ETV Bharat / city

ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯ..?

ಕೌಟುಂಬಿಕ ಕಲಹ ಹಿನ್ನೆಲೆ ಅಣ್ಣ-ತಮ್ಮಂದಿರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

author img

By

Published : Oct 25, 2020, 10:48 PM IST

murder
ಕೊಲೆ

ಬೆಂಗಳೂರು: ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಾಮಪುರದ ಲಕ್ಷ್ಮಿನಾರಾಯಣಪುರದ ನಿವಾಸಿ ರವಿ(36) ಮೃತ ವ್ಯಕ್ತಿ. ಮೃತನ ಸಹೋದರ ಆದಿಶಂಕರ್ ಪೊಲೀಸ್ ವಶದಲ್ಲಿದ್ದಾನೆ. ಮತ್ತೋರ್ವ ಸಹೋದರ ಕಾರ್ತಿಕ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀರಾಮಪುರದ ಲಕ್ಷ್ಮೀ ನಾರಾಯಣಪುರದ ಮನೆಯೊಂದರಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ‌. 9 ತಿಂಗಳು ಗರ್ಣಿಭಿಣಿಯಾಗಿದ್ದ ರಾಧಿಕಾ ಮನೆಯಲ್ಲಿರುವಾಗ ಗಂಡ ರವಿ ಕುಡಿದು ಮನೆಗೆ ಬಂದಿದ್ದಾನೆ ಎನ್ನಲಾಗ್ತಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಮನೆಯಲ್ಲಿದ್ದ ತಮ್ಮದಿಂದರಾದ ಆದಿಶಂಕರ್ ಹಾಗೂ ಕಾರ್ತಿಕ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ಮಾಡಿಕೊಂಡಿದ್ದಾರೆ. ಕೋಪದಿಂದ ರವಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಮ್ಮಂದಿರನ್ನು ತಿವಿಯಲು ಮುಂದಾಗಿದ್ದಾನೆ‌. ಈ ಸಂದರ್ಭ ಕಾರ್ತಿಕ್​ಗೆ ತೀವ್ರ ತರದ ಗಾಯವಾಗಿದೆ. ಇದಕ್ಕೆ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿ ಚಾಕು ಕಸಿದುಕೊಂಡು ರವಿಯ ಎದೆಗೆ ಆದಿ ಶಂಕರ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.‌ ಕೂಡಲೇ ಸಮೀಪ ಖಾಸಗಿ ಆಸ್ಪತ್ರೆ ದಾಖಲಿಸುವಷ್ಟರಲ್ಲಿ ಮಾರ್ಗ ಮಧ್ಯೆ ರವಿ ಮೃತಪಟ್ಟಿದ್ದಾನೆ.

ಈ ಸಂಬಂಧ ಆದಿಶಂಕರ್​ನನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.‌ ಘಟನೆಗೆ ನಿಖರ ಕಾರಣ ತನಿಖೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಾಮಪುರದ ಲಕ್ಷ್ಮಿನಾರಾಯಣಪುರದ ನಿವಾಸಿ ರವಿ(36) ಮೃತ ವ್ಯಕ್ತಿ. ಮೃತನ ಸಹೋದರ ಆದಿಶಂಕರ್ ಪೊಲೀಸ್ ವಶದಲ್ಲಿದ್ದಾನೆ. ಮತ್ತೋರ್ವ ಸಹೋದರ ಕಾರ್ತಿಕ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀರಾಮಪುರದ ಲಕ್ಷ್ಮೀ ನಾರಾಯಣಪುರದ ಮನೆಯೊಂದರಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ‌. 9 ತಿಂಗಳು ಗರ್ಣಿಭಿಣಿಯಾಗಿದ್ದ ರಾಧಿಕಾ ಮನೆಯಲ್ಲಿರುವಾಗ ಗಂಡ ರವಿ ಕುಡಿದು ಮನೆಗೆ ಬಂದಿದ್ದಾನೆ ಎನ್ನಲಾಗ್ತಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಮನೆಯಲ್ಲಿದ್ದ ತಮ್ಮದಿಂದರಾದ ಆದಿಶಂಕರ್ ಹಾಗೂ ಕಾರ್ತಿಕ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ಮಾಡಿಕೊಂಡಿದ್ದಾರೆ. ಕೋಪದಿಂದ ರವಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಮ್ಮಂದಿರನ್ನು ತಿವಿಯಲು ಮುಂದಾಗಿದ್ದಾನೆ‌. ಈ ಸಂದರ್ಭ ಕಾರ್ತಿಕ್​ಗೆ ತೀವ್ರ ತರದ ಗಾಯವಾಗಿದೆ. ಇದಕ್ಕೆ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿ ಚಾಕು ಕಸಿದುಕೊಂಡು ರವಿಯ ಎದೆಗೆ ಆದಿ ಶಂಕರ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.‌ ಕೂಡಲೇ ಸಮೀಪ ಖಾಸಗಿ ಆಸ್ಪತ್ರೆ ದಾಖಲಿಸುವಷ್ಟರಲ್ಲಿ ಮಾರ್ಗ ಮಧ್ಯೆ ರವಿ ಮೃತಪಟ್ಟಿದ್ದಾನೆ.

ಈ ಸಂಬಂಧ ಆದಿಶಂಕರ್​ನನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.‌ ಘಟನೆಗೆ ನಿಖರ ಕಾರಣ ತನಿಖೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.