ETV Bharat / city

ಜಲ ಸಂರಕ್ಷಣೆ ಕುರಿತು ಜಲಶಕ್ತಿ-ಜಲಾಮೃತ ಅಭಿಯಾನದ ಮೂಲಕ ಜಾಗೃತಿ - ಜಲ ಸಂರಕ್ಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮ  ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ-ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆಯನ್ನು ಅಯೋಜಿಸಲಾಗಿದ್ದು, ಈ ಮೂಲಕ ಅಂತರ್ಜಲ ಕುಸಿತದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಜಲಶಕ್ತಿ-ಜಲಾಮೃತ ಅಭಿಯಾನ
author img

By

Published : Aug 28, 2019, 6:08 PM IST

ನೆಲಮಂಗಲ: ಬಯಲುಸೀಮೆ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜಲಕ್ಷಾಮ ಸಮಸ್ಯೆ ಉಂಟಾಗದಿರಲಿ ಎಂದು ಕೇಂದ್ರ ಸರ್ಕಾರ ಜಲಶಕ್ತಿ-ಜಲಾಮೃತ ಅಭಿಯಾನ ಆರಂಭಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಜಲಶಕ್ತಿ-ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ-ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಣ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಗಂಗಣ್ಣ, ಪಿಡಿಒ ಗಂಗರಂಗಯ್ಯ, ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ಸೇರಿದಂತೆ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.

ಈ ಕುರಿತು ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಎಂ.ಗಂಗಣ್ಣ, ಜಲ ಸಾಕ್ಷರತೆ ಕುರಿತು ಕೇವಲ ಭಾಷಣ ಮಾಡುವುದಲ್ಲ. ಬದಲಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು. ನೀರಿನ ಮಿತ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಚೆಕ್ ಡ್ಯಾಂ ನಿರ್ಮಾಣ ಮಾಡುವುದು, ರಾಜಕಾಲುವೆ ಒತ್ತುವರಿ ತೆರವು, ವಿಫಲ ಕೊಳವೆ ಬಾವಿಗಳ ಮರು ಜಲಪೂರಣ, ಮಣ್ಣಿನ ಸವೆತ ತಡೆಯಲು ಗಿಡಗಳನ್ನು ನೆಡುವುದರಿಂದ ಜಲ ಸಾಕ್ಷರತೆ ಸಾಧಿಸಬಹುದೆಂದು ಹೇಳಿದರು.

ನೆಲಮಂಗಲ: ಬಯಲುಸೀಮೆ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಜಲಕ್ಷಾಮ ಸಮಸ್ಯೆ ಉಂಟಾಗದಿರಲಿ ಎಂದು ಕೇಂದ್ರ ಸರ್ಕಾರ ಜಲಶಕ್ತಿ-ಜಲಾಮೃತ ಅಭಿಯಾನ ಆರಂಭಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಜಲಶಕ್ತಿ-ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ-ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಣ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಗಂಗಣ್ಣ, ಪಿಡಿಒ ಗಂಗರಂಗಯ್ಯ, ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ಸೇರಿದಂತೆ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.

ಈ ಕುರಿತು ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಎಂ.ಗಂಗಣ್ಣ, ಜಲ ಸಾಕ್ಷರತೆ ಕುರಿತು ಕೇವಲ ಭಾಷಣ ಮಾಡುವುದಲ್ಲ. ಬದಲಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು. ನೀರಿನ ಮಿತ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಚೆಕ್ ಡ್ಯಾಂ ನಿರ್ಮಾಣ ಮಾಡುವುದು, ರಾಜಕಾಲುವೆ ಒತ್ತುವರಿ ತೆರವು, ವಿಫಲ ಕೊಳವೆ ಬಾವಿಗಳ ಮರು ಜಲಪೂರಣ, ಮಣ್ಣಿನ ಸವೆತ ತಡೆಯಲು ಗಿಡಗಳನ್ನು ನೆಡುವುದರಿಂದ ಜಲ ಸಾಕ್ಷರತೆ ಸಾಧಿಸಬಹುದೆಂದು ಹೇಳಿದರು.

Intro:ಮಣ್ಣೆ ಗ್ರಾಮ ಪಂಚಾಯಿತಿಯಲ್ಲಿ ಜಲಶಕ್ತಿ- ಜಲಾಮೃತ ಅಭಿಯಾನ


ಜಲ ಸಂರಕ್ಷಣೆಗಾಗಿ ಚೆಕ್ ಡ್ಯಾಂ ನಿರ್ಮಾಣ, ನೀರಿನ ಮಿತಬಳಕೆಯ ಬಗ್ಗೆ ಜಾಗೃತಿBody:ನೆಲಮಂಗಲ : ಬಯಲು ಸೀಮೆ ಪ್ರದೇಶಗಳಲ್ಲಿ ದಿನೇ ದಿನೇ ಅಂತರ್ಜಲ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಜಲಕ್ಷಮ ಸಮಸ್ಯೆ ಕಾಡಲಿದೆ. ಜಲಸಂರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಜಲಶಕ್ತಿ-ಜಲಾಮೃತ ಅಭಿಯಾನ ಆರಂಭಿಸುವ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ-ಜಲಾಮೃತ ಅಭಿಯಾನ ವಿಶೇಷ ಗ್ರಾಮ ಸಭೆಯನ್ನು ಅಯೋಜಿಸಿತ್ತು. ಕಾರ್ಯಕ್ರಮದದಲ್ಲಿ ಮಣ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಗಂಗಣ್ಣ. ಪಿಡಿಒ ಗಂಗರಂಗಯ್ಯ. ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ಸೇರಿದಂತೆ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.


ಜಲಶಕ್ತಿ-ಜಲಾಮೃತ ಅಭಿಯಾನದ ಬಗ್ಗೆ ಮಾತನಾಡಿದ ಪಂಚಾಯ್ತಿ ಅಧ್ಯಕ್ಷ ಎಂ ಗಂಗಣ್ಣ ಜಲ ಸಾಕ್ಷರತೆ ಅಂದರೆ ಕೇವಲ ಭಾಷಣ ಮಾಡುವುದಲ್ಲ ಅವುಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ಮಾಡ್ಬೇಕು. ನೀರಿನ ಮಿತಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಚೆಕ್ ಡ್ಯಾಂ ನಿರ್ಮಾಣ ಮಾಡುವುದು. ರಾಜಕಾಲುವೆ ಒತ್ತುವರಿ ತೆರವು. ವಿಫಲ ಕೊಳವೆಬಾವಿಗಳ ಮರುಜಲಪೂರಣ. ಮಣ್ಣಿನ ಸವೆತ ತಡೆಯಲು ಗಿಡಗಳನ್ನು ನೆಡುವುದರಿಂದ ಜಲ ಸಾಕ್ಷರತೆ ಸಾಧಿಸಬಹುದೆಂದು ಹೇಳಿದರು.

ಪಿಡಿಒ ಗಂಗರಂಗಯ್ಯ ಮಾತನಾಡಿ ಜಲಕ್ಷಮಕ್ಕೆ ಪ್ರಮುಖ ಕಾರಣ ನೀಲಿಗಿರಿ ಮರಗಳು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೀಲಿಗಿರಿ ಮರಗಳನ್ನು ತೆರವು ಕಾರ್ಯಾಚರಣೆ ಮಾಡಬೇಕಿದೆ. ಜಿಲ್ಲಾಡಳಿತ ಸಹ ನೀಲಿಗಿರಿ ತೆರವಿಗೆ ಆದೇಶ ಮಾಡಿದ್ದು ಬುಡಸಮೇತ ನೀಲಿಗಿರಿ ಮರಗಳನ್ನು ತೆಗೆಯ ಬೇಕಿದೆ ಎಂದರು.

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆಕುಸಿದಿದೆ. ಈಗಲಾದ್ರು ಎಚ್ಚೆತ್ತು ಕೊಳ್ಳದಿದ್ದಾರೆ ಭೀಕರ ಜಲಕ್ಷಮ ಎದುರಿಸ ಬೇಕಾಗುತ್ತದೆ.

01a-ಬೈಟ್ : ಎಂ. ಗಂಗಣ್ಣ, ಮಣ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ.




Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.