ETV Bharat / city

ಕುಡಿದ ನಶೆಯಲ್ಲಿ ಅಟ್ಟಾಡಿಸಿ ಆಟೋ ಚಾಲಕನ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

author img

By

Published : Mar 16, 2022, 1:17 PM IST

ಕುಡಿದ ನಶೆಯಲ್ಲಿ ಆಟೋ ಚಾಲಕನನ್ನು ಇಬ್ಬರು ಅಟ್ಟಾಡಿಸಿ, ಕೊಲೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುಡಿದ ನಶೆಯಲ್ಲಿ ವ್ಯಕ್ತಿಯ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Bengaluru JB nagar murder case

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ‌ ಕುಡಿದ ನಶೆಯಲ್ಲಿ ಆಟೋ ಚಾಲಕನನ್ನು ಅಟ್ಟಾಡಿಸಿ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಜೀವನ್​​ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ದೂಫನಹಳ್ಳಿ ನಿವಾಸಿ ಮಂಜುನಾಥ್ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ಮಧುಸೂದನ್ ಹಾಗೂ ಯತೀಶ್​ಗೌಡನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿಡಿ ಬಾರ್ ಬಳಿ ಮಾರ್ಚ್ 14ರ ರಾತ್ರಿ ಮಂಜುನಾಥ ಹಾಗೂ ಆರೋಪಿಗಳ ನಡುವೆ ಕುಡಿದ ನಶೆಯಲ್ಲಿ ಕುಲ್ಲಕ ವಿಚಾರವಾಗಿ ಜಗಳವಾಗಿತ್ತು.

bengaluru-jb-nagar-murder-case
ಕೊಲೆ ಆರೋಪಿಗಳು

ಈ ವೇಳೆ, ಪರಸ್ಪರ ಕೈ-ಕೈ ಮಿಲಾಯಿಸಿದ್ದರು. ಮಂಜುನಾಥ್ ಬಾರ್‌ನಿಂದ ಹೊರಗೆ ಬಂದು ಆಟೋದೊಳಗೆ ಕುಳಿತುಕೊಂಡಿದ್ದಾಗ ಆರೋಪಿಗಳು ಅಲ್ಲಿಗೂ ಬಂದು ತಗಾದೆ ತೆಗೆದು ಆವಾಜ್ ಹಾಕಿದ್ದರು‌. ಜೀವ ಭಯದಿಂದ ಆಟೋದಿಂದ ಇಳಿದು ಮಂಜುನಾಥ್‌ ಓಡಿ ಹೋದರೂ ಆರೋಪಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ಸಿಸಿಟಿಯಲ್ಲಿ ಸೆರೆಯಾದ ದೃಶ್ಯ

ಕೋಡಿಹಳ್ಳಿ ಜಂಕ್ಷನ್ ಬಳಿ ಕೆಳಗೆ ಬಿದ್ದ ಮಂಜುನಾಥ್ ತಲೆಗೆ ಕಲ್ಲಿನಿಂದ ಹೊಡೆದು, ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ಇದನ್ನೂ ಓದಿ: ಮದುವೆಗೆ ಸಮಯ ಕೇಳಿದ ಪ್ರಿಯಕರನ ಚಿತ್ರ, ಡೆತ್​ನೋಟ್ ಬರೆದು ಯುವತಿ ಆತ್ಮಹತ್ಯೆ!

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ‌ ಕುಡಿದ ನಶೆಯಲ್ಲಿ ಆಟೋ ಚಾಲಕನನ್ನು ಅಟ್ಟಾಡಿಸಿ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಜೀವನ್​​ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

ದೂಫನಹಳ್ಳಿ ನಿವಾಸಿ ಮಂಜುನಾಥ್ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ಮಧುಸೂದನ್ ಹಾಗೂ ಯತೀಶ್​ಗೌಡನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಜೆಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಿಡಿ ಬಾರ್ ಬಳಿ ಮಾರ್ಚ್ 14ರ ರಾತ್ರಿ ಮಂಜುನಾಥ ಹಾಗೂ ಆರೋಪಿಗಳ ನಡುವೆ ಕುಡಿದ ನಶೆಯಲ್ಲಿ ಕುಲ್ಲಕ ವಿಚಾರವಾಗಿ ಜಗಳವಾಗಿತ್ತು.

bengaluru-jb-nagar-murder-case
ಕೊಲೆ ಆರೋಪಿಗಳು

ಈ ವೇಳೆ, ಪರಸ್ಪರ ಕೈ-ಕೈ ಮಿಲಾಯಿಸಿದ್ದರು. ಮಂಜುನಾಥ್ ಬಾರ್‌ನಿಂದ ಹೊರಗೆ ಬಂದು ಆಟೋದೊಳಗೆ ಕುಳಿತುಕೊಂಡಿದ್ದಾಗ ಆರೋಪಿಗಳು ಅಲ್ಲಿಗೂ ಬಂದು ತಗಾದೆ ತೆಗೆದು ಆವಾಜ್ ಹಾಕಿದ್ದರು‌. ಜೀವ ಭಯದಿಂದ ಆಟೋದಿಂದ ಇಳಿದು ಮಂಜುನಾಥ್‌ ಓಡಿ ಹೋದರೂ ಆರೋಪಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ಸಿಸಿಟಿಯಲ್ಲಿ ಸೆರೆಯಾದ ದೃಶ್ಯ

ಕೋಡಿಹಳ್ಳಿ ಜಂಕ್ಷನ್ ಬಳಿ ಕೆಳಗೆ ಬಿದ್ದ ಮಂಜುನಾಥ್ ತಲೆಗೆ ಕಲ್ಲಿನಿಂದ ಹೊಡೆದು, ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ಇದನ್ನೂ ಓದಿ: ಮದುವೆಗೆ ಸಮಯ ಕೇಳಿದ ಪ್ರಿಯಕರನ ಚಿತ್ರ, ಡೆತ್​ನೋಟ್ ಬರೆದು ಯುವತಿ ಆತ್ಮಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.