ETV Bharat / city

ಸರ್ಕಾರಕ್ಕೆ ಹೈದರಾಬಾದ್ ಕರ್ನಾಟಕವೇ ದೊಡ್ಡ ಸಮಸ್ಯೆ: ವಾಟಾಳ್​ ನಾಗರಾಜ್

author img

By

Published : Sep 21, 2019, 9:56 PM IST

ಸರ್ಕಾರಕ್ಕೆ ಹೈದರಾಬಾದ್ ಕರ್ನಾಟಕವೇ ದೊಡ್ಡ ಸಮಸ್ಯೆಯಾಗಿದೆ. ಯಾವ ರಾಜಕಾರಣಿಗಳೂ ಅನುಕೂಲ ಮಾಡಿಕೊಟ್ಟಿಲ್ಲ, ಎಲ್ಲರೂ ವಚನ ಭ್ರಷ್ಟರಾಗಿದ್ದಾರೆ ಎಂದು ವಾಟಾಳ್​ ನಾಗರಾಜ್ ದೂರಿದರು.

ವಾಟಾಳ್​ ನಾಗರಾಜ್

ಬಳ್ಳಾರಿ: ತುಂಗಭದ್ರಾ ನದಿ ನೀರನ್ನು ಅಕ್ರಮವಾಗಿ ಅನೇಕ ಕೈಗಾರಿಕೆಯ ಮಾಲೀಕರು ಪೈಪ್​ಗಳನ್ನು ಹಾಕಿ ಕದಿಯುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಕಿತ್ತು ಹಾಕಿಸಿ, ಇಲ್ಲದಿದ್ದರೇ ನಾವೇ ಪೈಪ್​ ಗಳನ್ನು ಒಡೆದು ಹಾಕುತ್ತೇವೆ ಎಂದು ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆ ನಡೆಸಿದ ವಾಟಾಳ್​ ನಾಗರಾಜ್, ನೀವು ನಮ್ಮ ಮೇಲೆ ಕೇಸ್ ಬುಕ್ ಮಾಡಿ, ಐಪಿಸಿ ಯಾವುದಾದ್ರೂ ಹಾಕಿ, ನಮ್ಮನ್ನ ಜೈಲಿ​ನಲ್ಲಿ ಇಡಿ. ನಾವು ಜೈಲಿಗೆ ಹೋಗಲು ಸಿದ್ಧ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಹೇಳಿ, ಬಳಿಕ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಾಟಾಳ್​ ನಾಗರಾಜ್ ಪ್ರತಿಭಟನೆ

ಡಿಸಿಯನ್ನು ಕೆಳಗೆ ಕರೆಸಿದ ವಾಟಾಳ್​:

ಮೊದಲು ಮನವಿ ಪತ್ರ ಪಡೆಯಲು ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಬಂದಿದ್ದರು. ಜಿಲ್ಲಾಧಿಕಾರಿಗಳೇ ಕೆಳಗೆ ಬರಬೇಕು, ಇಲ್ಲದಿದ್ದರೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಾಟಾಳ್​ ಎಚ್ಚರಿಕೆ ನೀಡಿದರು. ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ನಂತರ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರೇ ಕೆಳಗೆ ಬಂದು ವಾಟಾಳ್​ ನಾಗರಾಜ್ ಜೊತೆ ಮಾತನಾಡಿ, ಮನವಿ ಪತ್ರ ಸ್ವೀಕರಿಸಿದರು.

ಸರ್ಕಾರಕ್ಕೆ ಹೈದರಾಬಾದ್ ಕರ್ನಾಟಕವೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ರಾಜಕಾರಣಿಗಳು ಹೈದರಾಬಾದ್ ಕರ್ನಾಟಕಕ್ಕೆ ಅನುಕೂಲ ಮಾಡಿದ್ದೇವೆ ಎಂದು ಮಾತನಾಡುತ್ತಾರೆ. ಆದರೆ ಪ್ರಮಾಣಿಕವಾಗಿ ಯಾವುದೇ ಅನುಕೂಲವಾಗಿಲ್ಲ. ಈ ಹಿಂದೆ ಅನೇಕ ಸರ್ಕಾರಗಳು ಬಂದು ಹೋಗಿವೆ. ಎಲ್ಲರೂ ವಚನ ಭ್ರಷ್ಟರಾಗಿದ್ದಾರೆ. ಹೈ.ಕ.ಗೆ ಏನೆಲ್ಲಾ ಅನುಕೂಲವಾಗಿದೆ ಎಂಬ ಕುರಿತು ಈಗಿನ ಸರ್ಕಾರ ಒಂದು‌ ಶ್ವೇತಪತ್ರವನ್ನು ಮಂಡಿಸಲಿ ಎಂದು ಒತ್ತಾಯಿಸಿದರು.

ಕರ್ನಾಟಕ ಎಂದರೆ ಕೆಲವು ಭಾಗ ಮಾತ್ರವಾಗಿದೆ. ನೆರೆಹಾವಳಿಯಿಂದ ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು ಜಿಲ್ಲೆಗಳು ನೀರಲ್ಲಿ ಮುಳುಗಿ ಹೋಗಿವೆ. ಮನೆಗಳು ಇಲ್ಲ, ವಾಹನಗಳು ಇಲ್ಲ, ಜಾನುವಾರುಗಳ ಇಲ್ಲ. ಸರ್ಕಾರ ಸಂತ್ರಸ್ತರಿಗೆ ಯಾವ ಪರಿಹಾರವನ್ನೂ ನೀಡಿಲ್ಲ, ಬರೀ ಸುಳ್ಳು, ಸುಳ್ಳು, ಸುಳ್ಳು ಎಂದರು.

ಬಳ್ಳಾರಿ: ತುಂಗಭದ್ರಾ ನದಿ ನೀರನ್ನು ಅಕ್ರಮವಾಗಿ ಅನೇಕ ಕೈಗಾರಿಕೆಯ ಮಾಲೀಕರು ಪೈಪ್​ಗಳನ್ನು ಹಾಕಿ ಕದಿಯುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಕಿತ್ತು ಹಾಕಿಸಿ, ಇಲ್ಲದಿದ್ದರೇ ನಾವೇ ಪೈಪ್​ ಗಳನ್ನು ಒಡೆದು ಹಾಕುತ್ತೇವೆ ಎಂದು ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿವಿಧ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆ ನಡೆಸಿದ ವಾಟಾಳ್​ ನಾಗರಾಜ್, ನೀವು ನಮ್ಮ ಮೇಲೆ ಕೇಸ್ ಬುಕ್ ಮಾಡಿ, ಐಪಿಸಿ ಯಾವುದಾದ್ರೂ ಹಾಕಿ, ನಮ್ಮನ್ನ ಜೈಲಿ​ನಲ್ಲಿ ಇಡಿ. ನಾವು ಜೈಲಿಗೆ ಹೋಗಲು ಸಿದ್ಧ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಹೇಳಿ, ಬಳಿಕ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಾಟಾಳ್​ ನಾಗರಾಜ್ ಪ್ರತಿಭಟನೆ

ಡಿಸಿಯನ್ನು ಕೆಳಗೆ ಕರೆಸಿದ ವಾಟಾಳ್​:

ಮೊದಲು ಮನವಿ ಪತ್ರ ಪಡೆಯಲು ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಬಂದಿದ್ದರು. ಜಿಲ್ಲಾಧಿಕಾರಿಗಳೇ ಕೆಳಗೆ ಬರಬೇಕು, ಇಲ್ಲದಿದ್ದರೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ವಾಟಾಳ್​ ಎಚ್ಚರಿಕೆ ನೀಡಿದರು. ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ನಂತರ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರೇ ಕೆಳಗೆ ಬಂದು ವಾಟಾಳ್​ ನಾಗರಾಜ್ ಜೊತೆ ಮಾತನಾಡಿ, ಮನವಿ ಪತ್ರ ಸ್ವೀಕರಿಸಿದರು.

ಸರ್ಕಾರಕ್ಕೆ ಹೈದರಾಬಾದ್ ಕರ್ನಾಟಕವೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ರಾಜಕಾರಣಿಗಳು ಹೈದರಾಬಾದ್ ಕರ್ನಾಟಕಕ್ಕೆ ಅನುಕೂಲ ಮಾಡಿದ್ದೇವೆ ಎಂದು ಮಾತನಾಡುತ್ತಾರೆ. ಆದರೆ ಪ್ರಮಾಣಿಕವಾಗಿ ಯಾವುದೇ ಅನುಕೂಲವಾಗಿಲ್ಲ. ಈ ಹಿಂದೆ ಅನೇಕ ಸರ್ಕಾರಗಳು ಬಂದು ಹೋಗಿವೆ. ಎಲ್ಲರೂ ವಚನ ಭ್ರಷ್ಟರಾಗಿದ್ದಾರೆ. ಹೈ.ಕ.ಗೆ ಏನೆಲ್ಲಾ ಅನುಕೂಲವಾಗಿದೆ ಎಂಬ ಕುರಿತು ಈಗಿನ ಸರ್ಕಾರ ಒಂದು‌ ಶ್ವೇತಪತ್ರವನ್ನು ಮಂಡಿಸಲಿ ಎಂದು ಒತ್ತಾಯಿಸಿದರು.

ಕರ್ನಾಟಕ ಎಂದರೆ ಕೆಲವು ಭಾಗ ಮಾತ್ರವಾಗಿದೆ. ನೆರೆಹಾವಳಿಯಿಂದ ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು ಜಿಲ್ಲೆಗಳು ನೀರಲ್ಲಿ ಮುಳುಗಿ ಹೋಗಿವೆ. ಮನೆಗಳು ಇಲ್ಲ, ವಾಹನಗಳು ಇಲ್ಲ, ಜಾನುವಾರುಗಳ ಇಲ್ಲ. ಸರ್ಕಾರ ಸಂತ್ರಸ್ತರಿಗೆ ಯಾವ ಪರಿಹಾರವನ್ನೂ ನೀಡಿಲ್ಲ, ಬರೀ ಸುಳ್ಳು, ಸುಳ್ಳು, ಸುಳ್ಳು ಎಂದರು.

Intro:
ಪ್ರಮಾಣಿಕವಾಗಿ ನಡೆದುಕೊಳ್ಳದೇ, ರಾಜಕೀಯ ವ್ಯಕ್ತಿಗಳು ವಚನ ಭ್ರಷ್ಟರು ; ಉತ್ತರ ಕರ್ನಾಟಕ ಗುಲಾಮಗಿರಿಯಾಗಿದೆ : ವಾಟಲ್ ನಾಗರಾಜ್.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಲ್ ನಾಗರಾಜ್ ತುಂಗಭದ್ರಾ ನದಿಯ ನೀರನ್ನು ಅಕ್ರಮವಾಗಿ ಅನೇಕ ಕೈಗಾರಿಕೆಯ ಮಾಲೀಕರು ಪೈಪ್ ಗಳನ್ನು ಹಾಕಿ ಕದಿಯುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳು ಸಂಭಂದ ಪಟ್ಟ ಇಲಾಕೆ ತಿಳಿಸಿ ಕಿತ್ತು ಹಾಕಿಸಿ ಎಂದರು, ಇಲ್ಲದಿದ್ದರೇ ನಾವೇ ಪೈಪ್ ಗಳನ್ನು ಹೊಡೆದು ಹಾಕುತ್ತೇವೆ. ನೀವು ( ಜಿಲ್ಲಾಧಿಕಾರಿ ) ನಮ್ಮ ಮೇಲೆ ಕೇಸ್ ಬುಕ್ ಮಾಡಿ, ಐ.ಪಿ.ಸಿ ಯಾವುದಾದ್ರೂ ಹಾಕಿ, ನಿಮ್ಮ ಜೈಲ್ ನಲ್ಲಿ ಇಡಿ ನಾವು ಜೈಲ್ ಗೆ ಹೋಗಲು ಸಿದ್ದ ಎಂದು ವಾಟಲ್ ನಾಗರಾಜ್ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರಿಗೆ ಹೇಳಿದರು.ನಂತರ ಮನವಿಪತ್ರ ಸಲ್ಲಿಸಿದರು


Body:.

ಜಿಲ್ಲಾಧಿಕಾರಿಯನ್ನು ಕೆಳಗೆ ಕರಿಸಿದ ವಾಟಲ್ :-

ಮೊದಲು ಮನವಿ ಪತ್ರ ಪಡೆಯಲು ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಬಂದಿದ್ದರು ಆದ್ರೇ ವಾಟಲ್ ಅವರು ಜಿಲ್ಲಾಧಿಕಾರಿ ಕೆಳಗೆ ಬರಬೇಕು ಇಲ್ಲದಿದ್ದರೇ ಮುತ್ತಿಗೆ ಹಾಕತ್ತಿವಿ ಎಂದರು. ಮತ್ತೆ ಪೊಲೀಸ್ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ ನಂತರ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರೇ ಕೆಳಗೆ ಬಂದು ವಾಟಲ್ ನಾಗರಾಜ್ ಜೊತೆಗೆ ಮಾತನಾಡಿದರು ನಂತರ ಮನವಿ ಪತ್ರ ಸಲ್ಲಿಸಿದ ವಾಟಲ್ ನಾಗರಾಜ್.


ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಹೈದ್ರಾಬಾದ್ ಕರ್ನಾಟಕ ವೇ ದೊಡ್ಡ ಸಮಸ್ಯೆಯಾಗಿದೆ ಮತ್ತು ಎಲ್ಲಾ ರಾಜಕಾರಣಿಗಳು ಹೈದ್ರಾಬಾದ್ ಕರ್ನಾಟಕಕ್ಕೆ ಅನುಕೂಲ ಮಾಡಿದ್ದೇವೆ ಎಂದು ಮಾತನಾಡುತ್ತಿದ್ದೇವೆ ಆದ್ರೇ ಪ್ರಮಾಣಿಕವಾಗಿ ಯಾವುದೇ ಅನುಕೂಲವಾಗಿಲ್ಲ ಈ ಹಿಂದೆ ಅನೇಕ ಸರ್ಕಾರಗಳು ಬಂದು ಹೋಗಿವೆ.
ಎಲ್ಲಾರೂ ವಚನ ಭ್ರಷ್ಟರಾಗಿದ್ದಾರೆ ಎಂದು ದೂರಿದರು‌.

ಹೈದ್ರಾಬಾದ್ ಕರ್ನಾಟಕಕ್ಕೆ ಏನೆಲ್ಲಾ ಅನುಕೂಲ ವಾಗಿದೆ ಎಂದು ಈಗಿನ ಸರ್ಕಾರ ಒಂದು‌ ಶ್ವೇತಪತ್ರವನ್ನು ಮಂಡಿಸಲಿ ಎಂದು ಒತ್ತಾಯ ಮಾಡಿದರು. ಅದರಲ್ಲಿ ಉದ್ಯೋಗ, ಜಿಲ್ಲೆಗಲ ಅಭಿವೃದ್ಧಿ, ರಸ್ತೆಯ ಅಭಿವೃದ್ಧಿ, ನೀರಾವರಿ, ವಿದ್ಯುತ್ಚತ್ತಿ ಎಷ್ಟು ಆಗಿದೆ ಎಂದು ಮಂಡಿಸಿ ಎಂದರು.

ಉತ್ತರ ಕರ್ನಾಟಕ ಒಂದು ಗುಲಾಮಗಿರಿಯಾಗಿದೆ :-

ಕರ್ನಾಟಕ ಎಂದರೆ ಕೆಲವು ಭಾಗ ಮಾತ್ರ ವಾಗಿದೆ. ನೆರೆಹಾವಳಿಯಿಂದ ಕರ್ನಾಟಕದ ಅನೇಕ ಭಾಗಗಳಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು, ಚಿಕ್ಕೋಡಿ, ನೀರಲ್ಲಿ ಮುಲಗಿ ಹೋಗಿವೆ, ಮನೆಗಳು ಇಲ್ಲ, ವಾಹನಗಳು ಇಲ್ಲ, ಜಾನುವಾರುಗಳ ಇಲ್ಲ, ಬರೀ ಸುಳ್ಳು, ಸುಳ್ಳು, ಸುಳ್ಳು ಎಂದರು.

ಸರ್ಕಾರ ಯಾವುದೇ ರೀತಿಯ ಒಂದು ಸಾವಿರ, ಹತ್ತುಸಾವಿರ, ಲಕ್ಷ ಪರಿಹಾರ ನೆರೆಸಂತ್ರಸ್ಥರಿಗೆ ನೀಡಿಲ್ಲ ಮತ್ತು ಮನೆಗಳನ್ನು ಸಹ ಕಟ್ಟಿಸಿಕೊಡಲಿಲ್ಲ ಎಂದು ವಾಟಲ್ ಸರ್ಕಾರದ ವಿರುದ್ಧ ದೂರಿದರು.

ಜಿಂದಾಲ್ ಕೈಗಾರಿಕೆ ಕನಿಷ್ಠ ಎರಡು ಟಿ.ಎಂ.ಸಿ ಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೇ ರಾತ್ರಿ ಕೈಗಾರಿಕೆಯಿಂದ 12 ಗಂಟೆ ಮೇಲೆ ಹೊಗೆ ಆ ಹೊಗೆಯಿಂದ ಜನ ಜಾನುವಾರುಗಳಿಗೆ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದ ವಾಟಲ್‌.

ಕನ್ನಡಿಗರಿಗೆ ಉದ್ಯೋಗ ವಿಲ್ಲ :-

ಜಿಂದಾಲ್ ಕೈಗಾರಿಕೆ ಕನ್ನಡಿಗರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ನೀಡುತ್ತಿಲ್ಲ ಎಂದು ದೂರಿದರು. ಅಕ್ರಮವಾಗಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ನೀರನ್ನು ಪಡೆಯುತ್ತಿರುವ ಪೈಪ್ ಗಳನ್ನು ತೆಗೆಯಿರಿ ಎಂದು ಎಚ್ಚರಿಸಿದರು.


Conclusion:ಈ ಪ್ರತಿಭಟನೆಗಳು ವಿವಿಧ ಕನ್ನಡಪರ ಸಂಘಟನೆಗಳು ಭಾಗವಹಿಸಿದ್ದವು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.