ಹೊಸಪೇಟೆ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡ್ಲಿಗಿ ತಾಲೂಕಿನ ಮರಿಯಮ್ಮನಹಳ್ಳಿ ಜೈಹಿಂದ್ ಡಾಬಾದ ಬಳಿ ನಡೆದಿದೆ.
ಮೃತನ್ನು ಕೂಡ್ಲಿಗಿ ತಾಲೂಕಿನ ಬೊಮ್ಮಗಟ್ಟ ನಿವಾಸಿ ದೇವರಾಜ್ (20) ಎಂದು ಗುರುತಿಸಲಾಗಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.