ETV Bharat / city

ಹಾನಗಲ್ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣ : ಸಚಿವ ಬಿ ಸಿ ಪಾಟೀಲ್

author img

By

Published : Oct 3, 2021, 6:45 PM IST

ವರಿಷ್ಠರು ಯಾರನ್ನು ಅಭ್ಯರ್ಥಿ ಮಾಡ್ತಾರೋ ಅವರನ್ನು ಗೆಲ್ಲಿಸಲಾಗುವುದು. ಮಾಧ್ಯಮ ಸೇರಿದಂತೆ ಕೆಲವರಿಗೆ ವಿಜಯೇಂದ್ರ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ, ಅವರ ಹೆಸರು ಈ ರೀತಿ ತೇಲಿ ಬರುತ್ತಿರಬಹುದು..

bc-patil-statement-on-hanagal-byelection
ಸಚಿವ ಬಿ ಸಿ ಪಾಟೀಲ್

ಹೊಸಪೇಟೆ (ವಿಜಯನಗರ) : ಹಾನಗಲ್​ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಸಿಎಂ ಉದಾಸಿಯವರ ಅಭಿವೃದ್ದಿ ಕಾರ್ಯ ಬಿಜೆಪಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣ ಅಂತಾ ಹೇಳಿರುವ ಸಚಿವ ಬಿ ಸಿ ಪಾಟೀಲ್

ನಗರದ ಎಪಿಎಂಸಿ ಮುಂಭಾಗದಲ್ಲಿ ಇಂದು ಸಂಜೆ ಎತ್ತಿನ ಬಂಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವರು, ಹಾನಗಲ್​ ಚುನಾವಣೆಗೆ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇರೋದು ಸಹಜ. ಆದ್ರೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲೋದು ಬಹುತೇಕ ಖಚಿತ ಎಂದು ಹೇಳಿದರು.

ಬಿ ವೈ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್​ ಅವರು, ವರಿಷ್ಠರು ಯಾರನ್ನು ಅಭ್ಯರ್ಥಿ ಮಾಡ್ತಾರೋ ಅವರನ್ನು ಗೆಲ್ಲಿಸಲಾಗುವುದು. ಮಾಧ್ಯಮ ಸೇರಿದಂತೆ ಕೆಲವರಿಗೆ ವಿಜಯೇಂದ್ರ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ, ಅವರ ಹೆಸರು ಈ ರೀತಿ ತೇಲಿ ಬರುತ್ತಿರಬಹುದು ಎಂದರು.

bc-patil-statement-on-hanagal-byelection
ಎತ್ತಿನ ಗಾಡಿ ಸ್ಪರ್ಧೆ

ಎತ್ತಿನ ಬಂಡಿ ಸ್ಪರ್ಧೆ : ಕೃಷಿ ಇಲಾಖೆ ಎತ್ತಿನ ಬಂಡಿ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಉತ್ತಮ ಅಲಂಕಾರವಾಗಿ ಬಂಡಿಯನ್ನು ಸಿಂಗಾರ ಮಾಡಿದವರಿಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಸುಮಾರು 75 ಎತ್ತಿನ ಬಂಡಿಗಳು ಭಾಗಹಿಸಿದ್ದವು.

ಹೊಸಪೇಟೆ (ವಿಜಯನಗರ) : ಹಾನಗಲ್​ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಸಿಎಂ ಉದಾಸಿಯವರ ಅಭಿವೃದ್ದಿ ಕಾರ್ಯ ಬಿಜೆಪಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣ ಅಂತಾ ಹೇಳಿರುವ ಸಚಿವ ಬಿ ಸಿ ಪಾಟೀಲ್

ನಗರದ ಎಪಿಎಂಸಿ ಮುಂಭಾಗದಲ್ಲಿ ಇಂದು ಸಂಜೆ ಎತ್ತಿನ ಬಂಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವರು, ಹಾನಗಲ್​ ಚುನಾವಣೆಗೆ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇರೋದು ಸಹಜ. ಆದ್ರೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲೋದು ಬಹುತೇಕ ಖಚಿತ ಎಂದು ಹೇಳಿದರು.

ಬಿ ವೈ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್​ ಅವರು, ವರಿಷ್ಠರು ಯಾರನ್ನು ಅಭ್ಯರ್ಥಿ ಮಾಡ್ತಾರೋ ಅವರನ್ನು ಗೆಲ್ಲಿಸಲಾಗುವುದು. ಮಾಧ್ಯಮ ಸೇರಿದಂತೆ ಕೆಲವರಿಗೆ ವಿಜಯೇಂದ್ರ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿ, ಅವರ ಹೆಸರು ಈ ರೀತಿ ತೇಲಿ ಬರುತ್ತಿರಬಹುದು ಎಂದರು.

bc-patil-statement-on-hanagal-byelection
ಎತ್ತಿನ ಗಾಡಿ ಸ್ಪರ್ಧೆ

ಎತ್ತಿನ ಬಂಡಿ ಸ್ಪರ್ಧೆ : ಕೃಷಿ ಇಲಾಖೆ ಎತ್ತಿನ ಬಂಡಿ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಉತ್ತಮ ಅಲಂಕಾರವಾಗಿ ಬಂಡಿಯನ್ನು ಸಿಂಗಾರ ಮಾಡಿದವರಿಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಸುಮಾರು 75 ಎತ್ತಿನ ಬಂಡಿಗಳು ಭಾಗಹಿಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.