ETV Bharat / city

'ಮೋಹನ್ ದಾಸ್ ಪೈ ಸೂಕ್ತ ದಾಖಲಾತಿ ಸಲ್ಲಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ' - Gaurav Gupta

ಮೋಹನ್ ದಾಸ್ ಪೈ ಅವರಲ್ಲಿ ಲಂಚ ಕೇಳಿರುವ ಬಗ್ಗೆ ಸೂಕ್ತ ದಾಖಲೆಗಳಿದ್ದಲ್ಲಿ ಕೊಡಲಿ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

Gaurav Gupta
ಮುಖ್ಯ ಆಯುಕ್ತ ಗೌರವ್ ಗುಪ್ತ
author img

By

Published : Apr 27, 2022, 10:29 PM IST

Updated : Apr 27, 2022, 10:40 PM IST

ಬೆಂಗಳೂರು: ಬಿಬಿಎಂಪಿಯಿಂದ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಲಂಚ ನೀಡಬೇಕು. ನನ್ನ ಬಳಿಯೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮೋಹನ್ ದಾಸ್ ಪೈ ಆರೋಪಿಸಿದ್ದಾರೆ. ಈ ಬಗ್ಗೆ ದಾಖಲೆ ಸಲ್ಲಿಸಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಪ್ರತಿಕ್ರಿಯಿಸಿದರು.

ಬೂಸ್ಟರ್ ಡೋಸ್ ಅಲಭ್ಯ ಎನ್ನುವ ಮಾತಿಲ್ಲ: ಬೂಸ್ಟರ್‌ ಡೋಸ್‌ ಎಲ್ಲೆಡೆಯೂ ಲಭ್ಯ. ಯಾರೂ ಅರ್ಹರೂ ಅವರ ಈ ಲಸಿಕೆ ಪಡೆಯಬಹುದು. ಕೆಲ ಕಡೆಗಳಲ್ಲಿ ಬೋಸ್ಟರ್ ಡೋಸ್ ಪಡೆಯಲು ಹಣ ವಸೂಲಿ ಮಾಡುತ್ತಿರುವ ಕುರಿತು ಆರೋಪ ಕೇಳಿಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೋಹನ್ ದಾಸ್ ಪೈ ಸೂಕ್ತ ದಾಖಲಾತಿ ಸಲ್ಲಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ

ಖಾತೆ ವರ್ಗೀಕರಣ ಪ್ರಕ್ರಿಯೆ: ಖಾತೆ ವರ್ಗೀಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತೆ ಆಸ್ತಿಗಳು ಆರು ಲಕ್ಷದಷ್ಟಿವೆ. ಅವುಗಳನ್ನು ಪರಿವರ್ತನೆ ಮಾಡುವ ಪ್ರಕ್ರಿಯೆಗೆ ಚಾಲ್ತಿ ನೀಡಲಾಗುವುದು. ಇದರಿಂದ ಜನರಿಗೆ ಅನುಕೂಲವೇ ಹೆಚ್ಚು ಎಂದರು.

ಇದನ್ನೂ ಓದಿ: ಕೋವಿಡ್ 4ನೇ ಅಲೆ ಭೀತಿ: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್​ಗೆ ಅಭಾವದ ಕೂಗು

ಬೆಂಗಳೂರು: ಬಿಬಿಎಂಪಿಯಿಂದ ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಲಂಚ ನೀಡಬೇಕು. ನನ್ನ ಬಳಿಯೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮೋಹನ್ ದಾಸ್ ಪೈ ಆರೋಪಿಸಿದ್ದಾರೆ. ಈ ಬಗ್ಗೆ ದಾಖಲೆ ಸಲ್ಲಿಸಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಪ್ರತಿಕ್ರಿಯಿಸಿದರು.

ಬೂಸ್ಟರ್ ಡೋಸ್ ಅಲಭ್ಯ ಎನ್ನುವ ಮಾತಿಲ್ಲ: ಬೂಸ್ಟರ್‌ ಡೋಸ್‌ ಎಲ್ಲೆಡೆಯೂ ಲಭ್ಯ. ಯಾರೂ ಅರ್ಹರೂ ಅವರ ಈ ಲಸಿಕೆ ಪಡೆಯಬಹುದು. ಕೆಲ ಕಡೆಗಳಲ್ಲಿ ಬೋಸ್ಟರ್ ಡೋಸ್ ಪಡೆಯಲು ಹಣ ವಸೂಲಿ ಮಾಡುತ್ತಿರುವ ಕುರಿತು ಆರೋಪ ಕೇಳಿಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೋಹನ್ ದಾಸ್ ಪೈ ಸೂಕ್ತ ದಾಖಲಾತಿ ಸಲ್ಲಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ

ಖಾತೆ ವರ್ಗೀಕರಣ ಪ್ರಕ್ರಿಯೆ: ಖಾತೆ ವರ್ಗೀಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತೆ ಆಸ್ತಿಗಳು ಆರು ಲಕ್ಷದಷ್ಟಿವೆ. ಅವುಗಳನ್ನು ಪರಿವರ್ತನೆ ಮಾಡುವ ಪ್ರಕ್ರಿಯೆಗೆ ಚಾಲ್ತಿ ನೀಡಲಾಗುವುದು. ಇದರಿಂದ ಜನರಿಗೆ ಅನುಕೂಲವೇ ಹೆಚ್ಚು ಎಂದರು.

ಇದನ್ನೂ ಓದಿ: ಕೋವಿಡ್ 4ನೇ ಅಲೆ ಭೀತಿ: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್​ಗೆ ಅಭಾವದ ಕೂಗು

Last Updated : Apr 27, 2022, 10:40 PM IST

For All Latest Updates

TAGGED:

Gaurav Gupta
ETV Bharat Logo

Copyright © 2025 Ushodaya Enterprises Pvt. Ltd., All Rights Reserved.