ETV Bharat / city

ಬಳ್ಳಾರಿಯ ಕಿರುಮೃಗಾಲಯದಿಂದ ಪ್ರಾಣಿಗಳ ಸ್ಥಳಾಂತರಕ್ಕೆ ಸ್ಥಳೀಯರಿಂದ ವಿರೋಧ

author img

By

Published : Aug 22, 2019, 10:19 PM IST

ಆ ಭಾಗದ ಸಾರ್ವಜನಿಕರಿಗೆ ಅಲ್ಲಿರೋದು ಒಂದೇ ಒಂದು ಮೃಗಾಲಯ. ಅದು ಕೂಡಾ ಕಿರು ಮೃಗಾಲಯ. ಈಗ ಅಲ್ಲಿರುವ ಕೆಲವೇ ಕೆಲವು ಪ್ರಾಣಿಗಳನ್ನು ಪಕ್ಕದ ಮತ್ತೊಂದು ಮೃಗಾಲಯಕ್ಕೆ ಸ್ಥಳಾಂತರ ಮಾಡುವ ತಯಾರಿ ನಡೆಯುತ್ತಿವೆ. ಹೀಗಾಗಿ ರೊಚ್ಚಿಗೆದ್ದ ಅಲ್ಲಿನ ಸ್ಥಳೀಯರು, ಕಿರು ಮೃಗಾಲಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪ್ರಾಣಿಗಳ ಸ್ಥಳಾಂತರಕ್ಕೆ ಸ್ಥಳೀಯರಿಂದ ವಿರೋಧ

ಬಳ್ಳಾರಿ: ಕಳೆದ ಮೂರು ದಿನಗಳ ಹಿಂದೆ ನಗರದ ಕಿರು ಮೃಗಾಲಯದಲ್ಲಿನ ನಾಲ್ಕು ಮೊಸಳೆಗಳನ್ನು ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ನಗರದ ರೇಡಿಯೋ ಪಾರ್ಕ್​ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

Opposition from the locals to the displacement of animals from Zoo
ಜಿಂಕೆಗಳ ಸ್ಥಳಾಂತರಕ್ಕೆ ಬಂದಿದ್ದ ಲಾರಿ

ಕೇಂದ್ರ ಸರ್ಕಾರದಿಂದ ಬಳ್ಳಾರಿಯ ಕಿರು ಮೃಗಾಲಯದ ಪ್ರಾಣಿ, ಪಕ್ಷಿಗಳನ್ನು ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡುವ ಆದೇಶವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ದೊರಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಾಣಿ, ಪಕ್ಷಿಗಳ ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮೂಲಕ ಇಂದಿನಿಂದ ಹಗಲು-ರಾತ್ರಿಯೆನ್ನದೆ ಝೂ ಮುಂದೆಯೇ ಇದ್ದು, ಪ್ರಾಣಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರಾಣಿಗಳ ಸ್ಥಳಾಂತರಕ್ಕೆ ಸ್ಥಳೀಯರಿಂದ ವಿರೋಧ

ಈ ನಡುವೆ ಇಲ್ಲಿನ ಜಿಂಕೆಗಳನ್ನು ಸ್ಥಳಾಂತರ ಮಾಡಲು ಲಾರಿಯೊಂದು ಕಿರುಮೃಗಾಲಯದ ಒಳಗಡೆ ಬಂದಿತ್ತು. ಈ ವೇಳೆ ರೊಚ್ಚಿಗೆದ್ದ ರೇಡಿಯೋ ಪಾರ್ಕ್ ಸಾರ್ವಜನಿಕರು ಲಾರಿಯನ್ನು ಹೊರಗಡೆ ಕಳುಹಿಸಿದರು.

ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎ ಎಂ ಸಂಜಯ, ಕಿರು ಮೃಗಾಲಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.

ಬಳ್ಳಾರಿ: ಕಳೆದ ಮೂರು ದಿನಗಳ ಹಿಂದೆ ನಗರದ ಕಿರು ಮೃಗಾಲಯದಲ್ಲಿನ ನಾಲ್ಕು ಮೊಸಳೆಗಳನ್ನು ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ನಗರದ ರೇಡಿಯೋ ಪಾರ್ಕ್​ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.

Opposition from the locals to the displacement of animals from Zoo
ಜಿಂಕೆಗಳ ಸ್ಥಳಾಂತರಕ್ಕೆ ಬಂದಿದ್ದ ಲಾರಿ

ಕೇಂದ್ರ ಸರ್ಕಾರದಿಂದ ಬಳ್ಳಾರಿಯ ಕಿರು ಮೃಗಾಲಯದ ಪ್ರಾಣಿ, ಪಕ್ಷಿಗಳನ್ನು ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡುವ ಆದೇಶವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ದೊರಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರಾಣಿ, ಪಕ್ಷಿಗಳ ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮೂಲಕ ಇಂದಿನಿಂದ ಹಗಲು-ರಾತ್ರಿಯೆನ್ನದೆ ಝೂ ಮುಂದೆಯೇ ಇದ್ದು, ಪ್ರಾಣಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರಾಣಿಗಳ ಸ್ಥಳಾಂತರಕ್ಕೆ ಸ್ಥಳೀಯರಿಂದ ವಿರೋಧ

ಈ ನಡುವೆ ಇಲ್ಲಿನ ಜಿಂಕೆಗಳನ್ನು ಸ್ಥಳಾಂತರ ಮಾಡಲು ಲಾರಿಯೊಂದು ಕಿರುಮೃಗಾಲಯದ ಒಳಗಡೆ ಬಂದಿತ್ತು. ಈ ವೇಳೆ ರೊಚ್ಚಿಗೆದ್ದ ರೇಡಿಯೋ ಪಾರ್ಕ್ ಸಾರ್ವಜನಿಕರು ಲಾರಿಯನ್ನು ಹೊರಗಡೆ ಕಳುಹಿಸಿದರು.

ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎ ಎಂ ಸಂಜಯ, ಕಿರು ಮೃಗಾಲಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.

Intro:ಕಿರುಮೃಗಾಲಯ ಸ್ಥಳಾಂತರಕ್ಕೆ ಸ್ಥಳೀಯರಿಂದ ವಿರೋಧ.
ನಾಲ್ಕು ಮೊಸಳೆ ಅಟಲ್ ಬಿಹಾರಿ ವಾಜಪೇಯಿ ಮೃಗಾಯಲಕ್ಕೆ ಸ್ಥಳಾಂತರ.

ಮೂರು ದಿನಗಳ ಹಿಂದೆ ಕಿರು ಮೃಗಾಲಯದಲ್ಲಿನ ನಾಲ್ಕು
ಮೊಸಳೆಗಳನ್ನು ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಕಮಲಾಪುರಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ನಗರದ ರೇಡಿಯೋ ಪಾರ್ಕ್ನ ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದರು.




Body:ನಗರದ ರೇಡಿಯೋ ಪಾರ್ಕ್ ನ ಕಿರುಮೃಗಾಲಯದಲ್ಲಿ ಈಟಿವಿ ಭಾರತ ನೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎ.ಎಂ ಸಂಜಯ ಮತ್ತು ಸಾರ್ವಜನಿಕರು ಕಿರು ಮೃಗಾಲಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಿದರು.

ಕೇಂದ್ರ ಸರ್ಕಾರದಿಂದ ಬಳ್ಳಾರಿಯ ಕಿರು ಮೃಗಾಲಯದ ಪ್ರಾಣಿ, ಪಕ್ಷಿಗಳನ್ನು ಕಮಲಾಪುರದಲ್ಲಿನ ಅಟಲ್ ಬಿಹಾರ ವಾಜಪೇಯಿ ಸ್ಥಳಾಂತರ ಮಾಡುವ ಆದೇಶವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ. ಆದ್ರೇ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ಪ್ರತಿಭಟನೆ ಮೂಲಕ ಉಗ್ರ ಹೋರಾಟ ಮತ್ತು ಇವತ್ತಿನಿಂದ ಹಗಲು ರಾತ್ರಿ ಜ್ಯೂ ಮುಂದೆನೆ ಇದ್ದು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಜಿಂಕೆಗಳನ್ನು ಸ್ಥಳಾಂತರ ಮಾಡಲು ಲಾರಿಯೊಂದು ಕಿರುಮೃಗಾಲಯದ ಒಳಗಡೆ ಬಂತಿತ್ತು ಅದನ್ನು ರೇಡಿಯೋ ಪಾರ್ಕ್ ನ ಸಾರ್ವಜನಿಕರು ಹೊರಗಡೆ ಕಳಿಸಿದರು.

ನಗರದ ರೇಡಿಯೋ ಪಾರ್ಕ್ ಬಳಿಯಲ್ಲಿರುವ ಕಿರುಮೃಗಾಲಯದಲ್ಲಿನ ಪ್ರಾಣಿ, ಪಕ್ಷಿಗಳನ್ನು ಒಂದು ವಾರದೊಳಗೆ ಸಂಪೂರ್ಣವಾಗಿ ಕಮಲಾಪುರ ರಾಷ್ಟ್ರೀಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರ ಮಾಡುತ್ತಾರೆ ಎನ್ನುವ ಮಾಹಿತಿಯು ಮೃಗಾಲಯದ ಸಿಬ್ಬಂದಿಗಳಿಂದ ಮಾಹಿತಿ ದೊರೆತಿದೆ.

ಒಟ್ಟಾರೆಯಾಗಿ ಕಿರುಮೃಗಾಲಯ ಸ್ಥಳಾಂತರ ಮಾಡಬಾರದು, ಪ್ರಾಣಿ,ಪಕ್ಷಿಗಳನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ, ಹಗಲು ರಾತ್ರಿ ಕಿರುಮೃಗಾಲಯದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎ.ಎಂ ಸಂಜಯ ತಿಳಿಸಿದರು.




Conclusion:ಈ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಎ.ಎಂ ಸಂಜಯ, ನಾಗರಾಜ್, ಸುರೇಶ್ ಕುಮಾರ,ಚಕ್ರದಾರಿ, ರಂಜೀತ್, ಶಿವ, ಪಾಲ್, ಮೈಕಲ್, ರವಿ, ಭೀಮಾರೆಡ್ಡಿ ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.