ETV Bharat / city

ಗಣಿ ನಗರಿಯಲ್ಲೊಂದು ವಿನೂತನ ಪ್ರಯತ್ನ.... ಒಳಚರಂಡಿ ನೀರು ಶುದ್ಧೀಕರಣದಿಂದ ಬೆಳೆದು ನಿಂತ ನೂರಾರು ಮರಗಳು

author img

By

Published : Aug 31, 2019, 8:55 AM IST

Updated : Aug 31, 2019, 11:44 AM IST

ಬಳ್ಳಾರಿ ಜಿಲ್ಲಾದ್ಯಂತ ಒಳಚರಂಡಿ (ಯುಜಿಡಿ) ನೀರನ್ನು ರಾಜ ಕಾಲುವೆಗೆ ಹರಿಬಿಡುವ ಮುಖೇನ ಸುತ್ತಲಿನ ಪರಿಸರ ಹದಗೆಟ್ಟಿದ್ದು, ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಒಳಚರಂಡಿ ನೀರನ್ನು ಶುದ್ಧೀಕರಿಸಿ ಗಿಡ, ಮರಗಳಿಗೆ ಪೂರೈಕೆ ಮಾಡಬಹುದು ಎಂಬ ಆಲೋಚನೆಯೊಂದನ್ನು ಗಣಿ ನಗರಿಯ ಖಾಸಗಿ ಕಾಲೇಜೊಂದು ಹುಟ್ಟುಹಾಕಿದೆ.

ಒಳಚರಂಡಿ ನೀರು ಶುದ್ಧೀಕರಣ ಪ್ರಾರಂಭ

ಬಳ್ಳಾರಿ: ಜಿಲ್ಲಾದ್ಯಂತ ಒಳಚರಂಡಿ (ಯುಜಿಡಿ) ನೀರನ್ನು ರಾಜ ಕಾಲುವೆಗೆ ಹರಿಬಿಡುವ ಮುಖೇನ ಸುತ್ತಲಿನ ಪರಿಸರ ಹದಗೆಟ್ಟಿದ್ದು, ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಒಳಚರಂಡಿ ನೀರು ಶುದ್ಧೀಕರಿಸಿ ಗಿಡ, ಮರಗಳಿಗೆ ಪೂರೈಕೆ ಮಾಡಬಹುದು ಎಂಬ ಆಲೋಚನೆಯೊಂದನ್ನು ಗಣಿ ನಗರಿಯ ಖಾಸಗಿ ಕಾಲೇಜೊಂದು ಹುಟ್ಟುಹಾಕಿದೆ.

ಒಳಚರಂಡಿ ನೀರು ಶುದ್ಧೀಕರಣ ಪ್ರಾರಂಭ

ಹೌದು, ಬಳ್ಳಾರಿ ನಗರ ವ್ಯಾಪ್ತಿಯ ಅಲ್ಲೀಪುರ ಬಳಿಯಿರುವ ಬಳ್ಳಾರಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್​​ಮೆಂಟ್​ ಕಾಲೇಜು ಕಳೆದ ಎರಡು ವರ್ಷಗಳ ಹಿಂದಷ್ಟೇ ಯುಜಿಡಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿದೆ. ನಿತ್ಯ 325 ಕೆಎಲ್​ಡಿ ಒಳಚರಂಡಿ ನೀರನ್ನು ಶುದ್ಧೀಕರಿಸಿ, ಅಂದಾಜು 300 ಕ್ಕೂ ಅಧಿಕ ಗಿಡ, ಮರಗಳನ್ನು ಈ ಕಾಲೇಜಿನ ಆವರಣದಲ್ಲಿ ಬೆಳೆಸಲಾಗಿದೆ. ಅದರಂತೆಯೇ ಮಳೆ‌ ನೀರು ಕೊಯ್ಲು ಯೋಜನೆಯು ಜಾರಿಯಲ್ಲಿದೆ.

ಬೃಹತ್ ಕಾಲೇಜು ಕಟ್ಟಡದ ಕೆಳಭಾಗದಲ್ಲಿ ಮಳೆ ನೀರು ಕೊಯ್ಲಿಗೆ ಪೈಪ್​ಲೈನ್ ಸಂಪರ್ಕ ಮಾಡಲಾಗಿದೆ. ಕಾಲೇಜು ಆವರಣದ ಒಂದು ಮೂಲೆಯಲ್ಲಿ ಈ ಮಳೆ ನೀರು ಸಂಗ್ರಹಗೊಳ್ಳುವ ಪಾಯಿಂಟ್ ಅನ್ನು ಗುರುತಿಸಲಾಗಿದೆ. ಆ ಮೂಲಕ ಮಳೆ ನೀರು ಕೊಯ್ಲು ಮಾಡಲಾಗುತ್ತದೆ.

70 ಲಕ್ಷ ವೆಚ್ಚದ ಯುಜಿಡಿ ನೀರಿನ ಶುದ್ಧೀಕರಣ ಘಟಕ:

ಕಳೆದ ಎರಡು ವರ್ಷಗಳ ಹಿಂದೆ ಈ ಕಾಲೇಜಿನ ಆವರಣದಲ್ಲಿ ಯುಜಿಡಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ಅಂದಾಜು 70 ಲಕ್ಷ ರೂ. ವ್ಯಯ ಮಾಡಲಾಗಿದೆ. ಸರಿಸುಮಾರು 3 ಲಕ್ಷದ 25 ಸಾವಿರ ಕೆಎಲ್​ಡಿ ನೀರನ್ನು ಶುದ್ಧೀಕರಿಸಿ ಗಿಡ, ಮರಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಬಿಐಟಿಎಂ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಡಾ.ಯಶವಂತ ಭೂಪಾಲ ಈ ಟಿವಿ ಭಾರತಕ್ಕೆ ತಿಳಿಸಿದರು.

ಅಂದಾಜು 15 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಯುಜಿಡಿ ನೀರು ಹೊರಗಡೆ ಹರಿ ಬಿಡುವುದರಿಂದ ಪರಿಸರ ಮಾಲಿನ್ಯ ಹಾಗೂ ಅಶುಚಿತ್ವದ ಕೊರತೆ ಎದ್ದುಕಾಣುವ ಸಾಧ್ಯತೆ ಇರುವುದರಿಂದ ಇಂತಹ ವಿನೂತನ ಪ್ರಯತ್ನಕ್ಕೆ ನಾವು ಮುಂದಾಗಿದ್ದೇವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಚ ಭಾರತ್​ ಮಿಷನ್​ಗೆ ಈ ಯುಜಿಡಿ ನೀರಿನ ಶುದ್ಧೀಕರಣವು ಒಂದು ಭಾಗವಾಗಿದೆ. ಹಾಗಾಗಿ, ಯುಜಿಡಿ ನೀರಿನ ಶುದ್ಧೀಕರಣ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಂಸನೀಯ ಪತ್ರವೂ ಬಂದಿದೆ ಎಂದರು.

ಬಳ್ಳಾರಿ: ಜಿಲ್ಲಾದ್ಯಂತ ಒಳಚರಂಡಿ (ಯುಜಿಡಿ) ನೀರನ್ನು ರಾಜ ಕಾಲುವೆಗೆ ಹರಿಬಿಡುವ ಮುಖೇನ ಸುತ್ತಲಿನ ಪರಿಸರ ಹದಗೆಟ್ಟಿದ್ದು, ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಒಳಚರಂಡಿ ನೀರು ಶುದ್ಧೀಕರಿಸಿ ಗಿಡ, ಮರಗಳಿಗೆ ಪೂರೈಕೆ ಮಾಡಬಹುದು ಎಂಬ ಆಲೋಚನೆಯೊಂದನ್ನು ಗಣಿ ನಗರಿಯ ಖಾಸಗಿ ಕಾಲೇಜೊಂದು ಹುಟ್ಟುಹಾಕಿದೆ.

ಒಳಚರಂಡಿ ನೀರು ಶುದ್ಧೀಕರಣ ಪ್ರಾರಂಭ

ಹೌದು, ಬಳ್ಳಾರಿ ನಗರ ವ್ಯಾಪ್ತಿಯ ಅಲ್ಲೀಪುರ ಬಳಿಯಿರುವ ಬಳ್ಳಾರಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್​​ಮೆಂಟ್​ ಕಾಲೇಜು ಕಳೆದ ಎರಡು ವರ್ಷಗಳ ಹಿಂದಷ್ಟೇ ಯುಜಿಡಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿದೆ. ನಿತ್ಯ 325 ಕೆಎಲ್​ಡಿ ಒಳಚರಂಡಿ ನೀರನ್ನು ಶುದ್ಧೀಕರಿಸಿ, ಅಂದಾಜು 300 ಕ್ಕೂ ಅಧಿಕ ಗಿಡ, ಮರಗಳನ್ನು ಈ ಕಾಲೇಜಿನ ಆವರಣದಲ್ಲಿ ಬೆಳೆಸಲಾಗಿದೆ. ಅದರಂತೆಯೇ ಮಳೆ‌ ನೀರು ಕೊಯ್ಲು ಯೋಜನೆಯು ಜಾರಿಯಲ್ಲಿದೆ.

ಬೃಹತ್ ಕಾಲೇಜು ಕಟ್ಟಡದ ಕೆಳಭಾಗದಲ್ಲಿ ಮಳೆ ನೀರು ಕೊಯ್ಲಿಗೆ ಪೈಪ್​ಲೈನ್ ಸಂಪರ್ಕ ಮಾಡಲಾಗಿದೆ. ಕಾಲೇಜು ಆವರಣದ ಒಂದು ಮೂಲೆಯಲ್ಲಿ ಈ ಮಳೆ ನೀರು ಸಂಗ್ರಹಗೊಳ್ಳುವ ಪಾಯಿಂಟ್ ಅನ್ನು ಗುರುತಿಸಲಾಗಿದೆ. ಆ ಮೂಲಕ ಮಳೆ ನೀರು ಕೊಯ್ಲು ಮಾಡಲಾಗುತ್ತದೆ.

70 ಲಕ್ಷ ವೆಚ್ಚದ ಯುಜಿಡಿ ನೀರಿನ ಶುದ್ಧೀಕರಣ ಘಟಕ:

ಕಳೆದ ಎರಡು ವರ್ಷಗಳ ಹಿಂದೆ ಈ ಕಾಲೇಜಿನ ಆವರಣದಲ್ಲಿ ಯುಜಿಡಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲು ಅಂದಾಜು 70 ಲಕ್ಷ ರೂ. ವ್ಯಯ ಮಾಡಲಾಗಿದೆ. ಸರಿಸುಮಾರು 3 ಲಕ್ಷದ 25 ಸಾವಿರ ಕೆಎಲ್​ಡಿ ನೀರನ್ನು ಶುದ್ಧೀಕರಿಸಿ ಗಿಡ, ಮರಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ಬಿಐಟಿಎಂ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಡಾ.ಯಶವಂತ ಭೂಪಾಲ ಈ ಟಿವಿ ಭಾರತಕ್ಕೆ ತಿಳಿಸಿದರು.

ಅಂದಾಜು 15 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಯುಜಿಡಿ ನೀರು ಹೊರಗಡೆ ಹರಿ ಬಿಡುವುದರಿಂದ ಪರಿಸರ ಮಾಲಿನ್ಯ ಹಾಗೂ ಅಶುಚಿತ್ವದ ಕೊರತೆ ಎದ್ದುಕಾಣುವ ಸಾಧ್ಯತೆ ಇರುವುದರಿಂದ ಇಂತಹ ವಿನೂತನ ಪ್ರಯತ್ನಕ್ಕೆ ನಾವು ಮುಂದಾಗಿದ್ದೇವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಚ ಭಾರತ್​ ಮಿಷನ್​ಗೆ ಈ ಯುಜಿಡಿ ನೀರಿನ ಶುದ್ಧೀಕರಣವು ಒಂದು ಭಾಗವಾಗಿದೆ. ಹಾಗಾಗಿ, ಯುಜಿಡಿ ನೀರಿನ ಶುದ್ಧೀಕರಣ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಂಸನೀಯ ಪತ್ರವೂ ಬಂದಿದೆ ಎಂದರು.

Intro:ಕೇಂದ್ರಕಾಲೇಜಿನಲ್ಲಿ ಯುಜಿಡಿ ಪ್ಲಾಂಟ್
ಒಳಚರಂಡಿ ನೀರಿನ ಶುದ್ಧೀಕರಣ ಘಟಕದಿಂದಲೇ ನೂರಾರು ಗಿಡಗಳನ್ನ ನೆಟ್ಟ ಬಿಐಟಿಎಂ ಕಾಲೇಜು!
ಬಳ್ಳಾರಿ: ಜಿಲ್ಲಾದ್ಯಂತ ಒಳಚರಂಡಿ (ಯುಜಿಡಿ) ನೀರನ್ನು ರಾಜ ಕಾಲುವೆಗೆ ಹರಿಬಿಡುವ ಮುಖೇನ ಸುತ್ತಲಿನ ಪರಿಸರ ಮಾಲಿನ್ಯ ಹದಗೆಟ್ಟಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದಿವೆ.
ಆದರೆ, ಆ ಒಳಚರಂಡಿ ನೀರನ್ನು ಶುದ್ಧೀಕರಿಸಿ ಗಿಡ, ಮರಗಳಿಗೆ ಪೂರೈಕೆ ಮಾಡಬಹುದು ಎಂಬ ಆಲೋಚನೆಯೊಂದನ್ನು ಗಣಿ ನಗರಿಯ ಖಾಸಗಿ ಕಾಲೇಜೊಂದು ಹುಟ್ಟುಹಾಕಿದೆ.
ಹೌದು, ಇಂಥದೊಂದು ದುಸ್ಸಾಹಸಕ್ಕೆ ಮುಂದಾಗಿರೋದು
ಬಳ್ಳಾರಿ ನಗರ ವ್ಯಾಪ್ತಿಯ ಅಲ್ಲೀಪುರ ಬಳಿಯಿರುವ ಬಳ್ಳಾರಿ
ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ ಕಾಲೇಜು.
ಕಳೆದ ಎರಡು ವರ್ಷಗಳ ಹಿಂದಷ್ಟೇ ಈ ಯುಜಿಡಿ ನೀರು ಶುದ್ದೀಕರಣ ಘಟಕವನ್ನು ಸ್ಥಾಪಿಸಿದೆ. ದಿನಾಲೂ 325 ಕೆಎಲ್ ಡಿ ಒಳಚರಂಡಿ ನೀರನ್ನು ಶುದ್ಧೀಕರಿಸಿ ಅಂದಾಜು 300ಕ್ಕೂ ಅಧಿಕ ಗಿಡ, ಮರಗಳನ್ನು ಈ ಕಾಲೇಜಿನ ಆವರಣದಲ್ಲಿ ಬೆಳೆಸಲಾಗಿದೆ.
ಅದರಂತೆಯೇ ಮಳೆ‌ ನೀರು ಕೊಯ್ಲಿ ಯೋಜನೆಯೂ ಜಾರಿಯ ಲ್ಲಿದೆ. ಬೃಹತ್ ಕಾಲೇಜು ಕಟ್ಟಡದ ಕೆಳಭಾಗದಲ್ಲಿ ಮಳೆ ನೀರು ಕೊಯ್ಲಿಗೆ ಒಳಭಾಗದ ಪೈಪ್ ಲೈನ್ ಸಂಪರ್ಕ ಮಾಡಲಾಗಿದೆ.
ಕಾಲೇಜು ಆವರಣದ ಒಂದು ಮೂಲೆಯಲ್ಲಿ ಈ ಮಳೆ ನೀರನ್ನು ಸಂಗ್ರಹಗೊಳ್ಳುವ ಪಾಯಿಂಟ್ ಅನ್ನು ಗುರುತಿಸಲಾಗಿದೆ. ಆ ಮೂಲಕ ಮಳೆ ನೀರು ಕೊಯ್ಲಿ ಮಾಡಲಾಗುತ್ತದೆ.
Body:70 ಲಕ್ಷ ವೆಚ್ಚದ ಯುಜಿಡಿ ನೀರಿನ ಶುದ್ದೀಕರಣ ಘಟಕ: ಕಳೆದ ಎರಡು ವರ್ಷಗಳ ಹಿಂದೆ ಈ ಕಾಲೇಜಿನ ಆವರಣದಲ್ಲಿ ಯುಜಿಡಿ ನೀರಿನ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಅಂದಾಜು 70 ಲಕ್ಷ ರೂ. ವ್ಯಯ ಮಾಡಲಾಗಿದೆ. ಸರಿಸುಮಾರು 3 ಲಕ್ಷದ 25 ಸಾವಿರ ಕೆಎಲ್ ಡಿ ನೀರನ್ನು ಶುದ್ಧೀಕರಿಸಿ ಗಿಡ, ಮರಗಳಿಗೆ ಬಳಕೆ ಮಾಡ ಲಾಗುತ್ತದೆ ಎಂದು ಬಿಐಟಿಎಂ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಡಾ.ಯಶವಂತ ಭೂಪಾಲ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಅಂದಾಜು 15 ಎಕರೆ ಪ್ರದೇಶವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಯುಜಿಡಿ ನೀರನ್ನು ಹೊರಗಡೆ ಹರಿ ಬಿಡೋದರಿಂದ ಪರಿಸರ ಮಾಲಿನ್ಯ ಹಾಗೂ ಅಶುಚಿತ್ವದ ಕೊರತೆ ಎದ್ದುಕಾಣುವ ಸಾಧ್ಯತೆ ಇರೋದರಿಂದ ಇಂತಹ ವಿನೂತನ ಪ್ರಯತ್ನಕ್ಕೆ ನಾವು ಮುಂದಾಗಿದ್ದೇವೆ ಎಂದು ಭೂಪಾಲ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಚ ಭಾರತ ಮಿಷನ್ ಗೆ ಈ ಯುಜಿಡಿ ನೀರಿನ ಶುದ್ದೀಕರಣವು ಒಂದು ಭಾಗವಾಗಿದೆ. ಆಗಾಗಿ, ಯುಜಿಡಿ ನೀರಿನ ಶುದ್ಧೀಕರಣ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಂಸನೀಯ ಪತ್ರವೂ ಬಂದಿದೆ ಎನ್ನುತ್ತಾರೆ ಭೂಪಾಲ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.

KN_BLY_1_UJD_PURIFICATION_STORY_VISUALS_7203310

ಬೈಟ್ : ಡಾ.ಯಶವಂತ ಭೂಪಾಲ, ಬಿಐಟಿಎಂ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರು.
Last Updated : Aug 31, 2019, 11:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.