ETV Bharat / city

ಎಡೆಬಿಡದೆ ಸುರಿದ ಮಳೆಗೆ ರೈತ ಬಲಿ: ನೂರಾರು ಎಕರೆ ಬೆಳೆ ನಾಶ

author img

By

Published : Sep 29, 2019, 4:35 AM IST

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಾದ್ಯಂತ ಎಡೆಬಿಡದೆ ಸುರಿದ ಮಳೆಯಿಂದಾಗಿ ನೂರಾರು ಎಕರೆಯ ಜಮೀನಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತ್ತವಾಗಿವೆ. ಮಳೆಯ ರಭಸಕ್ಕೆ ರೈತನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.

ಮಹಾಮಳೆಗೆ ನೂರಾರು ಎಕರೆ ಬೆಳೆ ನಾಶ

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನಾದ್ಯಂತ ಎಡೆಬಿಡದೆ ಸುರಿದ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡಿದ್ದು, ಮಳೆಯ ರಭಸಕ್ಕೆ ರೈತನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಮಹಾಮಳೆಗೆ ನೂರಾರು ಎಕರೆ ಬೆಳೆ ನಾಶ

ಕುರುಗೋಡು ತಾಲೂಕಿನ ಸಿದ್ಧಮ್ಮನಹಳ್ಳಿ, ಶ್ರೀನಿವಾಸ ನಗರ ಕ್ಯಾಂಪ್, ಮದಿರೆ ಕ್ಯಾಂಪ್​, ಯಮ್ಮಿಗನೂರು, ಕೋಳೂರು, ಸೋಮಲಾಪುರ, ಬಾದನಹಟ್ಟಿ ಮತ್ತು ಬಳ್ಳಾರಿ ತಾಲೂಕಿನ ಸೋಮಸಮುದ್ರ ಸೇರಿದಂತೆ ಇತರೆ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತ್ತವಾಗಿವೆ. ಮಹಾ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗುವ ಹಂತದಲ್ಲಿವೆ.

ಕೋಳೂರು- ಸೋಮಸಮುದ್ರ ಗ್ರಾಮಗಳ ವ್ಯಾಪ್ತಿಯಲ್ಲಿನ ಹಳ್ಳದ ನೀರು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದೆ. ಇದರಿಂದ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಕೋಳೂರು ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ತಿಳಿಸಿದರು.

ರೈತನೋರ್ವ ಬೆಳೆಗೆ ಕ್ರಿಮಿನಾಶಕ ಔಷಧಿ ಖರೀದಿಸಿ ಮನೆಗೆ ವಾಪಾಸ್ ಬರುವಾಗ, ಸಿಂಧಿಗೇರಿ ಗ್ರಾಮ ಸಮೀಪದ ರಸ್ತೆ ಬದಿಯ ಹಳಕ್ಕೆ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮೃತ ರೈತ ಪಿ.ಟಿ ಸಿದ್ಧಪ್ಪ ಎಂದು ಗುರುತಿಸಲಾಗಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ರೈತನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಅಗತ್ಯ ಪರಿಹಾರ ಧನ ವಿತರಿಸಬೇಕೆಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ವಿ.ಎಸ್. ಶಿವಶಂಕರ ಅವರು ಆಗ್ರಹಿಸಿದ್ದಾರೆ.

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನಾದ್ಯಂತ ಎಡೆಬಿಡದೆ ಸುರಿದ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡಿದ್ದು, ಮಳೆಯ ರಭಸಕ್ಕೆ ರೈತನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.

ಮಹಾಮಳೆಗೆ ನೂರಾರು ಎಕರೆ ಬೆಳೆ ನಾಶ

ಕುರುಗೋಡು ತಾಲೂಕಿನ ಸಿದ್ಧಮ್ಮನಹಳ್ಳಿ, ಶ್ರೀನಿವಾಸ ನಗರ ಕ್ಯಾಂಪ್, ಮದಿರೆ ಕ್ಯಾಂಪ್​, ಯಮ್ಮಿಗನೂರು, ಕೋಳೂರು, ಸೋಮಲಾಪುರ, ಬಾದನಹಟ್ಟಿ ಮತ್ತು ಬಳ್ಳಾರಿ ತಾಲೂಕಿನ ಸೋಮಸಮುದ್ರ ಸೇರಿದಂತೆ ಇತರೆ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತ್ತವಾಗಿವೆ. ಮಹಾ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗುವ ಹಂತದಲ್ಲಿವೆ.

ಕೋಳೂರು- ಸೋಮಸಮುದ್ರ ಗ್ರಾಮಗಳ ವ್ಯಾಪ್ತಿಯಲ್ಲಿನ ಹಳ್ಳದ ನೀರು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದೆ. ಇದರಿಂದ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಕೋಳೂರು ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ತಿಳಿಸಿದರು.

ರೈತನೋರ್ವ ಬೆಳೆಗೆ ಕ್ರಿಮಿನಾಶಕ ಔಷಧಿ ಖರೀದಿಸಿ ಮನೆಗೆ ವಾಪಾಸ್ ಬರುವಾಗ, ಸಿಂಧಿಗೇರಿ ಗ್ರಾಮ ಸಮೀಪದ ರಸ್ತೆ ಬದಿಯ ಹಳಕ್ಕೆ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮೃತ ರೈತ ಪಿ.ಟಿ ಸಿದ್ಧಪ್ಪ ಎಂದು ಗುರುತಿಸಲಾಗಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ರೈತನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಅಗತ್ಯ ಪರಿಹಾರ ಧನ ವಿತರಿಸಬೇಕೆಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ವಿ.ಎಸ್. ಶಿವಶಂಕರ ಅವರು ಆಗ್ರಹಿಸಿದ್ದಾರೆ.

Intro:ಕುರುಗೋಡಿನಲ್ಲಿ ಸುರಿದ ಮಹಾಮಳೆಗೆ ಓರ್ವ ರೈತ ಸಾವು
ಸಿಂಧಿಗೇರಿ ಹಳ್ಳಕ್ಕೆ ಕೊಚ್ಚಿ ಹೋದ ರೈತ ಶವವಾಗಿ ಪತ್ತೆ...!
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನಾದ್ಯಂತ ಶುಕ್ರವಾರ ಸುರಿದ ಮಹಾಮಳೆಗೆ ನೂರಾರು ಎಕರೆ ಪ್ರದೇಶ ವ್ಯಾಪ್ತಿಯ ಹೊಲ -ಗದ್ದೆಗಳಲ್ಲಿ ಮಳೆಯ ನೀರು ಜಲಾವೃತಗೊಂಡಿದೆ.
ಕುರುಗೋಡು ತಾಲೂಕಿನ ಸಿದ್ಧಮ್ಮನಹಳ್ಳಿ, ಎರ್ರಂಗಳಿಗಿ, ಶ್ರೀನಿವಾಸ ನಗರ ಕ್ಯಾಂಪ್, ಮದಿರೆ ಕ್ಯಾಂಪಿನ, ಯಮ್ಮಿಗನೂರು, ಕೋಳೂರು, ಸೋಮಲಾಪುರ, ಬಾದನಹಟ್ಟಿ ಮತ್ತು ಬಳ್ಳಾರಿ ತಾಲೂಕಿನ ಸೋಮಸಮುದ್ರ ಸೇರಿದಂತೆ ಇತರೆ ಗ್ರಾಮಗಳಲ್ಲಿನ ಮೆಣಸಿನಕಾಯಿ, ತೊಗರಿ ಹಾಗೂ ಹೆಸರು ಬೇಳೆ ಸೇರಿದಂತೆ ಇತರೆ ಬೆಳೆಗಳಿಗೆ ವಿಪರೀತ ಮಳೆಯ ನೀರು ನುಗ್ಗಿದ ಪರಿಣಾಮ, ಬಹುತೇಕ ಬೆಳೆಗಳು ನೆಲಕಚ್ಚಿವೆ.
ಕೋಳೂರು- ಸೋಮಸಮುದ್ರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳದಲ್ಲಿ ವಿಪರೀತ ಮಳೆಯ ನೀರಿನ ಹರಿದ ಪರಿಣಾಮ ಸುತ್ತಲಿನ ಹೊಲಗಳಿಗೂ ನೀರು ನುಗ್ಗಿವೆ. ಅದರಿಂದ ಅಪಾರ ಪ್ರಮಾಣದ ಬೆಳೆಯು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಕೋಳೂರು ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
Body:ಅಲ್ಲದೇ, ಸಿಂಧಿಗೇರಿ ಗ್ರಾಮದ ರೈತ ಪಿ.ಟಿ.ಸಿದ್ಧಪ್ಪ ಮೃತಪಟ್ಟಿದ್ದಾರೆ. ಗ್ರಾಮ ಹೊರವಲಯದ ತನ್ನ ಹೊಲದಲ್ಲಿ ಬಿತ್ತನೆ ಮಾಡಿದ್ದ ಬೆಳೆಗೆ ಕ್ರಿಮಿನಾಶಕ ಔಷಧಿ ಸಿಂಪರಣೆ ಮಾಡಲೆಂದೇ ಕುರುಗೋಡು ಪಟ್ಟಣಕ್ಕೆ ತೆರಳಿ, ಕ್ರಿಮಿನಾಶಕ ಔಷಧಿಯನ್ನು ಖರೀದಿಸಿ ವಾಪಾಸ್ ಬರುವಾಗ, ಸಿಂಧಿಗೇರಿ ಗ್ರಾಮದ ರಸ್ತೆಯಲ್ಲಿ ಎದುರಾಗುವ ಹಳ್ಳದಲ್ಲಿ ವಿಪರೀತ ಮಳೆಯ ನೀರಿನ ಕೋಡಿ ಹರಿಯುತ್ತಿದ್ದರಿಂದ ಅದರ ರಭಸಕ್ಕೆ ಕಾಲುಜಾರಿ ಬಿದ್ದು ನೀರಿಗೆ ಕೊಚ್ಚಿ ಹೋಗಿದ್ದಾರೆ.
ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ರೈತ ಕುಟುಂಬದ ಅವಲಂಬಿತರಿಗೆ ಅಗತ್ಯ ಪರಿಹಾರಧನ ವಿತರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ವಿ.ಎಸ್.ಶಿವಶಂಕರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_KURUGODU_RAIN_FARMER_DEATH_7203310

KN_BLY_1a_KURUGODU_RAIN_FARMER_DEATH_7203310

KN_BLY_1b_KURUGODU_RAIN_FARMER_DEATH_7203310

KN_BLY_1c_KURUGODU_RAIN_FARMER_DEATH_7203310

KN_BLY_1d_KURUGODU_RAIN_FARMER_DEATH_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.