ETV Bharat / city

ಜೈಲಿನಿಂದ ನಟ ಚೇತನ್ ಅಹಿಂಸಾ ಬಿಡುಗಡೆ : ಪೊಲೀಸರ ವಿರುದ್ಧ ಆಕ್ರೋಶ

author img

By

Published : Mar 1, 2022, 9:56 AM IST

Updated : Mar 1, 2022, 10:52 AM IST

ಪೊಲೀಸರು ನನ್ನ ವಿರುದ್ಧ ಸುಮೋಟೋ ಕೇಸ್ ಹಾಕಿರುವುದು ಸರಿಯಲ್ಲ. ನನ್ನ ಹೋರಾಟ ಮುಂದುವರಿಯುತ್ತೆ. ಇಲ್ಲಿ ಎಲ್ಲರೂ ಸಮಾನ ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ಚೇತನ್ ತಿಳಿಸಿದರು..

ಜೈಲಿನಿಂದ ಚೇತನ್ ಬಿಡುಗಡೆ:
ಜೈಲಿನಿಂದ ಚೇತನ್ ಬಿಡುಗಡೆ:

ಬೆಂಗಳೂರು : ಒಂದು ಟ್ವೀಟ್ ಹಾಕಿದ್ದಕ್ಕೆ ಸುಮೋಟೊ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಪಬ್ಲಿಕ್ ಸರ್ವೆಂಟ್ ಅಂದ್ರೆ ಸಾರ್ವಜನಿಕರ ಟ್ಯಾಕ್ಸ್ ಹಣ ವೇತನ ಪಡೆಯುವವರು. ಸಿಎಂ, ಎಂಎಲ್ಎ, ಜಡ್ಜ್ ಯಾರೇ ಆಗಿದ್ದರು ಯಾರೂ ಕೂಡ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರ ಅಲ್ಲ, ನಮ್ಮ ಜವಾಬ್ದಾರಿ ಎಂದು ನಟ ಚೇತನ್ ಹೇಳಿದರು.

ಜೈಲಿನಿಂದ ಬಿಡುಗಡೆ ಬಳಿಕ ಪರಪ್ಪನ ಅಗ್ರಹಾರದ ಬಳಿ ಮಾಧ್ಯಮಗಳಿಗೆ ನಟ ಚೇತನ್ ಪ್ರತಿಕ್ರಿಯೆ ನೀಡಿದರು. ನಮಗೆ ನ್ಯಾಯ ಸಿಗುತ್ತದೆ. ನಮ್ಮ ಹೋರಾಟ ಮುಂದುವರಿಯತ್ತೆ. ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಅವರ ಸಮಾನತೆಯ ತತ್ವದ ಮೇಲೆ ಉತ್ತಮ ಸಮಾಜ ಕಟ್ಟುತ್ತೇವೆ. ಸಮಾನತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದರು.

ಜೈಲಿನಿಂದ ನಟ ಚೇತನ್ ಅಹಿಂಸಾ ಬಿಡುಗಡೆ

ಪೊಲೀಸರು ನನ್ನ ವಿರುದ್ಧ ಸುಮೋಟೊ ಕೇಸ್ ಹಾಕಿರುವುದು ಅಸಂವಿಧಾನಿಕವಾದದ್ದು. ಏಕೆಂದ್ರೆ, ನನ್ನ ಟ್ವೀಟ್​ನಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆ, ಅವಹೇಳನ ಮಾಡುವಂತದ್ದು ಇರಲಿಲ್ಲ. ಆದ್ರೂ ಕೇಸ್ ಹಾಕಿದ್ರು. ಆದ್ರೆ, ಕೆಲವರು ರೇಪ್ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಮಾತಾಡ್ತಾರೆ. ಅವರ ಮೇಲೆ ಕೇಸ್ ಹಾಕಿಲ್ಲ. ನಾನು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದಾರೆಂಬ ಆರೋಪದಡಿ ಶೇಷಾದ್ರಿಪುರ ಠಾಣೆ ಪೊಲೀಸರು ನಟ ಚೇತನ್ ಅವರನ್ನು ಬಂಧಿಸಿದ್ದರು.

ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ (ಐಪಿಸಿ 505 (2) ಹಾಗೂ ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ (ಐಪಿಸಿ 504) ನೀಡಿದ್ದಾರೆ' ಎಂಬ ಆರೋಪದಡಿ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಚೇತನ್ ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

(ಇದನ್ನೂ ಓದಿ: ಸರ್ಕಾರಕ್ಕೆ 500 ಕೋಟಿ ರೂ. ನಷ್ಟ: ಎಸಿಬಿ ತನಿಖೆಯಲ್ಲಿ ಬಯಲಾಯ್ತು ಬಿಬಿಎಂಪಿ ಕಚೇರಿಗಳಲ್ಲಿನ ಭ್ರಷ್ಟಾಚಾರ)

ಬೆಂಗಳೂರು : ಒಂದು ಟ್ವೀಟ್ ಹಾಕಿದ್ದಕ್ಕೆ ಸುಮೋಟೊ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಪಬ್ಲಿಕ್ ಸರ್ವೆಂಟ್ ಅಂದ್ರೆ ಸಾರ್ವಜನಿಕರ ಟ್ಯಾಕ್ಸ್ ಹಣ ವೇತನ ಪಡೆಯುವವರು. ಸಿಎಂ, ಎಂಎಲ್ಎ, ಜಡ್ಜ್ ಯಾರೇ ಆಗಿದ್ದರು ಯಾರೂ ಕೂಡ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರ ಅಲ್ಲ, ನಮ್ಮ ಜವಾಬ್ದಾರಿ ಎಂದು ನಟ ಚೇತನ್ ಹೇಳಿದರು.

ಜೈಲಿನಿಂದ ಬಿಡುಗಡೆ ಬಳಿಕ ಪರಪ್ಪನ ಅಗ್ರಹಾರದ ಬಳಿ ಮಾಧ್ಯಮಗಳಿಗೆ ನಟ ಚೇತನ್ ಪ್ರತಿಕ್ರಿಯೆ ನೀಡಿದರು. ನಮಗೆ ನ್ಯಾಯ ಸಿಗುತ್ತದೆ. ನಮ್ಮ ಹೋರಾಟ ಮುಂದುವರಿಯತ್ತೆ. ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಅವರ ಸಮಾನತೆಯ ತತ್ವದ ಮೇಲೆ ಉತ್ತಮ ಸಮಾಜ ಕಟ್ಟುತ್ತೇವೆ. ಸಮಾನತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದರು.

ಜೈಲಿನಿಂದ ನಟ ಚೇತನ್ ಅಹಿಂಸಾ ಬಿಡುಗಡೆ

ಪೊಲೀಸರು ನನ್ನ ವಿರುದ್ಧ ಸುಮೋಟೊ ಕೇಸ್ ಹಾಕಿರುವುದು ಅಸಂವಿಧಾನಿಕವಾದದ್ದು. ಏಕೆಂದ್ರೆ, ನನ್ನ ಟ್ವೀಟ್​ನಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆ, ಅವಹೇಳನ ಮಾಡುವಂತದ್ದು ಇರಲಿಲ್ಲ. ಆದ್ರೂ ಕೇಸ್ ಹಾಕಿದ್ರು. ಆದ್ರೆ, ಕೆಲವರು ರೇಪ್ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಮಾತಾಡ್ತಾರೆ. ಅವರ ಮೇಲೆ ಕೇಸ್ ಹಾಕಿಲ್ಲ. ನಾನು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದಾರೆಂಬ ಆರೋಪದಡಿ ಶೇಷಾದ್ರಿಪುರ ಠಾಣೆ ಪೊಲೀಸರು ನಟ ಚೇತನ್ ಅವರನ್ನು ಬಂಧಿಸಿದ್ದರು.

ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ (ಐಪಿಸಿ 505 (2) ಹಾಗೂ ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ (ಐಪಿಸಿ 504) ನೀಡಿದ್ದಾರೆ' ಎಂಬ ಆರೋಪದಡಿ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಚೇತನ್ ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

(ಇದನ್ನೂ ಓದಿ: ಸರ್ಕಾರಕ್ಕೆ 500 ಕೋಟಿ ರೂ. ನಷ್ಟ: ಎಸಿಬಿ ತನಿಖೆಯಲ್ಲಿ ಬಯಲಾಯ್ತು ಬಿಬಿಎಂಪಿ ಕಚೇರಿಗಳಲ್ಲಿನ ಭ್ರಷ್ಟಾಚಾರ)

Last Updated : Mar 1, 2022, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.