ETV Bharat / city

ಆನೇಕಲ್ ಜೋಡಿ ಕೊಲೆ ಪ್ರಕರಣ: ಆರೋಪಿ ಅರೆಸ್ಟ್​​ - ಆನೇಕಲ್ ಜೋಡಿ ಕೊಲೆ ಪ್ರಕರಣ

ಕಳೆದ ಶನಿವಾರ ಆನೇಕಲ್ ಭಾಗದ ಚಂದಾಪುರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಸೂರ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಹಾಗಡೆ ಮುತ್ತುರಾಜ್ ಬಂಧಿತ ಆರೋಪಿ.

Anekal double-murder case
ಆನೇಕಲ್​​ ಜೋಡಿ ಕೊಲೆ ಪ್ರಕರಣ ಆರೋಪಿ ಅರೆಸ್ಟ್​​
author img

By

Published : Dec 15, 2021, 11:03 AM IST

ಆನೇಕಲ್ (ಬೆಂಗಳೂರು): ಕಳೆದ ಶನಿವಾರ ಆನೇಕಲ್ ಭಾಗದ ಚಂದಾಪುರದಲ್ಲಿ ನಡೆದಿದ್ದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತ್​​ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ (ದಾಸ) ಮತ್ತು ಆತನ ಪ್ರೇಯಸಿ ಕಾವ್ಯ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸೂರ್ಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆನೇಕಲ್ ಜೋಡಿ ಕೊಲೆ ಪ್ರಕರಣ: ಎಸ್​ಪಿ ಡಾ.ಕೆ.ವಂಶಿಕೃಷ್ಣ ಮಾಹಿತಿ..

ಕೊಲೆಯಾದ ಕಾವ್ಯ ಅವರ ಪತಿ ಚಿಕ್ಕಹಾಗಡೆ ಮುತ್ತುರಾಜ್ ಬಂಧಿತ ಆರೋಪಿ. ತನ್ನ ಪತ್ನಿಯೊಂದಿಗೆ ನಾರಾಯಣಸ್ವಾಮಿ ವಿವಾಹೇತರ ಸಂಬಂಧ ಹೊಂದಿದ್ದನಂತೆ. ಚಂದಾಪುರದ ರಾಮಯ್ಯ ಬಡಾವಣೆಯ ಮನೆಗೆ ನಾರಾಯಣಸ್ವಾಮಿ ಬಂದಿದ್ದ ಸಂದರ್ಭದಲ್ಲಿ ಹಿಂಬಾಲಿಸಿದ್ದ ಮುತ್ತುರಾಜ್ ಬಾಗಿಲು ಮುರಿದು ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಆನೇಕಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಬೇರೆಯವರ ಕೈವಾಡ ಇದೆಯೇ ಎಂಬುದರ ಬಗ್ಗೆ ತನಿಖೆ ಮಾಡಲು ಎರಡು ತಂಡಗಳನ್ನು ರಚನೆ ಮಾಡಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜತೆಗೆ ಮೃತ ನಾರಾಯಣಸ್ವಾಮಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಹ ಆಗಿದ್ದ ಬಗ್ಗೆ ಮಾಹಿತಿ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಡಾ. ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ಸಹಾಯಕ್ಕೆ ಕರೆದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.. ಆರೋಪಿಗೆ ಚಪ್ಪಲಿ ಹಾರ - ವಿಡಿಯೋ ವೈರಲ್​

ಆನೇಕಲ್ (ಬೆಂಗಳೂರು): ಕಳೆದ ಶನಿವಾರ ಆನೇಕಲ್ ಭಾಗದ ಚಂದಾಪುರದಲ್ಲಿ ನಡೆದಿದ್ದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತ್​​ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ (ದಾಸ) ಮತ್ತು ಆತನ ಪ್ರೇಯಸಿ ಕಾವ್ಯ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸೂರ್ಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆನೇಕಲ್ ಜೋಡಿ ಕೊಲೆ ಪ್ರಕರಣ: ಎಸ್​ಪಿ ಡಾ.ಕೆ.ವಂಶಿಕೃಷ್ಣ ಮಾಹಿತಿ..

ಕೊಲೆಯಾದ ಕಾವ್ಯ ಅವರ ಪತಿ ಚಿಕ್ಕಹಾಗಡೆ ಮುತ್ತುರಾಜ್ ಬಂಧಿತ ಆರೋಪಿ. ತನ್ನ ಪತ್ನಿಯೊಂದಿಗೆ ನಾರಾಯಣಸ್ವಾಮಿ ವಿವಾಹೇತರ ಸಂಬಂಧ ಹೊಂದಿದ್ದನಂತೆ. ಚಂದಾಪುರದ ರಾಮಯ್ಯ ಬಡಾವಣೆಯ ಮನೆಗೆ ನಾರಾಯಣಸ್ವಾಮಿ ಬಂದಿದ್ದ ಸಂದರ್ಭದಲ್ಲಿ ಹಿಂಬಾಲಿಸಿದ್ದ ಮುತ್ತುರಾಜ್ ಬಾಗಿಲು ಮುರಿದು ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಆನೇಕಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಬೇರೆಯವರ ಕೈವಾಡ ಇದೆಯೇ ಎಂಬುದರ ಬಗ್ಗೆ ತನಿಖೆ ಮಾಡಲು ಎರಡು ತಂಡಗಳನ್ನು ರಚನೆ ಮಾಡಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಜತೆಗೆ ಮೃತ ನಾರಾಯಣಸ್ವಾಮಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಹ ಆಗಿದ್ದ ಬಗ್ಗೆ ಮಾಹಿತಿ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಡಾ. ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ಸಹಾಯಕ್ಕೆ ಕರೆದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.. ಆರೋಪಿಗೆ ಚಪ್ಪಲಿ ಹಾರ - ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.