ETV Bharat / city

ವಾಂತಿ-ಭೇದಿ ಪ್ರಕರಣ... ಕಲ್ಲುಕಂಭ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

author img

By

Published : Oct 5, 2019, 4:01 AM IST

ಜಿಲ್ಲೆಯ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕಾಣಿಸಿಕೊಂಡ ವಾಂತಿ- ಭೇದಿ, ಶುಕ್ರವಾರ ಕುರುಬ ಸಮುದಾಯದವರು ನೆಲೆಸಿರುವ ಓಣಿಗೂ ವ್ಯಾಪಿಸಿರುವ ಕಾರಣ, ಡಿಸಿ ನಕುಲ್, ಸಿಇಓ ಕೆ.ನಿತೀಶಕುಮಾರ, ಡಿಎಚ್​ ಡಾ. ಶಿವರಾಜ ಹೆಡೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾಂತಿ-ಭೇದಿ ಪ್ರಕರಣ...ಕಲ್ಲುಕಂಭ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ,ಪರಿಶೀಲನೆ

ಬಳ್ಳಾರಿ: ಜಿಲ್ಲೆಯ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕಾಣಿಸಿಕೊಂಡ ವಾಂತಿ- ಭೇದಿ, ಶುಕ್ರವಾರ ಕುರುಬ ಸಮುದಾಯದವರು ನೆಲೆಸಿರುವ ಓಣಿಗೂ ವ್ಯಾಪಿಸಿರುವ ಕಾರಣ, ಡಿಸಿ ನಕುಲ್,ಸಿಇಓ ಕೆ.ನಿತೀಶಕುಮಾರ, ಡಿಎಚ್​ ಡಾ. ಶಿವರಾಜ ಹೆಡೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುವಾರ ಬೆಳಗ್ಗೆಯಿಂದ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ 35ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 60 ಜನರಲ್ಲಿ ವಾಂತಿ -ಭೇದಿ ಕಾಣಿಸಿಕೊಂಡಿದೆ. ಕಲುಷಿತ ನೀರು ಸೇವನೆ ಹಿನ್ನೆಲೆ ವಾಂತಿ-ಭೇದಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ವಾಂತಿ-ಭೇದಿ ಕಾಣಿಸಿಕೊಂಡ ಪ್ರದೇಶಗಳಿಗೆ ನೀರು ಪೂರೈಸುವ ತೊಟ್ಟಿಗಳಿಂದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರಕರಣಕ್ಕೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಡಾ.ಲಕ್ಷ್ಮಣ ನಾಯಕ್ ತಿಳಿಸಿದ್ದಾರೆ.

ಇನ್ನು, ಗ್ರಾಮದಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆ, ಕುಡಿಯುವ ನೀರು ಪೂರೈಕೆ ಮಾಡುವ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದೆ. ಕಲಬೆರಕೆ ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಬಳ್ಳಾರಿ: ಜಿಲ್ಲೆಯ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕಾಣಿಸಿಕೊಂಡ ವಾಂತಿ- ಭೇದಿ, ಶುಕ್ರವಾರ ಕುರುಬ ಸಮುದಾಯದವರು ನೆಲೆಸಿರುವ ಓಣಿಗೂ ವ್ಯಾಪಿಸಿರುವ ಕಾರಣ, ಡಿಸಿ ನಕುಲ್,ಸಿಇಓ ಕೆ.ನಿತೀಶಕುಮಾರ, ಡಿಎಚ್​ ಡಾ. ಶಿವರಾಜ ಹೆಡೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುರುವಾರ ಬೆಳಗ್ಗೆಯಿಂದ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ 35ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 60 ಜನರಲ್ಲಿ ವಾಂತಿ -ಭೇದಿ ಕಾಣಿಸಿಕೊಂಡಿದೆ. ಕಲುಷಿತ ನೀರು ಸೇವನೆ ಹಿನ್ನೆಲೆ ವಾಂತಿ-ಭೇದಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ವಾಂತಿ-ಭೇದಿ ಕಾಣಿಸಿಕೊಂಡ ಪ್ರದೇಶಗಳಿಗೆ ನೀರು ಪೂರೈಸುವ ತೊಟ್ಟಿಗಳಿಂದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರಕರಣಕ್ಕೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಡಾ.ಲಕ್ಷ್ಮಣ ನಾಯಕ್ ತಿಳಿಸಿದ್ದಾರೆ.

ಇನ್ನು, ಗ್ರಾಮದಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆ, ಕುಡಿಯುವ ನೀರು ಪೂರೈಕೆ ಮಾಡುವ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದೆ. ಕಲಬೆರಕೆ ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

Intro:ಕಲಬೆರಕೆ ನೀರು ಸೇವನೆ ಶಂಕೆ ಹಿನ್ನಲೆ ಕಾಣಿಸಿಕೊಂಡ ಸಾಂಕ್ರಾಮಿಕ ಕಾಯಿಲೆ: ಕಲ್ಲುಕಂಭ ಗ್ರಾಮಕ್ಕಿಂದು ಡಿಸಿ, ಸಿಇಒ ಭೇಟಿ
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲುಕಂಭ ಗ್ರಾಮದಲ್ಲಿ ಕಾಣಿಸಿಕೊಂಡ ವಾಂತಿ-ಭೇದಿ ಪ್ರಕರಣದ ಖುದ್ದು ಪರಿಶೀಲನೆ ನಡೆಸುವ ಸಲುವಾಗಿಯೇ ಡಿಸಿ, ಸಿಇಒ ಹಾಗೂ ಡಿಎಚ್ ಒ ದಿಢೀರನೆ ಭೇಟಿ ನೀಡಿದ್ದಾರೆ.
ನಿನ್ನೆಯ ದಿನ ರಾತ್ರಿ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೊನಿ ಯಲ್ಲಿ ಕಾಣಿಸಿಕೊಂಡ ಈ ವಾಂತಿ- ಭೇದಿ ಪ್ರಕರಣವು ಕುರುಬ ಸಮುದಾಯದವರು ನೆಲೆಸಿರುವ ಓಣಿಗೂ ವ್ಯಾಪಿಸಿರುವುದು ಗ್ರಾಮದ ಜನರನ್ನು ಆತಂಕಕ್ಕೀಡು ಮಾಡಿರುವ ಕಾರಣ, ಈ ದಿನ ಡಿಸಿ ನಕುಲ್, ಸಿಇಓ ಕೆ.ನಿತೀಶಕುಮಾರ, ಡಿಎಚ್ ಒ ಡಾ.ಶಿವರಾಜ ಹೆಡೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳಿಗ್ಗೆಯಿಂದ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ 35 ಕ್ಕೂ ಹೆಚ್ಚು ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆ ಯರು ಸೇವೆಯಲ್ಲಿ ತೊಡಗಿದ್ದಾರೆ. ಮೊನ್ನೆಯ ದಿನ ರಾತ್ರಿ 20ಕ್ಕೂ ಹೆಚ್ಚು ಜನರು ಕುರುಗೋಡಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈವರೆಗೆ ಒಟ್ಟು
60 ಜನರಲ್ಲಿ ವಾಂತಿ -ಭೇದಿ ಪ್ರಕರಣವು ಕಾಣಿಸಿಕೊಂಡಿದೆ ಎಂದು ಡಾ.ಲಕ್ಷ್ಮಣ ನಾಯಕ್ ತಿಳಿಸಿದ್ದಾರೆ.
ಆವರು ಸೇವಿಸಿದ ಕಲುಷಿತ ನೀರಿನಿಂದ ವಾಂತಿ- ಭೇದಿ ಕಾಣಿಸಿ ಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಾಂತಿ-ಭೇದಿ ಕಾಣಿಸಿ ಕೊಂಡ ಪ್ರದೇಶಗಳಿಗೆ ನೀರು ಪೂರೈಸುವ ತೊಟ್ಟಿಗಳಿಂದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ವಾಂತಿ - ಭೇದಿಗೆ ಪ್ರಕರಣಕ್ಕೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದರು.
ರೈತರು ಜಮೀನುಗಳಲ್ಲಿ ನಿಂತಿರುವ ಮತ್ತು ಕಾಲುವೆ ನೀರು ಕುಡಿಯದೆ ಮನೆಯಲ್ಲಿನ ಕಾಯಿಸಿ ಆರಿಸಿದ ನೀರು ಸೇವಿಸಬೇಕು. ಬಿಸಿಯಾದ ಆಹಾರ ಸೇವಿಸಬೇಕು ಎಂದು ಡಾ.ಲಕ್ಷ್ಮಣ ಸಲಹೆ ನೀಡಿದ್ದಾರೆ.
Body:ಸ್ವಚ್ಛತೆ: ಗ್ರಾಮದಲ್ಲಿ ವಾಂತಿ -ಭೇದಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದೆ. ಕಲಬೆರಕೆ ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರೂ ಕಾಯಿಸಿ ಆರಿಸಿದ ನೀರು ಸೇವಿಸುವಂತೆ ಗ್ರಾಮದಲ್ಲಿ ಡಂಗೂರ ಸಾರಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ. ದೇವಿ, ಪಿಡಿಓ ಎಂ.ವನಜಾಕ್ಷಿ ತಿಳಿಸಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_DC_CEO_VISIT_IN_KALLUKAMBH_VILLAGE_7203310

KN_BLY_5e_DC_CEO_VISIT_IN_KALLUKAMBH_VILLAGE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.