ETV Bharat / city

ಆಯುಧಪೂಜೆ ಸಂಭ್ರಮ... ಕೆ.ಆರ್.ಮಾರ್ಕೆಟ್​ಗೆ ಹರಿದು ಬಂದ ಜನಸಾಗರ

author img

By

Published : Oct 7, 2019, 12:52 PM IST

ಬೆಂಗಳೂರಿನಲ್ಲಿ ಆಯುಧಪೂಜೆ ಸಂಭ್ರಮ ಕಳೆಗಟ್ಟಿದ್ದು, ದೇವಾಲಯಗಳಲ್ಲಿ ವಾಹನಗಳಿಗೆ ಪೂಜೆ ಮಾಡಿದರು. ಇತ್ತ ಕೆ.ಆರ್.ಮಾರ್ಕೆಟ್​ಗೆ ಹೂವು-ಹಣ್ಣು ಖರೀದಿಗೆ ಜನ ಸಾಗರವೇ ಹರಿದು ಬಂದಿತ್ತು.

ಆಯುಧಪೂಜೆ ಸಂಭ್ರಮ

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಆಯುಧಪೂಜೆ ಸಂಭ್ರಮ ಕಳೆಗಟ್ಟಿದೆ. ವರ್ಷ ಪೂರ್ತಿ ತಮಗೆ ಸಾಥ್ ಕೊಟ್ಟ ವಾಹನಗಳಿಗೆ ಅನೇಕರು ನಗರದ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಆಯುಧಪೂಜೆ ಸಂಭ್ರಮ... ಕೆ.ಆರ್.ಮಾರ್ಕೆಟ್​ಗೆ ಹರಿದು ಬಂದ ಜನಸಾಗರ

ಇನ್ನು ಯು.ಬಿ ಸಿಟಿ ಹತ್ತಿರದ ಆಕ್ಸಿಟೆಂಡ್​ ಗಣಪತಿ, ವೆಹಿಕಲ್​ ಗಣಪತಿ ಅಂತಲೇ ಫೇಮಸ್​ ಆಗಿರೋ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಜಯನಗರದ ಗಣೇಶ ದೇವಸ್ಥಾನ, ಮೈಸೂರು ರೋಡ್ ಬಳಿ ಇರುವ ಗಾಳಿ ಆಂಜನೇಯ ದೇವಸ್ಥಾನಗಳಲ್ಲೂ ಭರ್ಜರಿ ಪೂಜೆ ಸಲ್ಲಿಸಲಾಗುತ್ತಿದೆ.

ಇನ್ನು ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನಲೆ ಕೆ.ಆರ್.ಮಾರ್ಕೆಟ್​ಗೆ ಹೂವು-ಹಣ್ಣು ಖರೀದಿಗೆ ಜನ ಸಾಗರವೇ ಹರಿದು ಬಂದಿತ್ತು. ಇತ್ತ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು..‌

ಹಬ್ಬದ ಹಿನ್ನೆಲೆ:

13 ವರ್ಷಗಳ ವನವಾಸ ಮುಗಿಸಿ ಬಂದ ಪಾಂಡವರು, ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು 'ಬನ್ನಿ' ಮರದಲ್ಲಿ ಬಚ್ಚಿಡುತ್ತಾರೆ. ವನವಾಸದ ನಂತರ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಆಯುಧಗಳನ್ನು ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿಯೇ ಆಯುಧ ಪೂಜೆಯನ್ನ ಆಚರಿಸಿಕೊಂಡು ಬರಲಾಗುತ್ತಿದೆ.‌

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಆಯುಧಪೂಜೆ ಸಂಭ್ರಮ ಕಳೆಗಟ್ಟಿದೆ. ವರ್ಷ ಪೂರ್ತಿ ತಮಗೆ ಸಾಥ್ ಕೊಟ್ಟ ವಾಹನಗಳಿಗೆ ಅನೇಕರು ನಗರದ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಆಯುಧಪೂಜೆ ಸಂಭ್ರಮ... ಕೆ.ಆರ್.ಮಾರ್ಕೆಟ್​ಗೆ ಹರಿದು ಬಂದ ಜನಸಾಗರ

ಇನ್ನು ಯು.ಬಿ ಸಿಟಿ ಹತ್ತಿರದ ಆಕ್ಸಿಟೆಂಡ್​ ಗಣಪತಿ, ವೆಹಿಕಲ್​ ಗಣಪತಿ ಅಂತಲೇ ಫೇಮಸ್​ ಆಗಿರೋ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಜಯನಗರದ ಗಣೇಶ ದೇವಸ್ಥಾನ, ಮೈಸೂರು ರೋಡ್ ಬಳಿ ಇರುವ ಗಾಳಿ ಆಂಜನೇಯ ದೇವಸ್ಥಾನಗಳಲ್ಲೂ ಭರ್ಜರಿ ಪೂಜೆ ಸಲ್ಲಿಸಲಾಗುತ್ತಿದೆ.

ಇನ್ನು ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನಲೆ ಕೆ.ಆರ್.ಮಾರ್ಕೆಟ್​ಗೆ ಹೂವು-ಹಣ್ಣು ಖರೀದಿಗೆ ಜನ ಸಾಗರವೇ ಹರಿದು ಬಂದಿತ್ತು. ಇತ್ತ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು..‌

ಹಬ್ಬದ ಹಿನ್ನೆಲೆ:

13 ವರ್ಷಗಳ ವನವಾಸ ಮುಗಿಸಿ ಬಂದ ಪಾಂಡವರು, ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು 'ಬನ್ನಿ' ಮರದಲ್ಲಿ ಬಚ್ಚಿಡುತ್ತಾರೆ. ವನವಾಸದ ನಂತರ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಆಯುಧಗಳನ್ನು ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿಯೇ ಆಯುಧ ಪೂಜೆಯನ್ನ ಆಚರಿಸಿಕೊಂಡು ಬರಲಾಗುತ್ತಿದೆ.‌

Intro:ಬೆಂಗಳೂರಿನಲ್ಲಿ ಕಳೆಗಟ್ಟಿದ ಆಯುಧಪೂಜೆ ಸಂಭ್ರಮ; ತುಂತುರು ಮಳೆಯ ನಡುವೆಯು ಪೂಜೆ‌ ಸಲ್ಲಿಸಿದ ಮಂದಿ..

ಬೆಂಗಳೂರು: ಉದ್ಯಾನನಗರೀ ಬೆಂಗಳೂರಿನಲ್ಲಿ ಆಯುಧಪೂಜೆ ಸಂಭ್ರಮ ಕಳೆಗಟ್ಟಿದೆ.. ವರ್ಷ ಪೂರ್ತಿ ತಮಗೆ ಸಾಥ್ ಕೊಟ್ಟ ವಾಹನಗಳ ಪೂಜೆಯಲ್ಲಿ ವಾಹನ ಸವಾರರು ತೊಡಗಿದರು..‌ ನಗರದ ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ವಾಹನಗಳ ಪೂಜೆ ಸಲ್ಲಿಸಲಾಯಿತು..‌

ಜನರು ಬೆಳಗ್ಗೆ ಎದ್ದು ತಮ್ಮ ವಾಹನಗಳನ್ನು ಸ್ವಚ್ಚಗೊಳಿಸಿ, ಅದಕ್ಕೆ ಹೂವುಗಳಿಂದ ಶೃಂಗಾರ ಮಾಡಿದ್ರು.  ವಿಭೂತಿ, ಅರಿಶಿನ ಕುಂಕುಮ ಹಚ್ಚಿ , ಬಾಳೆಕಂಬ ಸಿಗ್ಗಿಸಿ ಅಲಂಕಾರ ಮಾಡಿದ್ದರು.. ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಕುಂಬಳ ಕಾಯಿ ಒಡೆದು ಪೂಜೆ ಸಲ್ಲಿಸಿದ್ದ ದೃಶ್ಯ ಕಂಡು ಬಂತು.. ತಮ್ಮ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದ ನಂತರ , ಸಿಹಿ ತಿಂಡಿ ಹಂಚಿ ಖುಷಿಪಟ್ಟರು..‌

ಬೆಂಗಳೂರಿನ ವಿವಿಧೆಡೆ ಸಂಭ್ರಮದ ವಾತಾವರಣ
ಕಂಡು ಬರುತ್ತಿರುತ್ತಿದ್ದು, ಯು.ಬಿ ಸಿಟಿ ಹತ್ತಿರದ
ಆಕ್ಸಿಟೆಂಡ್​ ಗಣಪತಿ, ವೈಹಿಕಲ್​ ಗಣಪತಿ ಅಂತಲೇ ಫೇಮಸ್​ ಆಗಿರೋ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ, ಜಯನಗರದ ಗಣೇಶ ದೇವಸ್ಥಾನದಲ್ಲೂ, ಮೈಸೂರು ರೋಡ್ ಬಳಿ ಇರುವ ಗಾಳಿ ಆಂಜನೇಯ ದೇವಸ್ಥಾನಗಳಲ್ಲೂ
ಭರ್ಜರಿ ಪೂಜೆ ಸಲ್ಲಿಸಲಾಗುತ್ತಿದೆ..‌ ರಾಹುಕಾಲ ಇರುವುದರಿಂದ ಜನರೆಲ್ಲ ರಾಹುಕಾಲವನ್ನ‌ ಕಳೆದುಕೊಂಡು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು..

================
ಬೆಂಗಳೂರಿನಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನಲೆ ಕೆ.ಆರ್.ಮಾರ್ಕೇಟ್ ಹೂವು ಹಣ್ಣು ಖರೀದಿಗೆ ಜನ ಸಾಗರವೇ ಹರಿದು ಬಂದಿತ್ತು..‌ ಜನಜಂಗುಳಿಯಿಂದ ಗಿಜಿಗುಡುತ್ತಿರುವ ಕೆ.ಆರ್. ಮಾರ್ಕೇಟ್ ನಲ್ಲಿ
ಹೂವು ಹಣ್ಣು ಬಾಳೆಕಂದು ಖರೀದಿ ಜೋರಾಗಿದೆ.. ಹಬ್ಬ ಹಿನ್ನಲೆ ಸಾವಿರಾರು ಸಂಖ್ಯೆಯಲ್ಲಿ ಜಾಮಾಯಿಸಿರುವ ಜನರು, ಪೂಜೆಗೆ ಬೇಕಾದ ಅಗತ್ಯ ವಸ್ತುಗಳು ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು..

ಇತ್ತ ಕೆ.ಆರ್. ಮಾರ್ಕೇಟ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್, ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು..‌ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ನಲ್ಲಿ ವಾಹನಗಳು ಸಿಲುಕಿದ್ದು, ಆಯುಧ ಪೂಜೆ ಹಬ್ಬ ಹಿನ್ನಲೆ ಪ್ರತಿನಿತ್ಯಕ್ಕಿಂತ ಭಾರೀ ಜನಸಂದಣಿ ಕಾಣುತ್ತಿತ್ತು..

ಹಬ್ಬದ ಹಿನ್ನೆಲೆ ಏನು????

13 ವರ್ಷಗಳ ವನವಾಸ ಮುಗಿಸಿ ಬಂದ ಪಾಂಡವರು, ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ.. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು 'ಬನ್ನಿ' ಮರದಲ್ಲಿ ಬಚ್ಚಿಡುತ್ತಾರೆ.

ವನವಾಸದ ನಂತರ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಆಯುಧಗಳನ್ನು ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿಯೇ ಆಯುಧ ಪೂಜೆಯನ್ನ ಆಚರಿಸಿಕೊಂಡು ಬರಲಾಗುತ್ತಿದೆ.‌

==============


KN_BNG_1_AYUDHAPOOJA_VEHICLE_POOJA_SCRIPT_7201801


Byte- ನಾಗಶೈಯನಾ- ಭಕ್ತರು
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.