ಮೇಲೆ ಅತ್ಯಾಚಾರ ಹತ್ಯೆ

ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ನಗರದ ಓಲಾ, ಉಬರ್ ಚಾಲಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಮಹಿಳೆಯರು ಸೇರಿದಂತೆ ಹಿರಿಯ ನಾಗರಿಕ ಭದ್ರತೆ ವಿಷಯ ಕುರಿತು ಚರ್ಚೆ ನಡೆಸಿದರು.

preference to Women's safety
ಮಹಿಳೆಯರ ಭದ್ರತಾ ದೃಷ್ಟಿ
author img

By

Published : Dec 4, 2019, 5:43 PM IST

ಬೆಂಗಳೂರು: ಹೈದರಾಬಾದ್​​​ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮಹಿಳೆಯರ ಭದ್ರತಾ ದೃಷ್ಟಿಯಿಂದ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಇದರಿಂದ ಎಚ್ಚರಗೊಂಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ನಗರದ ಓಲಾ, ಉಬರ್ ಚಾಲಕರೊಂದಿಗೆ ಸಭೆ ನಡೆಸಿ ಮಹಿಳೆಯರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಮಂದಿ‌ ಓಲಾ, ಉಬರ್ ಕ್ಯಾಬ್​​ಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಇಲ್ಲಿನ ಕ್ಯಾಬ್​​ಗಳ ಚಾಲಕರು ಸಹ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಗಳು ಈ ಹಿಂದೆ ನಡೆದಿದ್ದವು. ಹೀಗಾಗಿ ಮಹಿಳೆಯರ ಹಿತದೃಷ್ಟಿಯಿಂದ ಓಲಾ, ಉಬರ್ ಚಾಲಕರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ.

ಓಲಾ, ಉಬರ್ ಚಾಲಕರೊಂದಿಗೆ ಸಭೆ

ಕಾರಿನ‌ ಮುಂಭಾಗದ ಕನ್ನಡಿ ಬಳಿ ಕಡ್ಡಾಯ ಕ್ಯಾಮರಾ ಅಳವಡಿಸಬೇಕು. ಕತ್ತಲಿರುವ ಪ್ರದೇಶಗಳಲ್ಲಿ ಮಹಿಳೆಯರು ಒಂಟಿಯಾಗಿ ಇರುವಾಗ ಕರೆದೊಯ್ಯಬಾರದು. ಕ್ಯಾಮರಾ ಜೊತೆಗೆ ಡಿಸ್‌ಪ್ಲೇ ಬೋರ್ಡ್ ಕಡ್ಡಾಯವಾಗಿರಬೇಕು. ತುರ್ತು ಬಟನ್ ಅಳವಡಿಸಬೇಕು. ಚಾಲಕನ ಸಂಪೂರ್ಣ ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಈ ನಿಯಮಗಳನ್ನು ಪಾಲಿಸದೇ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಹೈದರಾಬಾದ್​​​ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮಹಿಳೆಯರ ಭದ್ರತಾ ದೃಷ್ಟಿಯಿಂದ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಇದರಿಂದ ಎಚ್ಚರಗೊಂಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ನಗರದ ಓಲಾ, ಉಬರ್ ಚಾಲಕರೊಂದಿಗೆ ಸಭೆ ನಡೆಸಿ ಮಹಿಳೆಯರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಮಂದಿ‌ ಓಲಾ, ಉಬರ್ ಕ್ಯಾಬ್​​ಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಇಲ್ಲಿನ ಕ್ಯಾಬ್​​ಗಳ ಚಾಲಕರು ಸಹ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಗಳು ಈ ಹಿಂದೆ ನಡೆದಿದ್ದವು. ಹೀಗಾಗಿ ಮಹಿಳೆಯರ ಹಿತದೃಷ್ಟಿಯಿಂದ ಓಲಾ, ಉಬರ್ ಚಾಲಕರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ.

ಓಲಾ, ಉಬರ್ ಚಾಲಕರೊಂದಿಗೆ ಸಭೆ

ಕಾರಿನ‌ ಮುಂಭಾಗದ ಕನ್ನಡಿ ಬಳಿ ಕಡ್ಡಾಯ ಕ್ಯಾಮರಾ ಅಳವಡಿಸಬೇಕು. ಕತ್ತಲಿರುವ ಪ್ರದೇಶಗಳಲ್ಲಿ ಮಹಿಳೆಯರು ಒಂಟಿಯಾಗಿ ಇರುವಾಗ ಕರೆದೊಯ್ಯಬಾರದು. ಕ್ಯಾಮರಾ ಜೊತೆಗೆ ಡಿಸ್‌ಪ್ಲೇ ಬೋರ್ಡ್ ಕಡ್ಡಾಯವಾಗಿರಬೇಕು. ತುರ್ತು ಬಟನ್ ಅಳವಡಿಸಬೇಕು. ಚಾಲಕನ ಸಂಪೂರ್ಣ ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಈ ನಿಯಮಗಳನ್ನು ಪಾಲಿಸದೇ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

Intro:ಓಲಾ ಉಬಾರ್ ಚಾಲಕರ ಜೊತೆ ನಗರ ಆಯುಕ್ತ ಸಭೆ
ಚಾಲಕರಿಗೆ ಖಡಕ್ ಸೂಚನೆ ನೀಡಿದ ನಗರ ಆಯುಕ್ತ

Mojo
ನಗರ ಆಯುಕ್ತ ಭಾಸ್ಕರ್ ರಾವ್ points

ಹೈದ್ರಬಾದ್ ಪಶು ವೈದ್ಯೆಯ ಮೇಲೆ ರೇಪ್ ಅಂಡ್ ಮರ್ಡರ್ ಹಿನ್ನೆಲೆ ನಗರದಲ್ಲಿ ಈಗಾಗ್ಲೇ ಪೊಲೀಸರು ಎಚ್ಚೆತ್ತು ಮಹಿಳೆಯರ ಭದ್ರತೆ ದೃಷ್ಟಿಯಿಂದ ಒಂದೊಂದು ಯೋಜನೆ ಮಾಡಿದ್ದರೆ. ಆದರೆ‌ ಫುಲ್ ಅಲರ್ಟ್ ಆಗಿರುವ ಬೆಂಗಳೂರು ನಗರ ಆಯುಕ್ತ ಭಾಸ್ಕರ್ ರಾವ್ ಅವರು ಓಲಾ ಉಬರ್ ಕ್ಯಾಬ್ ಗಳ‌ ಮೇಲೆ ಕಣ್ಣಿಟ್ಟು ಓಲಾ ಉಬಾರ್ ಚಾಲಕರನ್ನ ಕರೆಸಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಯಾಕಂದ್ರೆ ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಮಂದಿ‌ ಓಲಾ ಉಬಾರ್ ಅಂತಹ ಕ್ಯಾಬ್ಗಳನ್ನ ಅವಳಂಬನೆ ಮಾಡ್ತಾರೆ. ಈ ವೇಳೆ ಕಳೆದ ಕೆಲ ದಿನಗಳ ಹಿಂದೆ ಅಹಿತಕರ ಘಟನೆಗಳನ್ನ ಕೆಲ ಓಲಾ ಉಬಾರ್ ಡ್ರೈವರ್ ಗಳು ನಡೆಸಿದ್ದರು.
ಹೀಗಾಗಿ ಮಹಿಳೆ ಯುವತಿಯರ ಹಿತದೃಷ್ಟಿಯಿಂದ ಓಲಾ , ಊಬರ್ ಚಾಲಕರಿಗೆ ನಗರ ಪೊಲೀಸ್ ಆಯುಕ್ತ ಸಭೆ ಮಾಡಿ
ಓಲಾ, ಊಬರ್ ಚಾಲಕರಿಗೆ , ಹಾಗೂ ಓಲಾ ಉಬಾರ್ ಮ್ಯಾನೇಜ್ಮೆಂಟ್ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕಾರಿನ‌ ಮುಂಭಾಗದ ಮಿರರ್ ಬಳಿ ಕಡ್ಡಾಯ ಕ್ಯಾಮರಾ ಇರಬೇಕು. ಕತ್ತಲೆ ಇರುವ ಪ್ರದೇಶಗಳಲ್ಲಿ ಮಹಿಳೆಯರು ಒಂಟಿಯಾಗಿ ಇರುವಾಗ ಕರೆದೊಯ್ಯಬಾರದು,ಕ್ಯಾಮರಾ ಜೊತೆಗೆ ಡಿಸ್‌ಪ್ಲೇ ಬೋರ್ಡ್ ಕಡ್ಡಾಯವಾಗಿರಬೇಕು.ಎಮರ್ಜೆನ್ಸಿ ಬಟನ್ ಫಿಕ್ಸ್ ಮಾಡಬೇಕು, ಚಾಲಕನ ಸಂಪೂರ್ಣ ಮಾಹಿತಿ ತಂತ್ರಜ್ಞಾನದಲ್ಲಿ ಅಳವಡಿಕೆ ಮಾಡಬೇಕೆಂದು ತಿಳಿಸಿದ್ದಾರೆ

ಒಂದು ವೇಳೆ ಈ ನಿಯಮ ಸರಿಯಾದ ರೀತಿ ಪಾಲಿಸದೇ ಇದ್ರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ

Body:KN_BNG_06_OLA_7204498Conclusion:KN_BNG_06_OLA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.