ETV Bharat / city

ಶಿವಗಂಗೆಯಲ್ಲಿ ಕನ್ನಡ ಸಾಹಿತ್ಯ ಹಬ್ಬ: ಸ್ಥಳೀಯ ಮುಖಂಡರ ಕಡೆಗಣನೆಗೆ ಆಕ್ರೋಶ - ಕನ್ನಡ ಸಾಹಿತ್ಯ ಸಮ್ಮೇಳನ

ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಿಂದ ನಡೆಯಿತು.

ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡ ಸಾಹಿತ್ಯ ಹಬ್ಬ
author img

By

Published : Jul 27, 2019, 11:19 PM IST

ನೆಲಮಂಗಲ: ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಿಂದ ನಡೆಯಿತು. ಈ ವೇಳೆ ಸ್ಥಳೀಯ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದ್ರು.

ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡ ಸಾಹಿತ್ಯ ಹಬ್ಬ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ 'ದಕ್ಷಿಣಕಾಶಿ' ಎಂದೇ ಪ್ರಸಿದ್ದಿ ಪಡೆದಿರುವ ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೊನ್ನಶಾಮಯ್ಯ ನೇತೃತ್ವದಲ್ಲಿ ತ್ಯಾಮಗೊಂಡ್ಲು ಗ್ರಾಮದ ಚಿಂತಕ, ಕವಿ, ವಾಗ್ಮಿ, ಸಂಘಟಕ ಎಸ್. ಪಿನಾಕಪಾಣಿಯವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶಿವಗಂಗೆಯ ಶಾರದಾ ಕ್ರಾಸ್‍ನಿಂದ ವೇದಿಕೆಯವರೆಗೂ ಎಸ್. ಪಿನಾಕಪಾಣಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಎಸ್.ಪಿನಾಕಪಾಣಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಶ್ರದ್ಧಾ ಕೇಂದ್ರವಾಗಿರುವ ಶಿವಗಂಗೆ ಮತ್ತೊಮ್ಮೆ ಕನ್ನಡದ ಸಾಂಸ್ಕೃತಿಕ ಕೇಂದ್ರವಾಗಿ ಎದ್ದು ನಿಲ್ಲಬೇಕಿದೆ. ತಿಂಗಳಿಗೊಂದರಂತೆ ಪ್ರತಿಯೊಂದು ಮನೆಯಲ್ಲಿಯೂ ವರ್ಷಕ್ಕೆ ಕನಿಷ್ಟ 12 ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ಕನ್ನಡದ ವಾತಾವರಣವನ್ನು ಸೃಷ್ಠಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.

ವೇದಿಕೆ ಮೇಲೆ ಕಪ್ಪುಪಟ್ಟಿ ಪ್ರದರ್ಶನ:

ವೇದಿಕೆಯಲ್ಲಿ ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಶಿವಗಂಗೆ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಕೆಲ ಸಂಘಟನೆಗಳ ಮುಖಂಡರು ತಾಲ್ಲೂಕು ಅಧ್ಯಕ್ಷರ ವಿರುದ್ದ ಕಪ್ಪುಪಟ್ಟಿ ಧರಿಸಿ ಘೋಷಣೆಗಳನ್ನು ಮೊಳಗಿಸಿದ್ರು. ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರನ್ನು ಆಹ್ವಾನಿಸದೇ ತಾಲೂಕು​ ಅಧ್ಯಕ್ಷರು ನಮಗೆ ಅಗೌರವ ತೋರಿದ್ದಾರೆ ಎಂದು ಕಾರ್ಯಕ್ರಮವನ್ನು ಮುಂದೂಡುವಂತೆ ಒತ್ತಾಯಿಸಿದರು.

ನೆಲಮಂಗಲ: ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಿಂದ ನಡೆಯಿತು. ಈ ವೇಳೆ ಸ್ಥಳೀಯ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದ್ರು.

ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡ ಸಾಹಿತ್ಯ ಹಬ್ಬ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ 'ದಕ್ಷಿಣಕಾಶಿ' ಎಂದೇ ಪ್ರಸಿದ್ದಿ ಪಡೆದಿರುವ ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೊನ್ನಶಾಮಯ್ಯ ನೇತೃತ್ವದಲ್ಲಿ ತ್ಯಾಮಗೊಂಡ್ಲು ಗ್ರಾಮದ ಚಿಂತಕ, ಕವಿ, ವಾಗ್ಮಿ, ಸಂಘಟಕ ಎಸ್. ಪಿನಾಕಪಾಣಿಯವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶಿವಗಂಗೆಯ ಶಾರದಾ ಕ್ರಾಸ್‍ನಿಂದ ವೇದಿಕೆಯವರೆಗೂ ಎಸ್. ಪಿನಾಕಪಾಣಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಎಸ್.ಪಿನಾಕಪಾಣಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಶ್ರದ್ಧಾ ಕೇಂದ್ರವಾಗಿರುವ ಶಿವಗಂಗೆ ಮತ್ತೊಮ್ಮೆ ಕನ್ನಡದ ಸಾಂಸ್ಕೃತಿಕ ಕೇಂದ್ರವಾಗಿ ಎದ್ದು ನಿಲ್ಲಬೇಕಿದೆ. ತಿಂಗಳಿಗೊಂದರಂತೆ ಪ್ರತಿಯೊಂದು ಮನೆಯಲ್ಲಿಯೂ ವರ್ಷಕ್ಕೆ ಕನಿಷ್ಟ 12 ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ಕನ್ನಡದ ವಾತಾವರಣವನ್ನು ಸೃಷ್ಠಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.

ವೇದಿಕೆ ಮೇಲೆ ಕಪ್ಪುಪಟ್ಟಿ ಪ್ರದರ್ಶನ:

ವೇದಿಕೆಯಲ್ಲಿ ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಶಿವಗಂಗೆ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಕೆಲ ಸಂಘಟನೆಗಳ ಮುಖಂಡರು ತಾಲ್ಲೂಕು ಅಧ್ಯಕ್ಷರ ವಿರುದ್ದ ಕಪ್ಪುಪಟ್ಟಿ ಧರಿಸಿ ಘೋಷಣೆಗಳನ್ನು ಮೊಳಗಿಸಿದ್ರು. ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರನ್ನು ಆಹ್ವಾನಿಸದೇ ತಾಲೂಕು​ ಅಧ್ಯಕ್ಷರು ನಮಗೆ ಅಗೌರವ ತೋರಿದ್ದಾರೆ ಎಂದು ಕಾರ್ಯಕ್ರಮವನ್ನು ಮುಂದೂಡುವಂತೆ ಒತ್ತಾಯಿಸಿದರು.

Intro:ದಕ್ಷಿಣಕಾಶಿ ಶಿವಗಂಗೆಯಲ್ಲಿ ಕನ್ನಡ ಸಾಹಿತ್ಯದ ಹಬ್ಬ
ಸ್ಥಳೀಯ ಮುಖಂಡರ ಕಡೇಗಣನೆ ಕಪ್ಪಪಟ್ಟಿ ಪ್ರದರ್ಶನ
Body:ನೆಲಮಂಗಲ : ತಾಲೂಕಿನ ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ತಾಲ್ಲೂಕು ಮಟ್ಟದ 11ನೇ ಕನ್ನಡಸಾಹಿತ್ಯ ಸಮ್ಮೇಳನ ಅದ್ಧೂರಿಯಿಂದ ನಡೆಯಿತು. ಅದರೆ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನಲೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಶಿವಗಂಗೆಯ ಹೊನ್ನಮ್ಮಗವಿ ಮಠದ ಆವರಣದಲ್ಲಿ ಕನ್ನಡ ಹಬ್ಬ. ಅದಕ್ಕೆ ಸಾಕ್ಷಿಯಾಗಿದ್ದು 11ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ. ತಾಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹೊನ್ನಶಾಮಯ್ಯ ನೇತೃತ್ವದಲ್ಲಿ, ತ್ಯಾಮಗೊಂಡ್ಲು ಗ್ರಾಮದ ಚಿಂತಕ,ಕವಿ, ವಾಗ್ಮಿ, ಸಂಘಟಕ ಎಸ್,ಪಿನಾಕಪಾಣಿಯವರನ್ನು ಸಮ್ಮೇಳನಾಧ್ಯಕ್ಷರಾಗಿ 11ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಿದರು,
ಸಮ್ಮೇಳನಾಧ್ಯಕ್ಷ ಎಸ್,ಪಿನಾಕಪಾಣಿಯವರನ್ನು ಶಿವಗಂಗೆಯ ಶಾರದ ಕ್ರಾಸ್‍ನಿಂದ ವೇದಿಕೆಯವರೆಗೂ ಮೆರವಣಿಗೆ ಮಾಡಲಾಯಿತು. ಇವರ ಜೊತೆಯಾಗಿ ಬೆಳ್ಳಿರಥದಲ್ಲಿ ಕನ್ನಡಸಾಹಿತ್ಯ ಹಾಗೂ ವಚನಸಾಹಿತ್ಯ ಸಾರುವ ಕನ್ನಡಾಂಬೆ ಡಾ,ಶಿವಕುಮಾರಸ್ವಾಮೀಜಿ ಮತ್ತು ಬಸವಣ್ಣನವರ ಭಾವಚಿತ್ರವನ್ನಿಟ್ಟು ಮೆರವಣಿಗೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮವನ್ನು ಹೊನ್ನಮ್ಮಗವಿ ಮಠದ ಪೀಠಾಧ್ಯಕ್ಷರಾದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್ ರಾಷ್ಟ್ರದ್ವಜವನ್ನು ಹಾರಿಸಿ, ವೇದಿಕೆಯಲ್ಲಿ ದೀಪ ಬೆಳಗಿಸುವುದರ ಮೂಲಕ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.
ವೇದಿಕೆಯ ಮೇಲೆ ಕಪ್ಪುಪಟ್ಟಿ ಪ್ರದರ್ಶನ
ವೇದಿಕೆ ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಶಿವಗಂಗೆ ಗ್ರಾಮಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಇವರ ಜೊತೆ ಸಂಘಟನೆಗಳ ಮುಖಂಡರು ತಾಲ್ಲೂಕು ಅಧ್ಯಕ್ಷರ ವಿರುದ್ದ ಕಪ್ಪುಪಟ್ಟಿ ಧರಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ತಾಲೂಕು ಅಧ್ಯಕ್ಷರು ನಮಗೆ ಅಗೌರವ ತೋರಿದ್ದಾರೆ. ಕಾರ್ಯಕ್ರಮವನ್ನು ಮುಂದೂಡುವಂತೆ ಒತ್ತಾಯಿಸಿದರು, ವೇದಿಕೆಯಲ್ಲಿದ್ದ ವೇಳೆಯಲ್ಲಿ ತಹಶೀಲ್ದಾರ್ ರಾಜಶೇಖರ್ ಮಧ್ಯಪ್ರವೇಶಿಸಿ ಮುಂದಿನ ದಿನಗಳಲ್ಲಿ ಈರೀತಿಯಾಗದಂತೆ ಪ್ರತಿಭಟನಾಕಾರರನ್ನು ಸಮಾಧನಪಡಿಸಿದರು.

ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷ ಎಸ್,ಪಿನಾಕಪಾಣಿ ಮಾತನಾಡಿ ಶಿವಗಂಗಾ ಕ್ಷೇತ್ರ ದಕ್ಷಿಣಕಾಶಿಯೆಂದೇ ಪ್ರಸಿದ್ದವಾಗಿದ್ದು, ನೋಟಕ್ಕೆ ಹಿತವೆನ್ನುವ ಕೊಳಗಳು, ಭಕ್ತಿಯ ನೆಲೆಗಳು, ಪ್ರವಾಸಿಗರ ಸುಂದರತಾಣ ಇವೇಲ್ಲವೂ ಇರುವ ಶಿವಗಂಗೆ ಹಾಗೂ ಸುತ್ತಮುತ್ತಲ ಪ್ರದೇಶಗಳ ಸಮಗ್ರ ಅಭಿವೃದ್ದಿಗೆ ಶಿವಗಂಗೆ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಬೇಕು. ಮತ್ತು ವೈವಿದ್ಯಮಯ ವಿಚಾರಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಶಿವಗಂಗೆಯು ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿದೆ, ಅದನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ಸರ್ಕಾರ ಮತ್ತು ಕನ್ನಡಿಗರದ್ದಾಗಿದೆ, ನಾಡಪ್ರಭು ಕೆಂಪೇಗೌಡರ ಶ್ರದ್ಧಾ ಕೇಂದ್ರವಾಗಿರುವ ಶಿವಗಂಗೆ ಮತ್ತೊಮ್ಮೆ ಕನ್ನಡದ ಸಾಂಸ್ಕೃತಿಕ ಕೇಂದ್ರವಾಗಿ ಎದ್ದುನಿಲ್ಲಬೇಕಾಗಿದೆ, ಶಿವಗಂಗೆಯ ಸುತ್ತಮುತ್ತಲೂ ಅಕ್ರಮಗಣಿಗಾರಿಕೆ ನಡೆಯುತ್ತಿರುವುದಕ್ಕೆ ಪಿನಾಕಪಾಣಿಯವರು ಬೇಸರ ವ್ಯಕ್ತಪಡಿಸಿ, ತಿಂಗಳಿಗೊಂದರಂತೆ ಪ್ರತಿಯೊಂದು ಮನೆಗಳಲ್ಲಿಯೂ ವರ್ಷಕ್ಕೆ ಕನಿಷ್ಟ 12 ಕನ್ನಡಪುಸ್ತಕಗಳನ್ನು ಕೊಂಡು ಓದುವುದರ ಮೂಲಕ ಕನ್ನಡದ ವಾತಾವರಣವನ್ನು ಸೃಷ್ಠಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.